<p><strong>ಬೀದರ್:</strong> ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ದಾಖಲಾಗುವ ವಿವಿಧ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಗೊಳಿಸಲು ಮತ್ತು ಪ್ರಕರಣದ ಸ್ಥಿತಿ, ವಿಚಾರಣೆ ನಡೆವ ದಿನ, ಮುಂದೂಡಲಾದ ದಿನಾಂಕ ಕುರಿತು ಅರ್ಜಿದಾರರಿಗೆ ಆನ್ಲೈನ್ನಲ್ಲಿ ಮಾಹಿತಿ ಲಭ್ಯವಾಗುವಂತೆ ಕಂಪ್ಯೂಟರೀಕರಣಗೊಳಿಸುವ ಪ್ರಕ್ರಿಯೆ ಜಿಲ್ಲೆಯಲ್ಲಿ ಚಾಲ್ತಿಯಲ್ಲಿದೆ.<br /> <br /> ಪ್ರಸ್ತುತ, ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ದಾಖಲಾಗುವ ಪ್ರಕರಣಗಳ ವಿವರಗಳನ್ನು ಪ್ರತ್ಯೇಕ ಸಾಫ್ಟ್ವೇರ್ನಲ್ಲಿ ನಮೂದಿಸಿ, ಕೇಸ್ ಸಂಖ್ಯೆ ನೀಡುವ ಕಾರ್ಯ ಪ್ರಗತಿಯಲ್ಲಿದೆ. ನಂತರದ ದಿನಗಳಲ್ಲಿ ಕೆಳಹಂತದ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯ, ತಹಶೀಲ್ದಾರ್ಗಳ ನ್ಯಾಯಾಲಯಗಳಿಗೂ ವಿಸ್ತರಿಸುವ ಚಿಂತನೆಯಿದೆ.<br /> <br /> ಖಾತಾ ಬದಲಾವಣೆ, ಪೋಡಿ ಪ್ರಕರಣಗಳು ಸೇರಿದಂತೆ ಭೂ ಸುಧಾರಣಾ ಕಾಯ್ದೆಯಡಿ ಬರುವ ಭೂ ವಿವಾದಕ್ಕೆಸಂಬಂಧಿಸಿದ ಕೆಲ ಪ್ರಕರಣಗಳು, ನಗರಸಭೆಯ ಖಾತೆಗೆ ಸಂಬಂಧಿಸಿತ ವಿವಾದ, ಗಡಿಪಾರು ಪ್ರಕರಣಗಳು, ಅಗತ್ಯ ವಸ್ತುಗಳ ಕಾಯ್ದೆ ಸೇರಿದಂತೆ ವಿವಿಧ ಪ್ರಕರಣಗಳು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುತ್ತವೆ.<br /> <br /> `ಇದುವರೆಗೂ ಇಂಥ ಪ್ರಕರಣಗಳ ದಾಖಲೆಗಳನ್ನು ಸಿಬ್ಬಂದಿ ನಿರ್ವಹಿಸುತ್ತಿದ್ದರು. ಯಾವ ಪ್ರಕರಣ, ಯಾವ ದಿನಾಂಕದಂದು ವಿಚಾರಣೆಗೆ ಬರುತ್ತದೆ; ವಿಚಾರಣೆ ಯಾವ ಹಂತದಲ್ಲಿದೆ ಎಂಬುದರ ಖಚಿತ ಮಾಹಿತಿ ಸಿಗುವುದು ಕಷ್ಟ ಆಗುತ್ತಿತ್ತು.<br /> <br /> ದಾಖಲಿಸುವ ಹಂತದಲ್ಲಿ ಲೋಪವಾದರೆ ನಿರ್ದಿಷ್ಟ ಪ್ರಕರಣ ವಿಚಾರಣೆಗೇ ಬರದೆ ನೆನೆಗುದಿಗೆ ಉಳಿಯುವ ಸಾಧ್ಯತೆಗಳೂ ಇದ್ದವು. ಇಂಥ ಲೋಪವನ್ನು ತಪ್ಪಿಸುವುದು ಈ ಕಂಪ್ಯೂಟರೀಕರಣದ ಉದ್ದೇಶ' ಎನ್ನುತ್ತಾರೆ ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್.