<p><strong>ಹುಬ್ಬಳ್ಳಿ: </strong>`ಸಿಎಂ ಸರ್, ಶಿಕ್ಷಣ ಹಕ್ಕು ಕಾಯ್ದೆ ಜಾರಿಯಾದ ನಂತರವೂ ಖಾಸಗಿ ಶಾಲೆಗಳಲ್ಲಿ ಡೊನೇಶನ್ ಕೇಳಿದರೆ ಏನು ಮಾಡಬೇಕು~...<br /> <br /> ಹೀಗೊಂದು ಅನಿರೀಕ್ಷಿತ ಪ್ರಶ್ನೆ ನಗರದಲ್ಲಿ ಬುಧವಾರ ಬಾಲವಿಕಾಸ ಅಕಾಡೆಮಿ ಆಯೋಜಿಸಿದ್ದ `ಮಕ್ಕಳೊಂದಿಗೆ ಮುಖ್ಯಮಂತ್ರಿ~ ಕಾರ್ಯಕ್ರಮದಲ್ಲಿ ತೂರಿ ಬಂದಿತು.<br /> <br /> ಸಮಾರಂಭದ ಅಂಗವಾಗಿ ನಡೆದ ಸಂವಾದದಲ್ಲಿ ಧಾರವಾಡದ ಕೆಎನ್ಕೆ ಪ್ರೌಢಶಾಲೆಯ ವಿದ್ಯಾರ್ಥಿನಿ ಭಾಗ್ಯಶ್ರೀ ದೇಸಾಯಿ ಮೇಲಿನಂತೆ ಕೇಳಿದಾಗ ಸಿಎಂ ಜಗದೀಶ ಶೆಟ್ಟರ್ ಕ್ಷಣಕಾಲ ತಬ್ಬಿಬ್ಬಾದರೂ ನಗುತ್ತಲೇ ಉತ್ತರಿಸಿದರು.<br /> <br /> ಡೊನೇಶನ್ ನಿಯಂತ್ರಣಕ್ಕಾಗಿಯೇ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದಿದೆ. ಸರ್ಕಾರದ ನಿರ್ದೇಶನದನ್ವಯ ಕಾಯ್ದೆಯಡಿ ಶಾಲೆಗೆ ದಾಖಲಿಸಿಕೊಳ್ಳದಿದ್ದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಗೆ ದೂರು ನೀಡುವಂತೆ ಅಥವಾ ತಮಗೆ ನೇರವಾಗಿ ದೂರು ಕೊಡುವಂತೆ ಮಕ್ಕಳ ಪಾಲಕರಿಗೆ ಹೇಳಿದಾಗ ಸಮಾರಂಭದಲ್ಲಿ ನೆರೆದಿದ್ದ ಮಕ್ಕಳಿಂದ ಚಪ್ಪಾಳೆಯ ಪ್ರತಿಕ್ರಿಯೆ.<br /> <br /> `ನಿಮ್ಮ ವಯಸ್ಸಿನಲ್ಲಿ ಇದ್ದಾಗ ನಾನು ನಿಮ್ಮಷ್ಟು ಶ್ಯಾಣೇ ಇರಲಿಲ್ಲ. ನೀವು ಬಹಳ ಶ್ಯಾಣೇ ಇದ್ದೀರಿ~ ಎಂದು ಮಕ್ಕಳನ್ನು ಶೆಟ್ಟರ್ ಹುರಿದುಂಬಿಸಿದರು.<br /> <br /> `ನಾಗಶೆಟ್ಟಿಕೊಪ್ಪದ ಸರ್ಕಾರಿ ಶಾಲೆ ನಂ 9ರಲ್ಲಿ ಕೇವಲ 8ನೇ ತರಗತಿಯವರೆಗೆ ಮಾತ್ರ ಓದಲು ಅವಕಾಶವಿದೆ. 9 ಹಾಗೂ 10ನೇ ತರಗತಿ ಆರಂಭಿಸುವಂತೆ~ ಶಾಲೆಯ ವಿದ್ಯಾರ್ಥಿನಿ ರೆಹಾನಾ ಮಕಾನದಾರ ಮಾಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ ಕೂಡಲೇ ಹೊಸ ತರಗತಿಗಳ ಆರಂಭಿಸಲು ಪ್ರಸ್ತಾವ ಸಲ್ಲಿಸಲು ಸ್ಥಳದಲ್ಲಿದ ಡಿಡಿಪಿಐ ಡಾ.ಬಿ.ಕೆ.ಎಸ್.ವರ್ಧನ ಅವರಿಗೆ ಸೂಚನೆ ನೀಡಿದರು.<br /> <br /> `ಶಾಲಾ ಗ್ರಂಥಾಲಯಗಳಲ್ಲಿ ಪುಸ್ತಕಗಳೇ ಇಲ್ಲ. ನೀವು ಎಲ್ಲಾ ಶಾಲೆಗಳಿಗೆ ಹೊಸ ಪುಸ್ತಕ ಕೊಡಿಸಿ~ ಎಂದು ವಿದ್ಯಾರ್ಥಿನಿ ಶ್ವೇತಾ ಕೇಳಿದ ಪ್ರಶ್ನೆಗೆ `ನೀವು ಮಕ್ಕಳು ಮೊದಲು ಓದುವ ಹವ್ಯಾಸ ರೂಢಿಸಿಕೊಳ್ಳಿರಿ. ಖಂಡಿತವಾಗಿಯೂ ಪುಸ್ತಕ ಕೊಡಿಸುವೆ~ ಎಂದು ಶೆಟ್ಟರ್ ಮಕ್ಕಳಿಗೆ ಕಿವಿಮಾತು ಹೇಳಿದರು. <br /> <br /> `ನೀವು ಬಾಲ್ಯದಲ್ಲಿ ನಮ್ಮಂತೆಯೇ ತುಂಟತನ ಮಾಡುತ್ತಿದ್ದಿರಾ~? ಎಂದು ಪ್ರಾಚಿ ಸಂಶೀಕರ ಕೇಳಿದಾಗ `ಹೌದು ಸಿಕ್ಕಾಪಟ್ಟೆ ತುಂಟನಾಗಿದ್ದೆ~ ಎಂದು ಶೆಟ್ಟರ್ ಉತ್ತರಿಸಿದರು. `ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಜೀತಕ್ಕೆ ಇದ್ದಾರೆ. ಅವರನ್ನು ಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡಿ ಅಂಕಲ್~ ಎಂದು ಸಯ್ಯದ್ ಸೊರಟೂರ್ ಕೇಳಿದಾಗ ಸಿಎಂ ಒಪ್ಪಿಗೆ ಸೂಚಿಸಿದರು.<br /> <br /> ಸಂವಾದ ಆರಂಭಕ್ಕೆ ಮೊದಲು ಮಾತನಾಡಿದ ಜಗದೀಶ ಶೆಟ್ಟರ್ ಪತ್ನಿ ಶಿಲ್ಪಾ, ವಿದೇಶಗಳ ಶಾಲೆಗಳಲ್ಲಿ ಮಕ್ಕಳಿಗೆ ಅಲ್ಲಿಯೇ ಪುಸ್ತಕಗಳನ್ನು ಇಡುವ ವ್ಯವಸ್ಥೆಯನ್ನು ಕಲ್ಪಿಸಿರುತ್ತಾರೆ. ಅದೇ ರೀತಿ ಇಲ್ಲಿಯೂ ಆ ವ್ಯವಸ್ಥೆ ಜಾರಿಗೆ ತಂದು ಮಕ್ಕಳ ಬೆನ್ನಿನ ಮೇಲಿನ ಭಾರ ಇಳಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರು.<br /> <br /> ಸಂವಾದದ ನಂತರ ಮಕ್ಕಳಿಗೆ ಸಿಹಿ ತಿಂಡಿಯ ಪೊಟ್ಟಣ ವಿತರಿಸಲಾಯಿತು. ಸಮಾರಂಭದಲ್ಲಿ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ ಟಿಂಗಿನಕಾಯಿ, ಮಹೇಂದ್ರ ಕಂಠಿ ಮತ್ತಿತರರು ಪಾಲ್ಗೊಂಡಿದ್ದರು.