<p><strong>ಶ್ರೀರಂಗಪಟ್ಟಣ:</strong> 2001ರಲ್ಲಿ ಆರಂಭಿಸಲಾದ ನೀರು ಬಳಕೆದಾರರ ಸಹಕಾರ ಸಂಘಗಳು ಅಗತ್ಯ ಸಂಪನ್ಮೂಲದ ಕೊರತೆಯಿಂದ ನಿಷ್ಕ್ರಿಯವಾಗುತ್ತಿದ್ದು, ಸಂಘಗಳ ಸಬಲೀಕರಣಕ್ಕೆ ಸರ್ಕಾರ ಅಗತ್ಯ ನೆರವು ನೀಡಬೇಕು ಎಂದು ಕೆಆರ್ಎಸ್, ಹೇಮಾವತಿ ಹಾಗೂ ಹಾರಂಗಿ ಅಚ್ಚುಕಟ್ಟು ಪ್ರದೇಶದ ನೀರು ಬಳಕೆದಾರರ ಸಂಘಗಳ ಮಂಡಳದ ಪದಾಧಿಕಾರಿಗಳು ಒತ್ತಾಯಿಸಿದರು.<br /> <br /> ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಮೂರೂ ಜಲಾಶಯಗಳ ಅಚ್ಚುಕಟ್ಟು ಪ್ರದೇಶದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾ ಮಂಡಳದ ಪದಾಧಿಕಾರಿಗಳ ಸಭೆಯಲ್ಲಿ ಈ ಒತ್ತಾಯ ಮಾಡಿದರು. ಎಚ್.ಕೆ. ಪಾಟೀಲ್ ಅವರು ಜಲ ಸಂಪನ್ಮೂಲ ಸಚಿವರಾಗಿದ್ದಾಗ ಆರಂಭಿಸಲಾದ ಸಂಘಗಳಿಗೆ ಉತ್ತೇಜನ ಸಿಗುತ್ತಿಲ್ಲ. ನೀರಿನ ಕರ ವಸೂಲಿ ಆದೇಶವನ್ನು ಜಾರಿಗೆ ತರಬೇಕು.<br /> <br /> ಸಂಘಗಳ ಗೋದಾಮು ಮತ್ತು ಕಚೇರಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು. ಒಡಂಬಡಿಕೆಯಾದ ಸಂಘಗಳಿಗೆ ರೂ 3 ಲಕ್ಷ ಬೀಜಧನ ನೀಡಬೇಕು. ಪ್ರತಿ ಸಂಘಗಳಿಗೆ ಪೀಠೋಪಕರಣ ಖರೀದಿಸಲು ರೂ 25 ಸಾವಿರ ಬಿಡುಗಡೆ ಮಾಡಬೇಕು. ಮಂಡಳಗಳಿಗೆ ತಲಾ ರೂ10 ಲಕ್ಷ ನಿಖರು ಠೇವಣಿ ಹಣ ನೀಡುತ್ತಿದ್ದು, ಅದನ್ನು ರೂ 50 ಲಕ್ಷಕ್ಕೆ ಏರಿಸಬೇಕು.<br /> <br /> ನೀರು ಬಳಕೆದಾರರ ಸಂಘಗಳಿಗೆ ತುರ್ತು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಅಧಿಕಾರ ನೀಡಬೇಕು ಎಂದು ಒತ್ತಾಯಿಸಿ ಕೆಆರ್ಎಸ್ ವ್ಯಾಪ್ತಿಯ ಮಂಡಳದ ಅಧ್ಯಕ್ಷ ಪಂಚಲಿಂಗೇಗೌಡ, ಹಾರಂಗಿ ಮಂಡಳದ ಅಧ್ಯಕ್ಷ ಚೌಡೇಗೌಡ, ಹೇಮಾವತಿ ಮಂಡಳದ ಅಧ್ಯಕ್ಷ ಆರ್.ಎ.ನಾಗಣ್ಣ ಇತರರು ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ಮನವಿ ಸಲ್ಲಿಸಿದರು.<br /> <br /> ಮನವಿ ಸ್ವೀಕರಿಸಿ ಮಾತನಾಡಿದ ಕೆ.ಎಸ್.ಪುಟ್ಟಣ್ಣಯ್ಯ, ನೀರನ್ನು ರಾಜಸ್ತಾನದ ಮಾದರಿಯಲ್ಲಿ ಆದ್ಯತಾ ವಲಯ ಎಂದು ಘೋಷಿಸಬೇಕು. ಹಳೇ ಮೈಸೂರು ಭಾಗದಲ್ಲಿ ನೀರಿನ ಮೂಲಗಳು ಇದ್ದರೂ ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ.<br /> <br /> ಗ್ರಾಮ ಪಂಚಾಯಿತಿಗಳನ್ನು ಸರ್ಕಾರ ಎಂದು ಘೋಷಿಸಿ ಅವುಗಳಿಗೆ ನೀರು ನಿರ್ವಹಣೆಯ ಹೊಣೆ ನೀಡಬೇಕು ಎಂದ ಅವರು, ಈ ಬಗ್ಗೆ ಸದನದಲ್ಲಿ ವಿಷಯ ಪ್ರಸ್ತಾಪಿಸುವುದಾಗಿ ತಿಳಿಸಿದರು. ಚನ್ನರಾಯಪಟ್ಟಣದ ಶೆಟ್ಟಿಗೌಡ, ಟಿ.ಎಂ.ಹೊಸೂರು ಮಹೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀರಂಗಪಟ್ಟಣ:</strong> 2001ರಲ್ಲಿ ಆರಂಭಿಸಲಾದ ನೀರು ಬಳಕೆದಾರರ ಸಹಕಾರ ಸಂಘಗಳು ಅಗತ್ಯ ಸಂಪನ್ಮೂಲದ ಕೊರತೆಯಿಂದ ನಿಷ್ಕ್ರಿಯವಾಗುತ್ತಿದ್ದು, ಸಂಘಗಳ ಸಬಲೀಕರಣಕ್ಕೆ ಸರ್ಕಾರ ಅಗತ್ಯ ನೆರವು ನೀಡಬೇಕು ಎಂದು ಕೆಆರ್ಎಸ್, ಹೇಮಾವತಿ ಹಾಗೂ ಹಾರಂಗಿ ಅಚ್ಚುಕಟ್ಟು ಪ್ರದೇಶದ ನೀರು ಬಳಕೆದಾರರ ಸಂಘಗಳ ಮಂಡಳದ ಪದಾಧಿಕಾರಿಗಳು ಒತ್ತಾಯಿಸಿದರು.<br /> <br /> ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಮೂರೂ ಜಲಾಶಯಗಳ ಅಚ್ಚುಕಟ್ಟು ಪ್ರದೇಶದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾ ಮಂಡಳದ ಪದಾಧಿಕಾರಿಗಳ ಸಭೆಯಲ್ಲಿ ಈ ಒತ್ತಾಯ ಮಾಡಿದರು. ಎಚ್.ಕೆ. ಪಾಟೀಲ್ ಅವರು ಜಲ ಸಂಪನ್ಮೂಲ ಸಚಿವರಾಗಿದ್ದಾಗ ಆರಂಭಿಸಲಾದ ಸಂಘಗಳಿಗೆ ಉತ್ತೇಜನ ಸಿಗುತ್ತಿಲ್ಲ. ನೀರಿನ ಕರ ವಸೂಲಿ ಆದೇಶವನ್ನು ಜಾರಿಗೆ ತರಬೇಕು.<br /> <br /> ಸಂಘಗಳ ಗೋದಾಮು ಮತ್ತು ಕಚೇರಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು. ಒಡಂಬಡಿಕೆಯಾದ ಸಂಘಗಳಿಗೆ ರೂ 3 ಲಕ್ಷ ಬೀಜಧನ ನೀಡಬೇಕು. ಪ್ರತಿ ಸಂಘಗಳಿಗೆ ಪೀಠೋಪಕರಣ ಖರೀದಿಸಲು ರೂ 25 ಸಾವಿರ ಬಿಡುಗಡೆ ಮಾಡಬೇಕು. ಮಂಡಳಗಳಿಗೆ ತಲಾ ರೂ10 ಲಕ್ಷ ನಿಖರು ಠೇವಣಿ ಹಣ ನೀಡುತ್ತಿದ್ದು, ಅದನ್ನು ರೂ 50 ಲಕ್ಷಕ್ಕೆ ಏರಿಸಬೇಕು.<br /> <br /> ನೀರು ಬಳಕೆದಾರರ ಸಂಘಗಳಿಗೆ ತುರ್ತು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಅಧಿಕಾರ ನೀಡಬೇಕು ಎಂದು ಒತ್ತಾಯಿಸಿ ಕೆಆರ್ಎಸ್ ವ್ಯಾಪ್ತಿಯ ಮಂಡಳದ ಅಧ್ಯಕ್ಷ ಪಂಚಲಿಂಗೇಗೌಡ, ಹಾರಂಗಿ ಮಂಡಳದ ಅಧ್ಯಕ್ಷ ಚೌಡೇಗೌಡ, ಹೇಮಾವತಿ ಮಂಡಳದ ಅಧ್ಯಕ್ಷ ಆರ್.ಎ.ನಾಗಣ್ಣ ಇತರರು ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ಮನವಿ ಸಲ್ಲಿಸಿದರು.<br /> <br /> ಮನವಿ ಸ್ವೀಕರಿಸಿ ಮಾತನಾಡಿದ ಕೆ.ಎಸ್.ಪುಟ್ಟಣ್ಣಯ್ಯ, ನೀರನ್ನು ರಾಜಸ್ತಾನದ ಮಾದರಿಯಲ್ಲಿ ಆದ್ಯತಾ ವಲಯ ಎಂದು ಘೋಷಿಸಬೇಕು. ಹಳೇ ಮೈಸೂರು ಭಾಗದಲ್ಲಿ ನೀರಿನ ಮೂಲಗಳು ಇದ್ದರೂ ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ.<br /> <br /> ಗ್ರಾಮ ಪಂಚಾಯಿತಿಗಳನ್ನು ಸರ್ಕಾರ ಎಂದು ಘೋಷಿಸಿ ಅವುಗಳಿಗೆ ನೀರು ನಿರ್ವಹಣೆಯ ಹೊಣೆ ನೀಡಬೇಕು ಎಂದ ಅವರು, ಈ ಬಗ್ಗೆ ಸದನದಲ್ಲಿ ವಿಷಯ ಪ್ರಸ್ತಾಪಿಸುವುದಾಗಿ ತಿಳಿಸಿದರು. ಚನ್ನರಾಯಪಟ್ಟಣದ ಶೆಟ್ಟಿಗೌಡ, ಟಿ.ಎಂ.ಹೊಸೂರು ಮಹೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>