<p><strong>ಅಂತರಿಕ್ಷ ಶೋಧನೆ ಕ್ಷೇತ್ರದಲ್ಲಿ ಅಮೆರಿಕ-ರಷ್ಯ ಸಹಕಾರ</strong><br /> ವಾಷಿಂಗ್ಟನ್, ಮಾ. 17- ಹವಾಮಾನ ಮುನ್ಸೂಚನೆಗಾಗಿ ಜತೆಗೂಡಿ ಅಂತರಿಕ್ಷ ಯಾನದ ಉಪಗ್ರಹಗಳನ್ನು ಹಾರಿ ಬಿಡುವುದೂ ಸೇರಿ ಆರು ಅಂಶಗಳ ಅಂತರಿಕ್ಷ ಯಾನ ಸಹಕಾರ ಕಾರ್ಯಕ್ರಮವೊಂದನ್ನು ಅಧ್ಯಕ್ಷ ಕೆನೆಡಿಯವರು ರಷ್ಯಾ ಪ್ರಧಾನಮಂತ್ರಿ ನಿಕಿಟಾ ಖ್ರುಶ್ಚೋವರಿಗೆ ಸೂಚಿಸಿದ್ದಾರೆ.<br /> <br /> ಅಧ್ಯಕ್ಷರು ಈ ಸಲಹೆಗಳನ್ನುಳ್ಳ ಪತ್ರವನ್ನು ಖ್ರುಶ್ಚೋವರಿಗೆ ಮಾರ್ಚ್ 7 ರಂದು ಕಳಿಸಿದರೆಂದೂ ಶ್ವೇತಭವನವು ಇಂದು ತಿಳಿಸಿತು.<br /> <br /> ಕರ್ನಲ್ ಜಾನ್ಗ್ಲೆನ್ರ ಯಶಸ್ವಿ ಅಂತರಿಕ್ಷ ಯಾನಕ್ಕಾಗಿ ಅಭಿನಂದಿಸಿ ಅಂತರಿಕ್ಷ ಕಾರ್ಯಕ್ರಮಗಳಲ್ಲಿ ರಷ್ಯ-ಅಮೆರಿಕ ಸಹಕಾರವಿರಲೆಂದು ಸೂಚಿಸಿದ್ದ ಖ್ರುಶ್ಚೋವರ ಪತ್ರಕ್ಕೆ ಉತ್ತರವಾಗಿ ಅಧ್ಯಕ್ಷರು ಈ ಪತ್ರವನ್ನು ಕಳಿಸಿದ್ದಾರೆ.</p>.<p><strong>ಅಣು ಪ್ರಯೋಗಗಳು ಬೇಡ ಎಂದು ರಾಷ್ಟ್ರಗಳಿಗೆ ಒತ್ತಾಯ<br /> </strong>ಜಿನೀವಾ, ಮಾ. 17- ಕೊನೇ ಪಕ್ಷ ಸಮ್ಮೇಳನದ ಅವಧಿಯಲ್ಲಾದರೂ ಅಣು ಶಕ್ತಿಶಾಲಿ ದೇಶಗಳು ಪ್ರಯೋಗಗಳನ್ನು ನಡೆಸಬಾರದೆಂದು 17 ರಾಷ್ಟ್ರಗಳ ನಿಶ್ಶಸ್ತ್ರೀಕರಣ ಸಮ್ಮೇಳನದ ತಟಸ್ಥ ರಾಷ್ಟ್ರಗಳು ಮುಂದಿನ ವಾರ ಪ್ರತ್ಯೇಕವಾಗಿ ಕರೆ ಕೊಡುವ ನಿರೀಕ್ಷೆಯಿದೆ.<br /> <br /> ಸಮ್ಮೇಳನದ ಎಂಟು ತಟಸ್ಥ ರಾಷ್ಟ್ರಗಳ ನಡುವೆ ಈ ವಾರಾಂತ್ಯದಲ್ಲಿ ಬಿರುಸಿನಿಂದ ಸಮಾಲೋಚನೆಗಳು ನಡೆಯುತ್ತಿವೆ.