<p>ಮೊಳಕಾಲ್ಮುರು: ಪಾಳುಬಿದ್ದಿರುವ ಹತ್ತಾರು ಮನೆಗಳು, ಅಲ್ಲಲ್ಲಿ ಕಾಣಸಿಗುವ ಪ್ರಾಕೃತಿಕ ಒಳಕಲ್ಲುಗಳು, ನಿಧಿಗಳ್ಳರ ಹಾವಳಿಯಿಂದ ಆಳ ಗುಂಡಿಗಳು, ಮೂಲೆಗುಂಪಾದ ನಾಗರಕಲ್ಲು, ಒಡೆದು ಹೋದ ಕೋಟೆ, ಪುರಾತನ ಆಂಜನೇಯ ಸ್ವಾಮಿ ದೇವಸ್ಥಾನ...!<br /> <br /> – ಇಂತಹ ಸ್ಥಳ ಇರುವುದು ಪಟ್ಟಣ ಸಮೀಪದ ಗುಂಡ್ಲೂರು ಬಳಿ. ಮರ್ಲಹಳ್ಳಿ ಯಿಂದ ಎರಡು ಕಿ.ಮೀ ದೂರ ಸಾಗಿದರೆ ಸಿಗುವ ಹಳೆ ಆಂಜನೇಯ ಸ್ವಾಮಿ ದೇವಸ್ಥಾನದ ಸುತ್ತಮುತ್ತ ಈ ಕುರುಹುಗಳಿವೆ. ಇಲ್ಲಿ ಶತಮಾನಗಳ ಹಿಂದೆಯೇ ಇಲ್ಲಿ ಜನರು ವಾಸವಿದ್ದರು ಎಂಬುದಕ್ಕೆ ಸಾಕ್ಷಿ ಎನ್ನಲಾಗಿದೆ.<br /> <br /> <strong>ಪುರಾತನ ಕಲಾಕೃತಿಗಳು</strong><br /> ಈ ಸ್ಥಳದಲ್ಲಿ ಪ್ರಾಚೀನವಾದ ಎರಡು ಕಲಾಕೃತಿಗಳು ಪತ್ತೆಯಾಗಿವೆ. ಆಂಜನೇಯ ದೇವಸ್ಥಾನ ಮುಂಭಾಗದ ಬಂಡೆಯ ಮೇಲೆ ಚಿತ್ರಗಳು<br /> ಕಂಡು ಬಂದಿವೆ. ದೇವಸ್ಥಾನದ ಮುಂಭಾಗದಲ್ಲಿ ಇರುವ ರೇಖಾಚಿತ್ರವು ರಚನೆಯ ಸಿದ್ಧತೆಯಂತಿದೆ. ಮತ್ತೊಂದು ಪಶ್ಚಿಮ ದಿಕ್ಕಿನ ಬಂಡೆಯ ಹಿಂಬದಿಯಲ್ಲಿದೆ.<br /> <br /> ‘ಈವರೆಗೂ ಇದರ ಬಗ್ಗೆ ಸಾರ್ವಜನಿಕ ವರದಿಯಾಗಿಲ್ಲ. ಸ್ಥಳ ಇತಿಹಾಸ ಸಂಶೋಧನೆಗೆ ಪೂರಕ ವಾಗಿದ್ದು, ಬೆಳಕು ಚೆಲ್ಲುವ ಕಾರ್ಯಕ್ಕೆ ಸಂಬಂಧಪಟ್ಟರು ಮುಂದಾಗಬೇಕು. ಇಲ್ಲಿ 200ಕ್ಕೂ ಹೆಚ್ಚು ಪಾಳುಬಿದ್ದ ಮನೆ ಗಳ ಕುರುಹು ಕಾಣಬಹುದು’ ಎಂದು ಭಾನುವಾರ ಸ್ಥಳದಲ್ಲಿ ಹಾಜರಿದ್ದ<br /> ಶಿಕ್ಷಕ ಶಾಂತವೀರಣ್ಣ, ಹೋಟೆಲ್ ಮಾಲೀಕ ಕೊಟ್ರೇಶ್, ಸರ್ಎಂವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವೆಂಕಟೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.