<p>ಈಶಾನ್ಯ ರಾಜ್ಯಗಳ ಪ್ರಜೆಗಳಲ್ಲಿ ಗಲಿಬಿಲಿ ಸೃಷ್ಟಿಸಿರುವ ಕೃತ್ಯ ಕ್ಷಮಾರ್ಹವೇ ಅಲ್ಲ. ಸಾಮಾಜಿಕ ಸಂಪರ್ಕ ಜಾಲಗಳನ್ನು ಬಳಸಿಕೊಂಡು ಧಾರ್ಮಿಕ ಭಾವನೆ ಕೆರಳಿಸುವ, ಆ ಮೂಲಕ ಜನಜೀವನವನ್ನು ಅಸ್ತವ್ಯಸ್ತಗೊಳಿಸುವ ಈ ರೀತಿಯ ಕೆಲಸ ನೆರೆಯ ರಾಷ್ಟ್ರವಾದ ಪಾಕಿಸ್ತಾನದಿಂದಲೇ ನಡೆಯುತ್ತಿದೆ ಎನ್ನುವ ಆಘಾತಕಾರಿ ಸಂಗತಿಯೂ ಬಯಲಾಗಿದೆ. <br /> <br /> ಈ ರೀತಿಯ `ದ್ವೇಷ ಭೀತಿ~ ಯನ್ನು ಬಿತ್ತುವುದೂ ಕೂಡ ಭಯೋತ್ಪಾದಕತೆಯ ಮತ್ತೊಂದು ಮುಖ. ಅಂತಹ ಶಕ್ತಿಗಳನ್ನು ಬಗ್ಗುಬಡಿಯುವಂತೆ ಪಾಕಿಸ್ತಾನಕ್ಕೆ ಭಾರತ ಒತ್ತಾಯಿಸಿರುವುದೂ ಸಕಾಲಿಕವೇ ಆಗಿದೆ. ಈ ವಿಷಯದಲ್ಲಿ ಭಾರತ ಬಿಗಿ ನಿಲುವು ತಳೆಯಬೇಕಾದ್ದು ಅಗತ್ಯ.<br /> <br /> ಮೇಲಿಂದ ಮೇಲೆ ನಡೆಯುತ್ತಿರುವ ಇಂತಹ ಉಪಟಳವನ್ನು ಗಂಭೀರನೆಲೆಯಲ್ಲಿ ಪರಿಗಣಿಸಿ ಕ್ರಮಕ್ಕೆ ಮುಂದಾಗಬೇಕು. ಪಾಕಿಸ್ತಾನ ಭಯೋತ್ಪಾದಕರ ಅಡ್ಡೆಯಾಗಿದ್ದು, ಅಲ್ಲಿನ ಸರ್ಕಾರ ಅವರಿಗೆ ಆಶ್ರಯ ನೀಡುತ್ತಿದೆ ಎಂದು ಭಾರತ ಪದೇಪದೇ ಸಾಕ್ಷ್ಯ ಸಹಿತ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪ್ರತಿಪಾದಿಸುತ್ತಲೇ ಬಂದಿದೆ. <br /> <br /> ದೇಶದ ಭದ್ರತೆಗೆ ಸವಾಲಾಗಿ, ಭಯೋತ್ಪಾದಕರಿಗೆ ಪಾಕಿಸ್ತಾನದಲ್ಲಿ ತರಬೇತಿ, ಆಶ್ರಯ, ಪ್ರಚೋದನೆ, ಬೆಂಬಲ ಸಿಗುತ್ತಿದೆ ಎಂದು ಭಾರತ ಹೇಳುತ್ತಲೇ ಬಂದಿರುವುದಕ್ಕೆ ಲಾಡೆನ್ ಅಡಗುದಾಣ ಪತ್ತೆಯ ನಂತರ ಪುರಾವೆಯೂ ಲಭಿಸಿತ್ತು. <br /> <br /> ಅಸ್ಸಾಂ ಪ್ರಜೆಗಳಲ್ಲಿ ಉಂಟಾಗಿರುವ ಮಾನಸಿಕ ಭೀತಿಗೆ ಅಲ್ಲಿನ ಬೇಹುಗಾರಿಕಾ ಸಂಸ್ಥೆ ಐಎಸ್ಐ ಕೈವಾಡವೇ ಕಾರಣ ಎನ್ನುವುದೂ ದೃಢಪಟ್ಟಿದೆ. ವಾಸ್ತವವಾಗಿ ಭಯೋತ್ಪಾದಕರಿಗೆ ಬೆನ್ನೆಲುಬಿನಂತಿರುವುದೇ ಐಎಸ್ಐ. ಸರ್ಕಾರವೂ ರಹಸ್ಯದಳದ ಬಿಗಿ ಹಿಡಿತದಲ್ಲೇ ಇದೆ. ಪಾಕಿಸ್ತಾನದ ಅಸ್ಥಿರ ಆಡಳಿತದಿಂದಾಗಿ, ಅಲ್ಲಿ ಉಗ್ರರ ಕೈ ಮೇಲಾಗಿದೆ.<br /> <br /> ಭಾರತದಲ್ಲಿ ಜನಜೀವನವನ್ನು ಅಸ್ತವ್ಯಸ್ತಗೊಳಿಸುವ ಕೆಲಸವನ್ನು ಭಯೋತ್ಪಾದಕರು ಪದೇಪದೇ ಮಾಡುತ್ತಲೇ ಬಂದಿದ್ದಾರೆ. ಮುಂಬೈ ಸ್ಪೋಟದಂತಹ ಘಟನೆ, ಪುಣೆ ಸರಣಿ ಬಾಂಬ್ ಸ್ಫೋಟ ಎಲ್ಲದರಲ್ಲೂ ಪಾಕಿಸ್ತಾನದ ಕೈವಾಡವಿರುವುದು ರಹಸ್ಯವಾಗೇನೂ ಉಳಿದಿಲ್ಲ. <br /> <br /> ಮುಂಬೈ ದಾಳಿಗೆ ಸಂಬಂಧಪಟ್ಟಂತೆ ಪಾಕಿಗಳ ಸಂಚನ್ನು ಭಾರತ ಪುರಾವೆ ಸಹಿತ ಸಲ್ಲಿಸಿದರೂ ಪಾಕಿಸ್ತಾನ ದಿವ್ಯ ಮೌನ ತಾಳಿರುವುದು ಅದರ ಪುಕ್ಕಲುತನಕ್ಕೆ ಸಾಕ್ಷಿ. ಭಯೋತ್ಪಾದಕ ಗುಂಪುಗಳನ್ನು ಹತ್ತಿಕ್ಕುವ ವಿಷಯವನ್ನು ಪಾಕಿಸ್ತಾನ ಅಷ್ಟೊಂದು ಗಂಭೀರವಾಗಿ ಪರಿಗಣಿಸದಿರುವುದು ಭಾರತದೊಂದಿಗಿನ ಸೌಹಾರ್ದ ಸ್ಥಾಪನೆ ಯತ್ನಕ್ಕೆ ಅಡ್ಡಿಯಾಗಿದೆ. <br /> <br /> ಪಾಕಿಸ್ತಾನಕ್ಕೆ ಪ್ರಾಮಾಣಿಕತೆಯ ಕೊರತೆ ಇದೆ. ಪಾಕಿಸ್ತಾನದ ನೆಲದಿಂದಲೇ ಭೀತಿ ಸೃಷ್ಟಿಸುತ್ತಿರುವ 76 ಅಂತರ್ಜಾಲ ತಾಣಗಳನ್ನು ಪತ್ತೆಹಚ್ಚಲಾಗಿದೆ. ಸಿಕ್ಕ ಪುರಾವೆಗಳನ್ನು ಪಾಕಿಸ್ತಾನಕ್ಕೆ ನೀಡಿದ್ದರೂ, ಮೊಂಡು ಸರ್ಕಾರ ಅದೇ ರಾಗ ಹಾಡುತ್ತಿದೆ. ಈ ತಾಣಗಳಿಗೆ ಭಾರತ ಈಗಾಗಲೇ ತಡೆಯನ್ನೂ ವಿಧಿಸಿದೆ. <br /> <br /> ಎಸ್ಎಂಎಸ್ ಹಾಗೂ ಎಂಎಂಎಸ್ ಕಳುಹಿಸುವುದನ್ನು ಇದೇ ಮೊದಲ ಬಾರಿಗೆ ನಿಷೇಧಿಸಲಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಹೇಳುತ್ತದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸುವುದು, ತಂತ್ರಜ್ಞಾನಗಳನ್ನು ದುರುಪಯೋಗಪಡಿಸಿಕೊಳ್ಳುವುದು ಭಯೋತ್ಪಾದಕರ ಹೊಸ ತಂತ್ರ.