<p><strong>ನವದೆಹಲಿ(ಪಿಟಿಐ/ಐಎಎನ್ಎಸ್):</strong> ಪೊಲೀಸ್ ಪಡೆಗಳು ನಾಗರಿಕ ಆಡಳಿತ ಮತ್ತು ಶಾಂತಿಪಾಲನೆಯ ಬೆನ್ನೆಲುಬಾಗಿದ್ದು, ಪೊಲೀಸರಿಗೆ ಯಶಸ್ವಿ ಕಾರ್ಯನಿರ್ವಹಣೆಗಾಗಿ ಉತ್ತಮ ತರಬೇತಿ ಮತ್ತು ಸಾರ್ವಜನಿಕರರೊಂದಿಗೆ ವ್ಯವಹರಿಸುವಾಗ ಒಳ್ಳೆಯ ನಡವಳಿಕೆ ತೋರಲು ಸೂಕ್ತ ಸಲಹೆಗಳನ್ನು ನೀಡಬೇಕಾಗಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಶುಕ್ರವಾರ ಇಲ್ಲಿ ನುಡಿದರು.<br /> <br /> ಗುಪ್ತಚರ ದಳ ಏರ್ಪಡಿಸಿದ್ದ ದೇಶದ ಡಿಜಿಪಿ, ಐಜಿಪಿ ಮತ್ತಿತರ ಉನ್ನತ ಪೊಲೀಸ್ ಅಧಿಕಾರಿಗಳ ಮೂರು ದಿನಗಳ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, `ಪೊಲೀಸ್ ಪಡೆಗಳ ಆಧಾರ ಸ್ತಂಭವಾಗಿರುವ ಪೊಲೀಸರು, ಇಲಾಖೆಯ ಒಟ್ಟಾರೆ ಬಲದಲ್ಲಿ ಶೇ 87ರಷ್ಟು ಸಂಖ್ಯೆಯಲ್ಲಿದ್ದಾರೆ~ ಎಂದರು.<br /> <br /> `ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ವಿಶ್ವಾಸ ಮೂಡಿಸುವ ಅಗತ್ಯವಿದೆ. ಉತ್ತಮ ಮೂಲಸೌಕರ್ಯಗಳ ಕೊರತೆಯ ನಡುವೆಯೂ ಕಾರ್ಯನಿರ್ವಹಿಸುತ್ತಿರುವ ಪೊಲೀಸರ ಕೆಲಸವನ್ನು ಗೌಣವಾಗಿ ಪರಿಗಣಿಸುವಂತಹದ್ದಲ್ಲ. ಇವರಲ್ಲಿ ಹಲವರು ಕೊಳೆಗೇರಿಗಳಲ್ಲಿ ವಾಸಿಸುತ್ತಾ ಕಷ್ಟದ ಜೀವನ ಸಾಗಿಸುತ್ತಿದ್ದಾರೆ. <br /> <br /> ಮಹಿಳಾ ಪೊಲೀಸರಿಗೆ ನಮ್ಮ ಎಲ್ಲ ಠಾಣೆಗಳು ಸೂಕ್ತ ಸೌಲಭ್ಯ ಒದಗಿಸುತ್ತಿಲ್ಲ. ನಮ್ಮ ಪುರುಷ ಮತ್ತು ಮಹಿಳಾ ಪೊಲೀಸರ ವಾಸ ಮತ್ತು ಕೆಲಸದ ವಾತಾವರಣವನ್ನು ಸುಧಾರಣೆ ಮಾಡದಿದ್ದಲ್ಲಿ, ಅವರಿಂದ ಉನ್ನತ ಮಟ್ಟದ ದಕ್ಷ ಸೇವೆಯನ್ನು ನಿರೀಕ್ಷಿಸಲಾಗದು~ ಎಂದು ಅವರು ಹೇಳಿದರು.