<p>ಕೇವಲ ರಾಜಕೀಯ ಅಧಿಕಾರದಿಂದ ಗಣ್ಯರೆನಿಸಿಕೊಂಡವರು ಜೈಲು ಸೇರಿದ ತಕ್ಷಣ ಕಾಯಿಲೆ ಪೀಡಿತರಾಗಿ ಆಸ್ಪತ್ರೆ ಸೇರುವುದು ಕರ್ನಾಟಕದಲ್ಲಂತು ಸಾಮಾನ್ಯ ವಿದ್ಯಮಾನವಾಗಿರುವುದು ಹಾಸ್ಯಾಸ್ಪದ. <br /> <br /> ಕರ್ನಾಟಕ ಬಿಟ್ಟರೆ ಬೇರೆಲ್ಲೂ ಇಂತಹ ನಾಟಕ ಕಾಣಸಿಗದು. ಗಣ್ಯಾತಿಗಣ್ಯರು ಪಾಪ ಮಾಡಿ ಸೇರಿಕೊಂಡಿರುವ ನವದೆಹಲಿಯ ತಿಹಾರ್ ಜೈಲಿನಲ್ಲೂ ಇಂತಹ ಕಾಯಿಲೆ ಪ್ರಹಸನ ಕಂಡುಬರುತ್ತಿಲ್ಲ. <br /> <br /> ಅಂದರೆ ಕರ್ನಾಟಕದ ಈ ನಾಯಕರು ಆಂತರಿಕವಾಗಿ ಹಲವು ರೋಗಗಳಿಂದ ನರಳುತ್ತಿರುವವರು ಇಲ್ಲವೇ ಕಾನೂನಿನ ಕಣ್ಣಿಗೆ ಮಣ್ಣೆರಚುವ ಕಪಟ ನಾಯಕರು ಆಗಿರಲಿಕ್ಕೆ ಸಾಕು.<br /> <br /> ಕರ್ನಾಟಕದಲ್ಲೇ ಅದರಲ್ಲೂ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇಂತಹ ಕಾಯಿಲೆಯ ವೈರಸ್ ಕಂಡುಬರುತ್ತಿರುವುದಕ್ಕೆ ಉನ್ನತ ವೈದ್ಯಕೀಯ, ನ್ಯಾಯಾಂಗ ಸದಸ್ಯರನ್ನೊಳಗೊಂಡ ತನಿಖೆ ನಡೆಸಲು ಇದು ಸಕಾಲವಾಗಿದೆ.<br /> <br /> ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಸಾಮಾನ್ಯ ಸೌಕರ್ಯಗಳಿರುವ ಆಸ್ಪತ್ರೆ (ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವಂತೆ) ಇದೆ.<br /> <br /> ವಿಪರ್ಯಾಸವೆಂದರೆ ಸಾಮಾನ್ಯ ಮಧುಮೇಹ, ಬಿಪಿ, ಸೊಂಟನೋವು, ವಾಂತಿ ಭೇದಿಯಂತಹ ಸಾಮಾನ್ಯ ಕಾಯಿಲೆಗಳಿಗೂ ಇಲ್ಲಿ ಚಿಕಿತ್ಸೆ ದೊರಕುವುದಿಲ್ಲವೇ? ಕುಗ್ರಾಮದ ನಾಟಿ ವೈದ್ಯರಲ್ಲೂ ಚಿಕಿತ್ಸೆ ಸಿಗುವ ಇಂತಹ ರೋಗಗಳಿಗೆ ಜೈಲಾಸ್ಪತ್ರೆಯಲ್ಲಿ ದೊರಕದಿರುವ ರಹಸ್ಯವನ್ನು ತಿಳಿಯಲಾರದಷ್ಟು ಮುಗ್ಧರಲ್ಲ ಕನ್ನಡಿಗರು.<br /> <br /> ಇದಕ್ಕೆ ಪರಿಹಾರವೆಂದರೆ, ಉಪಗ್ರಹ ಆಧಾರಿತ ಚಿಕಿತ್ಸಾ ವ್ಯವಸ್ಥೆ ವಿಶ್ವದ ಅನೇಕ ಕಡೆ ಈಗ ಜಾರಿಯಲ್ಲಿದೆ. ಅನೇಕ ಕ್ಲಿಷ್ಟ ಶಸ್ತ್ರಕ್ರಿಯೆಗಳನ್ನು ಉಪಗ್ರಹ ಮೂಲಕ ದೂರದ ಪ್ರದೇಶದಲ್ಲಿರುವ ರೋಗಿಗಳಿಗೆ ವೈದ್ಯರು ಮಾಡುತ್ತಿದ್ದಾರೆ. <br /> <br /> ಬೆಂಗಳೂರಿನ ನಾರಾಯಣ ಹೃದಯಾಲಯದಿಂದ ಈ ತಂತ್ರಜ್ಞಾನ ಮೂಲಕ ಬಿಳಿಗಿರಿರಂಗಬೆಟ್ಟ ಸೇರಿದಂತೆ ಆನೇಕ ಕುಗ್ರಾಮಗಳ ರೋಗಿಗಳಿಗೆ ಖ್ಯಾತ ವೈದ್ಯಕೀಯ ತಜ್ಞರ ಸಲಹೆಯೊಂದಿಗೆ ಚಿಕಿತ್ಸೆ ನೀಡಿದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು.