<p><strong>ಶಿಕಾರಿಪುರ:</strong> ಬರಗಾಲದಿಂದ ಕಂಗೆಟ್ಟ ರೈತರ ಕಣ್ಣೀರು ಒರೆಸಲು ಪ್ರವಾಸ ಹೋಗುತ್ತ್ದ್ದಿದೇನೆಯೇ ಹೊರತು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಆಸೆಗಾಗಿ ಪ್ರವಾಸ ಹೋಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.<br /> <br /> ತಾಲ್ಲೂಕಿನ ಅಂಜನಾಪುರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ನಂತರ ಜಲಾಶಯದ ಅವರಣದಲ್ಲಿ ರೂ 10ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ ಬೃಂದಾವನ (ಉದ್ಯಾನ) ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ಬರಗಾಲದಿಂದ ರೈತ ಅನುಭವಿಸುತ್ತಿರುವ ದಯನೀಯ ಸ್ಥಿತಿ-ಗತಿಯನ್ನು ಸರ್ಕಾರದ ಮುಂದಿಡುವ ಕೆಲಸ ಮಾಡಲು ಬರ ಪ್ರವಾಸ ಹಮ್ಮಿಕೊಂಡಿದ್ದೇವೆ. ಈ ಕಾರ್ಯವನ್ನು ಕೆಲವು ತಿಂಗಳ ಹಿಂದೆಯೇ ಮಾಡಬೇಕಾಗಿತ್ತು. ಆದರೆ, ಕಾನೂನಿನ ಅಡ್ಡಿ ಆತಂಕಗಳಿದ್ದ ಕಾರಣ, ಅವುಗಳಿಂದ ಹೊರಬಂದು ನಾಳೆಯಿಂದ ಪ್ರವಾಸ ಹೊರಟ್ಟಿದ್ದೇನೆ ಎಂದರು.<br /> <br /> ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, 3 ವರ್ಷಗಳಲ್ಲಿ ಅನೇಕ ಷಡ್ಯಂತ್ರಗಳ ಮೂಲಕ ಯಡಿಯೂರಪ್ಪ ಅವರನ್ನು ಮುಗಿಸಲು ಕೆಲವರು ಪ್ರಯತ್ನ ಪಟ್ಟರೂ, ಅದು ಸಾಧ್ಯವಾಗಿಲ್ಲ . ಭೂಮಿ ಮೇಲಿರುವ ಯಾವುದೇ ಶಕ್ತಿಯಿಂದ ಮಾಜಿ ಮುಖ್ಯಮಂತ್ರಿ (ಬಿಎಸ್ವೈ)ಯ ನಾಶ ಸಾಧ್ಯವಿಲ್ಲ. ರೈತರ ಹಾಗೂ ಬಡವರ ಪರವಾದ ಆಡಳಿತ ನೀಡಲು ಯಡಿಯೂರಪ್ಪ ನಾಯಕತ್ವ ಇರಲೇಬೇಕು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಕಾರಿಪುರ:</strong> ಬರಗಾಲದಿಂದ ಕಂಗೆಟ್ಟ ರೈತರ ಕಣ್ಣೀರು ಒರೆಸಲು ಪ್ರವಾಸ ಹೋಗುತ್ತ್ದ್ದಿದೇನೆಯೇ ಹೊರತು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಆಸೆಗಾಗಿ ಪ್ರವಾಸ ಹೋಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.<br /> <br /> ತಾಲ್ಲೂಕಿನ ಅಂಜನಾಪುರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ನಂತರ ಜಲಾಶಯದ ಅವರಣದಲ್ಲಿ ರೂ 10ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ ಬೃಂದಾವನ (ಉದ್ಯಾನ) ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ಬರಗಾಲದಿಂದ ರೈತ ಅನುಭವಿಸುತ್ತಿರುವ ದಯನೀಯ ಸ್ಥಿತಿ-ಗತಿಯನ್ನು ಸರ್ಕಾರದ ಮುಂದಿಡುವ ಕೆಲಸ ಮಾಡಲು ಬರ ಪ್ರವಾಸ ಹಮ್ಮಿಕೊಂಡಿದ್ದೇವೆ. ಈ ಕಾರ್ಯವನ್ನು ಕೆಲವು ತಿಂಗಳ ಹಿಂದೆಯೇ ಮಾಡಬೇಕಾಗಿತ್ತು. ಆದರೆ, ಕಾನೂನಿನ ಅಡ್ಡಿ ಆತಂಕಗಳಿದ್ದ ಕಾರಣ, ಅವುಗಳಿಂದ ಹೊರಬಂದು ನಾಳೆಯಿಂದ ಪ್ರವಾಸ ಹೊರಟ್ಟಿದ್ದೇನೆ ಎಂದರು.<br /> <br /> ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, 3 ವರ್ಷಗಳಲ್ಲಿ ಅನೇಕ ಷಡ್ಯಂತ್ರಗಳ ಮೂಲಕ ಯಡಿಯೂರಪ್ಪ ಅವರನ್ನು ಮುಗಿಸಲು ಕೆಲವರು ಪ್ರಯತ್ನ ಪಟ್ಟರೂ, ಅದು ಸಾಧ್ಯವಾಗಿಲ್ಲ . ಭೂಮಿ ಮೇಲಿರುವ ಯಾವುದೇ ಶಕ್ತಿಯಿಂದ ಮಾಜಿ ಮುಖ್ಯಮಂತ್ರಿ (ಬಿಎಸ್ವೈ)ಯ ನಾಶ ಸಾಧ್ಯವಿಲ್ಲ. ರೈತರ ಹಾಗೂ ಬಡವರ ಪರವಾದ ಆಡಳಿತ ನೀಡಲು ಯಡಿಯೂರಪ್ಪ ನಾಯಕತ್ವ ಇರಲೇಬೇಕು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>