<br /> <br /> ಸರ್ಕಾರ ದೃಢನಿಲುವು ತಳೆದು ಅದನ್ನು ಬಲಿಹಾಕಲು ಸಾಧ್ಯವಾಗದಿದ್ದರೆ ಅಲ್ಲಿನ ಸರ್ಕಾರಕ್ಕೇ ಅದು ಮಗ್ಗಲಮುಳ್ಳಾಗುವುದರಲ್ಲಿ ಸಂಶಯವಿಲ್ಲ. ಪಾಕಿಸ್ತಾನ ಸರ್ಕಾರಕ್ಕೆ ಈ ಅಪಾಯದ ಅರಿವೂ ಇಲ್ಲವಾಗಿದೆ. ದಿಟ್ಟ ನಿಲುವು ತಳೆಯದೆ, ಅದೇ ನಿರ್ಲಕ್ಷ್ಯ ಧೋರಣೆ ಮುಂದುವರೆಸಿದರೆ ಪಾಕಿಸ್ತಾನಕ್ಕೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ತಕ್ಕ ಪಾಠಕಲಿಸಲು ಭಾರತ ಮುಂದಾಗಬೇಕಾಗುತ್ತದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಈಶಾನ್ಯ ರಾಜ್ಯಗಳ ಪ್ರಜೆಗಳಲ್ಲಿ ಗಲಿಬಿಲಿ ಸೃಷ್ಟಿಸಿರುವ ಕೃತ್ಯ ಕ್ಷಮಾರ್ಹವೇ ಅಲ್ಲ. ಸಾಮಾಜಿಕ ಸಂಪರ್ಕ ಜಾಲಗಳನ್ನು ಬಳಸಿಕೊಂಡು ಧಾರ್ಮಿಕ ಭಾವನೆ ಕೆರಳಿಸುವ, ಆ ಮೂಲಕ ಜನಜೀವನವನ್ನು ಅಸ್ತವ್ಯಸ್ತಗೊಳಿಸುವ ಈ ರೀತಿಯ ಕೆಲಸ ನೆರೆಯ ರಾಷ್ಟ್ರವಾದ ಪಾಕಿಸ್ತಾನದಿಂದಲೇ ನಡೆಯುತ್ತಿದೆ ಎನ್ನುವ ಆಘಾತಕಾರಿ ಸಂಗತಿಯೂ ಬಯಲಾಗಿದೆ. <br /> <br /> ಈ ರೀತಿಯ `ದ್ವೇಷ ಭೀತಿ~ ಯನ್ನು ಬಿತ್ತುವುದೂ ಕೂಡ ಭಯೋತ್ಪಾದಕತೆಯ ಮತ್ತೊಂದು ಮುಖ. ಅಂತಹ ಶಕ್ತಿಗಳನ್ನು ಬಗ್ಗುಬಡಿಯುವಂತೆ ಪಾಕಿಸ್ತಾನಕ್ಕೆ ಭಾರತ ಒತ್ತಾಯಿಸಿರುವುದೂ ಸಕಾಲಿಕವೇ ಆಗಿದೆ. ಈ ವಿಷಯದಲ್ಲಿ ಭಾರತ ಬಿಗಿ ನಿಲುವು ತಳೆಯಬೇಕಾದ್ದು ಅಗತ್ಯ.