<p><strong>ಬೆಳಗಾವಿ: </strong>ನಗರದಲ್ಲೆಗ ಬಿಸಿಲಿನ ದಗೆ ಹಾಗೂ ಚಳಿ ನಡುವೆ `ಜುಗಲ್ ಬಂದಿ~ ನಡೆಯುತ್ತಿದೆ. ರಾತ್ರಿಯಾಗುತ್ತಿದ್ದಂತೆ ಚಳಿ ಮೈ ನಡುಗಿಸಿದರೆ, ಬೆಳಿಗ್ಗೆಯಿಂದ ಹೊತ್ತೇರುತ್ತಿದ್ದಂತೆ ಬಿಸಿಲಿನ ದಗೆಯಿಂದ ದಾಹ ಹೆಚ್ಚಿ ತಂಪು ಪಾನೀಯ ಕುಡಿಯಲು ಮನಸ್ಸು ತವಕಿಸುತ್ತದೆ. <br /> <br /> ರಾತ್ರಿಯಿಂದ ಮುಂಜಾನೆ ಏಳೆಂಟು ಗಂಟೆಯವರೆಗೂ ಸಣ್ಣಗೆ ಚಳಿ ಕಾಡುತ್ತಿದೆ. ಆದರೆ, ಸೂರ್ಯ ಮುಗಿಲೆತ್ತರಕ್ಕೆ ಏರುತ್ತಿದ್ದಂತೆ `ಉಸ್! ಏನಾರ ಬಿಸಿಲ ಬೀಳಾಕ ಹತ್ತೈತಿ~ ಎಂಬ ಉದ್ಗಾರ ಜನರಿಂದ ತೇಲಿ ಬರುತ್ತಿವೆ. ಶಿವರಾತ್ರಿ ಕಳೆದ ಒಂದೆರಡು ದಿನಗಳಲ್ಲೇ ನಗರದಲ್ಲಿ ಬಿಸಿಲಿನ `ಝಳ~ ಏಕಾಏಕಿ ಹೆಚ್ಚತೊಡಗಿದೆ. <br /> <br /> ಮಧ್ಯಾಹ್ನ 11ರಿಂದ ಸಂಜೆ ನಾಲ್ಕೈದು ಗಂಟೆಯವರೆಗೂ ಬಿಸಿಲಿನ ದಗೆಯಿಂದ ಬಸವಳಿದ ಜನರು ತಂಪು ಪಾನೀಯ, ಎಳೆನೀರಿನ ಮೊರೆ ಹೋಗುತ್ತಿದ್ದಾರೆ. <br /> <br /> ನಗರದ ಗಣಪತಿಗಲ್ಲಿ, ಕಾಕತಿವೇಸ್, ಸಮಾದೇವಿ ರಸ್ತೆ, ಖಡೆಬಜಾರ್ ರಸ್ತೆಗಳಲ್ಲಿ ಒಂದಾದ ಮೇಲೆ ಒಂದರಂತೆ ತಳ್ಳುವ ಗಾಡಿಗಳಲ್ಲಿ `ಜ್ಯೂಸ್~ ಮಾರುವವರು ಸಿಗುತ್ತಿದ್ದಾರೆ. ಮಾರುಕಟ್ಟೆಗೆ ಬಂದವವರು ಬಿಸಿಲಿಂದ ಸುಸ್ತಾಗಿ ದಣಿವಾರಿಸಿಕೊಳ್ಳಲು `ಜ್ಯೂಸ್~ ಅಂಗಡಿಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಏಳೆಂಟು ರೂಪಾಯಿಗೆ ಒಂದು ಕಪ್ <br /> ಹಣ್ಣಿನ ರಸವನ್ನು ಹೀರಿ, ಮತ್ತೆ ಚೈತನ್ಯ ಪಡೆದುಕೊಂಡು ಮುನ್ನಡೆಯುತ್ತಾರೆ. <br /> <br /> `ಬಿಸಿಲಿನ ಝಳ ಹೆಚ್ಚಾಗಿದ್ದರಿಂದ ಮಧ್ಯಾಹ್ನದ ಹೊತ್ತಿಗೆ ನಮ್ಮ ಅಂಗಡಿಯ `ಜ್ಯೂಸ್~ ಕುಡಿಯಲು ಜನ ಮುಗಿ ಬೀಳುತ್ತಿದ್ದಾರೆ. ಮುಸುಂಬಿ, ಕಿತ್ತಳೆ, ನಿಂಬೆಹಣ್ಣಿನ ಜ್ಯೂಸ್ಗಳನ್ನೇ ಹೆಚ್ಚೆಚ್ಚು ಕುಡಿಯುತ್ತಿದ್ದಾರೆ. ಈಗ ಮೂರ್ನಾಲ್ಕು ತಿಂಗಳು ಅಷ್ಟೇ ನಮಗೆ ಉತ್ತಮ ವ್ಯಾಪಾರ ಆಗುತ್ತದೆ~ ಎನ್ನುತ್ತಾರೆ ಗಣಪತಿ ಗಲ್ಲಿಯಲ್ಲಿ ಜ್ಯೂಸ್ ಮಾರುವ ಉಸ್ಮಾನ್. <br /> <br /> ರಸ್ತೆ ಪಕ್ಕದಲ್ಲಿ ಇಟ್ಟುಕೊಂಡಿರುವ ಕಬ್ಬಿನ ರಸ, `ಕೋಲ್ಡ್ ಡ್ರಿಂಕ್ಸ್~ ಅಂಗಡಿಯವರಿಗೆ `ಹಬ್ಬ~ ಆರಂಭವಾಗಿದೆ. ಜನರು ದಣಿವಾರಿಸಿಕೊಳ್ಳಲು ಅಂಗಡಿಯವರು ಹೇಳಿದಷ್ಟು ಹಣ ನೀಡಿ ತಂಪು ಪಾನೀಯ ಕುಡಿದು ಹೋಗುತ್ತಿದ್ದಾರೆ. <br /> <strong>ಹಣ್ಣಿಗೆ ಬೇಡಿಕೆ: </strong>ಬೇಸಿಗೆ ಬರುತ್ತಿದ್ದಂತೆ ಮಾರುಕಟ್ಟೆಗೆ ಮುಸುಂಬಿ, ಕಿತ್ತಳೆ, ದ್ರಾಕ್ಷಿ, ಚಿಕ್ಕು, ಸೇಬು, ಸ್ಟ್ರಾಬೆರಿ ಹಣ್ಣುಗಳು ಲಗ್ಗೆ ಇಡುತ್ತಿವೆ. ಬಿಸಲಿನ ದಗೆ ಹೆಚ್ಚುತ್ತಿರುವುದರಿಂದ ಮನೆಯಲ್ಲಿ ಜ್ಯೂಸ್ ಮಾಡಿ ಕುಡಿಯಲೆಂದು ಮುಸುಂಬಿ, ಕಿತ್ತಳೆ, ಸ್ಟ್ರಾಬೆರಿ, ನಿಂಬೆಹಣ್ಣುಗಳನ್ನು ದುಬಾರಿ ಬೆಲೆ ನೀಡಿಯಾದರೂ ಜನರು ಕೊಂಡು ಹೋಗುತ್ತಿದ್ದಾರೆ. <br /> <br /> ನಗರದ ಪ್ರಮುಖ ರಸ್ತೆಯ ಪಕ್ಕದಲ್ಲಿ ಅಲ್ಲಲ್ಲಿ ಕಲ್ಲಂಗಡಿ ಹಣ್ಣುಗಳ ರಾಶಿಗಳನ್ನು ಹಾಕಿಕೊಂಡು ಮಾರಾಟಕ್ಕೆ ಕುಳಿತಿರುವ ದೃಶ್ಯ `ಬೇಸಿಗೆ~ ಬಂತು ಎಂಬುದನ್ನು ಸಾರಿ ಹೇಳುತ್ತಿದೆ. ಅಲ್ಲಲ್ಲಿ ಹೊಸದಾಗಿ ಎಳೆನೀರು ಮಾರುವವರು ಹುಟ್ಟಿಕೊಳ್ಳುತ್ತಿದ್ದಾರೆ. <br /> <br /> ಹೋಟೆಲ್, ಮೆಸ್ಗಳಲ್ಲಿ ಮಧ್ಯಾಹ್ನಕ್ಕೆ ಸ್ಪೆಶಲ್ ಮಸಾಲೆ ಮಜ್ಜಿಗೆ, ರಾಗಿ ಅಂಬಲಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಊಟದ ಜೊತೆಗೆ ಮಜ್ಜಿಗೆ, ರಾಗಿ ಅಂಬಲಿಯನ್ನು