<br /> <br /> `ನಿರೀಕ್ಷೆಯಂತೇ ಇದು ಜಿಲ್ಲಾಧಿಕಾರಿಗಳ ನ್ಯಾಯಾಲಯ ಮತ್ತು ಕೆಳಹಂತದ ನ್ಯಾಯಾಲಯಗಳಲ್ಲಿ ಜಾರಿಗೆ ಬಂದರೆ ಇಂಥ ವ್ಯವಸ್ಥೆಯನ್ನು ಅಳವಡಿಸಿಕೊಂಡ ಮೊದಲ ಜಿಲ್ಲೆ ಎಂಬ ಹಿರಿಮೆಗೂ ಗಡಿ ಜಿಲ್ಲೆ ಬೀದರ್ ಪಾತ್ರವಾಗಲಿದೆ. ಈ ಉದ್ದೇಶಕ್ಕಾಗಿ ಪ್ರತ್ಯೇಕ ಸಾಫ್ಟ್ವೇರ್ ರೂಪಿಸಲಾಗಿದ್ದು, ಬರುವ ದಿನಗಳಲ್ಲಿ ನ್ಯಾಷನಲ್ ಇನ್ಫೋರ್ಮಾಟಿಕ್ಸ್ ಸೆಂಟರ್ (ಎನ್ಐಸಿ) ಸಹಯೋಗದಲ್ಲಿ `ಭೂಮಿ' ಸಾಫ್ಟ್ವೇರ್ ಜೊತೆಗೂ ಲಿಂಕ್ ಅನ್ನೂ ಕಲ್ಪಿಸಬಹುದಾಗಿದೆ' ಎಂದು ಅಭಿಪ್ರಾಯಪಡುತ್ತಾರೆ.<br /> <br /> `ಕೋರ್ಟ್ ಕೇಸ್ ಮಾನಿಟರಿಂಗ್ ಸಿಸ್ಟಮ್' ಹೆಸರಿನ ಈ ಪ್ರತ್ಯೇಕ ಸಾಫ್ಟ್ವೇರ್ನಲ್ಲಿ ಭೂ ಸುಧಾರಣಾ ಕಾಯ್ದೆ ಸೇರಿದಂತೆ ಯಾವ ಕಾಯ್ದೆಯ, ಯಾವ ಸೆಕ್ಷನ್ ಅನ್ವಯ ಪ್ರಕರಣ ದಾಖಲಿಸಲಾಗಿದೆ.<br /> <br /> ಅರ್ಜಿದಾರರ ಹೆಸರು, ಪ್ರತಿವಾದಿಗಳ ಹೆಸರು, ವಕೀಲರ ಹೆಸರು, ವಿಳಾಸ, ಪ್ರಕರಣದ ಸಂಕ್ಷಿಪ್ತ ವಿವರ, ವಾದಿ, ಪ್ರತಿವಾದಿಗಳ ಮೊಬೈಲ್ ಸಂಖ್ಯೆ ಹೀಗೇ ಪೂರ್ಣ ಮಾಹಿತಿಯನ್ನು ದಾಖಲಿಸಲಾಗುತ್ತದೆ.<br /> <br /> ಇಂಥ ನೂತನ ವ್ಯವಸ್ಥೆಯಿಂದ ಅರ್ಜಿದಾರರಿಗೆ ಹೆಚ್ಚಿನ ಅನುಕೂಲವಿದೆ. ಕಂಪ್ಯೂಟರ್ಗೆ ಮಾಹಿತಿ ಅಳವಡಿಸಿದಂತೆ ಕೇಸ್ ನಂಬರ್ ದಾಖಲಾಗುವ ಕಾರಣ, ವಿಚಾರಣೆ ದಿನ, ಮುಂದೂಡಿಕೆ ಯಾದಿಯಿಂದ ಕೈ ತಪ್ಪಿಹೋಗುವ ಸಾಧ್ಯತೆಯಿಲ್ಲ. ಕಡತ ಕೈತಪ್ಪಿ ಮಾಹಿತಿ ಮಿಸ್ ಆಗುವ ಅವಕಾಶವೂ ಇಲ್ಲ ಎಂದು ಜಿಲ್ಲಾಧಿಕಾರಿ ಹೇಳುತ್ತಾರೆ.<br /> <br /> ಎಸ್ಎಂಎಸ್ ಮೂಲಕ ಮಾಹಿತಿ: ಅರ್ಜಿಗಳಿಗೆ ಸಂಬಂಧಿಸಿ ಅರ್ಜಿದಾರರು, ಪ್ರತಿವಾದಿಗಳು ಮತ್ತು ಎರಡು ಪರ ವಕೀಲರ ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸಲಿದ್ದು, ಪ್ರಕರಣದ ವಿಚಾರಣೆ ದಿನಾಂಕ, ಮುಂದೂಡಿದ ಮಾಹಿತಿಯನ್ನು ಎಸ್ಎಂಎಸ್ ಮೂಲಕ ಕಳುಹಿಸುವ ಬಗೆಗೂ ಚಿಂತನೆ ನಡೆದಿದೆ.