<p><strong>`ಪ್ರಜಾವಾಣಿ' ವಿದ್ಯಾರ್ಥಿವೇತನ ಪಡೆದವರ ಅಭಿಮತ<br /> <br /> `ಹೆಚ್ಚಿನ ಅನುಕೂಲವಾಯಿತು'</strong><br /> </p>.<p>ಪದೇ ಪದೇ ಬರಗಾಲ ಎದುರಿಸುತ್ತಿರುವ ನಮ್ಮಂತಹ ರೈತರ ಮಕ್ಕಳಿಗೆ `ಪ್ರಜಾವಾಣಿ' ಬಳಗದ ಪ್ರೋತ್ಸಾಹ ಮೆಚ್ಚುವಂಥದ್ದು. ನನ್ನ ಮಗನಿಗೆ ಡಿಪ್ಲೊಮಾ ಮೆಕ್ಯಾನಿಕಲ್ ಪ್ರಥಮ ವರ್ಷದ ಶುಲ್ಕವಾಗಿ ಪತ್ರಿಕೆಯು ಸಹಾಯ ಧನ ನೀಡಿದ್ದು ಹೆಚ್ಚಿನ ಅನುಕೂಲವಾಯಿತು. ಈಗ ದಾವಣಗೆರೆ ಡಿಆರ್ಆರ್ ಪಾಲಿಟೆಕ್ನಿಕ್ನಲ್ಲಿ ಚೆನ್ನಾಗಿ ಓದಿ, ಮೂರನೇ ಸೆಮಿಸ್ಟರ್ ಪರೀಕ್ಷೆ ಬರೆಯುತ್ತಿದ್ದಾನೆ. ಹಲವಾರು ಪ್ರತಿಭಾವಂತ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ `ಪ್ರಜಾವಾಣಿ' ಪತ್ರಿಕಾ ಬಳಗವು ನೀಡುತ್ತಿರುವ ಸಹಾಯ ಬಹಳ ದೊಡ್ಡದು.<br /> <strong>-ಶಂಕ್ರಪ್ಪ ಬಣಕಾರ (ಸಚಿನ್ ಬಣಕಾರ ತಂದೆ,ರಾಣೆಬೆನ್ನೂರು -ಹಾವೇರಿ ಜಿಲ್ಲೆ)<br /> <br /> `ನನಸಾದ ಉನ್ನತ ಶಿಕ್ಷಣ ಕನಸು'</strong><br /> </p>.<p>`ಪ್ರಜಾವಾಣಿ' ಸ್ಕಾಲರ್ಶಿಪ್ನಿಂದಾಗಿ ನನಗೆ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಯಿತು. ಎಸ್ಎಸ್ಎಲ್ಸಿ ಮುಗಿದ ತಕ್ಷಣ ಉನ್ನತ ಶಿಕ್ಷಣದ ಕನಸು ಎಲ್ಲಿ ಭಗ್ನವಾಗುತ್ತದೆಯೋ ಎಂಬ ಭಯವಿತ್ತು. ಆದರೆ, `ಪ್ರಜಾವಾಣಿ' ಸ್ಕಾಲರ್ಶಿಪ್ ನೀಡುತ್ತದೆ ಎಂಬ ಸಂಗತಿ ತಿಳಿದು ಉನ್ನತ ಶಿಕ್ಷಣದ ಕನಸಿಗೆ ರೆಕ್ಕೆ- ಪುಕ್ಕಗಳು ಬಂದವು.<br /> <br /> `ಪ್ರಜಾವಾಣಿ' ಸ್ಕಾಲರ್ಶಿಪ್ ಪಡೆದು ಡಿಪ್ಲೊಮಾ (ಇ ಆ್ಯಂಡ್ ಸಿ) ಓದುತ್ತಿದ್ದೇನೆ. ಮೊದಲ ಸೆಮಿಸ್ಟರ್ನಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದೇನೆ. `ಪ್ರಜಾವಾಣಿ' ಸ್ಕಾಲರ್ಶಿಪ್ ಸದುಪಯೋಗ ಪಡೆದುಕೊಂಡು ದೊಡ್ಡ ಸಾಧನೆ ಮಾಡುವ ಹಂಬಲ ಹೊಂದಿದ್ದೇನೆ. ಈ ಸ್ಕಾಲರ್ಶಿಪ್ನಿಂದಾಗಿ ಹಲವಾರು ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಂಡಿದೆ.'