ಸಿಂದಗಿ (ವಿಜಾಪುರ ಜಿಲ್ಲೆ): ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಾ. ರಾಯಗೊಂಡಪ್ಪ ಭೀಮಪ್ಪ ಚೌಧರಿ (73) ಹೃದಯಾಘಾತದಿಂದ ಬುಧವಾರ ಬೆಳಗಿನ ಜಾವ ಬೆಂಗಳೂರಿನಲ್ಲಿ ನಿಧನರಾದರು.
ಮೃತರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ವಿಜಾಪುರದಲ್ಲಿ ನಡೆಯಿತು.
ಚೌಧರಿ 1989ರಲ್ಲಿ ಸಿಂದಗಿ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದರು. 1990ರಲ್ಲಿ ವೀರಪ್ಪ ಮೊಯಿಲಿ ಸಂಪುಟದಲ್ಲಿ ಸಣ್ಣ ನೀರಾವರಿ ಸಚಿವರಾಗಿ, ನಂತರ ಬಂಧೀಖಾನೆ, ಗೃಹರಕ್ಷಕ ಖಾತೆ ಸಚಿವರಾಗಿ ಕಾರ್ಯನಿರ್ವಹಿಸ್ದ್ದಿದರು. 1994ರಲ್ಲಿ ಕಾಂಗ್ರೆಸ್ನಿಂದ, 2009ರಲ್ಲಿ ಪಕ್ಷೇತರರಾಗಿ ಮತ್ತೆ ಸಿಂದಗಿ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. 1984ರಲ್ಲಿ ವಿಜಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.
ಡಾ. ಚೌಧರಿ ಮೂಲತಃ ಸಿಂದಗಿ ತಾಲ್ಲೂಕಿನ ದೇವಣಗಾಂವ ಗ್ರಾಮದವರಾಗಿದ್ದು, ವಿಜಾಪುರದಲ್ಲಿ ನೆಲೆಸಿದ್ದರು. ಎಂ.ಬಿ.ಬಿ.ಎಸ್ ಪದವೀಧರರಾಗಿದ್ದ ಅವರು ಕೆಂಭಾವಿ, ತಾಳಿಕೋಟೆ, ಮುದ್ದೇಬಿಹಾಳದಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸ್ದ್ದಿದರು. ಕರ್ನಾಟಕ ರಾಜ್ಯ ಗಂಗಾಮತಸ್ಥ ಸಂಘದ ಅಧ್ಯಕ್ಷರಾಗಿಯೂ ಏಳು ವರ್ಷಗಳ ಕಾಲ ದುಡಿದಿದ್ದರು.