<p>ಬಾಲಸೋರ್ (ಒಡಿಶಾ): ವೈರಿ ಸಿಡಿತಲೆ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವುಳ್ಳ ದೇಶೀಯವಾಗಿ ಅಭಿವೃದ್ಧಿ ಪಡಿಸಿದ ~ನಿರೋಧಕ ಕ್ಷಿಪಣಿ~ಯನ್ನು ಭಾರತ ಭಾನುವಾರ ಯಶಸ್ವಿಯಾಗಿ ಪರೀಕ್ಷಿಸಿತು. ಒಡಿಶಾ ಕರಾವಳಿ ಸಮೀಪ ಸಮುದ್ರದಲ್ಲಿನ ವ್ಹೀಲರ್ ದ್ವೀಪದ ಸಮಗ್ರ ಪರೀಕ್ಷಾ ವಲಯದಲ್ಲಿ ಈ ಪರೀಕ್ಷೆ ನಡೆಯಿತು.<br /> <br /> ಬಹುವಿಧ ಸಿಡಿತಲೆ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ಗುರಿಯೊಂದಿಗೆ ಒಡಿಶಾ ಕರಾವಳಿ ಸಮೀಪದ ಎರಡು ಉಡಾವಣಾ ಸ್ಥಳಗಳಿಂದ ಈ ಕ್ಷಿಪಣಿ ಪರೀಕ್ಷೆ ನಡೆಸಲಾಯಿತು ಎಂದು ರಕ್ಷಣಾ ಮೂಲಗಳು ತಿಳಿಸಿದವು.<br /> <br /> ಪರೀಕ್ಷೆಯನ್ನು ಯಶಸ್ವೀ ಎಂಬುದಾಗಿ ಬಣ್ಣಿಸಿದ ಮೂಲಗಳು ~ಉದ್ದೇಶಿತ ಫಲಿತಾಂಶವನ್ನು ನಿಖರವಾಗಿ ಪಡೆಯುವ ಸಲುವಾಗಿ ಈ ಕಾರ್ಯಾಚರಣೆ ನಡೆಸಲಾಯಿತು ಎಂದು ಹೇಳಿದವು.<br /> <br /> ವೈರಿ ಸಿಡಿತಲೆ ಕ್ಷಿಪಣಿಯನ್ನು ಹೊಡೆದುರುಳಿಸುವ ಗುರಿಯೊಂದಿಗೆ ನೆಲದಿಂದ ನೆಲಕ್ಕೆ ಹಾರುವ ಪರಿಷ್ಕೃತ ~ಪೃಥ್ವಿ~ ನಿರೋಧಕ ಕ್ಷಿಪಣಿಯನ್ನು ಮೊದಲು ಬೆಳಗ್ಗೆ 9.33 ಗಂಟೆಗೆ ಸಂಚಾರಿ ಉಡಾವಣಾ ವಾಹನದ ಮೂಲಕ ಇಲ್ಲಿಗೆ 15 ಕಿ.ಮೀ. ದೂರದ ಚಂಡೀಪುರ ಸಮುದ್ರದಲ್ಲಿ ಉಡಾಯಿಸಲಾಯಿತು ಎಂದು ಮೂಲಗಳು ವಿವರಿಸಿದವು. <br /> <br /> ನಾಲ್ಕು ನಿಮಿಷಗಳ ಒಳಗಾಗಿ ಚಂಡೀಪುರದಿಂದ 70 ಕಿಮೀ ದೂರದಲ್ಲಿನ ಸಮುದ್ರದೊಳಗಿನ ವ್ಹೀಲರ್ ದ್ವೀಪದಿಂದ ಆತ್ಯಾಧುನಿಕ ವೈಮಾನಿಕ ರಕ್ಷಣಾ ನಿರೋಧಕ ಕ್ಷಿಪಣಿ ರೇಡಾರ್ ಗಳ ಮೂಲಕ ಸಂಕೇತಗಳನ್ನು ಗ್ರಹಿಸಿ ನಾಲ್ಕು ಪಟ್ಟು ವೇಗದೊಂದಿಗೆ ಬಾನಿನತ್ತ ನೆಗೆಯಿತು ಎಂದು ಮೂಲಗಳು ಹೇಳಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಾಲಸೋರ್ (ಒಡಿಶಾ): ವೈರಿ ಸಿಡಿತಲೆ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವುಳ್ಳ ದೇಶೀಯವಾಗಿ ಅಭಿವೃದ್ಧಿ ಪಡಿಸಿದ ~ನಿರೋಧಕ ಕ್ಷಿಪಣಿ~ಯನ್ನು ಭಾರತ ಭಾನುವಾರ ಯಶಸ್ವಿಯಾಗಿ ಪರೀಕ್ಷಿಸಿತು. ಒಡಿಶಾ ಕರಾವಳಿ ಸಮೀಪ ಸಮುದ್ರದಲ್ಲಿನ ವ್ಹೀಲರ್ ದ್ವೀಪದ ಸಮಗ್ರ ಪರೀಕ್ಷಾ ವಲಯದಲ್ಲಿ ಈ ಪರೀಕ್ಷೆ ನಡೆಯಿತು.<br /> <br /> ಬಹುವಿಧ ಸಿಡಿತಲೆ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ಗುರಿಯೊಂದಿಗೆ ಒಡಿಶಾ ಕರಾವಳಿ ಸಮೀಪದ ಎರಡು ಉಡಾವಣಾ ಸ್ಥಳಗಳಿಂದ ಈ ಕ್ಷಿಪಣಿ ಪರೀಕ್ಷೆ ನಡೆಸಲಾಯಿತು ಎಂದು ರಕ್ಷಣಾ ಮೂಲಗಳು ತಿಳಿಸಿದವು.<br /> <br /> ಪರೀಕ್ಷೆಯನ್ನು ಯಶಸ್ವೀ ಎಂಬುದಾಗಿ ಬಣ್ಣಿಸಿದ ಮೂಲಗಳು ~ಉದ್ದೇಶಿತ ಫಲಿತಾಂಶವನ್ನು ನಿಖರವಾಗಿ ಪಡೆಯುವ ಸಲುವಾಗಿ ಈ ಕಾರ್ಯಾಚರಣೆ ನಡೆಸಲಾಯಿತು ಎಂದು ಹೇಳಿದವು.<br /> <br /> ವೈರಿ ಸಿಡಿತಲೆ ಕ್ಷಿಪಣಿಯನ್ನು ಹೊಡೆದುರುಳಿಸುವ ಗುರಿಯೊಂದಿಗೆ ನೆಲದಿಂದ ನೆಲಕ್ಕೆ ಹಾರುವ ಪರಿಷ್ಕೃತ ~ಪೃಥ್ವಿ~ ನಿರೋಧಕ ಕ್ಷಿಪಣಿಯನ್ನು ಮೊದಲು ಬೆಳಗ್ಗೆ 9.33 ಗಂಟೆಗೆ ಸಂಚಾರಿ ಉಡಾವಣಾ ವಾಹನದ ಮೂಲಕ ಇಲ್ಲಿಗೆ 15 ಕಿ.ಮೀ. ದೂರದ ಚಂಡೀಪುರ ಸಮುದ್ರದಲ್ಲಿ ಉಡಾಯಿಸಲಾಯಿತು ಎಂದು ಮೂಲಗಳು ವಿವರಿಸಿದವು. <br /> <br /> ನಾಲ್ಕು ನಿಮಿಷಗಳ ಒಳಗಾಗಿ ಚಂಡೀಪುರದಿಂದ 70 ಕಿಮೀ ದೂರದಲ್ಲಿನ ಸಮುದ್ರದೊಳಗಿನ ವ್ಹೀಲರ್ ದ್ವೀಪದಿಂದ ಆತ್ಯಾಧುನಿಕ ವೈಮಾನಿಕ ರಕ್ಷಣಾ ನಿರೋಧಕ ಕ್ಷಿಪಣಿ ರೇಡಾರ್ ಗಳ ಮೂಲಕ ಸಂಕೇತಗಳನ್ನು ಗ್ರಹಿಸಿ ನಾಲ್ಕು ಪಟ್ಟು ವೇಗದೊಂದಿಗೆ ಬಾನಿನತ್ತ ನೆಗೆಯಿತು ಎಂದು ಮೂಲಗಳು ಹೇಳಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>