<p><strong>ಬೆಂಗಳೂರು: </strong> ಯುಗಾದಿ ಹಬ್ಬದ ಪ್ರಯುಕ್ತ ಸಮನ್ವಯ ವೇದಿಕೆಯು ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಸಂತ ಸಂಭ್ರಮದ ಕಾಯಕ್ರಮದಲ್ಲಿ ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್ ಅವರು ತಮ್ಮ ಹಾಸ್ಯ ಚಟಾಕಿಯಿಂದ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದರು.<br /> <br /> `ಗಂಡ ಹೆಂಡತಿಯರ ಜಗಳ ಒಂದು ರೀತಿಯ ಅಡುಗೆ ಮನೆಯ ಸಾಮಾನಿನಂತೆ. ಸದಾ ಪ್ರತಿಷ್ಠೆ ಹೊಂದಿರುವುದರಿಂದ ಗಂಡ ಪ್ರೆಸ್ಟಿಜ್ ಕುಕ್ಕರ್. ಹೆಂಡತಿ ಪಾತ್ರೆಗಳನ್ನು ಕುಕ್ಕುವುದರಿಂದ ಪ್ರೆಷರ್ ಕುಕ್ಕರ್. ಇವರಿಬ್ಬರ ನಡುವೆ ಬಡವಾಗುವ ಮಕ್ಕಳು ಪಿಜೆನ್ ಮತ್ತು ಬಟರ್ಫ್ಲೈ` ಎಂದು ವೈ.ವಿ.ಗುಂಡೂರಾವ್ ಅವರ ಮಾತಿಗೆ ಜನರೆಲ್ಲ ಗೊಳ್ಳೆಂದು ನಕ್ಕರು.<br /> <br /> `ಜೀವನದಲ್ಲಿ ಸದಾ ಸಂತೋಷದಿಂದ ಇರಬೇಕಾದರೆ ಯಾವಾಗಲೂ ಹಾಸ್ಯ ಪ್ರವೃತ್ತಿಯನ್ನು ಅಳವಡಿಸಿಕೊಳ್ಳಬೇಕು. ಸಂಸ್ಥೆ, ಸಮಾಜ ಮತ್ತು ಸಂಸಾರ ಈ ಮೂರು ಅಂಶಗಳು ಜೀವನದಲ್ಲಿ ಬಹುಮುಖ್ಯ ಪ್ರಾತ್ರ ವಹಿಸುತ್ತವೆ~ ಎಂದು ಹೇಳಿದರು. <br /> <br /> ನಂತರ ನಡೆದ `ಗೀತ ಸಂಭ್ರಮ~ ಕಾರ್ಯಕ್ರಮದಲ್ಲಿ ವೈ.ಕೆ. ಮುದ್ದುಕೃಷ್ಣ, ಅರ್ಚನಾ ಉಡುಪ, ಕೆ.ಎಸ್.ಸುರೇಖ ಹಾಗೂ ಉದಯ ಅಂಕೋಲ ಅವರು ಗಾಯನ ಕಾಯರ್ರ್ಕ್ರಮ ನಡೆಸಿಕೊಟ್ಟರು. ವೇದಿಕೆ ಸದಸ್ಯರಿಂದ `ಕಸ್ತೂರಿ ಘಮಲು~ ಕಿರು ಪ್ರಹಸನ ಪ್ರದರ್ಶಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong> ಯುಗಾದಿ ಹಬ್ಬದ ಪ್ರಯುಕ್ತ ಸಮನ್ವಯ ವೇದಿಕೆಯು ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಸಂತ ಸಂಭ್ರಮದ ಕಾಯಕ್ರಮದಲ್ಲಿ ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್ ಅವರು ತಮ್ಮ ಹಾಸ್ಯ ಚಟಾಕಿಯಿಂದ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದರು.<br /> <br /> `ಗಂಡ ಹೆಂಡತಿಯರ ಜಗಳ ಒಂದು ರೀತಿಯ ಅಡುಗೆ ಮನೆಯ ಸಾಮಾನಿನಂತೆ. ಸದಾ ಪ್ರತಿಷ್ಠೆ ಹೊಂದಿರುವುದರಿಂದ ಗಂಡ ಪ್ರೆಸ್ಟಿಜ್ ಕುಕ್ಕರ್. ಹೆಂಡತಿ ಪಾತ್ರೆಗಳನ್ನು ಕುಕ್ಕುವುದರಿಂದ ಪ್ರೆಷರ್ ಕುಕ್ಕರ್. ಇವರಿಬ್ಬರ ನಡುವೆ ಬಡವಾಗುವ ಮಕ್ಕಳು ಪಿಜೆನ್ ಮತ್ತು ಬಟರ್ಫ್ಲೈ` ಎಂದು ವೈ.ವಿ.ಗುಂಡೂರಾವ್ ಅವರ ಮಾತಿಗೆ ಜನರೆಲ್ಲ ಗೊಳ್ಳೆಂದು ನಕ್ಕರು.<br /> <br /> `ಜೀವನದಲ್ಲಿ ಸದಾ ಸಂತೋಷದಿಂದ ಇರಬೇಕಾದರೆ ಯಾವಾಗಲೂ ಹಾಸ್ಯ ಪ್ರವೃತ್ತಿಯನ್ನು ಅಳವಡಿಸಿಕೊಳ್ಳಬೇಕು. ಸಂಸ್ಥೆ, ಸಮಾಜ ಮತ್ತು ಸಂಸಾರ ಈ ಮೂರು ಅಂಶಗಳು ಜೀವನದಲ್ಲಿ ಬಹುಮುಖ್ಯ ಪ್ರಾತ್ರ ವಹಿಸುತ್ತವೆ~ ಎಂದು ಹೇಳಿದರು. <br /> <br /> ನಂತರ ನಡೆದ `ಗೀತ ಸಂಭ್ರಮ~ ಕಾರ್ಯಕ್ರಮದಲ್ಲಿ ವೈ.ಕೆ. ಮುದ್ದುಕೃಷ್ಣ, ಅರ್ಚನಾ ಉಡುಪ, ಕೆ.ಎಸ್.ಸುರೇಖ ಹಾಗೂ ಉದಯ ಅಂಕೋಲ ಅವರು ಗಾಯನ ಕಾಯರ್ರ್ಕ್ರಮ ನಡೆಸಿಕೊಟ್ಟರು. ವೇದಿಕೆ ಸದಸ್ಯರಿಂದ `ಕಸ್ತೂರಿ ಘಮಲು~ ಕಿರು ಪ್ರಹಸನ ಪ್ರದರ್ಶಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>