<p><strong>ಮುಂಡರಗಿ:</strong> `ಮಹಿಳಾ ವಿಶ್ವವಿದ್ಯಾಲ ಯದಲ್ಲಿ ಈಗಿರುವ 22 ವಿಭಾಗಗಳ ಜೊತೆಗೆ ಫ್ಯಾಶನ್ ಡಿಸೈನಿಂಗ್, ಟೂರಿಸಂ ಮತ್ತು ಹೋಟೆಲ್ ಮ್ಯಾನೇಜ್ಮೆಂಟ್ನಂತಹ ಕೆಲವು ಉಪಯುಕ್ತ ಕೋರ್ಸುಗಳನ್ನು ಪ್ರಾರಂಭಿಸಲಾಗುವುದು~ ಎಂದು ರಾಜ್ಯ ಮಹಿಳಾ ವಿವಿ ಕುಲಪತಿ ಡಾ. ಮೀನಾ ಚಂದಾವರಕರ್ ಹೇಳಿದರು.<br /> <br /> ಸ್ಥಳೀಯ ಕ.ರಾ.ಬೆಲ್ಲದ ಮಹಾ ವಿದ್ಯಾಲಯ ಹಾಗೂ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗಗಳಲ್ಲಿ ಮಂಗಳ ವಾರ ಸಂಜೆ ಏರ್ಪಡಿಸಿದ್ದ ಅಭಿನಂದನೆ ಮತ್ತು ಪಠ್ಯೇತರ ಚಟುವಟಿಕೆಗಳ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. <br /> <br /> `ಪ್ರಸ್ತುತ ಶೇ.8ರಷ್ಟು ವಿದ್ಯಾರ್ಥಿ ಗಳು ಮಾತ್ರ ಉನ್ನತ ವ್ಯಾಸಂಗ ಪೂರೈಸುತ್ತಿದ್ದು, ಶೇ.92ರಷ್ಟು ವಿದ್ಯಾರ್ಥಿಗಳು ವಿವಿಧ ಕಾರಣಗಳಿಂದ ಉನ್ನತ ವ್ಯಾಸಂಗವನ್ನು ಮೊಟುಕು ಗೊಳಿಸುತ್ತಿರುವುದು ತುಂಬಾ ಅನಾ ರೋಗ್ಯ ಕರವಾದ ಬೆಳವಣಿಗೆಯಾಗಿದೆ~ ಎಂದು ವಿಷಾದ ವ್ಯಕ್ತಪಡಿಸಿದರು.<br /> <br /> `ವಿವಿಧ ಪರೀಕ್ಷೆಗಳಲ್ಲಿ ಪಠ್ಯ ಪುಸ್ತಕ ಆಧಾರಿತ ಅಂಕಗಳನ್ನು ಗಳಿಸುವಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮುಂಚೂಣಿಯಲ್ಲಿದ್ದು, ಇಂಗ್ಲಿಷ್ ಕಮ್ಯುನಿಕೇಶನ್ನಲ್ಲಿ ತುಂಬಾ ಹಿಂದಿರುವುದು ಅವರ ಏಳ್ಗೆಗೆಗೆ ತೀವ್ರ ತೊಡಕಾಗಿದೆ. ಆದ್ದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂಗ್ಲಿಷ್ ಕಲಿಕೆಗೆ ಹೆಚ್ಚು ಒತ್ತು ನೀಡಬೇಕು~ ಎಂದು ಅವರು ಸಲಹೆ ನೀಡಿದರು.<br /> <br /> `ರಾಜ್ಯದ ಏಕೈಕ ಮಹಿಳಾ ವಿವಿ ಯಲ್ಲಿ ಈಗಿರುವ ವಿವಿಧ ವಿಭಾಗಗಳ ಜೊತೆಗೆ ಕನ್ನಡದ ಶೇಷ್ಠ ವಚನಕಾರ್ತಿ ಅಕ್ಕಮಹಾದೇವಿಯ ಅಧ್ಯಯನ ಪೀಠ ಸ್ಥಾಪಿಸಬೇಕು~ ಎಂದು ಸಮಾರಂಭದ ಸಾನಿಧ್ಯ ವಹಿಸಿದ್ದ ಡಾ.ಅನ್ನದಾನೀಶ್ವರ ಸ್ವಾಮೀಜಿ ಸಲಹೆ ನೀಡಿದರು.<br /> <br /> `ಮಹಿಳಾ ವಿಶ್ವವಿದ್ಯಾಲಯದಲ್ಲಿ ನೂತನವಾಗಿ ಅಕ್ಕಮಹಾದೇವಿ ಅಧ್ಯಯನ ಪೀಠ ಸ್ಥಾಪಿಸಿದರೆ ಅನ್ನದಾ ನೀಶ್ವರರ ಹೆಸರಿನಲ್ಲಿ ಪ್ರತಿವರ್ಷ ಚಿನ್ನದ ಪದಕ ನೀಡಲಾಗುವುದು~ ಎಂದು ಅವರು ಭರವಸೆ ನೀಡಿದರು.