<br /> <br /> ಬೆಂಗಳೂರಿನ ಹಲವಾರು ಸುಸಜ್ಜಿತ ಹೈ-ಟೆಕ್ ಆಸ್ಪತ್ರೆಗಳು ಈ ತಂತ್ರಜ್ಙಾನವನ್ನು ಅಳವಡಿಸಿವೆ. ರೋಗಿ ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ, ಚಿಕಿತ್ಸೆಯ ವ್ಯವಸ್ಥೆ ಮಾಡಲು ಉಪಗ್ರಹ ಆಧರಿತ ಚಿಕಿತ್ಸಾ ವ್ಯವಸ್ಥೆಯಿಂದ ಸಾಧ್ಯವಿದೆ.<br /> <br /> ಇದೇ ತಂತ್ರಜ್ಙಾನವನ್ನು ಪರಪ್ಪನ ಅಗ್ರಹಾರ ಜೈಲಿನ ಆಸ್ಪತ್ರೆಯಲ್ಲಿ ತುರ್ತಾಗಿ ಆರಂಭಿಸಬೇಕಿದೆ. <br /> <br /> ಇದರಿಂದ ಜೈಲಿನಲ್ಲಿರುವ ಕೈದಿಗಳು (ಮುಖ್ಯವಾಗಿ ಪಾಪ ಮಾಡಿಕೊಂಡು ಜೈಲು ಸೇರಿದ ಗಣ್ಯರಿಗೆ) ಯಾವುದೇ ಕಾಯಿಲೆ ಪೀಡಿತರಾದರೂ ಜೈಲಿನ ಆಸ್ಪತ್ರೆಯಲ್ಲೇ, ಉಪಗ್ರಹದ ಮೂಲಕ ಪ್ರತಿಷ್ಠಿತ ಆಸ್ಪತ್ರೆಗಳ ವೈದ್ಯರ ಸಲಹೆ, ನೆರವಿನೊಂದಿಗೆ ಚಿಕಿತ್ಸೆ ಕೊಡಿಸಬಹುದು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೇವಲ ರಾಜಕೀಯ ಅಧಿಕಾರದಿಂದ ಗಣ್ಯರೆನಿಸಿಕೊಂಡವರು ಜೈಲು ಸೇರಿದ ತಕ್ಷಣ ಕಾಯಿಲೆ ಪೀಡಿತರಾಗಿ ಆಸ್ಪತ್ರೆ ಸೇರುವುದು ಕರ್ನಾಟಕದಲ್ಲಂತು ಸಾಮಾನ್ಯ ವಿದ್ಯಮಾನವಾಗಿರುವುದು ಹಾಸ್ಯಾಸ್ಪದ. <br /> <br /> ಕರ್ನಾಟಕ ಬಿಟ್ಟರೆ ಬೇರೆಲ್ಲೂ ಇಂತಹ ನಾಟಕ ಕಾಣಸಿಗದು. ಗಣ್ಯಾತಿಗಣ್ಯರು ಪಾಪ ಮಾಡಿ ಸೇರಿಕೊಂಡಿರುವ ನವದೆಹಲಿಯ ತಿಹಾರ್ ಜೈಲಿನಲ್ಲೂ ಇಂತಹ ಕಾಯಿಲೆ ಪ್ರಹಸನ ಕಂಡುಬರುತ್ತಿಲ್ಲ. <br /> <br /> ಅಂದರೆ ಕರ್ನಾಟಕದ ಈ ನಾಯಕರು ಆಂತರಿಕವಾಗಿ ಹಲವು ರೋಗಗಳಿಂದ ನರಳುತ್ತಿರುವವರು ಇಲ್ಲವೇ ಕಾನೂನಿನ ಕಣ್ಣಿಗೆ ಮಣ್ಣೆರಚುವ ಕಪಟ ನಾಯಕರು ಆಗಿರಲಿಕ್ಕೆ ಸಾಕು.<br /> <br /> ಕರ್ನಾಟಕದಲ್ಲೇ ಅದರಲ್ಲೂ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇಂತಹ ಕಾಯಿಲೆಯ ವೈರಸ್ ಕಂಡುಬರುತ್ತಿರುವುದಕ್ಕೆ ಉನ್ನತ ವೈದ್ಯಕೀಯ, ನ್ಯಾಯಾಂಗ ಸದಸ್ಯರನ್ನೊಳಗೊಂಡ ತನಿಖೆ ನಡೆಸಲು ಇದು ಸಕಾಲವಾಗಿದೆ.