<p>ನಿರ್ಮಾಪಕ : ಶ್ರೀಧರನ್<br /> ನಿರ್ದೇಶಕ : ಗಣೇಶ್ ಕಾಮರಾಜ್<br /> ತಾರಾಗಣ : ಅಚ್ಯುತಕುಮಾರ್, ಹರೀಶ್ ರಾಜ್, ದಿಲೀಪ್ ರಾಜ್, ಧರ್ಮ, ಕಲಾಭವನ್ ಮಣಿ, ರಿಯಾಜ್ ಖಾನ್, ಸಂಜನಾ ಸಿಂಗ್, ಇತರರು</p>.<p>ಅಜ್ಞಾತ ಸ್ಥಳವೊಂದಕ್ಕೆ ಹೋದಾಗ ಉಸಿರುಗಟ್ಟಿದಂತೆ ಮುಜುಗರವಾಗುವುದು ಸಹಜ. `ಚಾಲೆಂಜ್~ ಚಿತ್ರದಲ್ಲಿನ ಅಜ್ಞಾತ ಪ್ರದೇಶದಲ್ಲಿ ಬಂಧಿಯಾಗಿರುವ ಆರು ಮಂದಿಯ ಪರಿಸ್ಥಿತಿ ಇನ್ನೂ ಉಸಿರುಗಟ್ಟಿಸುವಂತಿದೆ. ಸ್ಥಳವಷ್ಟೇ ಅಪರಿಚಿತವಲ್ಲ- ಅವರು ಪರಸ್ಪರ ಒಬ್ಬರಿಗೊಬ್ಬರು ಅಪರಿಚಿತರು. ತಮಗೆ ತಾವು ಯಾರೆನ್ನುವುದು ತಿಳಿಯದ ಅಪರಿಚಿತರು! <br /> <br /> ತಾವು ಯಾರು? ಇಲ್ಲಿ ಯಾಕೆ ಬಂಧಿಯಾಗಿದ್ದೇವೆ? ಇಲ್ಲಿಂದ ಹೊರಗೆ ಹೋಗುವುದು ಹೇಗೆ?- ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಾ, ಒಬ್ಬರನ್ನೊಬ್ಬರು ಅನುಮಾನಿಸುತ್ತಾ ಸಾಗುವ ಕಥೆ `ಚಾಲೆಂಜ್~ ಚಿತ್ರದ್ದು. ಸಿನಿಮಾ ಭಿನ್ನವೆಂದು ಹೇಳಲಿಕ್ಕೆ ಇಷ್ಟು ಕಥಾಹಂದರ ಸಾಕು. ಪ್ರೇಮ ಹಾಗೂ ಹಿಂಸಾಚಾರದ ಚೌಕಟ್ಟಿನ ಚಿತ್ರಗಳ ನಡುವೆ ಇದು ನಿಸ್ಸಂಶಯವಾಗಿ ಭಿನ್ನ ಸಿನಿಮಾ.<br /> <br /> ಕಥೆ ಭಿನ್ನವಾಗಿರುವುದಷ್ಟೇ ಸಿನಿಮಾದ ವಿಶೇಷವಲ್ಲ. ವ್ಯಕ್ತಿಯೊಳಗಿನ ಸಣ್ಣತನಗಳನ್ನೂ ಮನಸ್ಸಿನೊಳಗಿನ ಮೃಗವನ್ನೂ ಕಾಣಿಸುತ್ತಲೇ, ಅವೆಲ್ಲವನ್ನೂ ಮೀರಿ ನಿಲ್ಲುವ ಮಾನವೀಯತೆಯನ್ನು ಚಿತ್ರ ಪ್ರತಿಪಾದಿಸುತ್ತದೆ, ಆ ಕಾರಣಕ್ಕೇ ಇಷ್ಟವಾಗುತ್ತದೆ. ಎದೆಗೆ ಗುಂಡು ತೂರಿಸಿಕೊಂಡು ಸಾಯುತ್ತಾ ಬಿದ್ದಿರುವ ಖಳ ತನ್ನ ಅಳಿಯನಿಗೆ ಹೇಳುತ್ತಾನೆ- `ಬೇಗ ಮನೆಗೆ ಹೋಗು. ಅಲ್ಲಿ ನನ್ನ ಮಗಳು ಊಟ ಮಾಡದೆ ನಿನಗಾಗಿ ಕಾಯುತ್ತಿದ್ದಾಳೆ~.