<br /> <br /> ‘300ಕ್ಕೂ ಹೆಚ್ಚು ವರ್ಷಗಳ ಹಿಂದೆ ಇಲ್ಲಿ ಜನವಸತಿ ಇತ್ತಂತೆ, ಗುಂಡ್ಲೂರು (ಗುಂಡುಗಳ ಮಧ್ಯೆಯ ಊರು ಎಂದಿರ ಬಹುದು) ಇಲ್ಲಿಂದ ಬೇಸಾಯಕ್ಕೆ ನಿತ್ಯ 100 ಕುಂಟೆ, 100 ಕೂರಿಗೆ ಹೊರಡುತ್ತಿ ದ್ದವು ಎಂದು ಕೇಳಿದ್ದೇವೆ’ ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ.<br /> <br /> ‘ಇದನ್ನು ಗಮನಿಸಿದಲ್ಲಿ ದೊಡ್ಡ ಊರು ಇದಾಗಿರಬಹುದು ಕಾಡು ಪ್ರಾಣಿ ಗಳ ಹಾವಳಿ ಅಥವಾ ಮಾರಕ ಸಾಂಕ್ರಾಮಿಕ ರೋಗದಿಂದಾಗಿ ಇಲ್ಲಿಂದ ಜನರು ಈಗಿನ ಹೊಸ ಗುಂಡ್ಲೂರು, ದಾಸರಹಟ್ಟಿಗೆ ವಲಸೆ ಹೋದರು ಎಂದು ಎನ್ನಲಾಗಿದೆ’ ಎಂಬುದು ಗ್ರಾಮಸ್ಥ ಕೊಟ್ರೇಶ್್ ಅವರ ಅಭಿಪ್ರಾಯ.<br /> <br /> ಶತಮಾನಗಳ ಮೊದಲೇ ಇಲ್ಲಿ ಜನ ವಸತಿಯಿದ್ದ ಬಗ್ಗೆ ಕುರುಹುಗಳು ಪತ್ತೆಯಾಗಿರುವುದನ್ನು ಈ ಸಂದರ್ಭ ದಲ್ಲಿ ಸ್ಮರಿಸಬಹುದು. ಈ ಸ್ಥಳದ ಬಗ್ಗೆ ಹೆಚ್ಚಿನ ಸಂಶೋಧನೆ ಯಾಗಿ, ಇತಿಹಾಸದ ಪುಟಗಳತ್ತ ಬೆಳಕು ಚೆಲ್ಲುವ ಕಾರ್ಯ ಆಗಬೇಕಿದೆ ಎಂಬುದು ಸ್ಥಳೀಯ ನಿವಾಸಿಗಳ ಕೋರಿಕೆಯಾಗಿದೆ.<br /> <br /> <strong>1,200 ವರ್ಷಗಳ ಹಿಂದಿನದು..?</strong><br /> ಚಿತ್ರ ವೀಕ್ಷಿಸಿ ಮಾಹಿತಿ ನೀಡಿದ ಹಿರಿಯ ಜಾನಪದ ತಜ್ಞ ಡಾ.ಮೀರಾಸಾಬಿಹಳ್ಳಿ ಶಿವಣ್ಣ, ‘ಕಲಾಕೃತಿಯಲ್ಲಿ ಇಬ್ಬರು ಮಹಿಳೆಯರು ಒಂದು ಕೈಯಲ್ಲಿ ಗುರಾಣಿ ಮತ್ತೊಂದು ಕೈಯಲ್ಲಿ ಕತ್ತಿ ಹಿಡಿದುಕೊಂಡು ದೊಡ್ಡ ಕಾಡುಹಂದಿ ಬೇಟೆಯಾಡುವ ಅಥವಾ ರಕ್ಷಣೆ ಪಡೆಯುವುದನ್ನು ಬಗ್ಗೆ ವಿವರಿಸುವಂತಿದೆ.<br /> <br /> ಬಳಸಿರುವ ಆಯುಧಗಳನ್ನು ಗಮನಿಸಿದರೆ, ಇದು ಸುಮಾರು 1,200 ವರ್ಷಗಳಷ್ಟು ಹಿಂದಿನದ್ದಾಗಿರುವ ಸಾಧ್ಯತೆಯಿದೆ’ ಎಂದು ತಿಳಿಸಿದರು. ಇತಿಹಾಸ ತಜ್ಞ ಡಾ.