<br /> <br /> ಈ ಸಮಾಲೋಚನೆಗಳಲ್ಲಿ ಭಾರತದ ರಕ್ಷಣಾ ಸಚಿವ ಶ್ರಿ ವಿ. ಕೆ. ಕೃಷ್ಣಮೆನನ್ ಪ್ರಮುಖ ಪಾತ್ರ ಹೊಂದಿದ್ದಾರೆ. ವಿದ್ಯುಕ್ತ ಮಹಾಧಿವೇಶನಗಳ ಜತೆಗೆ ಮುಂದಿನ ವಾರ ಖಾಸಗಿ ಸಭೆಗಳೂ ನಡೆಯಲು ಸಮ್ಮೇಳನ ಒಪ್ಪುವಂತೆ ಮಾಡುವುದರಲ್ಲಿ ಶ್ರಿ ಮೆನನ್ನರೇ ನಿನ್ನೆ ಹಿರಿಯ ಪಾತ್ರ ನಿರ್ವಹಿಸಿದರು.<br /> </p>.<p><strong>ಉದಯಪುರದಲ್ಲಿ ಶ್ರಿಮತಿ ಕೆನೆಡಿಗೆ ಭವ್ಯ ಸ್ವಾಗತ</strong><br /> ಉದಯಪುರ, ಮಾ. 17- ಶುಕ್ರವಾರ ಇಲ್ಲಿಗೆ ಆಗಮಿಸಿದ ಅಮೆರಿಕಾದ ಪ್ರಥಮ ಮಹಿಳೆ ಶ್ರಿಮತಿ ಕೆನೆಡಿ ಅವರಿಗೆ ಭವ್ಯ ಸ್ವಾಗತ ನೀಡಲಾಯ್ತು.<br /> <br /> ಸುಂದರ ನಗರವಾದ ಉದಯಪುರಕ್ಕೆ ಮುಂಚಿತವಾಗಿಯೇ ಆಗಮಿಸಬೇಕಾಗಿದ್ದ ಶ್ರಿಮತಿ ಕೆನೆಡಿಯವರು ಪುರಾತನ ಭಾರತದ ದರ್ಶನಕ್ಕಾಗಿ ಕಾಶಿಗೆ ಭೇಟಿ ಕೊಡಲು ಕಾರ್ಯಕ್ರಮವನ್ನು ಬದಲಾಯಿಸಿದರು.<br /> <br /> ಸಂಜೆ ಆಗಮಿಸಿದ ಶ್ರಿಮತಿ ಕೆನೆಡಿಯವರನ್ನು ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಶ್ರಿ ಮೋಹನ್ಲಾಲ್ ಸುಖಾಡಿಯಾ, ಶ್ರಿಮತಿ ಸುಖಾಡಿಯಾ ಹಾಗೂ ಉದಯಪುರದ ಮಹಾರಾಜರೂ ಸ್ವಾಗತಿಸಿದರು.<br /> <br /> ಶ್ರಿಮತಿ ಕೆನೆಡಿಯವರು ಕಾಶಿಯಿಂದ ಪ್ರಯಾಣ ಮಾಡುವುದಕ್ಕೆ ಮುಂಚೆ ಪ್ರಸಿದ್ಧ ಬೌದ್ಧ ವಿಹಾರವಾದ ಸಾರನಾಥಕ್ಕೂ ಭೇಟಿ ಕೊಟ್ಟರು.<br /> </p>.<p><strong>ನಾಳೆ ಅಂತ್ಯಘಟ್ಟ ತಲಪುವ ನಿರೀಕ್ಷೆ</strong><br /> ಬೆಂಗಳೂರು, ಮಾ. 17- ರಾಜ್ಯದಲ್ಲಿ ಉಳಿದ 5 ಮಂದಿ ಸಚಿವರು ಹಾಗೂ 8 ಮಂದಿ ಉಪಸಚಿವರ ನೇಮಕ ಸಂಬಂಧದಲ್ಲಿ ಮುಖ್ಯಮಂತ್ರಿ ಶ್ರಿ ಎಸ್.