<br /> ಕಾಲೇಜು ಮೇಲ್ವಿಚಾರಣಾ ಸಮೀತಿ ಅಧ್ಯಕ್ಷ ಆರ್.ಬಿ.ಡಂಬಳಮಠ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಉಪಾ ಧ್ಯಕ್ಷ ಕಾಂತರಾಜ ಹಿರೇಮಠ ಮಾತ ನಾಡಿದರು. ಜ.ಅ.ವಿದ್ಯಾ ಸಮಿತಿಯ ಗೌರವ ಕಾರ್ಯದರ್ಶಿ ಎ.ಕೆ.ಬೆಲ್ಲದ, ಆರ್.ಎಲ್.ಪೊಲೀಸ್ ಪಾಟೀಲ, ವಿದ್ಯಾರ್ಥಿ ಪ್ರತಿನಿಧಿ ಸಂಗಪ್ಪ ಗದ್ದಿ ವೇದಿಕೆಯ ಮೇಲೆ ಹಾಜರಿದ್ದರು.<br /> <br /> ಪಿಎಚ್ಡಿ ಪದವಿ ಪಡೆದ ಮಕ್ಕಳ ಸಾಹಿತಿ ನಿಂಗು ಸೊಲಗಿ, ಜಿ.ಎನ್.ಜಿಡ್ರಿ, ಆರ್.ಎಚ್.ಜಂಗಣವಾರಿ ಹಾಗೂ ಕವಿವಿಯಿಂದ ಎರಡು ಚಿನ್ನದ ಪದಕ ಪಡೆದ ಬಿ.ಜಿ.ನಾಡಗೌಡ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಪ್ರಾಚಾರ್ಯ ಎಸ್.ಬಿ.ಕರಿಭರಮಗೌಡರ ಸರ್ವರನ್ನು ಸ್ವಾಗತಿಸಿದರು. ಡಾ.ಎಂ.ಬಿ.ಬೆಳವಟಗಿ ಮಠ ಕಾರ್ಯಕ್ರಮ ನಿರೂಪಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಡರಗಿ:</strong> `ಮಹಿಳಾ ವಿಶ್ವವಿದ್ಯಾಲ ಯದಲ್ಲಿ ಈಗಿರುವ 22 ವಿಭಾಗಗಳ ಜೊತೆಗೆ ಫ್ಯಾಶನ್ ಡಿಸೈನಿಂಗ್, ಟೂರಿಸಂ ಮತ್ತು ಹೋಟೆಲ್ ಮ್ಯಾನೇಜ್ಮೆಂಟ್ನಂತಹ ಕೆಲವು ಉಪಯುಕ್ತ ಕೋರ್ಸುಗಳನ್ನು ಪ್ರಾರಂಭಿಸಲಾಗುವುದು~ ಎಂದು ರಾಜ್ಯ ಮಹಿಳಾ ವಿವಿ ಕುಲಪತಿ ಡಾ. ಮೀನಾ ಚಂದಾವರಕರ್ ಹೇಳಿದರು.<br /> <br /> ಸ್ಥಳೀಯ ಕ.ರಾ.ಬೆಲ್ಲದ ಮಹಾ ವಿದ್ಯಾಲಯ ಹಾಗೂ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗಗಳಲ್ಲಿ ಮಂಗಳ ವಾರ ಸಂಜೆ ಏರ್ಪಡಿಸಿದ್ದ ಅಭಿನಂದನೆ ಮತ್ತು ಪಠ್ಯೇತರ ಚಟುವಟಿಕೆಗಳ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. <br /> <br /> `ಪ್ರಸ್ತುತ ಶೇ.8ರಷ್ಟು ವಿದ್ಯಾರ್ಥಿ ಗಳು ಮಾತ್ರ ಉನ್ನತ ವ್ಯಾಸಂಗ ಪೂರೈಸುತ್ತಿದ್ದು, ಶೇ.92ರಷ್ಟು ವಿದ್ಯಾರ್ಥಿಗಳು ವಿವಿಧ ಕಾರಣಗಳಿಂದ ಉನ್ನತ ವ್ಯಾಸಂಗವನ್ನು ಮೊಟುಕು ಗೊಳಿಸುತ್ತಿರುವುದು ತುಂಬಾ ಅನಾ ರೋಗ್ಯ ಕರವಾದ ಬೆಳವಣಿಗೆಯಾಗಿದೆ~ ಎಂದು ವಿಷಾದ ವ್ಯಕ್ತಪಡಿಸಿದರು.<br /> <br /> `ವಿವಿಧ ಪರೀಕ್ಷೆಗಳಲ್ಲಿ ಪಠ್ಯ ಪುಸ್ತಕ ಆಧಾರಿತ ಅಂಕಗಳನ್ನು ಗಳಿಸುವಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮುಂಚೂಣಿಯಲ್ಲಿದ್ದು, ಇಂಗ್ಲಿಷ್ ಕಮ್ಯುನಿಕೇಶನ್ನಲ್ಲಿ ತುಂಬಾ ಹಿಂದಿರುವುದು ಅವರ ಏಳ್ಗೆಗೆಗೆ ತೀವ್ರ ತೊಡಕಾಗಿದೆ. ಆದ್ದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂಗ್ಲಿಷ್ ಕಲಿಕೆಗೆ ಹೆಚ್ಚು ಒತ್ತು ನೀಡಬೇಕು~ ಎಂದು ಅವರು ಸಲಹೆ ನೀಡಿದರು.<br /> <br /> `ರಾಜ್ಯದ ಏಕೈಕ ಮಹಿಳಾ ವಿವಿ ಯಲ್ಲಿ ಈಗಿರುವ ವಿವಿಧ ವಿಭಾಗಗಳ ಜೊತೆಗೆ ಕನ್ನಡದ ಶೇಷ್ಠ ವಚನಕಾರ್ತಿ ಅಕ್ಕಮಹಾದೇವಿಯ ಅಧ್ಯಯನ ಪೀಠ ಸ್ಥಾಪಿಸಬೇಕು~ ಎಂದು ಸಮಾರಂಭದ ಸಾನಿಧ್ಯ ವಹಿಸಿದ್ದ ಡಾ.ಅನ್ನದಾನೀಶ್ವರ ಸ್ವಾಮೀಜಿ ಸಲಹೆ ನೀಡಿದರು.<br /> <br /> `ಮಹಿಳಾ ವಿಶ್ವವಿದ್ಯಾಲಯದಲ್ಲಿ ನೂತನವಾಗಿ ಅಕ್ಕಮಹಾದೇವಿ ಅಧ್ಯಯನ ಪೀಠ ಸ್ಥಾಪಿಸಿದರೆ ಅನ್ನದಾ ನೀಶ್ವರರ ಹೆಸರಿನಲ್ಲಿ ಪ್ರತಿವರ್ಷ ಚಿನ್ನದ ಪದಕ ನೀಡಲಾಗುವುದು~ ಎಂದು ಅವರು ಭರವಸೆ ನೀಡಿದರು.<br /> ಕಾಲೇಜು ಮೇಲ್ವಿಚಾರಣಾ ಸಮೀತಿ ಅಧ್ಯಕ್ಷ ಆರ್.ಬಿ.ಡಂಬಳಮಠ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಉಪಾ ಧ್ಯಕ್ಷ ಕಾಂತರಾಜ ಹಿರೇಮಠ ಮಾತ ನಾಡಿದರು. ಜ.ಅ.ವಿದ್ಯಾ ಸಮಿತಿಯ ಗೌರವ ಕಾರ್ಯದರ್ಶಿ ಎ.ಕೆ.ಬೆಲ್ಲದ, ಆರ್.ಎಲ್.ಪೊಲೀಸ್ ಪಾಟೀಲ, ವಿದ್ಯಾರ್ಥಿ ಪ್ರತಿನಿಧಿ ಸಂಗಪ್ಪ ಗದ್ದಿ ವೇದಿಕೆಯ ಮೇಲೆ ಹಾಜರಿದ್ದರು.<br /> <br /> ಪಿಎಚ್ಡಿ ಪದವಿ ಪಡೆದ ಮಕ್ಕಳ ಸಾಹಿತಿ ನಿಂಗು ಸೊಲಗಿ, ಜಿ.ಎನ್.ಜಿಡ್ರಿ, ಆರ್.ಎಚ್.ಜಂಗಣವಾರಿ ಹಾಗೂ ಕವಿವಿಯಿಂದ ಎರಡು ಚಿನ್ನದ ಪದಕ ಪಡೆದ ಬಿ.ಜಿ.ನಾಡಗೌಡ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಪ್ರಾಚಾರ್ಯ ಎಸ್.ಬಿ.ಕರಿಭರಮಗೌಡರ ಸರ್ವರನ್ನು ಸ್ವಾಗತಿಸಿದರು. ಡಾ.ಎಂ.ಬಿ.ಬೆಳವಟಗಿ ಮಠ ಕಾರ್ಯಕ್ರಮ ನಿರೂಪಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>