<br /> <br /> ಈ ವ್ಯವಸ್ಥೆಯು ಒಂದು ತಿಂಗಳಲ್ಲಿ ಜಾರಿಗೆ ಬರಬಹುದು ಎಂಬುದು ಅವರ ವಿವರಣೆ. ಭೂ ವಿವಾದ ಸಂಬಂಧಿಸಿದ ಪ್ರಕರಣಗಳ ಸಂಖ್ಯೆ ಎಲ್ಲ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂಥ ವ್ಯವಸ್ಥೆ ಇತರೆ ಜಿಲ್ಲೆಗಳಿಗೂ ಮಾದರಿ ಆಗಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ದಾಖಲಾಗುವ ವಿವಿಧ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಗೊಳಿಸಲು ಮತ್ತು ಪ್ರಕರಣದ ಸ್ಥಿತಿ, ವಿಚಾರಣೆ ನಡೆವ ದಿನ, ಮುಂದೂಡಲಾದ ದಿನಾಂಕ ಕುರಿತು ಅರ್ಜಿದಾರರಿಗೆ ಆನ್ಲೈನ್ನಲ್ಲಿ ಮಾಹಿತಿ ಲಭ್ಯವಾಗುವಂತೆ ಕಂಪ್ಯೂಟರೀಕರಣಗೊಳಿಸುವ ಪ್ರಕ್ರಿಯೆ ಜಿಲ್ಲೆಯಲ್ಲಿ ಚಾಲ್ತಿಯಲ್ಲಿದೆ.<br /> <br /> ಪ್ರಸ್ತುತ, ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ದಾಖಲಾಗುವ ಪ್ರಕರಣಗಳ ವಿವರಗಳನ್ನು ಪ್ರತ್ಯೇಕ ಸಾಫ್ಟ್ವೇರ್ನಲ್ಲಿ ನಮೂದಿಸಿ, ಕೇಸ್ ಸಂಖ್ಯೆ ನೀಡುವ ಕಾರ್ಯ ಪ್ರಗತಿಯಲ್ಲಿದೆ. ನಂತರದ ದಿನಗಳಲ್ಲಿ ಕೆಳಹಂತದ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯ, ತಹಶೀಲ್ದಾರ್ಗಳ ನ್ಯಾಯಾಲಯಗಳಿಗೂ ವಿಸ್ತರಿಸುವ ಚಿಂತನೆಯಿದೆ.<br /> <br /> ಖಾತಾ ಬದಲಾವಣೆ, ಪೋಡಿ ಪ್ರಕರಣಗಳು ಸೇರಿದಂತೆ ಭೂ ಸುಧಾರಣಾ ಕಾಯ್ದೆಯಡಿ ಬರುವ ಭೂ ವಿವಾದಕ್ಕೆಸಂಬಂಧಿಸಿದ ಕೆಲ ಪ್ರಕರಣಗಳು, ನಗರಸಭೆಯ ಖಾತೆಗೆ ಸಂಬಂಧಿಸಿತ ವಿವಾದ, ಗಡಿಪಾರು ಪ್ರಕರಣಗಳು, ಅಗತ್ಯ ವಸ್ತುಗಳ ಕಾಯ್ದೆ ಸೇರಿದಂತೆ ವಿವಿಧ ಪ್ರಕರಣಗಳು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುತ್ತವೆ.<br /> <br /> `ಇದುವರೆಗೂ ಇಂಥ ಪ್ರಕರಣಗಳ ದಾಖಲೆಗಳನ್ನು ಸಿಬ್ಬಂದಿ ನಿರ್ವಹಿಸುತ್ತಿದ್ದರು. ಯಾವ ಪ್ರಕರಣ, ಯಾವ ದಿನಾಂಕದಂದು ವಿಚಾರಣೆಗೆ ಬರುತ್ತದೆ; ವಿಚಾರಣೆ ಯಾವ ಹಂತದಲ್ಲಿದೆ ಎಂಬುದರ ಖಚಿತ ಮಾಹಿತಿ ಸಿಗುವುದು ಕಷ್ಟ ಆಗುತ್ತಿತ್ತು.