ಆರ್. ಕಂಠಿ ಅವರು ನಾಳೆ ಸೋಮವಾರದ ಹೊತ್ತಿಗೆ ತೀರ್ಮಾನ ಕೈಗೊಳ್ಳುವ ಘಟ್ಟವನ್ನು ತಲುಪುವರೆಂದು ಪಕ್ಷದ ವಲಯಗಳಲ್ಲಿ ನಿರೀಕ್ಷಿಸಲಾಗಿದೆ.<br /> <br /> ಇಂದು ಸಂಜೆ ಭೇಟಿ ಮಾಡಿದ ವರದಿಗಾರರು ಮಂತ್ರಿಮಂಡಲ ರಚನೆಯ ಕಾರ್ಯವನ್ನು ಪೂರೈಸುವ ಬಗ್ಗೆ ಕೇಳಿದಾಗ ಮುಖ್ಯಮಂತ್ರಿಗಳು ಆ ಪ್ರಯತ್ನದಲ್ಲಿದ್ದೇನೆ ಎಂದು ಮಾತ್ರ ಹೇಳಿದರು. ಹೆಚ್ಚಿನ ವಿವರಗಳನ್ನು ನೀಡಬಯಸಲಿಲ್ಲ.<br /> <br /> ಹೈಕಮಾಂಡಿನ ಸಲಹೆಯಂತೆ ವಿಶಾಲ ತಳಹದಿಯ ಮಂತ್ರಿಮಂಡಲ ರಚಿಸುವ ಆಸಕ್ತಿ ಮುಖ್ಯಮಂತ್ರಿಗಳಿರುವುದು ಅವರ ಹೇಳಿಕೆಗಳಿಂದ ವ್ಯಕ್ತವಾಗಿದೆ. ಆದರೆ ಈ ಪ್ರಯತ್ನದಲ್ಲಿ ಅವರಿನ್ನೂ ಯಶಸ್ಸು ಗಳಿಸಿಲ್ಲದಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಂತರಿಕ್ಷ ಶೋಧನೆ ಕ್ಷೇತ್ರದಲ್ಲಿ ಅಮೆರಿಕ-ರಷ್ಯ ಸಹಕಾರ</strong><br /> ವಾಷಿಂಗ್ಟನ್, ಮಾ. 17- ಹವಾಮಾನ ಮುನ್ಸೂಚನೆಗಾಗಿ ಜತೆಗೂಡಿ ಅಂತರಿಕ್ಷ ಯಾನದ ಉಪಗ್ರಹಗಳನ್ನು ಹಾರಿ ಬಿಡುವುದೂ ಸೇರಿ ಆರು ಅಂಶಗಳ ಅಂತರಿಕ್ಷ ಯಾನ ಸಹಕಾರ ಕಾರ್ಯಕ್ರಮವೊಂದನ್ನು ಅಧ್ಯಕ್ಷ ಕೆನೆಡಿಯವರು ರಷ್ಯಾ ಪ್ರಧಾನಮಂತ್ರಿ ನಿಕಿಟಾ ಖ್ರುಶ್ಚೋವರಿಗೆ ಸೂಚಿಸಿದ್ದಾರೆ.<br /> <br /> ಅಧ್ಯಕ್ಷರು ಈ ಸಲಹೆಗಳನ್ನುಳ್ಳ ಪತ್ರವನ್ನು ಖ್ರುಶ್ಚೋವರಿಗೆ ಮಾರ್ಚ್ 7 ರಂದು ಕಳಿಸಿದರೆಂದೂ ಶ್ವೇತಭವನವು ಇಂದು ತಿಳಿಸಿತು.<br /> <br /> ಕರ್ನಲ್ ಜಾನ್ಗ್ಲೆನ್ರ ಯಶಸ್ವಿ ಅಂತರಿಕ್ಷ ಯಾನಕ್ಕಾಗಿ ಅಭಿನಂದಿಸಿ ಅಂತರಿಕ್ಷ ಕಾರ್ಯಕ್ರಮಗಳಲ್ಲಿ ರಷ್ಯ-ಅಮೆರಿಕ ಸಹಕಾರವಿರಲೆಂದು ಸೂಚಿಸಿದ್ದ ಖ್ರುಶ್ಚೋವರ ಪತ್ರಕ್ಕೆ ಉತ್ತರವಾಗಿ ಅಧ್ಯಕ್ಷರು ಈ ಪತ್ರವನ್ನು ಕಳಿಸಿದ್ದಾರೆ.