<p>ಗುಲ್ಬರ್ಗ: ಸ್ಥಳೀಯ ಚಂದ್ರಶೇಖರ್ ಪಾಟೀಲ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ದಿನ ವಿವಿಧ ಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿಯ ಹಾಡುಗಳ ತಾಳಕ್ಕೆ ಪ್ರದರ್ಶಿಸಿದ ಸಾಮೂಹಿಕ ನೃತ್ಯ; ನೆರೆದವರನ್ನು ಪುಳಕಿತಗೊಳಿಸಿತು.<br /> <br /> ಶಾಲಾ ವಿದ್ಯಾರ್ಥಿಗಳು ನೃತ್ಯ ಪ್ರದರ್ಶದ ವೇಳೆ ಸನ್ನಿವೇಶ ಸೃಷ್ಟಿಗಾಗಿ ಚಕ್ಕಡಿಗಳನ್ನು ತರಿಸಿದ್ದರು. ಅನುರಣಿಸುತ್ತಿದ್ದ ದೇಶಭಕ್ತಿ ಗೀತೆ, ವಿದ್ಯಾರ್ಥಿಗಳ ಸುಂದರ ನೃತ್ಯ ನೋಡುತ್ತಾ ಮೈಮರೆತಿದ್ದ ಸಚಿವ ಬಸವರಾಜ ಬೊಮ್ಮಾಯಿ, ಮೈದಾನಕ್ಕೆ ಆಗಮಿಸಿದ ಎತ್ತುಗಳನ್ನು ನೋಡಿ ಪುಳಕಿತಗೊಂಡರು. <br /> <br /> ವೇದಿಕೆಯಿಂದ ಕೆಳಗೆ ಹೋಗಿ, ಸಂಗೀತ ಸದ್ದಿಗೆ ಬೆದರುತ್ತಿದ್ದ ಎತ್ತುಗಳ ಮೈಯನ್ನು ಪ್ರೀತಿಯಿಂದ ಸವರಿ, ಮುತ್ತುಕೊಟ್ಟು ಧನ್ಯತಾಭಾವ ಸೂಸಿದರು.<br /> <br /> ಶಾಲಾ ವಿದ್ಯಾರ್ಥಿಗಳಿಂದ ತುಂಬಿದ್ದ ಕ್ರೀಡಾಂಗಣವು ಕೇಸರಿ, ಬಿಳಿ, ಹಸಿರು ವೇಷಭೂಷಣದಲ್ಲಿ ಮಿಂದೆದ್ದಂತೆ ಕಾಣುತ್ತಿತ್ತು. ಧ್ವಜಾರೋಹಣ, ಪೊಲೀಸ್ ಪರೇಡ್ನೊಂದಿಗೆ ಗಂಭೀರತೆಗೆ ಜಾರಿದ ಜನಜಂಗುಳಿಗೆ ಗಣತಂತ್ರ ವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳು ಮನವರಿಕೆ ಮಾಡಿದರು.<br /> <br /> ಬಳಿಕ ದೇಶದ ಹಿರಿಮೆ ಕೊಂಡಾಡುವ ಹಾಡುಗಳ ಸಾಮೂಹಿಕ ನೃತ್ಯ ಪ್ರದರ್ಶನದ ನೋಟ ಮನಮೋಹಕವಾಗಿತ್ತು. ವಿಕಾಸ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳು ತ್ರಿವರ್ಣ ಧ್ವಜಾಕಾರದಲ್ಲಿ ನಿಂತು `ಜೈ ಹೋ..ಜೈ ಹೋ...~ ಗೀತೆಗೆ ನೃತ್ಯ ಪ್ರದರ್ಶಿಸಿಸುವಾಗ ಜನರು ಚಪ್ಪಾಳೆಗಳ ತಾಳಹಾಕಿ ಭಾಗಿಯಾದರು.<br /> <br /> ಡಾಮಿನೆಂಟ್ ಪ್ರೌಢಶಾಲೆಯ ವಿದ್ಯಾರ್ಥಿಗಳು `ಮೇರಿ ದೇಶ್ಕಿ ಧರ್ತಿ...~ ಹಾಡಿಗೆ ಪ್ರದರ್ಶಿಸಿದ ನೃತ್ಯರೂಪಕವು ಗ್ರಾಮೀಣ ಜೀವನದ ಸನ್ನಿವೇಶವನ್ನು ಸುಂದರವಾಗಿ ಸೃಷ್ಟಿಸಿತು. ಫರ್ಹಾನ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಸರ್ಕಾರಿ ಎಸ್ಸಿ/ಎಸ್ಟಿ ಕನ್ಯಾ ಪ್ರೌಢಶಾಲೆ, ಪ್ರಜ್ಞಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯಗಳು ದೇಶಭಕ್ತಿಯನ್ನು ಗಟ್ಟಿಗೊಳಿಸಿ ಗಣರಾಜ್ಯ ಆಚರಣೆ ಉತ್ಸವದ ಉತ್ಸಾಹವನ್ನು ಇಮ್ಮಡಿಗೊಳಿಸಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗುಲ್ಬರ್ಗ: ಸ್ಥಳೀಯ ಚಂದ್ರಶೇಖರ್ ಪಾಟೀಲ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ದಿನ ವಿವಿಧ ಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿಯ ಹಾಡುಗಳ ತಾಳಕ್ಕೆ ಪ್ರದರ್ಶಿಸಿದ ಸಾಮೂಹಿಕ ನೃತ್ಯ; ನೆರೆದವರನ್ನು ಪುಳಕಿತಗೊಳಿಸಿತು.