<br /> <br /> <strong>ಸದನದಲ್ಲಿ `ನಿಲುವಳಿ ಸೂಚನೆ~ಗೆ ಅವಕಾಶ</strong><br /> `ಮಕ್ಕಳ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ವಿಧಾನಸಭೆ ಅಧಿವೇಶನದಲ್ಲಿ ಪ್ರಶ್ನೆಗಳನ್ನೇ ಕೇಳುವುದು ಬಿಟ್ಟಿದ್ದಾರೆ~ ಎಂದು ಸಂವಾದದ ವೇಳೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿಷಾದ ವ್ಯಕ್ತಪಡಿಸಿದರು.<br /> <br /> `ಸದನದಲ್ಲಿ ಚರ್ಚೆಯಾದಾಗ ಮಾತ್ರ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಗಂಭೀರತೆ ಇಡೀ ರಾಜ್ಯಕ್ಕೆ ಅರ್ಥವಾಗುತ್ತದೆ. ಅದಕ್ಕೆ ಸೂಕ್ತ ಪರಿಹಾರ ದೊರೆಯುತ್ತದೆ. ಸ್ಪೀಕರ್ ಅವರೊಂದಿಗೆ ಮಾತನಾಡಿ ಇನ್ನು ಮುಂದೆ ಅಧಿವೇಶನದ ಸಂದರ್ಭದಲ್ಲಿ ಮಕ್ಕಳ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು `ನಿಲುವಳಿ ಸೂಚನೆ~ ಮೂಲಕ ಸಮಯಾವಕಾಶ ಮೀಸಲಿಡಲು ಪ್ರಯತ್ನಿಸುವುದು~ ಎಂದು ಶೆಟ್ಟರ್ ಭರವಸೆ ನೀಡಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>`ಸಿಎಂ ಸರ್, ಶಿಕ್ಷಣ ಹಕ್ಕು ಕಾಯ್ದೆ ಜಾರಿಯಾದ ನಂತರವೂ ಖಾಸಗಿ ಶಾಲೆಗಳಲ್ಲಿ ಡೊನೇಶನ್ ಕೇಳಿದರೆ ಏನು ಮಾಡಬೇಕು~...<br /> <br /> ಹೀಗೊಂದು ಅನಿರೀಕ್ಷಿತ ಪ್ರಶ್ನೆ ನಗರದಲ್ಲಿ ಬುಧವಾರ ಬಾಲವಿಕಾಸ ಅಕಾಡೆಮಿ ಆಯೋಜಿಸಿದ್ದ `ಮಕ್ಕಳೊಂದಿಗೆ ಮುಖ್ಯಮಂತ್ರಿ~ ಕಾರ್ಯಕ್ರಮದಲ್ಲಿ ತೂರಿ ಬಂದಿತು.<br /> <br /> ಸಮಾರಂಭದ ಅಂಗವಾಗಿ ನಡೆದ ಸಂವಾದದಲ್ಲಿ ಧಾರವಾಡದ ಕೆಎನ್ಕೆ ಪ್ರೌಢಶಾಲೆಯ ವಿದ್ಯಾರ್ಥಿನಿ ಭಾಗ್ಯಶ್ರೀ ದೇಸಾಯಿ ಮೇಲಿನಂತೆ ಕೇಳಿದಾಗ ಸಿಎಂ ಜಗದೀಶ ಶೆಟ್ಟರ್ ಕ್ಷಣಕಾಲ ತಬ್ಬಿಬ್ಬಾದರೂ ನಗುತ್ತಲೇ ಉತ್ತರಿಸಿದರು.