<p><strong>ನವದೆಹಲಿ (ಪಿಟಿಐ):</strong> ದೂರಸಂಪರ್ಕ ಖಾತೆ ಮಾಜಿ ಸಚಿವ ಎ.ರಾಜಾ ಅವಧಿಯಲ್ಲಿ 2ಜಿ ತರಂಗಾಂತರ ಹಂಚಿಕೆಯಲ್ಲಿ ಬೊಕ್ಕಸಕ್ಕೆ ನಷ್ಟವಾಗಿಲ್ಲ ಎಂದಿರುವ ಟ್ರಾಯ್ (ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ) ವರದಿಯನ್ನು ಪರಿಶೀಲಿಸಲು ತಾನು ಇಚ್ಛಿಸಿರುವುದಾಗಿ ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ.<br /> <br /> ನ್ಯಾಯಮೂರ್ತಿಗಳಾದ ಜಿ.ಎಸ್. ಸಿಂಘ್ವಿಮತ್ತು ಎಚ್.ಎಲ್. ದತ್ತು ಅವರನ್ನೊಳಗೊಂಡ ಪೀಠವು ಸಿಬಿಐಗೆ ಈ ಬಗ್ಗೆ ಪ್ರಶ್ನಿಸಿದಾಗ, ಇದು ಎರಡು ಇಲಾಖೆಗಳ ನಡುವಣ ವ್ಯವಹಾರವಾಗಿದ್ದು ಈ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವುದಾಗಿ ಸಿಬಿಐ ತಿಳಿಸಿದೆ. <br /> <br /> ಚಂದ್ರ ಮತ್ತು ಸ್ವಾನ್ ಟೆಲಿಕಾಂನ ನಿರ್ದೇಶಕ ವಿನೋದ್ ಗೋಯೆಂಕಾ ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ ಪೀಠ ಈ ಮಾಹಿತಿ ಬಯಸಿದೆ. ಸಿಬಿಐ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಹರೀನ್ ರಾವಲ್, `ಇದು ಸಾರ್ವಜನಿಕ ದಾಖಲೆಯಲ್ಲ ಮತ್ತು ಇದು ರಹಸ್ಯ ವಿಚಾರ~ ಎಂದು ಹೇಳಿದರು.<br /> <br /> ಸಾರ್ವಜನಿಕ ಬೊಕ್ಕಸಕ್ಕೆ ಯಾವುದೇ ನಷ್ಟ ಆಗಿಲ್ಲವೆಂದು ಟ್ರಾಯ್ ನಿರ್ಣಯಿಸಿದೆ ಎಂದು ಪತ್ರಿಕೆಗಳಲ್ಲಿ ವರದಿಯಾದ ಬಗ್ಗೆ ಹಿರಿಯ ವಕೀಲ ರಾಂಜೇಠ್ಮಲಾನಿ ಹೇಳಿದ್ದನ್ನು ಪೀಠವು ಸಿಬಿಐಗೆ ತಿಳಿಸಿ ಈ ಬಗ್ಗೆ ವಿಚಾರಿಸಿತು. `ಪತ್ರಿಕೆಗಳೇ ವರದಿಯನ್ನು ಪಡೆಯುವಾಗ ಅದನ್ನು ನಮ್ಮ ಮುಂದಿಡಲು ನಿಮ್ಮ ಆಕ್ಷೇಪವೇನು~ ಎಂದು ಪೀಠ ಕೇಳಿತು. <br /> <br /> `ಟ್ರಾಯ್ ಹೇಳಿರುವುದು ಸರಿಯೇ ತಪ್ಪೇ ಎಂಬುದನ್ನು ಅರಿಯಬೇಕಿದೆ. ಅದು ಸಾರ್ವಜನಿಕ ದಾಖಲೆಯಲ್ಲವೇ? ಎಂದು ಪೀಠ ಪ್ರಶ್ನಿಸಿದಾಗ ಹೆಚ್ಚುವರಿ ಸಾಲಿಸಿಟರ್ ಜನರಲ್, `ಅದು ಸಾರ್ವಜನಿಕ ದಾಖಲೆ ಅಲ್ಲ~ ಎಂದು ಉತ್ತರಿಸಿದರು. `ಹಾಗಾದರೆ ಪತ್ರಿಕೆಗಳು ಹೇಗೆ ಟ್ರಾಯ್ ವರದಿ ಪಡೆದವು. ವರದಿ ಬಹಿರಂಗವಾಗಿದ್ದಾಗ ನಮಗೆ ತಿಳಿಸುವುದನ್ನು ತಡೆಯಲು ಸಾಧ್ಯವಿಲ್ಲ~ ಎಂದು ಪೀಠ ಹೇಳಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ದೂರಸಂಪರ್ಕ ಖಾತೆ ಮಾಜಿ ಸಚಿವ ಎ.