ರಾಜಶೇಖರಪ್ಪ ಸಹ ಇದೇ ಅಭಿಮತ ವ್ಯಕ್ತಪಡಿಸಿದ್ದಾರೆ. ಕಲಾಕೃತಿಗೆ ಗಿಡಮೂಲಿಕೆಗಳ ವರ್ಣ ಬಳಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೊಳಕಾಲ್ಮುರು: ಪಾಳುಬಿದ್ದಿರುವ ಹತ್ತಾರು ಮನೆಗಳು, ಅಲ್ಲಲ್ಲಿ ಕಾಣಸಿಗುವ ಪ್ರಾಕೃತಿಕ ಒಳಕಲ್ಲುಗಳು, ನಿಧಿಗಳ್ಳರ ಹಾವಳಿಯಿಂದ ಆಳ ಗುಂಡಿಗಳು, ಮೂಲೆಗುಂಪಾದ ನಾಗರಕಲ್ಲು, ಒಡೆದು ಹೋದ ಕೋಟೆ, ಪುರಾತನ ಆಂಜನೇಯ ಸ್ವಾಮಿ ದೇವಸ್ಥಾನ...!<br /> <br /> – ಇಂತಹ ಸ್ಥಳ ಇರುವುದು ಪಟ್ಟಣ ಸಮೀಪದ ಗುಂಡ್ಲೂರು ಬಳಿ. ಮರ್ಲಹಳ್ಳಿ ಯಿಂದ ಎರಡು ಕಿ.ಮೀ ದೂರ ಸಾಗಿದರೆ ಸಿಗುವ ಹಳೆ ಆಂಜನೇಯ ಸ್ವಾಮಿ ದೇವಸ್ಥಾನದ ಸುತ್ತಮುತ್ತ ಈ ಕುರುಹುಗಳಿವೆ. ಇಲ್ಲಿ ಶತಮಾನಗಳ ಹಿಂದೆಯೇ ಇಲ್ಲಿ ಜನರು ವಾಸವಿದ್ದರು ಎಂಬುದಕ್ಕೆ ಸಾಕ್ಷಿ ಎನ್ನಲಾಗಿದೆ.<br /> <br /> <strong>ಪುರಾತನ ಕಲಾಕೃತಿಗಳು</strong><br /> ಈ ಸ್ಥಳದಲ್ಲಿ ಪ್ರಾಚೀನವಾದ ಎರಡು ಕಲಾಕೃತಿಗಳು ಪತ್ತೆಯಾಗಿವೆ. ಆಂಜನೇಯ ದೇವಸ್ಥಾನ ಮುಂಭಾಗದ ಬಂಡೆಯ ಮೇಲೆ ಚಿತ್ರಗಳು<br /> ಕಂಡು ಬಂದಿವೆ. ದೇವಸ್ಥಾನದ ಮುಂಭಾಗದಲ್ಲಿ ಇರುವ ರೇಖಾಚಿತ್ರವು ರಚನೆಯ ಸಿದ್ಧತೆಯಂತಿದೆ. ಮತ್ತೊಂದು ಪಶ್ಚಿಮ ದಿಕ್ಕಿನ ಬಂಡೆಯ ಹಿಂಬದಿಯಲ್ಲಿದೆ.<br /> <br /> ‘ಈವರೆಗೂ ಇದರ ಬಗ್ಗೆ ಸಾರ್ವಜನಿಕ ವರದಿಯಾಗಿಲ್ಲ. ಸ್ಥಳ ಇತಿಹಾಸ ಸಂಶೋಧನೆಗೆ ಪೂರಕ ವಾಗಿದ್ದು, ಬೆಳಕು ಚೆಲ್ಲುವ ಕಾರ್ಯಕ್ಕೆ ಸಂಬಂಧಪಟ್ಟರು ಮುಂದಾಗಬೇಕು. ಇಲ್ಲಿ 200ಕ್ಕೂ ಹೆಚ್ಚು ಪಾಳುಬಿದ್ದ ಮನೆ ಗಳ ಕುರುಹು ಕಾಣಬಹುದು’ ಎಂದು ಭಾನುವಾರ ಸ್ಥಳದಲ್ಲಿ ಹಾಜರಿದ್ದ<br /> ಶಿಕ್ಷಕ ಶಾಂತವೀರಣ್ಣ, ಹೋಟೆಲ್ ಮಾಲೀಕ ಕೊಟ್ರೇಶ್, ಸರ್ಎಂವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವೆಂಕಟೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.