<p>ಮಧುಗಿರಿ: ಬಿಜೆಪಿ ಕೋಮುವಾದಿ. ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.<br /> ಪಟ್ಟಣದಲ್ಲಿ ಸೋಮವಾರ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಎರಡೂ ಪಕ್ಷಗಳ ನಾಯಕರನ್ನು ಟೀಕಿಸಿದರು. ನರೇಂದ್ರ ಮೋದಿ ಪ್ರಭಾವ ರಾಜ್ಯದಲ್ಲಿ ನಡೆಯುವುದಿಲ್ಲ ಎಂದರು.<br /> <br /> ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಈಗಾಗಲೇ ಪ್ರಧಾನಮಂತ್ರಿ ಆದಂತೆ ಭ್ರಮೆಯಲ್ಲಿದ್ದಾರೆ. ನರಹತ್ಯೆ ಮಾಡಿದ ಕಳಂಕ ಹೊತ್ತಿರುವ ಮೋದಿ ಅಕ್ಕಪಕ್ಕ ಜೈಲಿಗೆ ಹೋಗಿ ಬಂದವರು ಕುಳಿತಿರುತ್ತಾರೆ.<br /> <br /> ಮೋದಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಬಿಜೆಪಿ ಮೇಲ್ವರ್ಗದ ಮತ್ತು ಶ್ರೀಮಂತರ ಪರ ನಿಲುವು ಹೊಂದಿದೆ. ದಲಿತರು ಮತ್ತು ಅಲ್ಪಸಂಖ್ಯಾತರ ವಿರೋಧಿ ಎಂದು ಟೀಕಿಸಿದರು.<br /> <br /> ಸರ್ಕಾರ ಏನೇನು ಮಾಡಿದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದ ಸಂದರ್ಭ, ಮೊದಲು ನಮಗೆ ನೀರು ಕೊಡಿ ಎಂದು ಜನರು ಕೂಗಿದರು. ಎತ್ತಿನಹೊಳೆ ಯೋಜನೆಯಿಂದ ತಾಲ್ಲೂಕಿನ 45 ಕೆರೆಗಳಿಗೆ ನೀರು ಬರುತ್ತದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.<br /> <br /> ಶಾಸಕ ಕೆ.ಎನ್.ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಸಚಿವ ಟಿ.ಬಿ.ಜಯಚಂದ್ರ, ಶಾಸಕ ಎಂ.ಆರ್.ಸೀತಾರಾಮು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫೀಅಹ್ಮದ್, ಪುರಸಭೆ ಅಧ್ಯಕ್ಷ ಎನ್.ಗಂಗಣ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುನಂದಾ ಇತರರು ಭಾಗವಹಿಸಿದ್ದರು.<br /> <br /> <strong>ವಿರೋಧವಿಲ್ಲ: ಜಿಎಸ್ಬಿ</strong><br /> ಮಧುಗಿರಿ: ಎತ್ತಿನ ಹೊಳೆ ಯೋಜನೆ ಜಾರಿಗೆ ವಿರೋಧ ಮಾಡುವುದಿಲ್ಲ. ಆದರೆ ಸರ್ಕಾರ ಪರಮಶಿವಯ್ಯ ವರದಿ ಜಾರಿ ಮಾಡಿದರೆ ಜಿಲ್ಲೆಗೆ 50ರಿಂದ 60 ಟಿಎಂಸಿ ನೀರು ದೊರೆಯುತ್ತದೆ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.<br /> <br /> ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಮಾತನಾಡಿ. ಎಚ್ಎಎಲ್ ಯೋಜನೆಗೆ ಭೂಮಿ ನೀಡುವಂತೆ ಕೋರಿದರು.