<br /> <br /> ಡೊನೇಶನ್ ನಿಯಂತ್ರಣಕ್ಕಾಗಿಯೇ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದಿದೆ. ಸರ್ಕಾರದ ನಿರ್ದೇಶನದನ್ವಯ ಕಾಯ್ದೆಯಡಿ ಶಾಲೆಗೆ ದಾಖಲಿಸಿಕೊಳ್ಳದಿದ್ದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಗೆ ದೂರು ನೀಡುವಂತೆ ಅಥವಾ ತಮಗೆ ನೇರವಾಗಿ ದೂರು ಕೊಡುವಂತೆ ಮಕ್ಕಳ ಪಾಲಕರಿಗೆ ಹೇಳಿದಾಗ ಸಮಾರಂಭದಲ್ಲಿ ನೆರೆದಿದ್ದ ಮಕ್ಕಳಿಂದ ಚಪ್ಪಾಳೆಯ ಪ್ರತಿಕ್ರಿಯೆ.<br /> <br /> `ನಿಮ್ಮ ವಯಸ್ಸಿನಲ್ಲಿ ಇದ್ದಾಗ ನಾನು ನಿಮ್ಮಷ್ಟು ಶ್ಯಾಣೇ ಇರಲಿಲ್ಲ. ನೀವು ಬಹಳ ಶ್ಯಾಣೇ ಇದ್ದೀರಿ~ ಎಂದು ಮಕ್ಕಳನ್ನು ಶೆಟ್ಟರ್ ಹುರಿದುಂಬಿಸಿದರು.<br /> <br /> `ನಾಗಶೆಟ್ಟಿಕೊಪ್ಪದ ಸರ್ಕಾರಿ ಶಾಲೆ ನಂ 9ರಲ್ಲಿ ಕೇವಲ 8ನೇ ತರಗತಿಯವರೆಗೆ ಮಾತ್ರ ಓದಲು ಅವಕಾಶವಿದೆ. 9 ಹಾಗೂ 10ನೇ ತರಗತಿ ಆರಂಭಿಸುವಂತೆ~ ಶಾಲೆಯ ವಿದ್ಯಾರ್ಥಿನಿ ರೆಹಾನಾ ಮಕಾನದಾರ ಮಾಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ ಕೂಡಲೇ ಹೊಸ ತರಗತಿಗಳ ಆರಂಭಿಸಲು ಪ್ರಸ್ತಾವ ಸಲ್ಲಿಸಲು ಸ್ಥಳದಲ್ಲಿದ ಡಿಡಿಪಿಐ ಡಾ.ಬಿ.ಕೆ.ಎಸ್.ವರ್ಧನ ಅವರಿಗೆ ಸೂಚನೆ ನೀಡಿದರು.<br /> <br /> `ಶಾಲಾ ಗ್ರಂಥಾಲಯಗಳಲ್ಲಿ ಪುಸ್ತಕಗಳೇ ಇಲ್ಲ. ನೀವು ಎಲ್ಲಾ ಶಾಲೆಗಳಿಗೆ ಹೊಸ ಪುಸ್ತಕ ಕೊಡಿಸಿ~ ಎಂದು ವಿದ್ಯಾರ್ಥಿನಿ ಶ್ವೇತಾ ಕೇಳಿದ ಪ್ರಶ್ನೆಗೆ `ನೀವು ಮಕ್ಕಳು ಮೊದಲು ಓದುವ ಹವ್ಯಾಸ ರೂಢಿಸಿಕೊಳ್ಳಿರಿ. ಖಂಡಿತವಾಗಿಯೂ ಪುಸ್ತಕ ಕೊಡಿಸುವೆ~ ಎಂದು ಶೆಟ್ಟರ್ ಮಕ್ಕಳಿಗೆ ಕಿವಿಮಾತು ಹೇಳಿದರು. <br /> <br /> `ನೀವು ಬಾಲ್ಯದಲ್ಲಿ ನಮ್ಮಂತೆಯೇ ತುಂಟತನ ಮಾಡುತ್ತಿದ್ದಿರಾ~? ಎಂದು ಪ್ರಾಚಿ ಸಂಶೀಕರ ಕೇಳಿದಾಗ `ಹೌದು ಸಿಕ್ಕಾಪಟ್ಟೆ ತುಂಟನಾಗಿದ್ದೆ~ ಎಂದು ಶೆಟ್ಟರ್ ಉತ್ತರಿಸಿದರು. `ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಜೀತಕ್ಕೆ ಇದ್ದಾರೆ. ಅವರನ್ನು ಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡಿ ಅಂಕಲ್~ ಎಂದು ಸಯ್ಯದ್ ಸೊರಟೂರ್ ಕೇಳಿದಾಗ ಸಿಎಂ ಒಪ್ಪಿಗೆ ಸೂಚಿಸಿದರು.