<br /> <br /> `ಪೊಲೀಸ್ ಸಿಬ್ಬಂದಿಯ ವೃತ್ತಿ ಕೌಶಲ್ಯ ಮತ್ತು ಸಾರ್ವಜನಿಕರೊಂದಿಗೆ ನಡೆದುಕೊಳ್ಳುವ ವಿಧಾನವನ್ನು ಸುಧಾರಿಸಲು ಸೂಕ್ತ ತರಬೇತಿ ನೀಡಬೇಕಾಗಿದೆ. ಇಂದಿನ ಭದ್ರತಾ ಪರಿಸ್ಥಿತಿಯಲ್ಲಿ ಕೆಳಹಂತದ ಮಾಹಿತಿ ಮತ್ತು ಗುಪ್ತಚರ ಸಂಗ್ರಹ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿಸಲು ಪೊಲೀಸ್ ಸಂಪರ್ಕ ಮತ್ತು ತಪಾಸಣಾ ಜಾಲವನ್ನು ಹೆಚ್ಚಿಸಬೇಕಾಗಿದೆ~ ಎಂದು ಅವರು ತಿಳಿಸಿದರು.<br /> <br /> <strong>ಭದ್ರತಾ ಅನಿಶ್ಚಿತತೆ:</strong> `ದೇಶದಲ್ಲಿನ ಭದ್ರತಾ ವ್ಯವಸ್ಥೆಯು ಅನಿಶ್ಚಿತತೆಯಲ್ಲೇ ಮುಂದುವರಿದಿದ್ದು, ಉಗ್ರರ ಗಡಿ ನುಸುಳುವಿಕೆಯ ಶಿಬಿರಗಳು ಸಕ್ರಿಯವಾಗುತ್ತಿವೆ. ಇತ್ತೀಚೆಗೆ ಮುಂಬೈ ಮತ್ತು ದೆಹಲಿಯಲ್ಲಿ ನಡೆದ ಭಯೋತ್ಪಾದನಾ ದಾಳಿಗಳು ರಾಷ್ಟ್ರೀಯ ಭದ್ರತೆಗೆ ಉಗ್ರಗಾಮಿಗಳು ಒಡ್ಡಿರುವ ಸವಾಲನ್ನು ಪುನರ್ಮನನ ಮಾಡಿಸುತ್ತವೆ.<br /> <br /> ಕಳೆದ ಕೆಲವು ವರ್ಷಗಳಿಂದ ಎಡಪಂಥೀಯ ಉಗ್ರಗಾಮಿಗಳು ಅನೇಕ ನಿರಪರಾಧಿ ಜನರು ಮತ್ತು ಪೊಲೀಸ್ ಸಿಬ್ಬಂದಿಯ ಜೀವವನ್ನು ತೆಗೆಯುತ್ತಿದ್ದಾರೆ. ಉಗ್ರರ ಹೊಸ ತಂಡಗಳನ್ನು ದೇಶದೊಳಕ್ಕೆ ನುಸುಳುವಂತೆ ಮಾಡುತ್ತಿರುವ ವರದಿಗಳು ಬರುತ್ತಿವೆ~ ಎಂದು ಅವರು ಆತಂಕ ವ್ಯಕ್ತಪಡಿಸಿದರು. <br /> <br /> <strong>ಗಸ್ತು ಪೊಲೀಸರು:</strong> ಉಗ್ರರ ದಾಳಿಯ ವಿಧಾನ ಮತ್ತು ಜಾಲಗಳನ್ನು ನಾಶಪಡಿಸುವಲ್ಲಿ ಗಸ್ತು ಪೊಲೀಸರ ಪಾತ್ರ ಪ್ರಮುಖವಾಗಿದ್ದು, ಸಾಂಪ್ರದಾಯಿಕ ಮಾದರಿಯಲ್ಲಿ ಗುಪ್ತಚರ ಮಾಹಿತಿ ಸಂಗ್ರಹಿಸುವ ವಿಧಾನ ಈಗ ಅಪ್ರಸ್ತುತವಾಗಿದೆ. ಈ ನಿಟ್ಟಿನಲ್ಲಿ ದೇಶದ ಮಾನವ ಗುಪ್ತಚರ ಸಾಮರ್ಥ್ಯವನ್ನು ಬಲಪಡಿಸುವ ಅವಶ್ಯಕತೆ ಇದೆ ಎಂದು ಅವರು ಹೇಳಿದರು.<br /> <br /> <strong>ಪೊಲೀಸ್ ಕಾಯ್ದೆಗೆ 150 ವರ್ಷ: </strong>ದೇಶದ ಪೊಲೀಸ್ ಕಾರ್ಯನಿರ್ವಹಣೆ, ಕರ್ತವ್ಯ ಹಾಗೂ ಹೊಣೆಗಾರಿಕೆಯನ್ನು ನಿಯಂತ್ರಿಸಲು 1861ರಲ್ಲಿ ಬ್ರಿಟಿಷ್ ಆಡಳಿತ ಅವಧಿಯಲ್ಲಿ ಶಾಸನವಾಗಿ ಮಾಡಿದ ಪೊಲೀಸ್ ಕಾಯ್ದೆಯ 150ನೇ ವರ್ಷಾಚರಣೆಯನ್ನು ಸರ್ಕಾರ ಆಚರಿಸಲಿದೆ. ಈ ಸಂದರ್ಭದಲ್ಲಿ ನಾಗರಿಕರ ರಕ್ಷಣೆಗಾಗಿ ಹೋರಾಡಿ ಮಡಿದ ಹುತಾತ್ಮ ಪೊಲೀಸರನ್ನು ನಾವು ಸ್ಮರಿಸಿ, ಗೌರವಿಸಬೇಕಾಗಿದೆ ಎಂದು ಅವರು ತಿಳಿಸಿದರು.