<br /> <br /> ಇಲ್ಲಿನ ಮುಖ್ಯ ಪಾತ್ರಗಳಿಗೆ ಮೂರು ಆಯಾಮಗಳಿವೆ. ನೆನಪು ಕಳೆದುಕೊಳ್ಳುವ ಮುಖ ಮೊದಲನೆಯದು. ಮರೆವಿನಲ್ಲಿನ ಅಯೋಮಯ ಪರಿಸ್ಥಿತಿ ಹಾಗೂ ನೆನಪು ಮರುಕಳಿಸುವ ಸ್ಥಿತಿ ಉಳಿದೆರಡು ಮುಖಗಳು. <br /> <br /> ಮೊದಲ ಹಂತದಲ್ಲಿ ಕ್ರೂರಿಯಾಗಿದ್ದ ವ್ಯಕ್ತಿ, ಮರೆವಿನಲ್ಲಿ ಮಾನವೀಯತೆ ಮೈಗೂಡಿಸಿಕೊಂಡು, ಎಚ್ಚರದ ನಂತರವೂ ಮಾನವೀಯವಾಗಿಯೇ ಉಳಿಯಲು ಬಯಸುತ್ತಾನೆ. ಇಲ್ಲಿನ ಮರೆವು ಒಂದರ್ಥದಲ್ಲಿ ಪುನರ್ಜನ್ಮ ಕೂಡ. ಕಥೆಯ ಈ ಆರೋಗ್ಯಕರ ಧೋರಣೆ ಸಿನಿಮಾದ ಅರ್ಥ ಸಾಧ್ಯತೆಯನ್ನು ಹೆಚ್ಚಿಸುತ್ತದೆ.<br /> <br /> ಖ್ಯಾತನಾಮರಿಲ್ಲದೆ ಸಿನಿಮಾ ರೂಪಿಸುವ `ಚಾಲೆಂಜ್~ಗೆ ಮುಖಾಮುಖಿ ಆಗಿರುವ, ತಮಿಳು ಮೂಲದ ನಿರ್ದೇಶಕ ಗಣೇಶ್ ಕಾಮರಾಜ್ ಅವರದು ಪ್ರಯೋಗಶೀಲ ಮನಸು. ಚಿತ್ರಕಥೆಯ ಬಿಗಿಯಲ್ಲಿ, ನಿರೂಪಣೆಯ ಕಸುಬುದಾರಿಕೆಯಲ್ಲಿ ಅವರು ಗಮನಸೆಳೆಯುತ್ತಾರೆ.<br /> <br /> ಫ್ಯಾಕ್ಟರಿಯ ಮಂಕು ಬೆಳಕಲ್ಲಿ ಆರು ಮಂದಿ ಅಪರಿಚಿತರನ್ನು ಒಟ್ಟಿಗೆ ಸೇರಿಸಿ ಕಥೆ ಕಟ್ಟುವುದು, ಆ ಮೂಲಕ ಪ್ರೇಕ್ಷಕರನ್ನು ಹಿಡಿದಿಡುವುದು ಸುಲಭವಲ್ಲ. ಈ ಸವಾಲನ್ನು ಗಣೇಶ್ ಪರಿಣಾಮಕಾರಿಯಾಗಿಯೇ ಎದುರಿಸಿದ್ದಾರೆ.<br /> <br /> ವಿಷಾನಿಲದಿಂದ ನೆನಪು ಕಳಕೊಂಡವರ ತಾಕಲಾಟಗಳ ಮೊದಲರ್ಧ ಹಾಗೂ ಉತ್ತರಾರ್ಧದಲ್ಲಿನ ಮಾದಕ ವಸ್ತು ಜಾಲದ ಕಥನಗಳ ಹೆಣಿಗೆ ಬಿಗಿಯಾಗಿದೆ. ಕಣ್ಣನ್ ಸಂಗೀತ, ಮಗೇಶ್ ಕೆ. ದೇವ್ ಛಾಯಾಗ್ರಹಣ, ಶಾನ್ ಸಂಭಾಷಣೆ- ಯಾವುದೂ ಅತಿರೇಕದಿಂದ ಕೂಡಿಲ್ಲ. <br /> <br /> ಸಮಯದ ಗೊಂಬೆಗಳ ಪಾತ್ರದಲ್ಲಿ ಅಚ್ಯುತಕುಮಾರ್, ದಿಲೀಪ್ ರಾಜ್, ಕಲಾಭವನ ಮಣಿ ಹಾಗೂ ಹರೀಶ್ ರಾಜ್ ಗಮನಸೆಳೆಯುತ್ತಾರೆ. ಒಂದೇ ದೃಶ್ಯದಲ್ಲಿ ಕಾಣಿಸಿಕೊಂಡು ನಾಲ್ಕೇ ಮಾತುಗಳಾಡಿದರೂ ಬಿರಾದಾರ್ ನೆನಪಿನಲ್ಲಿ ಉಳಿಯುತ್ತಾರೆ.<br /> <br /> ಭ್ರಷ್ಟಾಚಾರ ಹಾಗೂ ಹಿಂಸೆಯ ಕಥನಗಳೇ ವ್ಯಾಪಕವಾಗಿರುವ ಸಮಕಾಲೀನ ಸಮಾಜಕ್ಕೂ ಒಮ್ಮೆ ಈ ಮರೆವು ವ್ಯಾಪಿಸಿಕೊಂಡರೆ ಹೇಗೆ ಎನ್ನುವ ಕಲ್ಪನೆಗೆ `ಚಾಲೆಂಜ್~ ಎಡೆ ಮಾಡಿಕೊಡುತ್ತದೆ. ಹೀಗೆ, ನಮ್ಮಳಗೆ ಬೆಳೆಯುವ ಚಿತ್ರಕಥೆಗಳ ಉದಾಹರಣೆಗಳು ಈಚೆಗೆ ಅಪರೂಪ ಎನ್ನುವುದು ಕೂಡ `ಚಾಲೆಂಜ್~ಗೆ ಸಲ್ಲುವ ಮೆಚ್ಚುಗೆಯೇ ಆಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಿರ್ಮಾಪಕ : ಶ್ರೀಧರನ್<br /> ನಿರ್ದೇಶಕ : ಗಣೇಶ್ ಕಾಮರಾಜ್<br /> ತಾರಾಗಣ : ಅಚ್ಯುತಕುಮಾರ್, ಹರೀಶ್ ರಾಜ್, ದಿಲೀಪ್ ರಾಜ್, ಧರ್ಮ, ಕಲಾಭವನ್ ಮಣಿ, ರಿಯಾಜ್ ಖಾನ್, ಸಂಜನಾ ಸಿಂಗ್, ಇತರರು</p>.<p>ಅಜ್ಞಾತ ಸ್ಥಳವೊಂದಕ್ಕೆ ಹೋದಾಗ ಉಸಿರುಗಟ್ಟಿದಂತೆ ಮುಜುಗರವಾಗುವುದು ಸಹಜ. `ಚಾಲೆಂಜ್~ ಚಿತ್ರದಲ್ಲಿನ ಅಜ್ಞಾತ ಪ್ರದೇಶದಲ್ಲಿ ಬಂಧಿಯಾಗಿರುವ ಆರು ಮಂದಿಯ ಪರಿಸ್ಥಿತಿ ಇನ್ನೂ ಉಸಿರುಗಟ್ಟಿಸುವಂತಿದೆ. ಸ್ಥಳವಷ್ಟೇ ಅಪರಿಚಿತವಲ್ಲ- ಅವರು ಪರಸ್ಪರ ಒಬ್ಬರಿಗೊಬ್ಬರು ಅಪರಿಚಿತರು. ತಮಗೆ ತಾವು ಯಾರೆನ್ನುವುದು ತಿಳಿಯದ ಅಪರಿಚಿತರು! <br /> <br /> ತಾವು ಯಾರು? ಇಲ್ಲಿ ಯಾಕೆ ಬಂಧಿಯಾಗಿದ್ದೇವೆ? ಇಲ್ಲಿಂದ ಹೊರಗೆ ಹೋಗುವುದು ಹೇಗೆ?- ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಾ, ಒಬ್ಬರನ್ನೊಬ್ಬರು ಅನುಮಾನಿಸುತ್ತಾ ಸಾಗುವ ಕಥೆ `ಚಾಲೆಂಜ್~ ಚಿತ್ರದ್ದು. ಸಿನಿಮಾ ಭಿನ್ನವೆಂದು ಹೇಳಲಿಕ್ಕೆ ಇಷ್ಟು ಕಥಾಹಂದರ ಸಾಕು. ಪ್ರೇಮ ಹಾಗೂ ಹಿಂಸಾಚಾರದ ಚೌಕಟ್ಟಿನ ಚಿತ್ರಗಳ ನಡುವೆ ಇದು ನಿಸ್ಸಂಶಯವಾಗಿ ಭಿನ್ನ ಸಿನಿಮಾ.<br /> <br /> ಕಥೆ ಭಿನ್ನವಾಗಿರುವುದಷ್ಟೇ ಸಿನಿಮಾದ ವಿಶೇಷವಲ್ಲ. ವ್ಯಕ್ತಿಯೊಳಗಿನ ಸಣ್ಣತನಗಳನ್ನೂ ಮನಸ್ಸಿನೊಳಗಿನ ಮೃಗವನ್ನೂ ಕಾಣಿಸುತ್ತಲೇ, ಅವೆಲ್ಲವನ್ನೂ ಮೀರಿ ನಿಲ್ಲುವ ಮಾನವೀಯತೆಯನ್ನು ಚಿತ್ರ ಪ್ರತಿಪಾದಿಸುತ್ತದೆ, ಆ ಕಾರಣಕ್ಕೇ ಇಷ್ಟವಾಗುತ್ತದೆ. ಎದೆಗೆ ಗುಂಡು ತೂರಿಸಿಕೊಂಡು ಸಾಯುತ್ತಾ ಬಿದ್ದಿರುವ ಖಳ ತನ್ನ ಅಳಿಯನಿಗೆ ಹೇಳುತ್ತಾನೆ- `ಬೇಗ ಮನೆಗೆ ಹೋಗು. ಅಲ್ಲಿ ನನ್ನ ಮಗಳು ಊಟ ಮಾಡದೆ ನಿನಗಾಗಿ ಕಾಯುತ್ತಿದ್ದಾಳೆ~.<br /> <br /> ಇಲ್ಲಿನ ಮುಖ್ಯ ಪಾತ್ರಗಳಿಗೆ ಮೂರು ಆಯಾಮಗಳಿವೆ. ನೆನಪು ಕಳೆದುಕೊಳ್ಳುವ ಮುಖ ಮೊದಲನೆಯದು. ಮರೆವಿನಲ್ಲಿನ ಅಯೋಮಯ ಪರಿಸ್ಥಿತಿ ಹಾಗೂ ನೆನಪು ಮರುಕಳಿಸುವ ಸ್ಥಿತಿ ಉಳಿದೆರಡು ಮುಖಗಳು. <br /> <br /> ಮೊದಲ ಹಂತದಲ್ಲಿ ಕ್ರೂರಿಯಾಗಿದ್ದ ವ್ಯಕ್ತಿ, ಮರೆವಿನಲ್ಲಿ ಮಾನವೀಯತೆ ಮೈಗೂಡಿಸಿಕೊಂಡು, ಎಚ್ಚರದ ನಂತರವೂ ಮಾನವೀಯವಾಗಿಯೇ ಉಳಿಯಲು ಬಯಸುತ್ತಾನೆ. ಇಲ್ಲಿನ ಮರೆವು ಒಂದರ್ಥದಲ್ಲಿ ಪುನರ್ಜನ್ಮ ಕೂಡ. ಕಥೆಯ ಈ ಆರೋಗ್ಯಕರ ಧೋರಣೆ ಸಿನಿಮಾದ ಅರ್ಥ ಸಾಧ್ಯತೆಯನ್ನು ಹೆಚ್ಚಿಸುತ್ತದೆ.