<br /> <br /> ಸಂವಾದ ಆರಂಭಕ್ಕೆ ಮೊದಲು ಮಾತನಾಡಿದ ಜಗದೀಶ ಶೆಟ್ಟರ್ ಪತ್ನಿ ಶಿಲ್ಪಾ, ವಿದೇಶಗಳ ಶಾಲೆಗಳಲ್ಲಿ ಮಕ್ಕಳಿಗೆ ಅಲ್ಲಿಯೇ ಪುಸ್ತಕಗಳನ್ನು ಇಡುವ ವ್ಯವಸ್ಥೆಯನ್ನು ಕಲ್ಪಿಸಿರುತ್ತಾರೆ. ಅದೇ ರೀತಿ ಇಲ್ಲಿಯೂ ಆ ವ್ಯವಸ್ಥೆ ಜಾರಿಗೆ ತಂದು ಮಕ್ಕಳ ಬೆನ್ನಿನ ಮೇಲಿನ ಭಾರ ಇಳಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರು.<br /> <br /> ಸಂವಾದದ ನಂತರ ಮಕ್ಕಳಿಗೆ ಸಿಹಿ ತಿಂಡಿಯ ಪೊಟ್ಟಣ ವಿತರಿಸಲಾಯಿತು. ಸಮಾರಂಭದಲ್ಲಿ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ ಟಿಂಗಿನಕಾಯಿ, ಮಹೇಂದ್ರ ಕಂಠಿ ಮತ್ತಿತರರು ಪಾಲ್ಗೊಂಡಿದ್ದರು.<br /> <br /> <strong>ಸದನದಲ್ಲಿ `ನಿಲುವಳಿ ಸೂಚನೆ~ಗೆ ಅವಕಾಶ</strong><br /> `ಮಕ್ಕಳ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ವಿಧಾನಸಭೆ ಅಧಿವೇಶನದಲ್ಲಿ ಪ್ರಶ್ನೆಗಳನ್ನೇ ಕೇಳುವುದು ಬಿಟ್ಟಿದ್ದಾರೆ~ ಎಂದು ಸಂವಾದದ ವೇಳೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿಷಾದ ವ್ಯಕ್ತಪಡಿಸಿದರು.<br /> <br /> `ಸದನದಲ್ಲಿ ಚರ್ಚೆಯಾದಾಗ ಮಾತ್ರ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಗಂಭೀರತೆ ಇಡೀ ರಾಜ್ಯಕ್ಕೆ ಅರ್ಥವಾಗುತ್ತದೆ. ಅದಕ್ಕೆ ಸೂಕ್ತ ಪರಿಹಾರ ದೊರೆಯುತ್ತದೆ. ಸ್ಪೀಕರ್ ಅವರೊಂದಿಗೆ ಮಾತನಾಡಿ ಇನ್ನು ಮುಂದೆ ಅಧಿವೇಶನದ ಸಂದರ್ಭದಲ್ಲಿ ಮಕ್ಕಳ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು `ನಿಲುವಳಿ ಸೂಚನೆ~ ಮೂಲಕ ಸಮಯಾವಕಾಶ ಮೀಸಲಿಡಲು ಪ್ರಯತ್ನಿಸುವುದು~ ಎಂದು ಶೆಟ್ಟರ್ ಭರವಸೆ ನೀಡಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>