<br /> <br /> ಮೇಲಿಂದ ಮೇಲೆ ನಡೆಯುತ್ತಿರುವ ಇಂತಹ ಉಪಟಳವನ್ನು ಗಂಭೀರನೆಲೆಯಲ್ಲಿ ಪರಿಗಣಿಸಿ ಕ್ರಮಕ್ಕೆ ಮುಂದಾಗಬೇಕು. ಪಾಕಿಸ್ತಾನ ಭಯೋತ್ಪಾದಕರ ಅಡ್ಡೆಯಾಗಿದ್ದು, ಅಲ್ಲಿನ ಸರ್ಕಾರ ಅವರಿಗೆ ಆಶ್ರಯ ನೀಡುತ್ತಿದೆ ಎಂದು ಭಾರತ ಪದೇಪದೇ ಸಾಕ್ಷ್ಯ ಸಹಿತ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪ್ರತಿಪಾದಿಸುತ್ತಲೇ ಬಂದಿದೆ. <br /> <br /> ದೇಶದ ಭದ್ರತೆಗೆ ಸವಾಲಾಗಿ, ಭಯೋತ್ಪಾದಕರಿಗೆ ಪಾಕಿಸ್ತಾನದಲ್ಲಿ ತರಬೇತಿ, ಆಶ್ರಯ, ಪ್ರಚೋದನೆ, ಬೆಂಬಲ ಸಿಗುತ್ತಿದೆ ಎಂದು ಭಾರತ ಹೇಳುತ್ತಲೇ ಬಂದಿರುವುದಕ್ಕೆ ಲಾಡೆನ್ ಅಡಗುದಾಣ ಪತ್ತೆಯ ನಂತರ ಪುರಾವೆಯೂ ಲಭಿಸಿತ್ತು. <br /> <br /> ಅಸ್ಸಾಂ ಪ್ರಜೆಗಳಲ್ಲಿ ಉಂಟಾಗಿರುವ ಮಾನಸಿಕ ಭೀತಿಗೆ ಅಲ್ಲಿನ ಬೇಹುಗಾರಿಕಾ ಸಂಸ್ಥೆ ಐಎಸ್ಐ ಕೈವಾಡವೇ ಕಾರಣ ಎನ್ನುವುದೂ ದೃಢಪಟ್ಟಿದೆ. ವಾಸ್ತವವಾಗಿ ಭಯೋತ್ಪಾದಕರಿಗೆ ಬೆನ್ನೆಲುಬಿನಂತಿರುವುದೇ ಐಎಸ್ಐ. ಸರ್ಕಾರವೂ ರಹಸ್ಯದಳದ ಬಿಗಿ ಹಿಡಿತದಲ್ಲೇ ಇದೆ. ಪಾಕಿಸ್ತಾನದ ಅಸ್ಥಿರ ಆಡಳಿತದಿಂದಾಗಿ, ಅಲ್ಲಿ ಉಗ್ರರ ಕೈ ಮೇಲಾಗಿದೆ.<br /> <br /> ಭಾರತದಲ್ಲಿ ಜನಜೀವನವನ್ನು ಅಸ್ತವ್ಯಸ್ತಗೊಳಿಸುವ ಕೆಲಸವನ್ನು ಭಯೋತ್ಪಾದಕರು ಪದೇಪದೇ ಮಾಡುತ್ತಲೇ ಬಂದಿದ್ದಾರೆ. ಮುಂಬೈ ಸ್ಪೋಟದಂತಹ ಘಟನೆ, ಪುಣೆ ಸರಣಿ ಬಾಂಬ್ ಸ್ಫೋಟ ಎಲ್ಲದರಲ್ಲೂ ಪಾಕಿಸ್ತಾನದ ಕೈವಾಡವಿರುವುದು ರಹಸ್ಯವಾಗೇನೂ ಉಳಿದಿಲ್ಲ. <br /> <br /> ಮುಂಬೈ ದಾಳಿಗೆ ಸಂಬಂಧಪಟ್ಟಂತೆ ಪಾಕಿಗಳ ಸಂಚನ್ನು ಭಾರತ ಪುರಾವೆ ಸಹಿತ ಸಲ್ಲಿಸಿದರೂ ಪಾಕಿಸ್ತಾನ ದಿವ್ಯ ಮೌನ ತಾಳಿರುವುದು ಅದರ ಪುಕ್ಕಲುತನಕ್ಕೆ ಸಾಕ್ಷಿ. ಭಯೋತ್ಪಾದಕ ಗುಂಪುಗಳನ್ನು ಹತ್ತಿಕ್ಕುವ ವಿಷಯವನ್ನು ಪಾಕಿಸ್ತಾನ ಅಷ್ಟೊಂದು ಗಂಭೀರವಾಗಿ ಪರಿಗಣಿಸದಿರುವುದು ಭಾರತದೊಂದಿಗಿನ ಸೌಹಾರ್ದ ಸ್ಥಾಪನೆ ಯತ್ನಕ್ಕೆ ಅಡ್ಡಿಯಾಗಿದೆ. <br /> <br /> ಪಾಕಿಸ್ತಾನಕ್ಕೆ ಪ್ರಾಮಾಣಿಕತೆಯ ಕೊರತೆ ಇದೆ. ಪಾಕಿಸ್ತಾನದ ನೆಲದಿಂದಲೇ ಭೀತಿ ಸೃಷ್ಟಿಸುತ್ತಿರುವ 76 ಅಂತರ್ಜಾಲ ತಾಣಗಳನ್ನು ಪತ್ತೆಹಚ್ಚಲಾಗಿದೆ. ಸಿಕ್ಕ ಪುರಾವೆಗಳನ್ನು ಪಾಕಿಸ್ತಾನಕ್ಕೆ ನೀಡಿದ್ದರೂ, ಮೊಂಡು ಸರ್ಕಾರ ಅದೇ ರಾಗ ಹಾಡುತ್ತಿದೆ. ಈ ತಾಣಗಳಿಗೆ ಭಾರತ ಈಗಾಗಲೇ ತಡೆಯನ್ನೂ ವಿಧಿಸಿದೆ. <br /> <br /> ಎಸ್ಎಂಎಸ್ ಹಾಗೂ ಎಂಎಂಎಸ್ ಕಳುಹಿಸುವುದನ್ನು ಇದೇ ಮೊದಲ ಬಾರಿಗೆ ನಿಷೇಧಿಸಲಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಹೇಳುತ್ತದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸುವುದು, ತಂತ್ರಜ್ಞಾನಗಳನ್ನು ದುರುಪಯೋಗಪಡಿಸಿಕೊಳ್ಳುವುದು ಭಯೋತ್ಪಾದಕರ ಹೊಸ ತಂತ್ರ.<br /> <br /> ಸರ್ಕಾರ ದೃಢನಿಲುವು ತಳೆದು ಅದನ್ನು ಬಲಿಹಾಕಲು ಸಾಧ್ಯವಾಗದಿದ್ದರೆ ಅಲ್ಲಿನ ಸರ್ಕಾರಕ್ಕೇ ಅದು ಮಗ್ಗಲಮುಳ್ಳಾಗುವುದರಲ್ಲಿ ಸಂಶಯವಿಲ್ಲ. ಪಾಕಿಸ್ತಾನ ಸರ್ಕಾರಕ್ಕೆ ಈ ಅಪಾಯದ ಅರಿವೂ ಇಲ್ಲವಾಗಿದೆ. ದಿಟ್ಟ ನಿಲುವು ತಳೆಯದೆ, ಅದೇ ನಿರ್ಲಕ್ಷ್ಯ ಧೋರಣೆ ಮುಂದುವರೆಸಿದರೆ ಪಾಕಿಸ್ತಾನಕ್ಕೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ತಕ್ಕ ಪಾಠಕಲಿಸಲು ಭಾರತ ಮುಂದಾಗಬೇಕಾಗುತ್ತದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>