<p><strong>ರಾಯಚೂರು: </strong>ನೀರಿನ ಸದ್ಬಳಕೆ, ಕೃಷಿಯ ಸಮರ್ಪಕ ನಿರ್ವಹಣೆ, ಬಿತ್ತನೆ ಬೀಜ ಆಯ್ಕೆ, ಮಣ್ಣಿನ ಫಲವತ್ತತೆ ಬಗ್ಗೆ ಹೆಚ್ಚಿನ ಮಾರ್ಗದರ್ಶನವನ್ನು ರೈತ ಸಮುದಾಯಕ್ಕೆ ತಲುಪಿಸುವುದು ಪ್ರಥಮ ಆದ್ಯತೆ ಆಗಬೇಕು. ಈ ಕ್ಷೇತ್ರದಲ್ಲಿ ಸುಧಾರಣೆಯಾದರೆ ಮಾತ್ರ ರೈತ ವರ್ಗಕ್ಕೆ ಹೆಚ್ಚು ಉಪಯೋಗ ಆಗುತ್ತದೆ ಎಂದು ಭಾನುವಾರ ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ದ್ವಿತೀಯ ಘಟಿಕೋತ್ಸವದಲ್ಲಿ ಚಿನ್ನದ ಪದಕ ವಿಜೇತರು ನುಡಿದರು.<br /> <br /> ಘಟಿಕೋತ್ಸವ ಸಮಾರಂಭದಲ್ಲಿ ಚಿನ್ನದ ಪದಕ ಪಡೆದವರ ಪಟ್ಟಿ ಘೋಷಣೆಯಾಗುತ್ತಿದ್ದಂತೆ ಪದಕ ಪಡೆದ ವಿದ್ಯಾರ್ಥಿಗಳು, ಅವರ ಪಾಲಕರ ಸಂತೋಷಕ್ಕೆ ಪಾರವೇ ಇರಲಿಲ್ಲ.ಕೃಷಿ ಪದವಿ ವಿಭಾಗದಲ್ಲಿ ತಲಾ ನಾಲ್ಕು ಚಿನ್ನದ ಪದಕ ಪಡೆದ ಕಮಲೇಶಕುಮಾರ, ಪ್ರದೀಪ್ಕುಮಾರ ಹಾಗೂ ಕೃಷಿ ತಾಂತ್ರಿಕ ವಿಭಾಗದಲ್ಲಿ 4 ಚಿನ್ನದ ಪದಕ ಮತ್ತು 2 ನಗದು ಪುರಸ್ಕಾರ ಪಡೆದ ರತ್ನೇಶಕುಮಾರ ಮುಂದಿನ ಉನ್ನತ ವ್ಯಾಸಂಗ, ಸಂಶೋಧನೆ, ಅಧ್ಯಯನದ ಬಗ್ಗೆ ಹೇಳಿಕೊಂಡರು.<br /> <br /> ನಮ್ಮದು ಅವಿಭಕ್ತ ರೈತ ಕುಟುಂಬ. ರಾಜಸ್ತಾನದಲ್ಲಿ 36 ಎಕರೆ ಜಮೀನು ಇದೆ. ನಮ್ಮಲ್ಲಿ ನೀರಿನ ಸಮಸ್ಯೆ ಇದೆ. ಇದ್ದರೂ ಉಪ್ಪು ನೀರು. 300-400 ಅಡಿ ಆಳ ಕೊರೆದರೂ ಇಂಥದ್ದೇ ನೀರು. ಹೀಗಾಗಿ ರೈತರ ಸಮಸ್ಯೆ ನನಗೆ ಗೊತ್ತು. ಸಂಶೋಧನೆ ಕ್ಷೇತ್ರದಲ್ಲಿ ಸಾಧನೆ ಮಾಡಿ ಸ್ಪಂದಿಸುವ ಆಶಯವಿದೆ. ಕೃಷಿ ಅಧ್ಯಯನ ಮಾಡುವ ನಮ್ಮಂಥ ಯುವಕರು ಕೃಷಿ ಕ್ಷೇತ್ರದ ಏಳ್ಗೆಗೆ ಪ್ರಯತ್ನಿಸಬೇಕು ಎಂದು ಕಮಲೇಶಕುಮಾರ್ ಅಭಿಪ್ರಾಯ ಹಂಚಿಕೊಂಡರು.