<p><strong>ಕೆಂಭಾವಿ:</strong> ಪಟ್ಟಣದಲ್ಲಿ ಸ್ವಲ್ಪ ಮಳೆ ಬಂದರೆ ಸಾಕು, ಇಲ್ಲಿನ ಮುಖ್ಯ ರಸ್ತೆ ಮಳೆ ನೀರಿನಿಂದ ಚರಂಡಿಯಾಗಿ ಪರಿವ ರ್ತನೆ ಆಗುತ್ತದೆ. ಇದರಿಂದ ಪ್ರತಿವರ್ಷ ರಸ್ತೆ ಸಂಪೂರ್ಣ ಹಾಳಾಗುತ್ತಿದ್ದು, ಕೇಳು ವವರೇ ಇಲ್ಲದಂತಾಗಿದೆ.<br /> <br /> ಮಳೆ ಬಂತೆಂದರೆ ಇಲ್ಲಿ ನೀರಿನ ಪ್ರವಾ ಹವೇ ಬಂದು ಕೆರೆಯಂತೆ ಮಾರ್ಪಾ ಟಾಗುತ್ತದೆ. ಇದರಿಂದ ಜನತೆಗೆ ತೀವ್ರ ತೊಂದರೆಯಾಗಿದ್ದು, ಓಡಾಡಲು ಸ್ಥಳವಿಲ್ಲದೇ ಜನತೆ ಅಸಹಾಯ ಕರಾಗಿದ್ದಾರೆ. ನಿಂತ ಚರಂಡಿ ನೀರು ವಾರಗಟ್ಟಲೆ ಅಲ್ಲಿಯೇ ಶೇಖರಣೆ ಆಗುತ್ತಿದ್ದು, ಇದರಿಂದ ದುರ್ವಾಸನೆ ಬೀರುತ್ತಿದೆ.<br /> <br /> ಸುತ್ತಲಿನ ವ್ಯಾಪಾರಿಗಳು, ಪಾದಚಾರಿಗಳು ಮೂಗು ಮುಚ್ಚಿ ಕೊಂಡು ಓಡಾಡುವಂತಾಗಿದೆ. ಪ್ರತಿ ಬಾರಿ ಮಳೆ ಬಂದಾಗಲೆಲ್ಲ ಇಲ್ಲಿ ಇದೇ ಸ್ಥಿತಿ ಮುಂದುವರಿಯುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.<br /> <br /> ಪಟ್ಟಣದ ಮುಖ್ಯ ಮಾರುಕಟ್ಟೆ ಪ್ರದೇಶ ಇದಾಗಿದ್ದು, ಇಲ್ಲಿಯೇ ಅನೇಕ ಅಂಗಡಿ ಮುಂಗಟ್ಟುಗಳು, ದೇವಸ್ಥಾನ ಗಳು, ಕಚೇರಿಗಳಿವೆ.<br /> </p>.<p>ನಿತ್ಯ ಸಂಚರಿಸುವ ಜನತೆಗೆ ತೊಂದರೆಯಾಗಿದೆ. ಇಲ್ಲಿ ನಿಲ್ಲುವ ಚರಂಟಿ ನೀರಿನಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಜನರಲ್ಲಿ ಭಯ ಮೂಡಿಸಿದೆ. ಶೀಘ್ರ ಚರಂಡಿ ಸ್ವಚ್ಛಗೊಳಿಸಿ, ಈ ತೊಂದರೆ ನಿವಾರಿಸುವಂತೆ ನಾಗರಡ್ಡಿ ಧರಿ ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಂಭಾವಿ:</strong> ಪಟ್ಟಣದಲ್ಲಿ ಸ್ವಲ್ಪ ಮಳೆ ಬಂದರೆ ಸಾಕು, ಇಲ್ಲಿನ ಮುಖ್ಯ ರಸ್ತೆ ಮಳೆ ನೀರಿನಿಂದ ಚರಂಡಿಯಾಗಿ ಪರಿವ ರ್ತನೆ ಆಗುತ್ತದೆ. ಇದರಿಂದ ಪ್ರತಿವರ್ಷ ರಸ್ತೆ ಸಂಪೂರ್ಣ ಹಾಳಾಗುತ್ತಿದ್ದು, ಕೇಳು ವವರೇ ಇಲ್ಲದಂತಾಗಿದೆ.<br /> <br /> ಮಳೆ ಬಂತೆಂದರೆ ಇಲ್ಲಿ ನೀರಿನ ಪ್ರವಾ ಹವೇ ಬಂದು ಕೆರೆಯಂತೆ ಮಾರ್ಪಾ ಟಾಗುತ್ತದೆ. ಇದರಿಂದ ಜನತೆಗೆ ತೀವ್ರ ತೊಂದರೆಯಾಗಿದ್ದು, ಓಡಾಡಲು ಸ್ಥಳವಿಲ್ಲದೇ ಜನತೆ ಅಸಹಾಯ ಕರಾಗಿದ್ದಾರೆ. ನಿಂತ ಚರಂಡಿ ನೀರು ವಾರಗಟ್ಟಲೆ ಅಲ್ಲಿಯೇ ಶೇಖರಣೆ ಆಗುತ್ತಿದ್ದು, ಇದರಿಂದ ದುರ್ವಾಸನೆ ಬೀರುತ್ತಿದೆ.<br /> <br /> ಸುತ್ತಲಿನ ವ್ಯಾಪಾರಿಗಳು, ಪಾದಚಾರಿಗಳು ಮೂಗು ಮುಚ್ಚಿ ಕೊಂಡು ಓಡಾಡುವಂತಾಗಿದೆ. ಪ್ರತಿ ಬಾರಿ ಮಳೆ ಬಂದಾಗಲೆಲ್ಲ ಇಲ್ಲಿ ಇದೇ ಸ್ಥಿತಿ ಮುಂದುವರಿಯುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.<br /> <br /> ಪಟ್ಟಣದ ಮುಖ್ಯ ಮಾರುಕಟ್ಟೆ ಪ್ರದೇಶ ಇದಾಗಿದ್ದು, ಇಲ್ಲಿಯೇ ಅನೇಕ ಅಂಗಡಿ ಮುಂಗಟ್ಟುಗಳು, ದೇವಸ್ಥಾನ ಗಳು, ಕಚೇರಿಗಳಿವೆ.<br /> </p>.<p>ನಿತ್ಯ ಸಂಚರಿಸುವ ಜನತೆಗೆ ತೊಂದರೆಯಾಗಿದೆ. ಇಲ್ಲಿ ನಿಲ್ಲುವ ಚರಂಟಿ ನೀರಿನಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಜನರಲ್ಲಿ ಭಯ ಮೂಡಿಸಿದೆ. ಶೀಘ್ರ ಚರಂಡಿ ಸ್ವಚ್ಛಗೊಳಿಸಿ, ಈ ತೊಂದರೆ ನಿವಾರಿಸುವಂತೆ ನಾಗರಡ್ಡಿ ಧರಿ ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>