<p><strong>ಬೆಂಗಳೂರು: </strong>`ಸಣ್ಣಕತೆಗಳ ರಚನಾಕಾರರ ಸಾಲಿನಲ್ಲಿ ಸಾಹಿತಿ ಕೆ.ಗೋಪಾಲಕೃಷ್ಣರಾಯರ ಹೆಸರನ್ನು ಪ್ರಸ್ತಾಪಿಸದೇ ತಪ್ಪು ಮಾಡಲಾಗುತ್ತಿದೆ. ಗೋಕೃ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಅತ್ಯುತ್ತಮ ಸಣ್ಣಕತೆಗಳನ್ನು ನೀಡಿದ್ದಾರೆ~ ಎಂದು ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಹೇಳಿದರು.<br /> <br /> ಕೆ.ಗೋಪಾಲಕೃಷ್ಣರಾಯ ಸಾಹಿತ್ಯ ಪ್ರತಿಷ್ಠಾನವು ನಗರದಲ್ಲಿ ಶನಿವಾರ ಆಯೋಜಿಸಿದ್ದ ಕೆ.ಗೋಪಾಲಕೃಷ್ಣರಾಯ ಅವರ ಸಮಗ್ರ ಕೃತಿಗಳ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.<br /> <br /> `ಗೋಕೃ ಅವರು ಸಣ್ಣ ಕತೆ ಮಾತ್ರವಲ್ಲ, ಪ್ರಬಂಧ, ಕವಿತೆ, ನಾಟಕ ಸೇರಿದಂತೆ ಎಲ್ಲಾ ವಲಯದಲ್ಲೂ ದೊಡ್ಡ ಮಟ್ಟಿನ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ. ಅವರ ಜೀವಿತಾವಧಿಯಲ್ಲಿ ಈ ಪುಸ್ತಕಗಳು ಮುದ್ರಣದ ಚೌಕಟ್ಟಿಗೆ ಒಳಪಡಬೇಕಿತ್ತು~ ಎಂದು ವಿಷಾದಿಸಿದ ಅವರು, ` ಯಾವುದೇ ಪ್ರೋತ್ಸಾಹವನ್ನು ಬಯಸದೇ ಅನುಭವವನ್ನು ಅಕ್ಷರಕ್ಕೆ ಇಳಿಸಿ, ವಿಭಿನ್ನ ಚಿಂತನೆಯನ್ನು ಸಾಹಿತ್ಯದ ಮೂಲಕ ನೀಡಿದ್ದಾರೆ. ಅವರ ಸರಳ ತತ್ವಗಳು ಮತ್ತು ಆದರ್ಶಗಳು ಇಂದಿನ ಪೀಳಿಗೆಗೆ ಆದರ್ಶನೀಯ~ ಎಂದರು.<br /> <br /> ಗೋಕೃ ಅವರ ಪುತ್ರಿ ಜಾನಕಿ ಶ್ರೀನಿವಾಸ್, `ಮೊದಲಿಗೆ ನನ್ನ ತಂದೆಯ ಸಾಹಿತ್ಯದ ಬಗ್ಗೆ ಅಷ್ಟೇನು ತಿಳಿದುಕೊಂಡಿರಲಿಲ್ಲ. ಕೆಲವು ವರ್ಷಗಳಿಂದೀಚೆಗೆ ತಂದೆಯ ಎಲ್ಲಾ ಕೃತಿಗಳನ್ನು ಸಂಗ್ರಹಿಸುವ ಮನಸ್ಸಾಯಿತು. ಅದರ ಫಲವೇ ಈ ಪುಸ್ತಕ. ತಂದೆ ನೀಡಿದ ಸರಳ ಜೀವನ ಸೂತ್ರಗಳೇ ಎಲ್ಲಾ ಸಂಕಷ್ಟಗಳನ್ನು ತಾಳ್ಮೆಯಿಂದ ಎದುರಿಸುವಂತೆ ಮಾಡಿದೆ~ ಎಂದು ಭಾವುಕರಾದರು.<br /> <br /> ಇದೇ ಸಂದರ್ಭದಲ್ಲಿ ಗೋಕೃ ಕುರಿತ ವೆಬ್ಸೈಟ್ನ್ನು ಬಿಡುಗಡೆ ಮಾಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್, ಸಾಹಿತಿ ಡಾ.ಗೀತಾ ರಾಮಾನುಜಂ, ಪ್ರತಿಷ್ಠಾನದ ಅಧ್ಯಕ್ಷ ಡಾ.ಕೆ.ರಮೇಶ್ ಕಾಮತ್ ಇತರರು ಉಪಸ್ಥಿತರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>`ಸಣ್ಣಕತೆಗಳ ರಚನಾಕಾರರ ಸಾಲಿನಲ್ಲಿ ಸಾಹಿತಿ ಕೆ.ಗೋಪಾಲಕೃಷ್ಣರಾಯರ ಹೆಸರನ್ನು ಪ್ರಸ್ತಾಪಿಸದೇ ತಪ್ಪು ಮಾಡಲಾಗುತ್ತಿದೆ. ಗೋಕೃ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಅತ್ಯುತ್ತಮ ಸಣ್ಣಕತೆಗಳನ್ನು ನೀಡಿದ್ದಾರೆ~ ಎಂದು ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಹೇಳಿದರು.<br /> <br /> ಕೆ.ಗೋಪಾಲಕೃಷ್ಣರಾಯ ಸಾಹಿತ್ಯ ಪ್ರತಿಷ್ಠಾನವು ನಗರದಲ್ಲಿ ಶನಿವಾರ ಆಯೋಜಿಸಿದ್ದ ಕೆ.ಗೋಪಾಲಕೃಷ್ಣರಾಯ ಅವರ ಸಮಗ್ರ ಕೃತಿಗಳ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.<br /> <br /> `ಗೋಕೃ ಅವರು ಸಣ್ಣ ಕತೆ ಮಾತ್ರವಲ್ಲ, ಪ್ರಬಂಧ, ಕವಿತೆ, ನಾಟಕ ಸೇರಿದಂತೆ ಎಲ್ಲಾ ವಲಯದಲ್ಲೂ ದೊಡ್ಡ ಮಟ್ಟಿನ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ. ಅವರ ಜೀವಿತಾವಧಿಯಲ್ಲಿ ಈ ಪುಸ್ತಕಗಳು ಮುದ್ರಣದ ಚೌಕಟ್ಟಿಗೆ ಒಳಪಡಬೇಕಿತ್ತು~ ಎಂದು ವಿಷಾದಿಸಿದ ಅವರು, ` ಯಾವುದೇ ಪ್ರೋತ್ಸಾಹವನ್ನು ಬಯಸದೇ ಅನುಭವವನ್ನು ಅಕ್ಷರಕ್ಕೆ ಇಳಿಸಿ, ವಿಭಿನ್ನ ಚಿಂತನೆಯನ್ನು ಸಾಹಿತ್ಯದ ಮೂಲಕ ನೀಡಿದ್ದಾರೆ. ಅವರ ಸರಳ ತತ್ವಗಳು ಮತ್ತು ಆದರ್ಶಗಳು ಇಂದಿನ ಪೀಳಿಗೆಗೆ ಆದರ್ಶನೀಯ~ ಎಂದರು.<br /> <br /> ಗೋಕೃ ಅವರ ಪುತ್ರಿ ಜಾನಕಿ ಶ್ರೀನಿವಾಸ್, `ಮೊದಲಿಗೆ ನನ್ನ ತಂದೆಯ ಸಾಹಿತ್ಯದ ಬಗ್ಗೆ ಅಷ್ಟೇನು ತಿಳಿದುಕೊಂಡಿರಲಿಲ್ಲ. ಕೆಲವು ವರ್ಷಗಳಿಂದೀಚೆಗೆ ತಂದೆಯ ಎಲ್ಲಾ ಕೃತಿಗಳನ್ನು ಸಂಗ್ರಹಿಸುವ ಮನಸ್ಸಾಯಿತು. ಅದರ ಫಲವೇ ಈ ಪುಸ್ತಕ. ತಂದೆ ನೀಡಿದ ಸರಳ ಜೀವನ ಸೂತ್ರಗಳೇ ಎಲ್ಲಾ ಸಂಕಷ್ಟಗಳನ್ನು ತಾಳ್ಮೆಯಿಂದ ಎದುರಿಸುವಂತೆ ಮಾಡಿದೆ~ ಎಂದು ಭಾವುಕರಾದರು.<br /> <br /> ಇದೇ ಸಂದರ್ಭದಲ್ಲಿ ಗೋಕೃ ಕುರಿತ ವೆಬ್ಸೈಟ್ನ್ನು ಬಿಡುಗಡೆ ಮಾಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್, ಸಾಹಿತಿ ಡಾ.ಗೀತಾ ರಾಮಾನುಜಂ, ಪ್ರತಿಷ್ಠಾನದ ಅಧ್ಯಕ್ಷ ಡಾ.ಕೆ.ರಮೇಶ್ ಕಾಮತ್ ಇತರರು ಉಪಸ್ಥಿತರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>