<br /> <br /> ತುಮಕೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ಗೆ ಭೂಮಿ ನೀಡಬೇಕು. ಕುಡಿಯುವ ನೀರಿಗಾಗಿ ನದಿ ಮೂಲದಿಂದ ನೀರು ತರುವ ಮೂಲಕ ಶಾಶ್ವತ ಯೋಜನೆ ರೂಪಿಸಬೇಕು ಎಂದು ಶಾಸಕ ಡಾ.ಎಂ.ಆರ್.ಹುಲಿನಾಯ್ಕರ್ ಕೋರಿದರು.<br /> <br /> <strong>ಸಚಿವ ಸ್ಥಾನಕ್ಕೆ ಕಾಲ ಬರಲಿ</strong><br /> ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕಾರ್ಯಕರ್ತರು ಕೂಗಿದರು. ರಾಜಣ್ಣಗೆ ಸಚಿವರಾಗುವ ಸಾಮರ್ಥ್ಯವಿದೆ. ಕಾಲ ಬರಲಿ, ಮುಂದೆ ಯೋಚನೆ ಮಾಡುತ್ತೇನೆಂದು ಸಿದ್ದರಾಮಯ್ಯ ಹೇಳಿದರು.<br /> <br /> <strong>ಸೋನಿಯಾ, ರಾಹುಲ್ ಪ್ರಧಾನಿ!</strong><br /> ದೇಶದ ಪ್ರಧಾನ ಮಂತ್ರಿಗಳಾದ ಸೋನಿಯಾಗಾಂಧಿ, ರಾಹುಲ್ಗಾಂಧಿ.... ಎಂದೇ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಭಾಷಣ ಆರಂಭಿಸಿ ಎಲ್ಲರಲ್ಲಿ ಅಚ್ಚರ ಮೂಡಿಸಿದರು.<br /> <br /> ಮುನಿಯಪ್ಪ ಮಾತನಾಡುತ್ತಿದ್ದ ಸಂದರ್ಭ ಸಿದ್ದರಾಮಯ್ಯ ಅವರಿಗೆ ಸನ್ಮಾನ ಮಾಡಲು ನೂಕುನುಗ್ಗಲು ಉಂಟಾಯಿತು. ಇದರಿಂದ ಸಿಟ್ಟಿಗೆದ್ದ ಸಚಿವರು ಕಾರ್ಯಕರ್ತರಿಗೆ ಮೈಕ್ನಲ್ಲೇ ಬೈದು ಕೆಳಗೆ ತಳ್ಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಧುಗಿರಿ: ಬಿಜೆಪಿ ಕೋಮುವಾದಿ. ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.<br /> ಪಟ್ಟಣದಲ್ಲಿ ಸೋಮವಾರ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಎರಡೂ ಪಕ್ಷಗಳ ನಾಯಕರನ್ನು ಟೀಕಿಸಿದರು. ನರೇಂದ್ರ ಮೋದಿ ಪ್ರಭಾವ ರಾಜ್ಯದಲ್ಲಿ ನಡೆಯುವುದಿಲ್ಲ ಎಂದರು.<br /> <br /> ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಈಗಾಗಲೇ ಪ್ರಧಾನಮಂತ್ರಿ ಆದಂತೆ ಭ್ರಮೆಯಲ್ಲಿದ್ದಾರೆ. ನರಹತ್ಯೆ ಮಾಡಿದ ಕಳಂಕ ಹೊತ್ತಿರುವ ಮೋದಿ ಅಕ್ಕಪಕ್ಕ ಜೈಲಿಗೆ ಹೋಗಿ ಬಂದವರು ಕುಳಿತಿರುತ್ತಾರೆ.<br /> <br /> ಮೋದಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಬಿಜೆಪಿ ಮೇಲ್ವರ್ಗದ ಮತ್ತು ಶ್ರೀಮಂತರ ಪರ ನಿಲುವು ಹೊಂದಿದೆ. ದಲಿತರು ಮತ್ತು ಅಲ್ಪಸಂಖ್ಯಾತರ ವಿರೋಧಿ ಎಂದು ಟೀಕಿಸಿದರು.<br /> <br /> ಸರ್ಕಾರ ಏನೇನು ಮಾಡಿದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದ ಸಂದರ್ಭ, ಮೊದಲು ನಮಗೆ ನೀರು ಕೊಡಿ ಎಂದು ಜನರು ಕೂಗಿದರು. ಎತ್ತಿನಹೊಳೆ ಯೋಜನೆಯಿಂದ ತಾಲ್ಲೂಕಿನ 45 ಕೆರೆಗಳಿಗೆ ನೀರು ಬರುತ್ತದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.