</p>.<p><strong>ಅಣು ಪ್ರಯೋಗಗಳು ಬೇಡ ಎಂದು ರಾಷ್ಟ್ರಗಳಿಗೆ ಒತ್ತಾಯ<br /> </strong>ಜಿನೀವಾ, ಮಾ. 17- ಕೊನೇ ಪಕ್ಷ ಸಮ್ಮೇಳನದ ಅವಧಿಯಲ್ಲಾದರೂ ಅಣು ಶಕ್ತಿಶಾಲಿ ದೇಶಗಳು ಪ್ರಯೋಗಗಳನ್ನು ನಡೆಸಬಾರದೆಂದು 17 ರಾಷ್ಟ್ರಗಳ ನಿಶ್ಶಸ್ತ್ರೀಕರಣ ಸಮ್ಮೇಳನದ ತಟಸ್ಥ ರಾಷ್ಟ್ರಗಳು ಮುಂದಿನ ವಾರ ಪ್ರತ್ಯೇಕವಾಗಿ ಕರೆ ಕೊಡುವ ನಿರೀಕ್ಷೆಯಿದೆ.<br /> <br /> ಸಮ್ಮೇಳನದ ಎಂಟು ತಟಸ್ಥ ರಾಷ್ಟ್ರಗಳ ನಡುವೆ ಈ ವಾರಾಂತ್ಯದಲ್ಲಿ ಬಿರುಸಿನಿಂದ ಸಮಾಲೋಚನೆಗಳು ನಡೆಯುತ್ತಿವೆ.<br /> <br /> ಈ ಸಮಾಲೋಚನೆಗಳಲ್ಲಿ ಭಾರತದ ರಕ್ಷಣಾ ಸಚಿವ ಶ್ರಿ ವಿ. ಕೆ. ಕೃಷ್ಣಮೆನನ್ ಪ್ರಮುಖ ಪಾತ್ರ ಹೊಂದಿದ್ದಾರೆ. ವಿದ್ಯುಕ್ತ ಮಹಾಧಿವೇಶನಗಳ ಜತೆಗೆ ಮುಂದಿನ ವಾರ ಖಾಸಗಿ ಸಭೆಗಳೂ ನಡೆಯಲು ಸಮ್ಮೇಳನ ಒಪ್ಪುವಂತೆ ಮಾಡುವುದರಲ್ಲಿ ಶ್ರಿ ಮೆನನ್ನರೇ ನಿನ್ನೆ ಹಿರಿಯ ಪಾತ್ರ ನಿರ್ವಹಿಸಿದರು.<br /> </p>.<p><strong>ಉದಯಪುರದಲ್ಲಿ ಶ್ರಿಮತಿ ಕೆನೆಡಿಗೆ ಭವ್ಯ ಸ್ವಾಗತ</strong><br /> ಉದಯಪುರ, ಮಾ. 17- ಶುಕ್ರವಾರ ಇಲ್ಲಿಗೆ ಆಗಮಿಸಿದ ಅಮೆರಿಕಾದ ಪ್ರಥಮ ಮಹಿಳೆ ಶ್ರಿಮತಿ ಕೆನೆಡಿ ಅವರಿಗೆ ಭವ್ಯ ಸ್ವಾಗತ ನೀಡಲಾಯ್ತು.<br /> <br /> ಸುಂದರ ನಗರವಾದ ಉದಯಪುರಕ್ಕೆ ಮುಂಚಿತವಾಗಿಯೇ ಆಗಮಿಸಬೇಕಾಗಿದ್ದ ಶ್ರಿಮತಿ ಕೆನೆಡಿಯವರು ಪುರಾತನ ಭಾರತದ ದರ್ಶನಕ್ಕಾಗಿ ಕಾಶಿಗೆ ಭೇಟಿ ಕೊಡಲು ಕಾರ್ಯಕ್ರಮವನ್ನು ಬದಲಾಯಿಸಿದರು.