<br /> -<strong>ಲಕ್ಷ್ಮಿನೀಲಕಂಠಪ್ಪ ದಗಲ್, ಗಜೇಂದ್ರಗಡ (ಗದಗ ಜಿಲ್ಲೆ)<br /> <br /> ಬಡ ವಿದ್ಯಾರ್ಥಿಗಳಿಗೆ ನೆರವಾಗಿರಿ ಉದಾರ ಕೊಡುಗೆ ನೀಡಿ</strong><br /> ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ನ ಮಾತೃ ಸಂಸ್ಥೆ ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್, ಸ್ಥಾಪಿಸಿರುವ ಪರಿಹಾರ ಟ್ರಸ್ಟ್, ಪ್ರತಿ ವರ್ಷಎಸ್ಎಸ್ಎಲ್ಸಿಯಲ್ಲಿ ಉತ್ತೀರ್ಣರಾದ ಅರ್ಹ ಬಡ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಮುಂದಿನ ಶಿಕ್ಷಣಕ್ಕಾಗಿ ಧನ ಸಹಾಯ ಮಾಡುತ್ತಾಬಂದಿದೆ.</p>.<p>ಸಾರ್ವಜನಿಕರು ಮತ್ತು ದಾನಿಗಳು ಸಂಸ್ಥೆಯ ಈ ಉದ್ದೇಶಕ್ಕೆ ನೆರವಾಗಬೇಕೆಂದು ಕೋರುತ್ತೇವೆ. ಚೆಕ್ ಅಥವಾ ಡಿ.ಡಿ. ರೂಪದಲ್ಲಿ ಹಣವನ್ನು `ಡೆಕ್ಕನ್ ಹೆರಾಲ್ಡ್-ಪ್ರಜಾವಾಣಿ ಪರಿಹಾರ ಟ್ರಸ್ಟ್' ಹೆಸರಿಗೆ ಕಳುಹಿಸಿ. ಒಂದು ಸಾವಿರ ರೂಪಾಯಿಗಿಂತ ಅಧಿಕ ನೆರವು ನೀಡುವವರ ಹೆಸರನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು. ಈ ದೇಣಿಗೆಗೆ ಆದಾಯ ತೆರಿಗೆ ಸೆಕ್ಷನ್ 80 ಜಿ ಅನ್ವಯ ಶೇ.50 ರಷ್ಟು ಆದಾಯ ತೆರಿಗೆ ವಿನಾಯಿತಿ ಇದೆ. ಆನ್ಲೈನ್ ಮೂಲಕ <a href="http://www.careeravenues.in/ dhutility/edurelief.aspx">http://www.careeravenues.in/ dhutility/edurelief.aspx</a>ಈ ಅಕೌಂಟಿಗೆ ಹಣವನ್ನು ವರ್ಗಾಹಿಸುವ ಸೌಲಭ್ಯವೂ ಇದೆ.</p>.<p><strong>ವಿಳಾಸ:</strong> ಮ್ಯಾನೇಜರ್, ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ ಪರಿಹಾರ ಟ್ರಸ್ಟ್, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು- 560 001</p>.<p><strong>ಸೂಚನೆ</strong>: ಲಕೋಟೆ ಮೇಲೆ `ಶೈಕ್ಷಣಿಕ ನೆರವಿಗೆ ಕೊಡುಗೆ' ಎಂದು ನಮೂದಿಸಿರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>`ಪ್ರಜಾವಾಣಿ' ವಿದ್ಯಾರ್ಥಿವೇತನ ಪಡೆದವರ ಅಭಿಮತ<br /> <br /> `ಹೆಚ್ಚಿನ ಅನುಕೂಲವಾಯಿತು'</strong><br /> </p>.