<br /> <br /> ಶಾಸಕ ಕೆ.ಎನ್.ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಸಚಿವ ಟಿ.ಬಿ.ಜಯಚಂದ್ರ, ಶಾಸಕ ಎಂ.ಆರ್.ಸೀತಾರಾಮು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫೀಅಹ್ಮದ್, ಪುರಸಭೆ ಅಧ್ಯಕ್ಷ ಎನ್.ಗಂಗಣ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುನಂದಾ ಇತರರು ಭಾಗವಹಿಸಿದ್ದರು.<br /> <br /> <strong>ವಿರೋಧವಿಲ್ಲ: ಜಿಎಸ್ಬಿ</strong><br /> ಮಧುಗಿರಿ: ಎತ್ತಿನ ಹೊಳೆ ಯೋಜನೆ ಜಾರಿಗೆ ವಿರೋಧ ಮಾಡುವುದಿಲ್ಲ. ಆದರೆ ಸರ್ಕಾರ ಪರಮಶಿವಯ್ಯ ವರದಿ ಜಾರಿ ಮಾಡಿದರೆ ಜಿಲ್ಲೆಗೆ 50ರಿಂದ 60 ಟಿಎಂಸಿ ನೀರು ದೊರೆಯುತ್ತದೆ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.<br /> <br /> ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಮಾತನಾಡಿ. ಎಚ್ಎಎಲ್ ಯೋಜನೆಗೆ ಭೂಮಿ ನೀಡುವಂತೆ ಕೋರಿದರು.<br /> <br /> ತುಮಕೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ಗೆ ಭೂಮಿ ನೀಡಬೇಕು. ಕುಡಿಯುವ ನೀರಿಗಾಗಿ ನದಿ ಮೂಲದಿಂದ ನೀರು ತರುವ ಮೂಲಕ ಶಾಶ್ವತ ಯೋಜನೆ ರೂಪಿಸಬೇಕು ಎಂದು ಶಾಸಕ ಡಾ.ಎಂ.ಆರ್.ಹುಲಿನಾಯ್ಕರ್ ಕೋರಿದರು.<br /> <br /> <strong>ಸಚಿವ ಸ್ಥಾನಕ್ಕೆ ಕಾಲ ಬರಲಿ</strong><br /> ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕಾರ್ಯಕರ್ತರು ಕೂಗಿದರು. ರಾಜಣ್ಣಗೆ ಸಚಿವರಾಗುವ ಸಾಮರ್ಥ್ಯವಿದೆ. ಕಾಲ ಬರಲಿ, ಮುಂದೆ ಯೋಚನೆ ಮಾಡುತ್ತೇನೆಂದು ಸಿದ್ದರಾಮಯ್ಯ ಹೇಳಿದರು.<br /> <br /> <strong>ಸೋನಿಯಾ, ರಾಹುಲ್ ಪ್ರಧಾನಿ!</strong><br /> ದೇಶದ ಪ್ರಧಾನ ಮಂತ್ರಿಗಳಾದ ಸೋನಿಯಾಗಾಂಧಿ, ರಾಹುಲ್ಗಾಂಧಿ.... ಎಂದೇ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಭಾಷಣ ಆರಂಭಿಸಿ ಎಲ್ಲರಲ್ಲಿ ಅಚ್ಚರ ಮೂಡಿಸಿದರು.<br /> <br /> ಮುನಿಯಪ್ಪ ಮಾತನಾಡುತ್ತಿದ್ದ ಸಂದರ್ಭ ಸಿದ್ದರಾಮಯ್ಯ ಅವರಿಗೆ ಸನ್ಮಾನ ಮಾಡಲು ನೂಕುನುಗ್ಗಲು ಉಂಟಾಯಿತು. ಇದರಿಂದ ಸಿಟ್ಟಿಗೆದ್ದ ಸಚಿವರು ಕಾರ್ಯಕರ್ತರಿಗೆ ಮೈಕ್ನಲ್ಲೇ ಬೈದು ಕೆಳಗೆ ತಳ್ಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>