<br /> <br /> ‘300ಕ್ಕೂ ಹೆಚ್ಚು ವರ್ಷಗಳ ಹಿಂದೆ ಇಲ್ಲಿ ಜನವಸತಿ ಇತ್ತಂತೆ, ಗುಂಡ್ಲೂರು (ಗುಂಡುಗಳ ಮಧ್ಯೆಯ ಊರು ಎಂದಿರ ಬಹುದು) ಇಲ್ಲಿಂದ ಬೇಸಾಯಕ್ಕೆ ನಿತ್ಯ 100 ಕುಂಟೆ, 100 ಕೂರಿಗೆ ಹೊರಡುತ್ತಿ ದ್ದವು ಎಂದು ಕೇಳಿದ್ದೇವೆ’ ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ.<br /> <br /> ‘ಇದನ್ನು ಗಮನಿಸಿದಲ್ಲಿ ದೊಡ್ಡ ಊರು ಇದಾಗಿರಬಹುದು ಕಾಡು ಪ್ರಾಣಿ ಗಳ ಹಾವಳಿ ಅಥವಾ ಮಾರಕ ಸಾಂಕ್ರಾಮಿಕ ರೋಗದಿಂದಾಗಿ ಇಲ್ಲಿಂದ ಜನರು ಈಗಿನ ಹೊಸ ಗುಂಡ್ಲೂರು, ದಾಸರಹಟ್ಟಿಗೆ ವಲಸೆ ಹೋದರು ಎಂದು ಎನ್ನಲಾಗಿದೆ’ ಎಂಬುದು ಗ್ರಾಮಸ್ಥ ಕೊಟ್ರೇಶ್್ ಅವರ ಅಭಿಪ್ರಾಯ.<br /> <br /> ಶತಮಾನಗಳ ಮೊದಲೇ ಇಲ್ಲಿ ಜನ ವಸತಿಯಿದ್ದ ಬಗ್ಗೆ ಕುರುಹುಗಳು ಪತ್ತೆಯಾಗಿರುವುದನ್ನು ಈ ಸಂದರ್ಭ ದಲ್ಲಿ ಸ್ಮರಿಸಬಹುದು. ಈ ಸ್ಥಳದ ಬಗ್ಗೆ ಹೆಚ್ಚಿನ ಸಂಶೋಧನೆ ಯಾಗಿ, ಇತಿಹಾಸದ ಪುಟಗಳತ್ತ ಬೆಳಕು ಚೆಲ್ಲುವ ಕಾರ್ಯ ಆಗಬೇಕಿದೆ ಎಂಬುದು ಸ್ಥಳೀಯ ನಿವಾಸಿಗಳ ಕೋರಿಕೆಯಾಗಿದೆ.<br /> <br /> <strong>1,200 ವರ್ಷಗಳ ಹಿಂದಿನದು..?</strong><br /> ಚಿತ್ರ ವೀಕ್ಷಿಸಿ ಮಾಹಿತಿ ನೀಡಿದ ಹಿರಿಯ ಜಾನಪದ ತಜ್ಞ ಡಾ.ಮೀರಾಸಾಬಿಹಳ್ಳಿ ಶಿವಣ್ಣ, ‘ಕಲಾಕೃತಿಯಲ್ಲಿ ಇಬ್ಬರು ಮಹಿಳೆಯರು ಒಂದು ಕೈಯಲ್ಲಿ ಗುರಾಣಿ ಮತ್ತೊಂದು ಕೈಯಲ್ಲಿ ಕತ್ತಿ ಹಿಡಿದುಕೊಂಡು ದೊಡ್ಡ ಕಾಡುಹಂದಿ ಬೇಟೆಯಾಡುವ ಅಥವಾ ರಕ್ಷಣೆ ಪಡೆಯುವುದನ್ನು ಬಗ್ಗೆ ವಿವರಿಸುವಂತಿದೆ.<br /> <br /> ಬಳಸಿರುವ ಆಯುಧಗಳನ್ನು ಗಮನಿಸಿದರೆ, ಇದು ಸುಮಾರು 1,200 ವರ್ಷಗಳಷ್ಟು ಹಿಂದಿನದ್ದಾಗಿರುವ ಸಾಧ್ಯತೆಯಿದೆ’ ಎಂದು ತಿಳಿಸಿದರು. ಇತಿಹಾಸ ತಜ್ಞ ಡಾ.ರಾಜಶೇಖರಪ್ಪ ಸಹ ಇದೇ ಅಭಿಮತ ವ್ಯಕ್ತಪಡಿಸಿದ್ದಾರೆ. ಕಲಾಕೃತಿಗೆ ಗಿಡಮೂಲಿಕೆಗಳ ವರ್ಣ ಬಳಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>