<p>ಪದೇ ಪದೇ ಬರಗಾಲ ಎದುರಿಸುತ್ತಿರುವ ನಮ್ಮಂತಹ ರೈತರ ಮಕ್ಕಳಿಗೆ `ಪ್ರಜಾವಾಣಿ' ಬಳಗದ ಪ್ರೋತ್ಸಾಹ ಮೆಚ್ಚುವಂಥದ್ದು. ನನ್ನ ಮಗನಿಗೆ ಡಿಪ್ಲೊಮಾ ಮೆಕ್ಯಾನಿಕಲ್ ಪ್ರಥಮ ವರ್ಷದ ಶುಲ್ಕವಾಗಿ ಪತ್ರಿಕೆಯು ಸಹಾಯ ಧನ ನೀಡಿದ್ದು ಹೆಚ್ಚಿನ ಅನುಕೂಲವಾಯಿತು. ಈಗ ದಾವಣಗೆರೆ ಡಿಆರ್ಆರ್ ಪಾಲಿಟೆಕ್ನಿಕ್ನಲ್ಲಿ ಚೆನ್ನಾಗಿ ಓದಿ, ಮೂರನೇ ಸೆಮಿಸ್ಟರ್ ಪರೀಕ್ಷೆ ಬರೆಯುತ್ತಿದ್ದಾನೆ. ಹಲವಾರು ಪ್ರತಿಭಾವಂತ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ `ಪ್ರಜಾವಾಣಿ' ಪತ್ರಿಕಾ ಬಳಗವು ನೀಡುತ್ತಿರುವ ಸಹಾಯ ಬಹಳ ದೊಡ್ಡದು.<br /> <strong>-ಶಂಕ್ರಪ್ಪ ಬಣಕಾರ (ಸಚಿನ್ ಬಣಕಾರ ತಂದೆ,ರಾಣೆಬೆನ್ನೂರು -ಹಾವೇರಿ ಜಿಲ್ಲೆ)<br /> <br /> `ನನಸಾದ ಉನ್ನತ ಶಿಕ್ಷಣ ಕನಸು'</strong><br /> </p>.<p>`ಪ್ರಜಾವಾಣಿ' ಸ್ಕಾಲರ್ಶಿಪ್ನಿಂದಾಗಿ ನನಗೆ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಯಿತು. ಎಸ್ಎಸ್ಎಲ್ಸಿ ಮುಗಿದ ತಕ್ಷಣ ಉನ್ನತ ಶಿಕ್ಷಣದ ಕನಸು ಎಲ್ಲಿ ಭಗ್ನವಾಗುತ್ತದೆಯೋ ಎಂಬ ಭಯವಿತ್ತು. ಆದರೆ, `ಪ್ರಜಾವಾಣಿ' ಸ್ಕಾಲರ್ಶಿಪ್ ನೀಡುತ್ತದೆ ಎಂಬ ಸಂಗತಿ ತಿಳಿದು ಉನ್ನತ ಶಿಕ್ಷಣದ ಕನಸಿಗೆ ರೆಕ್ಕೆ- ಪುಕ್ಕಗಳು ಬಂದವು.<br /> <br /> `ಪ್ರಜಾವಾಣಿ' ಸ್ಕಾಲರ್ಶಿಪ್ ಪಡೆದು ಡಿಪ್ಲೊಮಾ (ಇ ಆ್ಯಂಡ್ ಸಿ) ಓದುತ್ತಿದ್ದೇನೆ. ಮೊದಲ ಸೆಮಿಸ್ಟರ್ನಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದೇನೆ. `ಪ್ರಜಾವಾಣಿ' ಸ್ಕಾಲರ್ಶಿಪ್ ಸದುಪಯೋಗ ಪಡೆದುಕೊಂಡು ದೊಡ್ಡ ಸಾಧನೆ ಮಾಡುವ ಹಂಬಲ ಹೊಂದಿದ್ದೇನೆ. ಈ ಸ್ಕಾಲರ್ಶಿಪ್ನಿಂದಾಗಿ ಹಲವಾರು ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಂಡಿದೆ.'