<br /> <br /> ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಸಾಮಾನ್ಯ ಸೌಕರ್ಯಗಳಿರುವ ಆಸ್ಪತ್ರೆ (ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವಂತೆ) ಇದೆ.<br /> <br /> ವಿಪರ್ಯಾಸವೆಂದರೆ ಸಾಮಾನ್ಯ ಮಧುಮೇಹ, ಬಿಪಿ, ಸೊಂಟನೋವು, ವಾಂತಿ ಭೇದಿಯಂತಹ ಸಾಮಾನ್ಯ ಕಾಯಿಲೆಗಳಿಗೂ ಇಲ್ಲಿ ಚಿಕಿತ್ಸೆ ದೊರಕುವುದಿಲ್ಲವೇ? ಕುಗ್ರಾಮದ ನಾಟಿ ವೈದ್ಯರಲ್ಲೂ ಚಿಕಿತ್ಸೆ ಸಿಗುವ ಇಂತಹ ರೋಗಗಳಿಗೆ ಜೈಲಾಸ್ಪತ್ರೆಯಲ್ಲಿ ದೊರಕದಿರುವ ರಹಸ್ಯವನ್ನು ತಿಳಿಯಲಾರದಷ್ಟು ಮುಗ್ಧರಲ್ಲ ಕನ್ನಡಿಗರು.<br /> <br /> ಇದಕ್ಕೆ ಪರಿಹಾರವೆಂದರೆ, ಉಪಗ್ರಹ ಆಧಾರಿತ ಚಿಕಿತ್ಸಾ ವ್ಯವಸ್ಥೆ ವಿಶ್ವದ ಅನೇಕ ಕಡೆ ಈಗ ಜಾರಿಯಲ್ಲಿದೆ. ಅನೇಕ ಕ್ಲಿಷ್ಟ ಶಸ್ತ್ರಕ್ರಿಯೆಗಳನ್ನು ಉಪಗ್ರಹ ಮೂಲಕ ದೂರದ ಪ್ರದೇಶದಲ್ಲಿರುವ ರೋಗಿಗಳಿಗೆ ವೈದ್ಯರು ಮಾಡುತ್ತಿದ್ದಾರೆ. <br /> <br /> ಬೆಂಗಳೂರಿನ ನಾರಾಯಣ ಹೃದಯಾಲಯದಿಂದ ಈ ತಂತ್ರಜ್ಞಾನ ಮೂಲಕ ಬಿಳಿಗಿರಿರಂಗಬೆಟ್ಟ ಸೇರಿದಂತೆ ಆನೇಕ ಕುಗ್ರಾಮಗಳ ರೋಗಿಗಳಿಗೆ ಖ್ಯಾತ ವೈದ್ಯಕೀಯ ತಜ್ಞರ ಸಲಹೆಯೊಂದಿಗೆ ಚಿಕಿತ್ಸೆ ನೀಡಿದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು.<br /> <br /> ಬೆಂಗಳೂರಿನ ಹಲವಾರು ಸುಸಜ್ಜಿತ ಹೈ-ಟೆಕ್ ಆಸ್ಪತ್ರೆಗಳು ಈ ತಂತ್ರಜ್ಙಾನವನ್ನು ಅಳವಡಿಸಿವೆ. ರೋಗಿ ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ, ಚಿಕಿತ್ಸೆಯ ವ್ಯವಸ್ಥೆ ಮಾಡಲು ಉಪಗ್ರಹ ಆಧರಿತ ಚಿಕಿತ್ಸಾ ವ್ಯವಸ್ಥೆಯಿಂದ ಸಾಧ್ಯವಿದೆ.<br /> <br /> ಇದೇ ತಂತ್ರಜ್ಙಾನವನ್ನು ಪರಪ್ಪನ ಅಗ್ರಹಾರ ಜೈಲಿನ ಆಸ್ಪತ್ರೆಯಲ್ಲಿ ತುರ್ತಾಗಿ ಆರಂಭಿಸಬೇಕಿದೆ. <br /> <br /> ಇದರಿಂದ ಜೈಲಿನಲ್ಲಿರುವ ಕೈದಿಗಳು (ಮುಖ್ಯವಾಗಿ ಪಾಪ ಮಾಡಿಕೊಂಡು ಜೈಲು ಸೇರಿದ ಗಣ್ಯರಿಗೆ) ಯಾವುದೇ ಕಾಯಿಲೆ ಪೀಡಿತರಾದರೂ ಜೈಲಿನ ಆಸ್ಪತ್ರೆಯಲ್ಲೇ, ಉಪಗ್ರಹದ ಮೂಲಕ ಪ್ರತಿಷ್ಠಿತ ಆಸ್ಪತ್ರೆಗಳ ವೈದ್ಯರ ಸಲಹೆ, ನೆರವಿನೊಂದಿಗೆ ಚಿಕಿತ್ಸೆ ಕೊಡಿಸಬಹುದು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>