<p><strong>ಬೀದರ್:</strong> ಗುರುನಾನಕರು ಬೀದರ್ಗೆ ಭೇಟಿ ನೀಡಿದ 500ನೇ ವರ್ಷಾಚರಣೆ ಅಂಗವಾಗಿ ನಗರದ ಗುರುದ್ವಾರದಲ್ಲಿ ನಡೆಯುತ್ತಿರುವ ಝೀರಾ ಪ್ರಕಟ ಸಮಾಗಮದ ಮೂರನೇ ದಿನದ ಪಂಜಾಬ್ ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಗುರುನಾನಕರ ಭಕ್ತರ ಸಮೂಹ ಹರಿದು ಬಂದಿತ್ತು.<br /> <br /> ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಿಂದಲೂ ಭಕ್ತಾದಿಗಳು ಆಗಮಿಸಿದ್ದು, ಭಕ್ತಿ ಶ್ರದ್ಧೆಯಿಂದ ಪಾಲ್ಗೊಂಡಿದ್ದರು. ಗುರುದ್ವಾರದಲ್ಲಿ ನಡೆಯುತ್ತಿರುವ ಸಮಾರಂಭವೂ ಜಾತ್ರೆಯಾಗಿ ಪರಿವರ್ತನೆ ಹೊಂದಿತ್ತು.<br /> <br /> ಭಕ್ತಾದಿಗಳಿಗಾಗಿ ಗುರುದ್ವಾರದ ವಿವಿಧಡೆ ಉಚಿತ ಆರೋಗ್ಯ ತಪಾಸಣೆಗೂ ವ್ಯವಸ್ಥೆ ಮಾಡಲಾಗಿದೆ. ಬೇಸಿಗೆಯ ಹಿನ್ನೆಲೆಯಲ್ಲಿ ಅಲ್ಲಲ್ಲಿ ತಂಪು ಪಾನೀಯಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿತ್ತು. ಗುರುದ್ವಾರದ ಮುಖ್ಯ ರಸ್ತೆಯಲ್ಲಿ ಅಳ್ಳು, ಬೆಂಡುಬತಾಸಿ ಮತ್ತಿತರ ಸಾಮಗ್ರಿಗಳ ಅಂಗಡಿಗಳನ್ನು ತೆರೆಯಲಾಗಿತ್ತು.<br /> <br /> ಶನಿವಾರ ಮಹಾರಾಷ್ಟ್ರದ ಔರಂಗಾಬಾದ್ನಿಂದ ದಿಂದ ಬಂದ ಪಂಚ ಪ್ಯಾರೆಗಳ ನೇತೃತ್ವದಲ್ಲಿ ಬಂದ ಅಲಂಕೃತ ವಾಹದಲ್ಲಿ ಪಲ್ಲಕಿ ಆಗಮಿಸಿತ್ತು. ಗುರುದ್ವಾರ ಗೇಟ್ನಿಂದ ಗುರುದ್ವಾರದವರೆಗೆ ಮೆರವಣಿಗೆ ನಡೆದಿದ್ದು, ಭಕ್ತರು ಪಂಚ ಪ್ಯಾರೆಗಳಿಗೆ ನಮಸ್ಕರಿಸಿ, ಹೂಮಾಲೆ ಹಾಕುವ ಮೂಲಕ ಬರ ಸ್ವಾಗತಿಸಿಕೊಂಡರು. ಜೊತೆಗೆ `ಸತ್ ನಾಮ್ ವೈ ಗುರು~ ಎಂಬ ಧಾರ್ಮಿಕ ಪಠಣದೊಂದಿಗೆ ಪಲ್ಲಕಿಗೆ ಸ್ವಾಗತಿಸಿದರು.<br /> <br /> ಪಂಜಾಬನ ಅಮೃತ್ಸರ್ನಿಂದ ಬಂದ ಗುರುನಾನಕ ಬಾಬ್ ಅವರ ಸೈನಿಕರು ನಡೆಸಿದ ಆನೆ ಹಾಗೂ ಕುದರೆಗಳ ಮೆರವಣಿಗೆ ಆಕರ್ಷಣೆಯಾಗಿತ್ತು. ಅಮೃತ್ಸರ್ದಿಂದ ಎರಡು ಆನೆಗಳು ಹಾಗೂ ಅನೇಕ ಕುದುರೆಗಳನ್ನು ಕರೆತರಲಾಗಿತ್ತು.