<br /> <br /> ಶಾಲಾ ವಿದ್ಯಾರ್ಥಿಗಳು ನೃತ್ಯ ಪ್ರದರ್ಶದ ವೇಳೆ ಸನ್ನಿವೇಶ ಸೃಷ್ಟಿಗಾಗಿ ಚಕ್ಕಡಿಗಳನ್ನು ತರಿಸಿದ್ದರು. ಅನುರಣಿಸುತ್ತಿದ್ದ ದೇಶಭಕ್ತಿ ಗೀತೆ, ವಿದ್ಯಾರ್ಥಿಗಳ ಸುಂದರ ನೃತ್ಯ ನೋಡುತ್ತಾ ಮೈಮರೆತಿದ್ದ ಸಚಿವ ಬಸವರಾಜ ಬೊಮ್ಮಾಯಿ, ಮೈದಾನಕ್ಕೆ ಆಗಮಿಸಿದ ಎತ್ತುಗಳನ್ನು ನೋಡಿ ಪುಳಕಿತಗೊಂಡರು. <br /> <br /> ವೇದಿಕೆಯಿಂದ ಕೆಳಗೆ ಹೋಗಿ, ಸಂಗೀತ ಸದ್ದಿಗೆ ಬೆದರುತ್ತಿದ್ದ ಎತ್ತುಗಳ ಮೈಯನ್ನು ಪ್ರೀತಿಯಿಂದ ಸವರಿ, ಮುತ್ತುಕೊಟ್ಟು ಧನ್ಯತಾಭಾವ ಸೂಸಿದರು.<br /> <br /> ಶಾಲಾ ವಿದ್ಯಾರ್ಥಿಗಳಿಂದ ತುಂಬಿದ್ದ ಕ್ರೀಡಾಂಗಣವು ಕೇಸರಿ, ಬಿಳಿ, ಹಸಿರು ವೇಷಭೂಷಣದಲ್ಲಿ ಮಿಂದೆದ್ದಂತೆ ಕಾಣುತ್ತಿತ್ತು. ಧ್ವಜಾರೋಹಣ, ಪೊಲೀಸ್ ಪರೇಡ್ನೊಂದಿಗೆ ಗಂಭೀರತೆಗೆ ಜಾರಿದ ಜನಜಂಗುಳಿಗೆ ಗಣತಂತ್ರ ವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳು ಮನವರಿಕೆ ಮಾಡಿದರು.<br /> <br /> ಬಳಿಕ ದೇಶದ ಹಿರಿಮೆ ಕೊಂಡಾಡುವ ಹಾಡುಗಳ ಸಾಮೂಹಿಕ ನೃತ್ಯ ಪ್ರದರ್ಶನದ ನೋಟ ಮನಮೋಹಕವಾಗಿತ್ತು. ವಿಕಾಸ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳು ತ್ರಿವರ್ಣ ಧ್ವಜಾಕಾರದಲ್ಲಿ ನಿಂತು `ಜೈ ಹೋ..ಜೈ ಹೋ...~ ಗೀತೆಗೆ ನೃತ್ಯ ಪ್ರದರ್ಶಿಸಿಸುವಾಗ ಜನರು ಚಪ್ಪಾಳೆಗಳ ತಾಳಹಾಕಿ ಭಾಗಿಯಾದರು.<br /> <br /> ಡಾಮಿನೆಂಟ್ ಪ್ರೌಢಶಾಲೆಯ ವಿದ್ಯಾರ್ಥಿಗಳು `ಮೇರಿ ದೇಶ್ಕಿ ಧರ್ತಿ...~ ಹಾಡಿಗೆ ಪ್ರದರ್ಶಿಸಿದ ನೃತ್ಯರೂಪಕವು ಗ್ರಾಮೀಣ ಜೀವನದ ಸನ್ನಿವೇಶವನ್ನು ಸುಂದರವಾಗಿ ಸೃಷ್ಟಿಸಿತು. ಫರ್ಹಾನ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಸರ್ಕಾರಿ ಎಸ್ಸಿ/ಎಸ್ಟಿ ಕನ್ಯಾ ಪ್ರೌಢಶಾಲೆ, ಪ್ರಜ್ಞಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯಗಳು ದೇಶಭಕ್ತಿಯನ್ನು ಗಟ್ಟಿಗೊಳಿಸಿ ಗಣರಾಜ್ಯ ಆಚರಣೆ ಉತ್ಸವದ ಉತ್ಸಾಹವನ್ನು ಇಮ್ಮಡಿಗೊಳಿಸಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>