<br /> <br /> <strong>ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಸಲ್ಲ <br /> ನವದೆಹಲಿ (ಪಿಟಿಐ): </strong>ಭದ್ರತಾ ಸಂಸ್ಥೆಗಳು ಕೆಲವೊಮ್ಮೆ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯದಿಂದ ನೋಡುವುದನ್ನು ನಿಲ್ಲಿಸಲು ತುರ್ತು ಕ್ರಮ ಕೈಗೊಳ್ಳಬೇಕಿದ್ದು, ಇಲ್ಲದಿದ್ದರೆ ಹಗೆತನ ಬೆಳೆದು ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಅಡ್ಡಿಯುಂಟಾಗುವುದು ಎಂದು ಪ್ರಧಾನಿ ಮನಮೋಹನ್ ಸಿಂಗ್ ಶುಕ್ರವಾರ ಇಲ್ಲಿ ಕಿವಿಮಾತು ಹೇಳಿದರು.<br /> <br /> ಕೇಂದ್ರ ಗುಪ್ತಚರ ದಳ ಏರ್ಪಡಿಸಿದ್ದ ಮೂರು ದಿನಗಳ ಡಿಜಿಪಿ, ಐಜಿಪಿ ಹಾಗೂ ಇತರ ಉನ್ನತ ಪೊಲೀಸ್ ಅಧಿಕಾರಿಗಳ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂತಹ ಅನುಭವಗಳನ್ನು ಎಲ್ಲಿದ್ದರೂ ಹೋಗಲಾಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.<br /> <br /> ಇತ್ತೀಚೆಗೆ ನಡೆದ ರಾಷ್ಟ್ರೀಯ ಸಮನ್ವಯ ಮಂಡಳಿ ಸಭೆ (ಎನ್ಐಸಿ)ಯಲ್ಲಿ `ಕಾನೂನು ಜಾರಿ ಮತ್ತು ತನಿಖಾ ಸಂಸ್ಥೆಗಳು ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಧೋರಣೆ ಅನುಸರಿಸುತ್ತಿರುವ ದೂರುಗಳು ಕೇಳಿಬಂದಿದ್ದು, ಇದರಿಂದ ಪರಿಣಾಮಕಾರಿ ಕೆಲಸಕ್ಕೆ ತೊಂದರೆ ಉಂಟಾಗುವುದು. ಇದನ್ನು ನಿವಾರಣೆ ಮಾಡಲು ಸಮಾಜದ ಎಲ್ಲ ವರ್ಗಗಳ ವಿಶ್ವಾಸ ಮತ್ತು ಸಹಕಾರವನ್ನು ಗಳಿಸಿ, ಕಾರ್ಯನಿರ್ವಹಿಸುವ ಅವಶ್ಯಕತೆ ಇದೆ~ ಎಂದು ಅವರು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ(ಪಿಟಿಐ/ಐಎಎನ್ಎಸ್):</strong> ಪೊಲೀಸ್ ಪಡೆಗಳು ನಾಗರಿಕ ಆಡಳಿತ ಮತ್ತು ಶಾಂತಿಪಾಲನೆಯ ಬೆನ್ನೆಲುಬಾಗಿದ್ದು, ಪೊಲೀಸರಿಗೆ ಯಶಸ್ವಿ ಕಾರ್ಯನಿರ್ವಹಣೆಗಾಗಿ ಉತ್ತಮ ತರಬೇತಿ ಮತ್ತು ಸಾರ್ವಜನಿಕರರೊಂದಿಗೆ ವ್ಯವಹರಿಸುವಾಗ ಒಳ್ಳೆಯ ನಡವಳಿಕೆ ತೋರಲು ಸೂಕ್ತ ಸಲಹೆಗಳನ್ನು ನೀಡಬೇಕಾಗಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಶುಕ್ರವಾರ ಇಲ್ಲಿ ನುಡಿದರು.<br /> <br /> ಗುಪ್ತಚರ ದಳ ಏರ್ಪಡಿಸಿದ್ದ ದೇಶದ ಡಿಜಿಪಿ, ಐಜಿಪಿ ಮತ್ತಿತರ ಉನ್ನತ ಪೊಲೀಸ್ ಅಧಿಕಾರಿಗಳ ಮೂರು ದಿನಗಳ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, `ಪೊಲೀಸ್ ಪಡೆಗಳ ಆಧಾರ ಸ್ತಂಭವಾಗಿರುವ ಪೊಲೀಸರು, ಇಲಾಖೆಯ ಒಟ್ಟಾರೆ ಬಲದಲ್ಲಿ ಶೇ 87ರಷ್ಟು ಸಂಖ್ಯೆಯಲ್ಲಿದ್ದಾರೆ~ ಎಂದರು.<br /> <br /> `ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ವಿಶ್ವಾಸ ಮೂಡಿಸುವ ಅಗತ್ಯವಿದೆ. ಉತ್ತಮ ಮೂಲಸೌಕರ್ಯಗಳ ಕೊರತೆಯ ನಡುವೆಯೂ ಕಾರ್ಯನಿರ್ವಹಿಸುತ್ತಿರುವ ಪೊಲೀಸರ ಕೆಲಸವನ್ನು ಗೌಣವಾಗಿ ಪರಿಗಣಿಸುವಂತಹದ್ದಲ್ಲ. ಇವರಲ್ಲಿ ಹಲವರು ಕೊಳೆಗೇರಿಗಳಲ್ಲಿ ವಾಸಿಸುತ್ತಾ ಕಷ್ಟದ ಜೀವನ ಸಾಗಿಸುತ್ತಿದ್ದಾರೆ. <br /> <br /> ಮಹಿಳಾ ಪೊಲೀಸರಿಗೆ ನಮ್ಮ ಎಲ್ಲ ಠಾಣೆಗಳು ಸೂಕ್ತ ಸೌಲಭ್ಯ ಒದಗಿಸುತ್ತಿಲ್ಲ. ನಮ್ಮ ಪುರುಷ ಮತ್ತು ಮಹಿಳಾ ಪೊಲೀಸರ ವಾಸ ಮತ್ತು ಕೆಲಸದ ವಾತಾವರಣವನ್ನು ಸುಧಾರಣೆ ಮಾಡದಿದ್ದಲ್ಲಿ, ಅವರಿಂದ ಉನ್ನತ ಮಟ್ಟದ ದಕ್ಷ ಸೇವೆಯನ್ನು ನಿರೀಕ್ಷಿಸಲಾಗದು~ ಎಂದು ಅವರು ಹೇಳಿದರು.