<p><strong>ಬೆಂಗಳೂರು</strong>: `ರಾಜಕೀಯ ಹಿತಾಸಕ್ತಿ ಗಳಿಗಾಗಿ ದಲಿತ ಜನಾಂಗವನ್ನು ಬಳಸಿಕೊಳ್ಳಲಾಗುತ್ತಿದ್ದು, ಈ ಬಗ್ಗೆ ಎಚ್ಚರವಹಿಸಬೇಕು' ಎಂದು ದಲಿತ ಸೇನೆಯ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಸೂರ್ಯಮಣಿ ಬಿಗ್ಹಾಡೆ ಅಭಿಪ್ರಾಯಪಟ್ಟರು.<br /> <br /> ದಲಿತ ಸೇನೆಯು ಕೆ.ಇ.ಬಿ. ಎಂಜಿನಿಯರಿಂಗ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಚಿಂತನ- ಮಂಥನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಅವಕಾಶ ರಾಜಕಾರಣದ ಸಂದರ್ಭಗಳು ಹೆಚ್ಚುತ್ತಿದೆ. ಅವಕಾಶವಿದ್ದೆಡೆ ದಲಿತ ಶಕ್ತಿಯನ್ನು ಬಳಸಿಕೊಂಡು ರಾಜಕೀಯವಾಗಿ ಸಬಲರಾಗುವ ಹಲವು ನಾಯಕರು ನಂತರ ದಲಿತರನ್ನು ಕಡೆಗಣಿಸುತ್ತಾರೆ. ಇದಕ್ಕೆಲ್ಲ ಅವಕಾಶ ನೀಡದಂತೆ ದಲಿತರು ಜಾಗೃತರಾಗಬೇಕು' ಎಂದು ತಿಳಿಸಿದರು.<br /> <br /> `ಗ್ರಾಮಗಳಲ್ಲಿ ದಲಿತಶಕ್ತಿಯನ್ನು ಸಂಘಟಿಸುವ ಸಲುವಾಗಿ ಎಲ್ಲ ಕಾರ್ಯ ಕರ್ತರು ಒಂದುಗೂಡುವ ಅಗತ್ಯ ಎದ್ದುಕಾಣುತ್ತಿದೆ. ದಲಿತರಲ್ಲಿರುವ ಒಡಕುಗಳು ಮರೆಯಾದರೆ ಏಳಿಗೆ ಸಾಧ್ಯವಿದೆ' ಎಂದು ತಿಳಿಸಿದರು.<br /> <br /> ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಎಂ.ಎಸ್. ಜಗನ್ನಾಥ್ ಮಾತನಾಡಿ, `ಅಂಬೇಡ್ಕರ್ ಅವರಂತಹ ಮೇರು ವ್ಯಕ್ತಿತ್ವದ ನಾಯಕ ಕೇವಲ ಪ್ರತಿಮೆಗಳಲ್ಲಿ, ಭಾವಚಿತ್ರಗಳಲ್ಲಿ ರೂಪ ಪಡೆಯದೇ ದಲಿತರ ನಿಜವಾದ ಶಕ್ತಿಯಾಗಬೇಕು' ಎಂದು ಹೇಳಿದರು.<br /> <br /> ಗೌರವಾಧ್ಯಕ್ಷ ವೆಂಕಟರಮಣ ಸ್ವಾಮಿ ಮಾತನಾಡಿ, `ಹೊಸ ಪೀಳಿಗೆ ಯುವಕರು ದಲಿತ ಹಾಗೂ ಬಂಡಾಯ ಚಳವಳಿಯ ಪೂರ್ವಾಪರವನ್ನು ಸಮರ್ಪಕವಾಗಿ ತಿಳಿದುಕೊಂಡು ಆ ನಂತರ ದಲಿತರ ಸಮಸ್ಯೆಗಳಿಗೆ ಸೂಕ್ಷ್ಮವಾಗಿ ಸ್ಪಂದಿಸಲಿ' ಎಂದು ಆಶಯ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: `ರಾಜಕೀಯ ಹಿತಾಸಕ್ತಿ ಗಳಿಗಾಗಿ ದಲಿತ ಜನಾಂಗವನ್ನು ಬಳಸಿಕೊಳ್ಳಲಾಗುತ್ತಿದ್ದು, ಈ ಬಗ್ಗೆ ಎಚ್ಚರವಹಿಸಬೇಕು' ಎಂದು ದಲಿತ ಸೇನೆಯ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಸೂರ್ಯಮಣಿ ಬಿಗ್ಹಾಡೆ ಅಭಿಪ್ರಾಯಪಟ್ಟರು.<br /> <br /> ದಲಿತ ಸೇನೆಯು ಕೆ.ಇ.ಬಿ. ಎಂಜಿನಿಯರಿಂಗ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಚಿಂತನ- ಮಂಥನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಅವಕಾಶ ರಾಜಕಾರಣದ ಸಂದರ್ಭಗಳು ಹೆಚ್ಚುತ್ತಿದೆ. ಅವಕಾಶವಿದ್ದೆಡೆ ದಲಿತ ಶಕ್ತಿಯನ್ನು ಬಳಸಿಕೊಂಡು ರಾಜಕೀಯವಾಗಿ ಸಬಲರಾಗುವ ಹಲವು ನಾಯಕರು ನಂತರ ದಲಿತರನ್ನು ಕಡೆಗಣಿಸುತ್ತಾರೆ. ಇದಕ್ಕೆಲ್ಲ ಅವಕಾಶ ನೀಡದಂತೆ ದಲಿತರು ಜಾಗೃತರಾಗಬೇಕು' ಎಂದು ತಿಳಿಸಿದರು.<br /> <br /> `ಗ್ರಾಮಗಳಲ್ಲಿ ದಲಿತಶಕ್ತಿಯನ್ನು ಸಂಘಟಿಸುವ ಸಲುವಾಗಿ ಎಲ್ಲ ಕಾರ್ಯ ಕರ್ತರು ಒಂದುಗೂಡುವ ಅಗತ್ಯ ಎದ್ದುಕಾಣುತ್ತಿದೆ. ದಲಿತರಲ್ಲಿರುವ ಒಡಕುಗಳು ಮರೆಯಾದರೆ ಏಳಿಗೆ ಸಾಧ್ಯವಿದೆ' ಎಂದು ತಿಳಿಸಿದರು.<br /> <br /> ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಎಂ.ಎಸ್. ಜಗನ್ನಾಥ್ ಮಾತನಾಡಿ, `ಅಂಬೇಡ್ಕರ್ ಅವರಂತಹ ಮೇರು ವ್ಯಕ್ತಿತ್ವದ ನಾಯಕ ಕೇವಲ ಪ್ರತಿಮೆಗಳಲ್ಲಿ, ಭಾವಚಿತ್ರಗಳಲ್ಲಿ ರೂಪ ಪಡೆಯದೇ ದಲಿತರ ನಿಜವಾದ ಶಕ್ತಿಯಾಗಬೇಕು' ಎಂದು ಹೇಳಿದರು.<br /> <br /> ಗೌರವಾಧ್ಯಕ್ಷ ವೆಂಕಟರಮಣ ಸ್ವಾಮಿ ಮಾತನಾಡಿ, `ಹೊಸ ಪೀಳಿಗೆ ಯುವಕರು ದಲಿತ ಹಾಗೂ ಬಂಡಾಯ ಚಳವಳಿಯ ಪೂರ್ವಾಪರವನ್ನು ಸಮರ್ಪಕವಾಗಿ ತಿಳಿದುಕೊಂಡು ಆ ನಂತರ ದಲಿತರ ಸಮಸ್ಯೆಗಳಿಗೆ ಸೂಕ್ಷ್ಮವಾಗಿ ಸ್ಪಂದಿಸಲಿ' ಎಂದು ಆಶಯ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>