<br /> -<strong>ಲಕ್ಷ್ಮಿನೀಲಕಂಠಪ್ಪ ದಗಲ್, ಗಜೇಂದ್ರಗಡ (ಗದಗ ಜಿಲ್ಲೆ)<br /> <br /> ಬಡ ವಿದ್ಯಾರ್ಥಿಗಳಿಗೆ ನೆರವಾಗಿರಿ ಉದಾರ ಕೊಡುಗೆ ನೀಡಿ</strong><br /> ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ನ ಮಾತೃ ಸಂಸ್ಥೆ ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್, ಸ್ಥಾಪಿಸಿರುವ ಪರಿಹಾರ ಟ್ರಸ್ಟ್, ಪ್ರತಿ ವರ್ಷಎಸ್ಎಸ್ಎಲ್ಸಿಯಲ್ಲಿ ಉತ್ತೀರ್ಣರಾದ ಅರ್ಹ ಬಡ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಮುಂದಿನ ಶಿಕ್ಷಣಕ್ಕಾಗಿ ಧನ ಸಹಾಯ ಮಾಡುತ್ತಾಬಂದಿದೆ.</p>.<p>ಸಾರ್ವಜನಿಕರು ಮತ್ತು ದಾನಿಗಳು ಸಂಸ್ಥೆಯ ಈ ಉದ್ದೇಶಕ್ಕೆ ನೆರವಾಗಬೇಕೆಂದು ಕೋರುತ್ತೇವೆ. ಚೆಕ್ ಅಥವಾ ಡಿ.ಡಿ. ರೂಪದಲ್ಲಿ ಹಣವನ್ನು `ಡೆಕ್ಕನ್ ಹೆರಾಲ್ಡ್-ಪ್ರಜಾವಾಣಿ ಪರಿಹಾರ ಟ್ರಸ್ಟ್' ಹೆಸರಿಗೆ ಕಳುಹಿಸಿ. ಒಂದು ಸಾವಿರ ರೂಪಾಯಿಗಿಂತ ಅಧಿಕ ನೆರವು ನೀಡುವವರ ಹೆಸರನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು. ಈ ದೇಣಿಗೆಗೆ ಆದಾಯ ತೆರಿಗೆ ಸೆಕ್ಷನ್ 80 ಜಿ ಅನ್ವಯ ಶೇ.50 ರಷ್ಟು ಆದಾಯ ತೆರಿಗೆ ವಿನಾಯಿತಿ ಇದೆ. ಆನ್ಲೈನ್ ಮೂಲಕ <a href="http://www.careeravenues.in/ dhutility/edurelief.aspx">http://www.careeravenues.in/ dhutility/edurelief.aspx</a>ಈ ಅಕೌಂಟಿಗೆ ಹಣವನ್ನು ವರ್ಗಾಹಿಸುವ ಸೌಲಭ್ಯವೂ ಇದೆ.</p>.<p><strong>ವಿಳಾಸ:</strong> ಮ್ಯಾನೇಜರ್, ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ ಪರಿಹಾರ ಟ್ರಸ್ಟ್, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು- 560 001</p>.<p><strong>ಸೂಚನೆ</strong>: ಲಕೋಟೆ ಮೇಲೆ `ಶೈಕ್ಷಣಿಕ ನೆರವಿಗೆ ಕೊಡುಗೆ' ಎಂದು ನಮೂದಿಸಿರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>