ಕುಡಿದು ಹೊಟ್ಟೆ ತಣ್ಣಗೆ ಮಾಡಿಕೊಳ್ಳುತ್ತಿದ್ದಾರೆ. <br /> <br /> <strong>ಸ್ವಚ್ಛತೆ ಅಗತ್ಯ: </strong>ಬಿಸಿಲಿನ ದಗೆ ಹೆಚ್ಚುತ್ತಿದ್ದಂತೆ ನಗರದ ಮಾರುಕಟ್ಟೆಯ ವಿವಿಧ ರಸ್ತೆಗಳ ಪಕ್ಕದ `ಕೋಲ್ಡ್ ಡ್ರಿಂಕ್ಸ್~, `ಜ್ಯೂಸ್~ ಅಂಗಡಿಗಳು ತಲೆ ಎತ್ತುತ್ತಿವೆ. ನೂರಾರು ಜನರು ಈ ಅಂಗಡಿಗಳಲ್ಲಿ ತಂಪು ಪಾನೀಯ <br /> ಕುಡಿಯುತ್ತಿರುವುದರಿಂದ ಸ್ವಚ್ಛತೆ ಕಾಪಾಡುತ್ತಿಲ್ಲ. <br /> <br /> ಕೆಲವು ತಳ್ಳುವ ಗಾಡಿಗಳಲ್ಲಿ ಶುದ್ಧ ನೀರು, ಐಸ್ಗಳನ್ನು ಬಳಸುತ್ತಿಲ್ಲ. ಇದರಿಂದ ರೋಗ ರುಜಿನ ಹರಡುವ ಸಾಧ್ಯತೆ ಇದೆ. ಹೀಗಾಗಿ ಕೋಲ್ಡ್ ಡ್ರಿಂಕ್ಸ್, ಜ್ಯೂಸ್ ಮಾರುವ ಅಂಗಡಿ ಅವರು ಜನರ ಆರೋಗ್ಯದ ದೃಷ್ಟಿಯಿಂದ ಸ್ವಚ್ಛತೆ ಕಾಪಾಡಬೇಕಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ: </strong>ನಗರದಲ್ಲೆಗ ಬಿಸಿಲಿನ ದಗೆ ಹಾಗೂ ಚಳಿ ನಡುವೆ `ಜುಗಲ್ ಬಂದಿ~ ನಡೆಯುತ್ತಿದೆ. ರಾತ್ರಿಯಾಗುತ್ತಿದ್ದಂತೆ ಚಳಿ ಮೈ ನಡುಗಿಸಿದರೆ, ಬೆಳಿಗ್ಗೆಯಿಂದ ಹೊತ್ತೇರುತ್ತಿದ್ದಂತೆ ಬಿಸಿಲಿನ ದಗೆಯಿಂದ ದಾಹ ಹೆಚ್ಚಿ ತಂಪು ಪಾನೀಯ ಕುಡಿಯಲು ಮನಸ್ಸು ತವಕಿಸುತ್ತದೆ. <br /> <br /> ರಾತ್ರಿಯಿಂದ ಮುಂಜಾನೆ ಏಳೆಂಟು ಗಂಟೆಯವರೆಗೂ ಸಣ್ಣಗೆ ಚಳಿ ಕಾಡುತ್ತಿದೆ. ಆದರೆ, ಸೂರ್ಯ ಮುಗಿಲೆತ್ತರಕ್ಕೆ ಏರುತ್ತಿದ್ದಂತೆ `ಉಸ್! ಏನಾರ ಬಿಸಿಲ ಬೀಳಾಕ ಹತ್ತೈತಿ~ ಎಂಬ ಉದ್ಗಾರ ಜನರಿಂದ ತೇಲಿ ಬರುತ್ತಿವೆ. ಶಿವರಾತ್ರಿ ಕಳೆದ ಒಂದೆರಡು ದಿನಗಳಲ್ಲೇ ನಗರದಲ್ಲಿ ಬಿಸಿಲಿನ `ಝಳ~ ಏಕಾಏಕಿ ಹೆಚ್ಚತೊಡಗಿದೆ. <br /> <br /> ಮಧ್ಯಾಹ್ನ 11ರಿಂದ ಸಂಜೆ ನಾಲ್ಕೈದು ಗಂಟೆಯವರೆಗೂ ಬಿಸಿಲಿನ ದಗೆಯಿಂದ ಬಸವಳಿದ ಜನರು ತಂಪು ಪಾನೀಯ, ಎಳೆನೀರಿನ ಮೊರೆ ಹೋಗುತ್ತಿದ್ದಾರೆ. <br /> <br /> ನಗರದ ಗಣಪತಿಗಲ್ಲಿ, ಕಾಕತಿವೇಸ್, ಸಮಾದೇವಿ ರಸ್ತೆ, ಖಡೆಬಜಾರ್ ರಸ್ತೆಗಳಲ್ಲಿ ಒಂದಾದ ಮೇಲೆ ಒಂದರಂತೆ ತಳ್ಳುವ ಗಾಡಿಗಳಲ್ಲಿ `ಜ್ಯೂಸ್~ ಮಾರುವವರು ಸಿಗುತ್ತಿದ್ದಾರೆ. ಮಾರುಕಟ್ಟೆಗೆ ಬಂದವವರು ಬಿಸಿಲಿಂದ ಸುಸ್ತಾಗಿ ದಣಿವಾರಿಸಿಕೊಳ್ಳಲು `ಜ್ಯೂಸ್~ ಅಂಗಡಿಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಏಳೆಂಟು ರೂಪಾಯಿಗೆ ಒಂದು ಕಪ್ <br /> ಹಣ್ಣಿನ ರಸವನ್ನು ಹೀರಿ, ಮತ್ತೆ ಚೈತನ್ಯ ಪಡೆದುಕೊಂಡು ಮುನ್ನಡೆಯುತ್ತಾರೆ. <br /> <br /> `ಬಿಸಿಲಿನ ಝಳ ಹೆಚ್ಚಾಗಿದ್ದರಿಂದ ಮಧ್ಯಾಹ್ನದ ಹೊತ್ತಿಗೆ ನಮ್ಮ ಅಂಗಡಿಯ `ಜ್ಯೂಸ್~ ಕುಡಿಯಲು ಜನ ಮುಗಿ ಬೀಳುತ್ತಿದ್ದಾರೆ. ಮುಸುಂಬಿ, ಕಿತ್ತಳೆ, ನಿಂಬೆಹಣ್ಣಿನ ಜ್ಯೂಸ್ಗಳನ್ನೇ ಹೆಚ್ಚೆಚ್ಚು ಕುಡಿಯುತ್ತಿದ್ದಾರೆ. ಈಗ ಮೂರ್ನಾಲ್ಕು ತಿಂಗಳು ಅಷ್ಟೇ ನಮಗೆ ಉತ್ತಮ ವ್ಯಾಪಾರ ಆಗುತ್ತದೆ~ ಎನ್ನುತ್ತಾರೆ ಗಣಪತಿ ಗಲ್ಲಿಯಲ್ಲಿ ಜ್ಯೂಸ್ ಮಾರುವ ಉಸ್ಮಾನ್. <br /> <br /> ರಸ್ತೆ ಪಕ್ಕದಲ್ಲಿ ಇಟ್ಟುಕೊಂಡಿರುವ ಕಬ್ಬಿನ ರಸ, `ಕೋಲ್ಡ್ ಡ್ರಿಂಕ್ಸ್~ ಅಂಗಡಿಯವರಿಗೆ `ಹಬ್ಬ~ ಆರಂಭವಾಗಿದೆ. ಜನರು ದಣಿವಾರಿಸಿಕೊಳ್ಳಲು ಅಂಗಡಿಯವರು ಹೇಳಿದಷ್ಟು ಹಣ ನೀಡಿ ತಂಪು ಪಾನೀಯ ಕುಡಿದು ಹೋಗುತ್ತಿದ್ದಾರೆ. <br /> <strong>ಹಣ್ಣಿಗೆ ಬೇಡಿಕೆ: </strong>ಬೇಸಿಗೆ ಬರುತ್ತಿದ್ದಂತೆ ಮಾರುಕಟ್ಟೆಗೆ ಮುಸುಂಬಿ, ಕಿತ್ತಳೆ, ದ್ರಾಕ್ಷಿ, ಚಿಕ್ಕು, ಸೇಬು, ಸ್ಟ್ರಾಬೆರಿ ಹಣ್ಣುಗಳು ಲಗ್ಗೆ ಇಡುತ್ತಿವೆ. ಬಿಸಲಿನ ದಗೆ ಹೆಚ್ಚುತ್ತಿರುವುದರಿಂದ ಮನೆಯಲ್ಲಿ ಜ್ಯೂಸ್ ಮಾಡಿ ಕುಡಿಯಲೆಂದು ಮುಸುಂಬಿ, ಕಿತ್ತಳೆ, ಸ್ಟ್ರಾಬೆರಿ, ನಿಂಬೆಹಣ್ಣುಗಳನ್ನು ದುಬಾರಿ ಬೆಲೆ ನೀಡಿಯಾದರೂ ಜನರು ಕೊಂಡು ಹೋಗುತ್ತಿದ್ದಾರೆ. <br /> <br /> ನಗರದ ಪ್ರಮುಖ ರಸ್ತೆಯ ಪಕ್ಕದಲ್ಲಿ ಅಲ್ಲಲ್ಲಿ ಕಲ್ಲಂಗಡಿ ಹಣ್ಣುಗಳ ರಾಶಿಗಳನ್ನು ಹಾಕಿಕೊಂಡು ಮಾರಾಟಕ್ಕೆ ಕುಳಿತಿರುವ ದೃಶ್ಯ `ಬೇಸಿಗೆ~ ಬಂತು ಎಂಬುದನ್ನು ಸಾರಿ ಹೇಳುತ್ತಿದೆ. ಅಲ್ಲಲ್ಲಿ ಹೊಸದಾಗಿ ಎಳೆನೀರು ಮಾರುವವರು ಹುಟ್ಟಿಕೊಳ್ಳುತ್ತಿದ್ದಾರೆ. <br /> <br /> ಹೋಟೆಲ್, ಮೆಸ್ಗಳಲ್ಲಿ ಮಧ್ಯಾಹ್ನಕ್ಕೆ ಸ್ಪೆಶಲ್ ಮಸಾಲೆ ಮಜ್ಜಿಗೆ, ರಾಗಿ ಅಂಬಲಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಊಟದ ಜೊತೆಗೆ ಮಜ್ಜಿಗೆ, ರಾಗಿ ಅಂಬಲಿಯನ್ನು ಕುಡಿದು ಹೊಟ್ಟೆ ತಣ್ಣಗೆ ಮಾಡಿಕೊಳ್ಳುತ್ತಿದ್ದಾರೆ. <br /> <br /> <strong>ಸ್ವಚ್ಛತೆ ಅಗತ್ಯ: </strong>ಬಿಸಿಲಿನ ದಗೆ ಹೆಚ್ಚುತ್ತಿದ್ದಂತೆ ನಗರದ ಮಾರುಕಟ್ಟೆಯ ವಿವಿಧ ರಸ್ತೆಗಳ ಪಕ್ಕದ `ಕೋಲ್ಡ್ ಡ್ರಿಂಕ್ಸ್~, `ಜ್ಯೂಸ್~ ಅಂಗಡಿಗಳು ತಲೆ ಎತ್ತುತ್ತಿವೆ. ನೂರಾರು ಜನರು ಈ ಅಂಗಡಿಗಳಲ್ಲಿ ತಂಪು ಪಾನೀಯ <br /> ಕುಡಿಯುತ್ತಿರುವುದರಿಂದ ಸ್ವಚ್ಛತೆ ಕಾಪಾಡುತ್ತಿಲ್ಲ. <br /> <br /> ಕೆಲವು ತಳ್ಳುವ ಗಾಡಿಗಳಲ್ಲಿ ಶುದ್ಧ ನೀರು, ಐಸ್ಗಳನ್ನು ಬಳಸುತ್ತಿಲ್ಲ. ಇದರಿಂದ ರೋಗ ರುಜಿನ ಹರಡುವ ಸಾಧ್ಯತೆ ಇದೆ. ಹೀಗಾಗಿ ಕೋಲ್ಡ್ ಡ್ರಿಂಕ್ಸ್, ಜ್ಯೂಸ್ ಮಾರುವ ಅಂಗಡಿ ಅವರು ಜನರ ಆರೋಗ್ಯದ ದೃಷ್ಟಿಯಿಂದ ಸ್ವಚ್ಛತೆ ಕಾಪಾಡಬೇಕಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>