<p><strong>ಆಳಂದ (ಗುಲ್ಬರ್ಗ ಜಿ.): </strong>ಜೀಪು ಮತ್ತು ಕಂಟೇನರ್ ಲಾರಿ ಮುಖಾಮುಖಿಯಾಗಿ ಆರು ಜನ ಮೃತಪಟ್ಟ ಘಟನೆ ಉಮರ್ಗಾ- ಬಸವಕಲ್ಯಾಣ ರಸ್ತೆಯ ಕರಳಿ ಕ್ರಾಸ್ ಬಳಿ ಗುರುವಾರ ರಾತ್ರಿ ನಡೆದಿದೆ. <br /> <br /> ಆಳಂದ ಪಟ್ಟಣದ ನೊಖಡ ಗಲ್ಲಿಯ ಕೆಲವು ಮುಸ್ಲಿಂ ಕುಟುಂಬದವರು ಜೀಪಿನಲ್ಲಿ ಬೀದರ್ ಜಿಲ್ಲೆಯ ಭಾಲ್ಕಿಯ ಸೈಲಾನಿ ಬಾಬಾ ದರ್ಶನಕ್ಕಾಗಿ ಹೋಗುತ್ತಿದ್ದರು. ಎದುರಿನಿಂದ ಬಂದ ಕಂಟೇನರ್ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.<br /> <br /> ಜೀಪಿನಲ್ಲಿ ಸುಮಾರು 15ಜನ ಪ್ರಯಾಣಿಸುತ್ತಿದ್ದು, ಚಾಲಕ ಮಹ್ಮದ ಹಾಜಿ ದಸ್ತಗೀರ ಶೇಖ (27), ಹನಿಸಾ ಮಹಿಬೂಬ ಪಟೇಲ್ (45), ಸಾಹಿರಾಬಾನು ಶೌಕತ್ ಅಲಿ ಚೌಸ್ (30) ಮತ್ತು ರಹಿಸಾಬಾನು ಶೌಕತ್ ಅಲಿ (10) ಹಾಗೂ ಇನ್ನಿಬ್ಬರು (ಗುರುತು ಪತ್ತೆಯಾಗಿಲ್ಲ) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. <br /> <br /> 9 ಜನರಿಗೆ ಗಂಭೀರ ಗಾಯಗಳಾಗಿದ್ದು, ಉಮರ್ಗಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಮರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. ನೊಖಡ ಗಲ್ಲಿಯಲ್ಲಿ ಸೂತಕದ ವಾತಾವರಣ ಮನೆ ಮಾಡಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಳಂದ (ಗುಲ್ಬರ್ಗ ಜಿ.): </strong>ಜೀಪು ಮತ್ತು ಕಂಟೇನರ್ ಲಾರಿ ಮುಖಾಮುಖಿಯಾಗಿ ಆರು ಜನ ಮೃತಪಟ್ಟ ಘಟನೆ ಉಮರ್ಗಾ- ಬಸವಕಲ್ಯಾಣ ರಸ್ತೆಯ ಕರಳಿ ಕ್ರಾಸ್ ಬಳಿ ಗುರುವಾರ ರಾತ್ರಿ ನಡೆದಿದೆ. <br /> <br /> ಆಳಂದ ಪಟ್ಟಣದ ನೊಖಡ ಗಲ್ಲಿಯ ಕೆಲವು ಮುಸ್ಲಿಂ ಕುಟುಂಬದವರು ಜೀಪಿನಲ್ಲಿ ಬೀದರ್ ಜಿಲ್ಲೆಯ ಭಾಲ್ಕಿಯ ಸೈಲಾನಿ ಬಾಬಾ ದರ್ಶನಕ್ಕಾಗಿ ಹೋಗುತ್ತಿದ್ದರು. ಎದುರಿನಿಂದ ಬಂದ ಕಂಟೇನರ್ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.<br /> <br /> ಜೀಪಿನಲ್ಲಿ ಸುಮಾರು 15ಜನ ಪ್ರಯಾಣಿಸುತ್ತಿದ್ದು, ಚಾಲಕ ಮಹ್ಮದ ಹಾಜಿ ದಸ್ತಗೀರ ಶೇಖ (27), ಹನಿಸಾ ಮಹಿಬೂಬ ಪಟೇಲ್ (45), ಸಾಹಿರಾಬಾನು ಶೌಕತ್ ಅಲಿ ಚೌಸ್ (30) ಮತ್ತು ರಹಿಸಾಬಾನು ಶೌಕತ್ ಅಲಿ (10) ಹಾಗೂ ಇನ್ನಿಬ್ಬರು (ಗುರುತು ಪತ್ತೆಯಾಗಿಲ್ಲ) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. <br /> <br /> 9 ಜನರಿಗೆ ಗಂಭೀರ ಗಾಯಗಳಾಗಿದ್ದು, ಉಮರ್ಗಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಮರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. ನೊಖಡ ಗಲ್ಲಿಯಲ್ಲಿ ಸೂತಕದ ವಾತಾವರಣ ಮನೆ ಮಾಡಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>