<br /> <br /> `ಪೊಲೀಸ್ ಸಿಬ್ಬಂದಿಯ ವೃತ್ತಿ ಕೌಶಲ್ಯ ಮತ್ತು ಸಾರ್ವಜನಿಕರೊಂದಿಗೆ ನಡೆದುಕೊಳ್ಳುವ ವಿಧಾನವನ್ನು ಸುಧಾರಿಸಲು ಸೂಕ್ತ ತರಬೇತಿ ನೀಡಬೇಕಾಗಿದೆ. ಇಂದಿನ ಭದ್ರತಾ ಪರಿಸ್ಥಿತಿಯಲ್ಲಿ ಕೆಳಹಂತದ ಮಾಹಿತಿ ಮತ್ತು ಗುಪ್ತಚರ ಸಂಗ್ರಹ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿಸಲು ಪೊಲೀಸ್ ಸಂಪರ್ಕ ಮತ್ತು ತಪಾಸಣಾ ಜಾಲವನ್ನು ಹೆಚ್ಚಿಸಬೇಕಾಗಿದೆ~ ಎಂದು ಅವರು ತಿಳಿಸಿದರು.<br /> <br /> <strong>ಭದ್ರತಾ ಅನಿಶ್ಚಿತತೆ:</strong> `ದೇಶದಲ್ಲಿನ ಭದ್ರತಾ ವ್ಯವಸ್ಥೆಯು ಅನಿಶ್ಚಿತತೆಯಲ್ಲೇ ಮುಂದುವರಿದಿದ್ದು, ಉಗ್ರರ ಗಡಿ ನುಸುಳುವಿಕೆಯ ಶಿಬಿರಗಳು ಸಕ್ರಿಯವಾಗುತ್ತಿವೆ. ಇತ್ತೀಚೆಗೆ ಮುಂಬೈ ಮತ್ತು ದೆಹಲಿಯಲ್ಲಿ ನಡೆದ ಭಯೋತ್ಪಾದನಾ ದಾಳಿಗಳು ರಾಷ್ಟ್ರೀಯ ಭದ್ರತೆಗೆ ಉಗ್ರಗಾಮಿಗಳು ಒಡ್ಡಿರುವ ಸವಾಲನ್ನು ಪುನರ್ಮನನ ಮಾಡಿಸುತ್ತವೆ.<br /> <br /> ಕಳೆದ ಕೆಲವು ವರ್ಷಗಳಿಂದ ಎಡಪಂಥೀಯ ಉಗ್ರಗಾಮಿಗಳು ಅನೇಕ ನಿರಪರಾಧಿ ಜನರು ಮತ್ತು ಪೊಲೀಸ್ ಸಿಬ್ಬಂದಿಯ ಜೀವವನ್ನು ತೆಗೆಯುತ್ತಿದ್ದಾರೆ. ಉಗ್ರರ ಹೊಸ ತಂಡಗಳನ್ನು ದೇಶದೊಳಕ್ಕೆ ನುಸುಳುವಂತೆ ಮಾಡುತ್ತಿರುವ ವರದಿಗಳು ಬರುತ್ತಿವೆ~ ಎಂದು ಅವರು ಆತಂಕ ವ್ಯಕ್ತಪಡಿಸಿದರು. <br /> <br /> <strong>ಗಸ್ತು ಪೊಲೀಸರು:</strong> ಉಗ್ರರ ದಾಳಿಯ ವಿಧಾನ ಮತ್ತು ಜಾಲಗಳನ್ನು ನಾಶಪಡಿಸುವಲ್ಲಿ ಗಸ್ತು ಪೊಲೀಸರ ಪಾತ್ರ ಪ್ರಮುಖವಾಗಿದ್ದು, ಸಾಂಪ್ರದಾಯಿಕ ಮಾದರಿಯಲ್ಲಿ ಗುಪ್ತಚರ ಮಾಹಿತಿ ಸಂಗ್ರಹಿಸುವ ವಿಧಾನ ಈಗ ಅಪ್ರಸ್ತುತವಾಗಿದೆ. ಈ ನಿಟ್ಟಿನಲ್ಲಿ ದೇಶದ ಮಾನವ ಗುಪ್ತಚರ ಸಾಮರ್ಥ್ಯವನ್ನು ಬಲಪಡಿಸುವ ಅವಶ್ಯಕತೆ ಇದೆ ಎಂದು ಅವರು ಹೇಳಿದರು.<br /> <br /> <strong>ಪೊಲೀಸ್ ಕಾಯ್ದೆಗೆ 150 ವರ್ಷ: </strong>ದೇಶದ ಪೊಲೀಸ್ ಕಾರ್ಯನಿರ್ವಹಣೆ, ಕರ್ತವ್ಯ ಹಾಗೂ ಹೊಣೆಗಾರಿಕೆಯನ್ನು ನಿಯಂತ್ರಿಸಲು 1861ರಲ್ಲಿ ಬ್ರಿಟಿಷ್ ಆಡಳಿತ ಅವಧಿಯಲ್ಲಿ ಶಾಸನವಾಗಿ ಮಾಡಿದ ಪೊಲೀಸ್ ಕಾಯ್ದೆಯ 150ನೇ ವರ್ಷಾಚರಣೆಯನ್ನು ಸರ್ಕಾರ ಆಚರಿಸಲಿದೆ. ಈ ಸಂದರ್ಭದಲ್ಲಿ ನಾಗರಿಕರ ರಕ್ಷಣೆಗಾಗಿ ಹೋರಾಡಿ ಮಡಿದ ಹುತಾತ್ಮ ಪೊಲೀಸರನ್ನು ನಾವು ಸ್ಮರಿಸಿ, ಗೌರವಿಸಬೇಕಾಗಿದೆ ಎಂದು ಅವರು ತಿಳಿಸಿದರು.