<br /> <br /> ಸಂಜೆ ಆಗಮಿಸಿದ ಶ್ರಿಮತಿ ಕೆನೆಡಿಯವರನ್ನು ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಶ್ರಿ ಮೋಹನ್ಲಾಲ್ ಸುಖಾಡಿಯಾ, ಶ್ರಿಮತಿ ಸುಖಾಡಿಯಾ ಹಾಗೂ ಉದಯಪುರದ ಮಹಾರಾಜರೂ ಸ್ವಾಗತಿಸಿದರು.<br /> <br /> ಶ್ರಿಮತಿ ಕೆನೆಡಿಯವರು ಕಾಶಿಯಿಂದ ಪ್ರಯಾಣ ಮಾಡುವುದಕ್ಕೆ ಮುಂಚೆ ಪ್ರಸಿದ್ಧ ಬೌದ್ಧ ವಿಹಾರವಾದ ಸಾರನಾಥಕ್ಕೂ ಭೇಟಿ ಕೊಟ್ಟರು.<br /> </p>.<p><strong>ನಾಳೆ ಅಂತ್ಯಘಟ್ಟ ತಲಪುವ ನಿರೀಕ್ಷೆ</strong><br /> ಬೆಂಗಳೂರು, ಮಾ. 17- ರಾಜ್ಯದಲ್ಲಿ ಉಳಿದ 5 ಮಂದಿ ಸಚಿವರು ಹಾಗೂ 8 ಮಂದಿ ಉಪಸಚಿವರ ನೇಮಕ ಸಂಬಂಧದಲ್ಲಿ ಮುಖ್ಯಮಂತ್ರಿ ಶ್ರಿ ಎಸ್.ಆರ್. ಕಂಠಿ ಅವರು ನಾಳೆ ಸೋಮವಾರದ ಹೊತ್ತಿಗೆ ತೀರ್ಮಾನ ಕೈಗೊಳ್ಳುವ ಘಟ್ಟವನ್ನು ತಲುಪುವರೆಂದು ಪಕ್ಷದ ವಲಯಗಳಲ್ಲಿ ನಿರೀಕ್ಷಿಸಲಾಗಿದೆ.<br /> <br /> ಇಂದು ಸಂಜೆ ಭೇಟಿ ಮಾಡಿದ ವರದಿಗಾರರು ಮಂತ್ರಿಮಂಡಲ ರಚನೆಯ ಕಾರ್ಯವನ್ನು ಪೂರೈಸುವ ಬಗ್ಗೆ ಕೇಳಿದಾಗ ಮುಖ್ಯಮಂತ್ರಿಗಳು ಆ ಪ್ರಯತ್ನದಲ್ಲಿದ್ದೇನೆ ಎಂದು ಮಾತ್ರ ಹೇಳಿದರು. ಹೆಚ್ಚಿನ ವಿವರಗಳನ್ನು ನೀಡಬಯಸಲಿಲ್ಲ.<br /> <br /> ಹೈಕಮಾಂಡಿನ ಸಲಹೆಯಂತೆ ವಿಶಾಲ ತಳಹದಿಯ ಮಂತ್ರಿಮಂಡಲ ರಚಿಸುವ ಆಸಕ್ತಿ ಮುಖ್ಯಮಂತ್ರಿಗಳಿರುವುದು ಅವರ ಹೇಳಿಕೆಗಳಿಂದ ವ್ಯಕ್ತವಾಗಿದೆ. ಆದರೆ ಈ ಪ್ರಯತ್ನದಲ್ಲಿ ಅವರಿನ್ನೂ ಯಶಸ್ಸು ಗಳಿಸಿಲ್ಲದಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>