ರಾಜಾ ಅವಧಿಯಲ್ಲಿ 2ಜಿ ತರಂಗಾಂತರ ಹಂಚಿಕೆಯಲ್ಲಿ ಬೊಕ್ಕಸಕ್ಕೆ ನಷ್ಟವಾಗಿಲ್ಲ ಎಂದಿರುವ ಟ್ರಾಯ್ (ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ) ವರದಿಯನ್ನು ಪರಿಶೀಲಿಸಲು ತಾನು ಇಚ್ಛಿಸಿರುವುದಾಗಿ ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ.<br /> <br /> ನ್ಯಾಯಮೂರ್ತಿಗಳಾದ ಜಿ.ಎಸ್. ಸಿಂಘ್ವಿಮತ್ತು ಎಚ್.ಎಲ್. ದತ್ತು ಅವರನ್ನೊಳಗೊಂಡ ಪೀಠವು ಸಿಬಿಐಗೆ ಈ ಬಗ್ಗೆ ಪ್ರಶ್ನಿಸಿದಾಗ, ಇದು ಎರಡು ಇಲಾಖೆಗಳ ನಡುವಣ ವ್ಯವಹಾರವಾಗಿದ್ದು ಈ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವುದಾಗಿ ಸಿಬಿಐ ತಿಳಿಸಿದೆ. <br /> <br /> ಚಂದ್ರ ಮತ್ತು ಸ್ವಾನ್ ಟೆಲಿಕಾಂನ ನಿರ್ದೇಶಕ ವಿನೋದ್ ಗೋಯೆಂಕಾ ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ ಪೀಠ ಈ ಮಾಹಿತಿ ಬಯಸಿದೆ. ಸಿಬಿಐ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಹರೀನ್ ರಾವಲ್, `ಇದು ಸಾರ್ವಜನಿಕ ದಾಖಲೆಯಲ್ಲ ಮತ್ತು ಇದು ರಹಸ್ಯ ವಿಚಾರ~ ಎಂದು ಹೇಳಿದರು.<br /> <br /> ಸಾರ್ವಜನಿಕ ಬೊಕ್ಕಸಕ್ಕೆ ಯಾವುದೇ ನಷ್ಟ ಆಗಿಲ್ಲವೆಂದು ಟ್ರಾಯ್ ನಿರ್ಣಯಿಸಿದೆ ಎಂದು ಪತ್ರಿಕೆಗಳಲ್ಲಿ ವರದಿಯಾದ ಬಗ್ಗೆ ಹಿರಿಯ ವಕೀಲ ರಾಂಜೇಠ್ಮಲಾನಿ ಹೇಳಿದ್ದನ್ನು ಪೀಠವು ಸಿಬಿಐಗೆ ತಿಳಿಸಿ ಈ ಬಗ್ಗೆ ವಿಚಾರಿಸಿತು. `ಪತ್ರಿಕೆಗಳೇ ವರದಿಯನ್ನು ಪಡೆಯುವಾಗ ಅದನ್ನು ನಮ್ಮ ಮುಂದಿಡಲು ನಿಮ್ಮ ಆಕ್ಷೇಪವೇನು~ ಎಂದು ಪೀಠ ಕೇಳಿತು. <br /> <br /> `ಟ್ರಾಯ್ ಹೇಳಿರುವುದು ಸರಿಯೇ ತಪ್ಪೇ ಎಂಬುದನ್ನು ಅರಿಯಬೇಕಿದೆ. ಅದು ಸಾರ್ವಜನಿಕ ದಾಖಲೆಯಲ್ಲವೇ? ಎಂದು ಪೀಠ ಪ್ರಶ್ನಿಸಿದಾಗ ಹೆಚ್ಚುವರಿ ಸಾಲಿಸಿಟರ್ ಜನರಲ್, `ಅದು ಸಾರ್ವಜನಿಕ ದಾಖಲೆ ಅಲ್ಲ~ ಎಂದು ಉತ್ತರಿಸಿದರು. `ಹಾಗಾದರೆ ಪತ್ರಿಕೆಗಳು ಹೇಗೆ ಟ್ರಾಯ್ ವರದಿ ಪಡೆದವು. ವರದಿ ಬಹಿರಂಗವಾಗಿದ್ದಾಗ ನಮಗೆ ತಿಳಿಸುವುದನ್ನು ತಡೆಯಲು ಸಾಧ್ಯವಿಲ್ಲ~ ಎಂದು ಪೀಠ ಹೇಳಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>