<p><br /> <strong>ಹೈದರಾಬಾದ್(ಪಿಟಿಐ</strong><strong>):</strong> ಆಂಧ್ರಪ್ರದೇಶದ ವಿಧಾನಸಭೆ ಮತ್ತು ವಿಧಾನ ಪರಿಷತ್ ಗಳಲ್ಲಿ ~ಪ್ರತ್ಯೇಕ ತೆಲಂಗಾಣ ರಾಜ್ಯ~ ರಚನೆ ಬೇಡಿಕೆಯು ಮಂಗಳವಾರದ ಕಲಾಪವನ್ನು ನುಂಗಿಹಾಕಿತು. ವಿಧಾನಸಭೆಯಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯ ಬೇಡಿಕೆಯ ಜೊತೆಗೆ ಶ್ರೀಕಾಕುಲಂ ನಲ್ಲಿ ನಡೆದ ಗೋಲಿಬಾರ್ ಪ್ರಕರಣವೂ ಪ್ರಸ್ತಾಪಗೊಂಡು ಸಭೆಯಲ್ಲಿ ಕೋಲಾಹಲ ಉಂಟು ಮಾಡಿತು. </p>.<p><strong>ವಿಧಾನ ಸಭೆ:</strong> ಪ್ರತ್ಯೇಕ ತೆಲಂಗಾಣ ರಚನೆ ಮತ್ತು ಶ್ರೀಕಾಕುಲಂ ನಲ್ಲಿ ಶಾಖೋತ್ಪನ್ನ ವಿದ್ಯುತ್ ಸ್ಥಾವರ ಸ್ಥಾಪನೆ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸ್ ಗೋಲಿಬಾರಿನಲ್ಲಿ ಇಬ್ಬರು ಸಾವಿಗೀಡಾದ ಪ್ರಕರಣ ವಿಧಾನಸಭೆಯಲ್ಲಿ ಪ್ರತಿಧ್ವನಿಗೊಂಡು ಮಂಗಳವಾರ ವಿಧಾನಸಭಯನ್ನು ಯಾವುದೇ ಕಲಾಪ ನಡೆಸದೇ ಬುಧವಾರಕ್ಕೆ ಮುಂದೂಡಿದ ಪ್ರಸಂಗ ನಡೆಯಿತು.</p>.<p><strong>ವಿಧಾನ ಪರಿಷತ್ತು</strong>; ಟಿಡಿಪಿ, ಕಾಂಗ್ರೆಸ್ ಮತ್ತು ಇತರ ಸದಸ್ಯರು ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಕುರಿತ ಮಸೂದೆಯನ್ನು ಪ್ರಸಕ್ತ ಲೋಕಸಭೆಯ ಅಧಿವೇಶನದಲ್ಲೇ ಮಂಡಿಸಬೇಕೆಂದು ಆಗ್ರಹಿಸಿದ್ದರಿಂದ ಮಂಗಳವಾರವೂ ವಿಧಾನಪರಿಷತ್ತಿನಲ್ಲಿ ಗದ್ದಲವುಂಟಾಗಿ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಯಿತು. </p>.<p><span style="font-size: medium"><strong>ರೈಲು ತಡೆ:</strong> ದಿನದಿಂದ ದಿನಕ್ಕೆತೀವ್ರ ಸ್ವರೂಪ ಪಡೆಯುತ್ತಿರುವ ‘ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ’ ಬೇಡಿಕೆ ಹೋರಾಟದ ಸಂದರ್ಭದಲ್ಲಿ ಮಂಗಳವಾರ ತೆಲಂಗಾಣ ಪ್ರಾಂತ್ಯದಲ್ಲಿರುವ ಹೈದರಾಬಾದ್ ಸೇರಿದಂತೆ 9 ಜಿಲ್ಲೆಗಳಲ್ಲಿ ‘ರೈಲು ತಡೆ’ ಪ್ರತಿಭಟನೆ ನಡೆಯಿತು. </span></p>.<p><span style="font-size: medium">ತೆಲಂಗಾಣ ಜಂಟಿ ಕಾರ್ಯಕಾರಿ ಸಮಿತಿ ಸೇರಿದಂತೆ ‘ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ’ಯ ಪರ ಹೋರಾಟ ಸಂಘಟನೆಗಳು ಒಂಬತ್ತು ಜಿಲ್ಲೆಗಳಲ್ಲಿ ರೈಲು ಹಳಿಗಳ ಮೇಲೆ ಕುಳಿತು ‘ರೈಲು ತಡೆ’ ಪ್ರತಿಭಟನೆ ನಡೆಸಿದ್ದರಿಂದ ರೈಲುಗಳ ಸಂಚಾರಕ್ಕೆ ತೀವ್ರ ತೊಂದರೆಯುಂಟಾಯಿತು. ಕೆಲವು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. <br /> <br /> </span><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><br /> <strong>ಹೈದರಾಬಾದ್(ಪಿಟಿಐ</strong><strong>):</strong> ಆಂಧ್ರಪ್ರದೇಶದ ವಿಧಾನಸಭೆ ಮತ್ತು ವಿಧಾನ ಪರಿಷತ್ ಗಳಲ್ಲಿ ~ಪ್ರತ್ಯೇಕ ತೆಲಂಗಾಣ ರಾಜ್ಯ~ ರಚನೆ ಬೇಡಿಕೆಯು ಮಂಗಳವಾರದ ಕಲಾಪವನ್ನು ನುಂಗಿಹಾಕಿತು. ವಿಧಾನಸಭೆಯಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯ ಬೇಡಿಕೆಯ ಜೊತೆಗೆ ಶ್ರೀಕಾಕುಲಂ ನಲ್ಲಿ ನಡೆದ ಗೋಲಿಬಾರ್ ಪ್ರಕರಣವೂ ಪ್ರಸ್ತಾಪಗೊಂಡು ಸಭೆಯಲ್ಲಿ ಕೋಲಾಹಲ ಉಂಟು ಮಾಡಿತು. </p>.<p><strong>ವಿಧಾನ ಸಭೆ:</strong> ಪ್ರತ್ಯೇಕ ತೆಲಂಗಾಣ ರಚನೆ ಮತ್ತು ಶ್ರೀಕಾಕುಲಂ ನಲ್ಲಿ ಶಾಖೋತ್ಪನ್ನ ವಿದ್ಯುತ್ ಸ್ಥಾವರ ಸ್ಥಾಪನೆ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸ್ ಗೋಲಿಬಾರಿನಲ್ಲಿ ಇಬ್ಬರು ಸಾವಿಗೀಡಾದ ಪ್ರಕರಣ ವಿಧಾನಸಭೆಯಲ್ಲಿ ಪ್ರತಿಧ್ವನಿಗೊಂಡು ಮಂಗಳವಾರ ವಿಧಾನಸಭಯನ್ನು ಯಾವುದೇ ಕಲಾಪ ನಡೆಸದೇ ಬುಧವಾರಕ್ಕೆ ಮುಂದೂಡಿದ ಪ್ರಸಂಗ ನಡೆಯಿತು.</p>.<p><strong>ವಿಧಾನ ಪರಿಷತ್ತು</strong>; ಟಿಡಿಪಿ, ಕಾಂಗ್ರೆಸ್ ಮತ್ತು ಇತರ ಸದಸ್ಯರು ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಕುರಿತ ಮಸೂದೆಯನ್ನು ಪ್ರಸಕ್ತ ಲೋಕಸಭೆಯ ಅಧಿವೇಶನದಲ್ಲೇ ಮಂಡಿಸಬೇಕೆಂದು ಆಗ್ರಹಿಸಿದ್ದರಿಂದ ಮಂಗಳವಾರವೂ ವಿಧಾನಪರಿಷತ್ತಿನಲ್ಲಿ ಗದ್ದಲವುಂಟಾಗಿ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಯಿತು. </p>.<p><span style="font-size: medium"><strong>ರೈಲು ತಡೆ:</strong> ದಿನದಿಂದ ದಿನಕ್ಕೆತೀವ್ರ ಸ್ವರೂಪ ಪಡೆಯುತ್ತಿರುವ ‘ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ’ ಬೇಡಿಕೆ ಹೋರಾಟದ ಸಂದರ್ಭದಲ್ಲಿ ಮಂಗಳವಾರ ತೆಲಂಗಾಣ ಪ್ರಾಂತ್ಯದಲ್ಲಿರುವ ಹೈದರಾಬಾದ್ ಸೇರಿದಂತೆ 9 ಜಿಲ್ಲೆಗಳಲ್ಲಿ ‘ರೈಲು ತಡೆ’ ಪ್ರತಿಭಟನೆ ನಡೆಯಿತು. </span></p>.<p><span style="font-size: medium">ತೆಲಂಗಾಣ ಜಂಟಿ ಕಾರ್ಯಕಾರಿ ಸಮಿತಿ ಸೇರಿದಂತೆ ‘ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ’ಯ ಪರ ಹೋರಾಟ ಸಂಘಟನೆಗಳು ಒಂಬತ್ತು ಜಿಲ್ಲೆಗಳಲ್ಲಿ ರೈಲು ಹಳಿಗಳ ಮೇಲೆ ಕುಳಿತು ‘ರೈಲು ತಡೆ’ ಪ್ರತಿಭಟನೆ ನಡೆಸಿದ್ದರಿಂದ ರೈಲುಗಳ ಸಂಚಾರಕ್ಕೆ ತೀವ್ರ ತೊಂದರೆಯುಂಟಾಯಿತು. ಕೆಲವು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. <br /> <br /> </span><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>