<br /> <br /> ಖ್ಯಾತನಾಮರಿಲ್ಲದೆ ಸಿನಿಮಾ ರೂಪಿಸುವ `ಚಾಲೆಂಜ್~ಗೆ ಮುಖಾಮುಖಿ ಆಗಿರುವ, ತಮಿಳು ಮೂಲದ ನಿರ್ದೇಶಕ ಗಣೇಶ್ ಕಾಮರಾಜ್ ಅವರದು ಪ್ರಯೋಗಶೀಲ ಮನಸು. ಚಿತ್ರಕಥೆಯ ಬಿಗಿಯಲ್ಲಿ, ನಿರೂಪಣೆಯ ಕಸುಬುದಾರಿಕೆಯಲ್ಲಿ ಅವರು ಗಮನಸೆಳೆಯುತ್ತಾರೆ.<br /> <br /> ಫ್ಯಾಕ್ಟರಿಯ ಮಂಕು ಬೆಳಕಲ್ಲಿ ಆರು ಮಂದಿ ಅಪರಿಚಿತರನ್ನು ಒಟ್ಟಿಗೆ ಸೇರಿಸಿ ಕಥೆ ಕಟ್ಟುವುದು, ಆ ಮೂಲಕ ಪ್ರೇಕ್ಷಕರನ್ನು ಹಿಡಿದಿಡುವುದು ಸುಲಭವಲ್ಲ. ಈ ಸವಾಲನ್ನು ಗಣೇಶ್ ಪರಿಣಾಮಕಾರಿಯಾಗಿಯೇ ಎದುರಿಸಿದ್ದಾರೆ.<br /> <br /> ವಿಷಾನಿಲದಿಂದ ನೆನಪು ಕಳಕೊಂಡವರ ತಾಕಲಾಟಗಳ ಮೊದಲರ್ಧ ಹಾಗೂ ಉತ್ತರಾರ್ಧದಲ್ಲಿನ ಮಾದಕ ವಸ್ತು ಜಾಲದ ಕಥನಗಳ ಹೆಣಿಗೆ ಬಿಗಿಯಾಗಿದೆ. ಕಣ್ಣನ್ ಸಂಗೀತ, ಮಗೇಶ್ ಕೆ. ದೇವ್ ಛಾಯಾಗ್ರಹಣ, ಶಾನ್ ಸಂಭಾಷಣೆ- ಯಾವುದೂ ಅತಿರೇಕದಿಂದ ಕೂಡಿಲ್ಲ. <br /> <br /> ಸಮಯದ ಗೊಂಬೆಗಳ ಪಾತ್ರದಲ್ಲಿ ಅಚ್ಯುತಕುಮಾರ್, ದಿಲೀಪ್ ರಾಜ್, ಕಲಾಭವನ ಮಣಿ ಹಾಗೂ ಹರೀಶ್ ರಾಜ್ ಗಮನಸೆಳೆಯುತ್ತಾರೆ. ಒಂದೇ ದೃಶ್ಯದಲ್ಲಿ ಕಾಣಿಸಿಕೊಂಡು ನಾಲ್ಕೇ ಮಾತುಗಳಾಡಿದರೂ ಬಿರಾದಾರ್ ನೆನಪಿನಲ್ಲಿ ಉಳಿಯುತ್ತಾರೆ.<br /> <br /> ಭ್ರಷ್ಟಾಚಾರ ಹಾಗೂ ಹಿಂಸೆಯ ಕಥನಗಳೇ ವ್ಯಾಪಕವಾಗಿರುವ ಸಮಕಾಲೀನ ಸಮಾಜಕ್ಕೂ ಒಮ್ಮೆ ಈ ಮರೆವು ವ್ಯಾಪಿಸಿಕೊಂಡರೆ ಹೇಗೆ ಎನ್ನುವ ಕಲ್ಪನೆಗೆ `ಚಾಲೆಂಜ್~ ಎಡೆ ಮಾಡಿಕೊಡುತ್ತದೆ. ಹೀಗೆ, ನಮ್ಮಳಗೆ ಬೆಳೆಯುವ ಚಿತ್ರಕಥೆಗಳ ಉದಾಹರಣೆಗಳು ಈಚೆಗೆ ಅಪರೂಪ ಎನ್ನುವುದು ಕೂಡ `ಚಾಲೆಂಜ್~ಗೆ ಸಲ್ಲುವ ಮೆಚ್ಚುಗೆಯೇ ಆಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>