<p><strong>ಟೋಕಿಯೊ (ಎಎಫ್ಪಿ):</strong> ಸ್ಥಗಿತಗೊಂಡಿದ್ದ ಎರಡು ಪರಮಾಣು ಘಟಕಗಳನ್ನು ಮತ್ತೆ ಆರಂಭಿಸುವ ಜಪಾನ್ ನಿರ್ಧಾರವು ಇದೀಗ ಮಾಧ್ಯಮ ಹಾಗೂ ಪರಿಸರ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ.<br /> <br /> ಫುಕುಶಿಮಾ ದುರಂತದ ಹಿನ್ನೆಲೆಯಲ್ಲಿ ಪರಮಾಣು ಸ್ಥಾವರಗಳ ಸುರಕ್ಷೆಯ ಬಗ್ಗೆ ತೀವ್ರ ಆತಂಕ ಎದುರಾಗಿದೆ.<br /> `ಸರ್ಕಾರ ಅವಸರದಲ್ಲಿ ಈ ಕೆಲಸಕ್ಕೆ ಯಾಕೆ ಮುಂದಾಗಿದೆ ಎನ್ನುವುದೇ ಅರ್ಥವಾಗುತ್ತಿಲ್ಲ. ಇವುಗಳ ಸುರಕ್ಷೆಯನ್ನು ಇನ್ನಷ್ಟು ಖಾತ್ರಿಗೊಳಿಸಿಕೊಳ್ಳಬೇಕಿದೆ~ ಎಂದು ಪ್ರಮುಖ ಪತ್ರಿಕೆ `ಮೈನಿಶಿ ಶಿಂಬನ್~ ಸಂಪಾದಕೀಯದಲ್ಲಿ ಹೇಳಿದೆ.<br /> <br /> `ಬೇಸಿಗೆಯಲ್ಲಿ ವಿದ್ಯುತ್ ಕೊರತೆ ನೀಗಿಸಲು ದೇಶದ ಪಶ್ಚಿಮ ಭಾಗದಲ್ಲಿರುವ ಒಯ್ ಪರಮಾಣು ಸ್ಥಾವರವನ್ನು ಪುನರಾರಂಭಿಸುವ ಅಗತ್ಯವಿದೆ~ ಎಂದು ಶುಕ್ರವಾರ ಪ್ರಧಾನಿ ಯೊಶಿಹಿಕೊ ನೊಡಾ ಅವರು ಹೇಳಿದ್ದರು.<br /> `ದೇಶದಲ್ಲಿ ವಿದ್ಯುತ್ ಕೊರತೆ ಉಂಟಾಗುವುದಿಲ್ಲ ಎನ್ನುವುದು ಪ್ರತ್ಯೇಕ ಅಧ್ಯಯನಗಳಿಂದ ತಿಳಿದು ಬಂದಿದೆ.<br /> <br /> ವಿಪತ್ತು ನಿರ್ವಹಣೆಗೆ ಪರಮಾಣು ಉದ್ದಿಮೆ ಹಾಗೂ ಸರ್ಕಾರ ಎರಡೂ ವಿಫಲವಾಗಿವೆ. ಆದ್ದರಿಂದ ಮತ್ತೆ ಈ ಪರಮಾಣು ಘಟಕಗಳನ್ನು ಆರಂಭಿಸುವ ತುರ್ತು ಏನಿದೆ?~ ಎಂದು ಗ್ರೀನ್ಪೀಸ್ನ ಜಪಾನ್ ವ್ಯವಸ್ಥಾಪಕ ವಕಾವೊ ಹನಾವೊಕಾ ಪ್ರಶ್ನಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಟೋಕಿಯೊ (ಎಎಫ್ಪಿ):</strong> ಸ್ಥಗಿತಗೊಂಡಿದ್ದ ಎರಡು ಪರಮಾಣು ಘಟಕಗಳನ್ನು ಮತ್ತೆ ಆರಂಭಿಸುವ ಜಪಾನ್ ನಿರ್ಧಾರವು ಇದೀಗ ಮಾಧ್ಯಮ ಹಾಗೂ ಪರಿಸರ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ.<br /> <br /> ಫುಕುಶಿಮಾ ದುರಂತದ ಹಿನ್ನೆಲೆಯಲ್ಲಿ ಪರಮಾಣು ಸ್ಥಾವರಗಳ ಸುರಕ್ಷೆಯ ಬಗ್ಗೆ ತೀವ್ರ ಆತಂಕ ಎದುರಾಗಿದೆ.<br /> `ಸರ್ಕಾರ ಅವಸರದಲ್ಲಿ ಈ ಕೆಲಸಕ್ಕೆ ಯಾಕೆ ಮುಂದಾಗಿದೆ ಎನ್ನುವುದೇ ಅರ್ಥವಾಗುತ್ತಿಲ್ಲ. ಇವುಗಳ ಸುರಕ್ಷೆಯನ್ನು ಇನ್ನಷ್ಟು ಖಾತ್ರಿಗೊಳಿಸಿಕೊಳ್ಳಬೇಕಿದೆ~ ಎಂದು ಪ್ರಮುಖ ಪತ್ರಿಕೆ `ಮೈನಿಶಿ ಶಿಂಬನ್~ ಸಂಪಾದಕೀಯದಲ್ಲಿ ಹೇಳಿದೆ.<br /> <br /> `ಬೇಸಿಗೆಯಲ್ಲಿ ವಿದ್ಯುತ್ ಕೊರತೆ ನೀಗಿಸಲು ದೇಶದ ಪಶ್ಚಿಮ ಭಾಗದಲ್ಲಿರುವ ಒಯ್ ಪರಮಾಣು ಸ್ಥಾವರವನ್ನು ಪುನರಾರಂಭಿಸುವ ಅಗತ್ಯವಿದೆ~ ಎಂದು ಶುಕ್ರವಾರ ಪ್ರಧಾನಿ ಯೊಶಿಹಿಕೊ ನೊಡಾ ಅವರು ಹೇಳಿದ್ದರು.<br /> `ದೇಶದಲ್ಲಿ ವಿದ್ಯುತ್ ಕೊರತೆ ಉಂಟಾಗುವುದಿಲ್ಲ ಎನ್ನುವುದು ಪ್ರತ್ಯೇಕ ಅಧ್ಯಯನಗಳಿಂದ ತಿಳಿದು ಬಂದಿದೆ.<br /> <br /> ವಿಪತ್ತು ನಿರ್ವಹಣೆಗೆ ಪರಮಾಣು ಉದ್ದಿಮೆ ಹಾಗೂ ಸರ್ಕಾರ ಎರಡೂ ವಿಫಲವಾಗಿವೆ. ಆದ್ದರಿಂದ ಮತ್ತೆ ಈ ಪರಮಾಣು ಘಟಕಗಳನ್ನು ಆರಂಭಿಸುವ ತುರ್ತು ಏನಿದೆ?~ ಎಂದು ಗ್ರೀನ್ಪೀಸ್ನ ಜಪಾನ್ ವ್ಯವಸ್ಥಾಪಕ ವಕಾವೊ ಹನಾವೊಕಾ ಪ್ರಶ್ನಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>