<p>ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಪ್ರಾಣಿ ವಿನಿಮಯ ಯೋಜನೆಯಡಿ ಮೈಸೂರು ಮೃಗಾಲಯದಿಂದ 26 ಪ್ರಾಣಿಗಳನ್ನು ಕರೆತರಲಾಗಿದೆ ಎಂದು ಉದ್ಯಾನದ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಆರ್.ರಾಜು ಶನಿವಾರ ತಿಳಿಸಿದ್ದಾರೆ.<br /> <br /> ಒಂದು ಬಿಳಿ ನವಿಲು, ಐದು ಕಾಡುಕೋಳಿ (ಜೀವಂಜೀವ), ಏಳು ಜಿಂಕೆ ಹಾಗೂ ಮೂರು ವಿಭಿನ್ನ ಜಾತಿಯ ಎಂಟು ಮೊಸಳೆಗಳನ್ನು ಉದ್ಯಾನಕ್ಕೆ ತರಲಾಗಿದೆ ಎಂದು ಅವರು `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.<br /> <br /> ಇದರಿಂದಾಗಿ ಉದ್ಯಾನದ ಪ್ರಾಣಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು 74 ತಳಿಗಳ 1448 ಪ್ರಾಣಿಗಳು ಉದ್ಯಾನದಲ್ಲಿ ನೆಲೆಸಿದಂತಾಗಿದೆ. <br /> <br /> ಮೃಗಾಲಯ ಪ್ರಾಧಿಕಾರದ 120ನೇ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪ್ರಾಣಿ ಸಂಗ್ರಹಣಾ ಯೋಜನೆಗೆ ಅನುಮೋದನೆ ದೊರೆತಿದ್ದು ವಿವಿಧ ರೀತಿಯ ಪ್ರಾಣಿಗಳ ತಳಿಗಳನ್ನು ದೇಶ ಹಾಗೂ ವಿದೇಶಗಳಿಂದ ಉದ್ಯಾನಕ್ಕೆ ಮುಂದಿನ ವರ್ಷ ತರಿಸಿಕೊಳ್ಳಲು ಯೋಜನೆ ರೂಪಿಸಲಾಗಿದೆ.<br /> <br /> ಒಂಟಿ ಪ್ರಾಣಿಗಳಿಗೆ ಸಂಗಾತಿಗಳನ್ನು ಜೋಡಿವುದಕ್ಕೂ ಈ ಯೋಜನೆಯಲ್ಲಿ ಆದ್ಯತೆ ನೀಡಲಾಗಿದೆ. ಚಿಂಪಾಂಜಿ, ಜಿರಾಫೆ, ಜೀಬ್ರಾ, ಚಿಂಕಾರ, ಗ್ರೇಟ್ ಇಂಡಿಯನ್ ಹಾರ್ನ್ಬಿಲ್, ಮೌಸ್ಡೀರ್ ಮತ್ತಿತರ ಪ್ರಾಣಿಗಳನ್ನು ಉದ್ಯಾನಕ್ಕೆ ಸೇರ್ಪಡೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ರಾಜು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಪ್ರಾಣಿ ವಿನಿಮಯ ಯೋಜನೆಯಡಿ ಮೈಸೂರು ಮೃಗಾಲಯದಿಂದ 26 ಪ್ರಾಣಿಗಳನ್ನು ಕರೆತರಲಾಗಿದೆ ಎಂದು ಉದ್ಯಾನದ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಆರ್.ರಾಜು ಶನಿವಾರ ತಿಳಿಸಿದ್ದಾರೆ.<br /> <br /> ಒಂದು ಬಿಳಿ ನವಿಲು, ಐದು ಕಾಡುಕೋಳಿ (ಜೀವಂಜೀವ), ಏಳು ಜಿಂಕೆ ಹಾಗೂ ಮೂರು ವಿಭಿನ್ನ ಜಾತಿಯ ಎಂಟು ಮೊಸಳೆಗಳನ್ನು ಉದ್ಯಾನಕ್ಕೆ ತರಲಾಗಿದೆ ಎಂದು ಅವರು `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.<br /> <br /> ಇದರಿಂದಾಗಿ ಉದ್ಯಾನದ ಪ್ರಾಣಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು 74 ತಳಿಗಳ 1448 ಪ್ರಾಣಿಗಳು ಉದ್ಯಾನದಲ್ಲಿ ನೆಲೆಸಿದಂತಾಗಿದೆ. <br /> <br /> ಮೃಗಾಲಯ ಪ್ರಾಧಿಕಾರದ 120ನೇ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪ್ರಾಣಿ ಸಂಗ್ರಹಣಾ ಯೋಜನೆಗೆ ಅನುಮೋದನೆ ದೊರೆತಿದ್ದು ವಿವಿಧ ರೀತಿಯ ಪ್ರಾಣಿಗಳ ತಳಿಗಳನ್ನು ದೇಶ ಹಾಗೂ ವಿದೇಶಗಳಿಂದ ಉದ್ಯಾನಕ್ಕೆ ಮುಂದಿನ ವರ್ಷ ತರಿಸಿಕೊಳ್ಳಲು ಯೋಜನೆ ರೂಪಿಸಲಾಗಿದೆ.<br /> <br /> ಒಂಟಿ ಪ್ರಾಣಿಗಳಿಗೆ ಸಂಗಾತಿಗಳನ್ನು ಜೋಡಿವುದಕ್ಕೂ ಈ ಯೋಜನೆಯಲ್ಲಿ ಆದ್ಯತೆ ನೀಡಲಾಗಿದೆ. ಚಿಂಪಾಂಜಿ, ಜಿರಾಫೆ, ಜೀಬ್ರಾ, ಚಿಂಕಾರ, ಗ್ರೇಟ್ ಇಂಡಿಯನ್ ಹಾರ್ನ್ಬಿಲ್, ಮೌಸ್ಡೀರ್ ಮತ್ತಿತರ ಪ್ರಾಣಿಗಳನ್ನು ಉದ್ಯಾನಕ್ಕೆ ಸೇರ್ಪಡೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ರಾಜು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>