<br /> <br /> ಕೃಷಿ ವ್ಯವಸ್ಥಾಪನ ಅಧ್ಯಯನ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗ ಮಾಡುವ ಆಶಯವಿದೆ. ಕೃಷಿ ಪದವಿ ಪಡೆದವರು ಬ್ಯಾಂಕಿಂಗ್, ರಾಸಾಯನಿಕ ಕಂಪನಿ, ಕೃಷಿ ಯಂತ್ರೋಪಕರಣ ತಯಾರಿಕೆ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕ್ಷೇತ್ರಗಳಲ್ಲೂ ಕೃಷಿ ಪದವೀಧರರ ಅಗತ್ಯವಿದೆ ಎಂಬ ಭಾವನೆ ನನ್ನದು ಎಂದು ಬಿಹಾರದ ರತ್ನೇಶಕುಮಾರ್ ಹೇಳಿದರು.<br /> <br /> ಹೈದರಾಬಾದ್ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಅಧ್ಯಯನ ಮಾಡುವ ಉದ್ದೇಶವಿದೆ. ಕೃಷಿ ಅಧ್ಯಯನಕ್ಕಾಗಿ ಬಂದ ನಾವು ಈ ಕ್ಷೇತ್ರಕ್ಕೆ ನಮ್ಮದೇ ಆದ ರೀತಿಯಲ್ಲಿ ಉಪಯುಕ್ತ ಕೊಡುಗೆ ಕೊಡುವ ಉದ್ದೇಶ ಹೊಂದಿರಬೇಕು. ಈ ದಿಕ್ಕಿನಲ್ಲಿ ಪ್ರಯತ್ನ ಮುಂದುವರಿಯಲಿದೆ ಎಂದು ಕೃಷಿ ಪದವಿ ವಿಭಾಗದಲ್ಲಿ 4 ಚಿನ್ನದ ಪದಕ ಪಡೆದ ಪ್ರದೀಪ್ಕುಮಾರ್ ಆಶಯವನ್ನು `ಪ್ರಜಾವಾಣಿ~ಯೊಂದಿಗೆ ಹಂಚಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು: </strong>ನೀರಿನ ಸದ್ಬಳಕೆ, ಕೃಷಿಯ ಸಮರ್ಪಕ ನಿರ್ವಹಣೆ, ಬಿತ್ತನೆ ಬೀಜ ಆಯ್ಕೆ, ಮಣ್ಣಿನ ಫಲವತ್ತತೆ ಬಗ್ಗೆ ಹೆಚ್ಚಿನ ಮಾರ್ಗದರ್ಶನವನ್ನು ರೈತ ಸಮುದಾಯಕ್ಕೆ ತಲುಪಿಸುವುದು ಪ್ರಥಮ ಆದ್ಯತೆ ಆಗಬೇಕು. ಈ ಕ್ಷೇತ್ರದಲ್ಲಿ ಸುಧಾರಣೆಯಾದರೆ ಮಾತ್ರ ರೈತ ವರ್ಗಕ್ಕೆ ಹೆಚ್ಚು ಉಪಯೋಗ ಆಗುತ್ತದೆ ಎಂದು ಭಾನುವಾರ ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ದ್ವಿತೀಯ ಘಟಿಕೋತ್ಸವದಲ್ಲಿ ಚಿನ್ನದ ಪದಕ ವಿಜೇತರು ನುಡಿದರು.<br /> <br /> ಘಟಿಕೋತ್ಸವ ಸಮಾರಂಭದಲ್ಲಿ ಚಿನ್ನದ ಪದಕ ಪಡೆದವರ ಪಟ್ಟಿ ಘೋಷಣೆಯಾಗುತ್ತಿದ್ದಂತೆ ಪದಕ ಪಡೆದ ವಿದ್ಯಾರ್ಥಿಗಳು, ಅವರ ಪಾಲಕರ ಸಂತೋಷಕ್ಕೆ ಪಾರವೇ ಇರಲಿಲ್ಲ.