<br /> <br /> <strong>ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಸಲ್ಲ <br /> ನವದೆಹಲಿ (ಪಿಟಿಐ): </strong>ಭದ್ರತಾ ಸಂಸ್ಥೆಗಳು ಕೆಲವೊಮ್ಮೆ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯದಿಂದ ನೋಡುವುದನ್ನು ನಿಲ್ಲಿಸಲು ತುರ್ತು ಕ್ರಮ ಕೈಗೊಳ್ಳಬೇಕಿದ್ದು, ಇಲ್ಲದಿದ್ದರೆ ಹಗೆತನ ಬೆಳೆದು ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಅಡ್ಡಿಯುಂಟಾಗುವುದು ಎಂದು ಪ್ರಧಾನಿ ಮನಮೋಹನ್ ಸಿಂಗ್ ಶುಕ್ರವಾರ ಇಲ್ಲಿ ಕಿವಿಮಾತು ಹೇಳಿದರು.<br /> <br /> ಕೇಂದ್ರ ಗುಪ್ತಚರ ದಳ ಏರ್ಪಡಿಸಿದ್ದ ಮೂರು ದಿನಗಳ ಡಿಜಿಪಿ, ಐಜಿಪಿ ಹಾಗೂ ಇತರ ಉನ್ನತ ಪೊಲೀಸ್ ಅಧಿಕಾರಿಗಳ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂತಹ ಅನುಭವಗಳನ್ನು ಎಲ್ಲಿದ್ದರೂ ಹೋಗಲಾಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.<br /> <br /> ಇತ್ತೀಚೆಗೆ ನಡೆದ ರಾಷ್ಟ್ರೀಯ ಸಮನ್ವಯ ಮಂಡಳಿ ಸಭೆ (ಎನ್ಐಸಿ)ಯಲ್ಲಿ `ಕಾನೂನು ಜಾರಿ ಮತ್ತು ತನಿಖಾ ಸಂಸ್ಥೆಗಳು ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಧೋರಣೆ ಅನುಸರಿಸುತ್ತಿರುವ ದೂರುಗಳು ಕೇಳಿಬಂದಿದ್ದು, ಇದರಿಂದ ಪರಿಣಾಮಕಾರಿ ಕೆಲಸಕ್ಕೆ ತೊಂದರೆ ಉಂಟಾಗುವುದು. ಇದನ್ನು ನಿವಾರಣೆ ಮಾಡಲು ಸಮಾಜದ ಎಲ್ಲ ವರ್ಗಗಳ ವಿಶ್ವಾಸ ಮತ್ತು ಸಹಕಾರವನ್ನು ಗಳಿಸಿ, ಕಾರ್ಯನಿರ್ವಹಿಸುವ ಅವಶ್ಯಕತೆ ಇದೆ~ ಎಂದು ಅವರು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>