<br /> <br /> ಏಪ್ರಿಲ್ 29 ರಂದು (ಭಾನುವಾರ) ನಗರದ ಮುಖ್ಯ ರಸ್ತೆಯಲ್ಲಿ ಗುರುನಾನಕರ ಭವ್ಯ ಮೆರವಣಿಗೆ ನಡೆಯಲಿದ್ದು, ಉತ್ಸವ ಸಮಾರೋಪಗೊಳ್ಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ಗುರುನಾನಕರು ಬೀದರ್ಗೆ ಭೇಟಿ ನೀಡಿದ 500ನೇ ವರ್ಷಾಚರಣೆ ಅಂಗವಾಗಿ ನಗರದ ಗುರುದ್ವಾರದಲ್ಲಿ ನಡೆಯುತ್ತಿರುವ ಝೀರಾ ಪ್ರಕಟ ಸಮಾಗಮದ ಮೂರನೇ ದಿನದ ಪಂಜಾಬ್ ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಗುರುನಾನಕರ ಭಕ್ತರ ಸಮೂಹ ಹರಿದು ಬಂದಿತ್ತು.<br /> <br /> ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಿಂದಲೂ ಭಕ್ತಾದಿಗಳು ಆಗಮಿಸಿದ್ದು, ಭಕ್ತಿ ಶ್ರದ್ಧೆಯಿಂದ ಪಾಲ್ಗೊಂಡಿದ್ದರು. ಗುರುದ್ವಾರದಲ್ಲಿ ನಡೆಯುತ್ತಿರುವ ಸಮಾರಂಭವೂ ಜಾತ್ರೆಯಾಗಿ ಪರಿವರ್ತನೆ ಹೊಂದಿತ್ತು.<br /> <br /> ಭಕ್ತಾದಿಗಳಿಗಾಗಿ ಗುರುದ್ವಾರದ ವಿವಿಧಡೆ ಉಚಿತ ಆರೋಗ್ಯ ತಪಾಸಣೆಗೂ ವ್ಯವಸ್ಥೆ ಮಾಡಲಾಗಿದೆ. ಬೇಸಿಗೆಯ ಹಿನ್ನೆಲೆಯಲ್ಲಿ ಅಲ್ಲಲ್ಲಿ ತಂಪು ಪಾನೀಯಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿತ್ತು. ಗುರುದ್ವಾರದ ಮುಖ್ಯ ರಸ್ತೆಯಲ್ಲಿ ಅಳ್ಳು, ಬೆಂಡುಬತಾಸಿ ಮತ್ತಿತರ ಸಾಮಗ್ರಿಗಳ ಅಂಗಡಿಗಳನ್ನು ತೆರೆಯಲಾಗಿತ್ತು.<br /> <br /> ಶನಿವಾರ ಮಹಾರಾಷ್ಟ್ರದ ಔರಂಗಾಬಾದ್ನಿಂದ ದಿಂದ ಬಂದ ಪಂಚ ಪ್ಯಾರೆಗಳ ನೇತೃತ್ವದಲ್ಲಿ ಬಂದ ಅಲಂಕೃತ ವಾಹದಲ್ಲಿ ಪಲ್ಲಕಿ ಆಗಮಿಸಿತ್ತು. ಗುರುದ್ವಾರ ಗೇಟ್ನಿಂದ ಗುರುದ್ವಾರದವರೆಗೆ ಮೆರವಣಿಗೆ ನಡೆದಿದ್ದು, ಭಕ್ತರು ಪಂಚ ಪ್ಯಾರೆಗಳಿಗೆ ನಮಸ್ಕರಿಸಿ, ಹೂಮಾಲೆ ಹಾಕುವ ಮೂಲಕ ಬರ ಸ್ವಾಗತಿಸಿಕೊಂಡರು. ಜೊತೆಗೆ `ಸತ್ ನಾಮ್ ವೈ ಗುರು~ ಎಂಬ ಧಾರ್ಮಿಕ ಪಠಣದೊಂದಿಗೆ ಪಲ್ಲಕಿಗೆ ಸ್ವಾಗತಿಸಿದರು.<br /> <br /> ಪಂಜಾಬನ ಅಮೃತ್ಸರ್ನಿಂದ ಬಂದ ಗುರುನಾನಕ ಬಾಬ್ ಅವರ ಸೈನಿಕರು ನಡೆಸಿದ ಆನೆ ಹಾಗೂ ಕುದರೆಗಳ ಮೆರವಣಿಗೆ ಆಕರ್ಷಣೆಯಾಗಿತ್ತು. ಅಮೃತ್ಸರ್ದಿಂದ ಎರಡು ಆನೆಗಳು ಹಾಗೂ ಅನೇಕ ಕುದುರೆಗಳನ್ನು ಕರೆತರಲಾಗಿತ್ತು.<br /> <br /> ಏಪ್ರಿಲ್ 29 ರಂದು (ಭಾನುವಾರ) ನಗರದ ಮುಖ್ಯ ರಸ್ತೆಯಲ್ಲಿ ಗುರುನಾನಕರ ಭವ್ಯ ಮೆರವಣಿಗೆ ನಡೆಯಲಿದ್ದು, ಉತ್ಸವ ಸಮಾರೋಪಗೊಳ್ಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>