ಕೃಷಿ ಪದವಿ ವಿಭಾಗದಲ್ಲಿ ತಲಾ ನಾಲ್ಕು ಚಿನ್ನದ ಪದಕ ಪಡೆದ ಕಮಲೇಶಕುಮಾರ, ಪ್ರದೀಪ್ಕುಮಾರ ಹಾಗೂ ಕೃಷಿ ತಾಂತ್ರಿಕ ವಿಭಾಗದಲ್ಲಿ 4 ಚಿನ್ನದ ಪದಕ ಮತ್ತು 2 ನಗದು ಪುರಸ್ಕಾರ ಪಡೆದ ರತ್ನೇಶಕುಮಾರ ಮುಂದಿನ ಉನ್ನತ ವ್ಯಾಸಂಗ, ಸಂಶೋಧನೆ, ಅಧ್ಯಯನದ ಬಗ್ಗೆ ಹೇಳಿಕೊಂಡರು.<br /> <br /> ನಮ್ಮದು ಅವಿಭಕ್ತ ರೈತ ಕುಟುಂಬ. ರಾಜಸ್ತಾನದಲ್ಲಿ 36 ಎಕರೆ ಜಮೀನು ಇದೆ. ನಮ್ಮಲ್ಲಿ ನೀರಿನ ಸಮಸ್ಯೆ ಇದೆ. ಇದ್ದರೂ ಉಪ್ಪು ನೀರು. 300-400 ಅಡಿ ಆಳ ಕೊರೆದರೂ ಇಂಥದ್ದೇ ನೀರು. ಹೀಗಾಗಿ ರೈತರ ಸಮಸ್ಯೆ ನನಗೆ ಗೊತ್ತು. ಸಂಶೋಧನೆ ಕ್ಷೇತ್ರದಲ್ಲಿ ಸಾಧನೆ ಮಾಡಿ ಸ್ಪಂದಿಸುವ ಆಶಯವಿದೆ. ಕೃಷಿ ಅಧ್ಯಯನ ಮಾಡುವ ನಮ್ಮಂಥ ಯುವಕರು ಕೃಷಿ ಕ್ಷೇತ್ರದ ಏಳ್ಗೆಗೆ ಪ್ರಯತ್ನಿಸಬೇಕು ಎಂದು ಕಮಲೇಶಕುಮಾರ್ ಅಭಿಪ್ರಾಯ ಹಂಚಿಕೊಂಡರು.<br /> <br /> ಕೃಷಿ ವ್ಯವಸ್ಥಾಪನ ಅಧ್ಯಯನ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗ ಮಾಡುವ ಆಶಯವಿದೆ. ಕೃಷಿ ಪದವಿ ಪಡೆದವರು ಬ್ಯಾಂಕಿಂಗ್, ರಾಸಾಯನಿಕ ಕಂಪನಿ, ಕೃಷಿ ಯಂತ್ರೋಪಕರಣ ತಯಾರಿಕೆ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕ್ಷೇತ್ರಗಳಲ್ಲೂ ಕೃಷಿ ಪದವೀಧರರ ಅಗತ್ಯವಿದೆ ಎಂಬ ಭಾವನೆ ನನ್ನದು ಎಂದು ಬಿಹಾರದ ರತ್ನೇಶಕುಮಾರ್ ಹೇಳಿದರು.<br /> <br /> ಹೈದರಾಬಾದ್ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಅಧ್ಯಯನ ಮಾಡುವ ಉದ್ದೇಶವಿದೆ. ಕೃಷಿ ಅಧ್ಯಯನಕ್ಕಾಗಿ ಬಂದ ನಾವು ಈ ಕ್ಷೇತ್ರಕ್ಕೆ ನಮ್ಮದೇ ಆದ ರೀತಿಯಲ್ಲಿ ಉಪಯುಕ್ತ ಕೊಡುಗೆ ಕೊಡುವ ಉದ್ದೇಶ ಹೊಂದಿರಬೇಕು. ಈ ದಿಕ್ಕಿನಲ್ಲಿ ಪ್ರಯತ್ನ ಮುಂದುವರಿಯಲಿದೆ ಎಂದು ಕೃಷಿ ಪದವಿ ವಿಭಾಗದಲ್ಲಿ 4 ಚಿನ್ನದ ಪದಕ ಪಡೆದ ಪ್ರದೀಪ್ಕುಮಾರ್ ಆಶಯವನ್ನು `ಪ್ರಜಾವಾಣಿ~ಯೊಂದಿಗೆ ಹಂಚಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>