<br /> <br /> ದಾಖಲಿಸುವ ಹಂತದಲ್ಲಿ ಲೋಪವಾದರೆ ನಿರ್ದಿಷ್ಟ ಪ್ರಕರಣ ವಿಚಾರಣೆಗೇ ಬರದೆ ನೆನೆಗುದಿಗೆ ಉಳಿಯುವ ಸಾಧ್ಯತೆಗಳೂ ಇದ್ದವು. ಇಂಥ ಲೋಪವನ್ನು ತಪ್ಪಿಸುವುದು ಈ ಕಂಪ್ಯೂಟರೀಕರಣದ ಉದ್ದೇಶ' ಎನ್ನುತ್ತಾರೆ ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್.<br /> <br /> `ನಿರೀಕ್ಷೆಯಂತೇ ಇದು ಜಿಲ್ಲಾಧಿಕಾರಿಗಳ ನ್ಯಾಯಾಲಯ ಮತ್ತು ಕೆಳಹಂತದ ನ್ಯಾಯಾಲಯಗಳಲ್ಲಿ ಜಾರಿಗೆ ಬಂದರೆ ಇಂಥ ವ್ಯವಸ್ಥೆಯನ್ನು ಅಳವಡಿಸಿಕೊಂಡ ಮೊದಲ ಜಿಲ್ಲೆ ಎಂಬ ಹಿರಿಮೆಗೂ ಗಡಿ ಜಿಲ್ಲೆ ಬೀದರ್ ಪಾತ್ರವಾಗಲಿದೆ. ಈ ಉದ್ದೇಶಕ್ಕಾಗಿ ಪ್ರತ್ಯೇಕ ಸಾಫ್ಟ್ವೇರ್ ರೂಪಿಸಲಾಗಿದ್ದು, ಬರುವ ದಿನಗಳಲ್ಲಿ ನ್ಯಾಷನಲ್ ಇನ್ಫೋರ್ಮಾಟಿಕ್ಸ್ ಸೆಂಟರ್ (ಎನ್ಐಸಿ) ಸಹಯೋಗದಲ್ಲಿ `ಭೂಮಿ' ಸಾಫ್ಟ್ವೇರ್ ಜೊತೆಗೂ ಲಿಂಕ್ ಅನ್ನೂ ಕಲ್ಪಿಸಬಹುದಾಗಿದೆ' ಎಂದು ಅಭಿಪ್ರಾಯಪಡುತ್ತಾರೆ.<br /> <br /> `ಕೋರ್ಟ್ ಕೇಸ್ ಮಾನಿಟರಿಂಗ್ ಸಿಸ್ಟಮ್' ಹೆಸರಿನ ಈ ಪ್ರತ್ಯೇಕ ಸಾಫ್ಟ್ವೇರ್ನಲ್ಲಿ ಭೂ ಸುಧಾರಣಾ ಕಾಯ್ದೆ ಸೇರಿದಂತೆ ಯಾವ ಕಾಯ್ದೆಯ, ಯಾವ ಸೆಕ್ಷನ್ ಅನ್ವಯ ಪ್ರಕರಣ ದಾಖಲಿಸಲಾಗಿದೆ.<br /> <br /> ಅರ್ಜಿದಾರರ ಹೆಸರು, ಪ್ರತಿವಾದಿಗಳ ಹೆಸರು, ವಕೀಲರ ಹೆಸರು, ವಿಳಾಸ, ಪ್ರಕರಣದ ಸಂಕ್ಷಿಪ್ತ ವಿವರ, ವಾದಿ, ಪ್ರತಿವಾದಿಗಳ ಮೊಬೈಲ್ ಸಂಖ್ಯೆ ಹೀಗೇ ಪೂರ್ಣ ಮಾಹಿತಿಯನ್ನು ದಾಖಲಿಸಲಾಗುತ್ತದೆ.<br /> <br /> ಇಂಥ ನೂತನ ವ್ಯವಸ್ಥೆಯಿಂದ ಅರ್ಜಿದಾರರಿಗೆ ಹೆಚ್ಚಿನ ಅನುಕೂಲವಿದೆ. ಕಂಪ್ಯೂಟರ್ಗೆ ಮಾಹಿತಿ ಅಳವಡಿಸಿದಂತೆ ಕೇಸ್ ನಂಬರ್ ದಾಖಲಾಗುವ ಕಾರಣ, ವಿಚಾರಣೆ ದಿನ, ಮುಂದೂಡಿಕೆ ಯಾದಿಯಿಂದ ಕೈ ತಪ್ಪಿಹೋಗುವ ಸಾಧ್ಯತೆಯಿಲ್ಲ. ಕಡತ ಕೈತಪ್ಪಿ ಮಾಹಿತಿ ಮಿಸ್ ಆಗುವ ಅವಕಾಶವೂ ಇಲ್ಲ ಎಂದು ಜಿಲ್ಲಾಧಿಕಾರಿ ಹೇಳುತ್ತಾರೆ.<br /> <br /> ಎಸ್ಎಂಎಸ್ ಮೂಲಕ ಮಾಹಿತಿ: ಅರ್ಜಿಗಳಿಗೆ ಸಂಬಂಧಿಸಿ ಅರ್ಜಿದಾರರು, ಪ್ರತಿವಾದಿಗಳು ಮತ್ತು ಎರಡು ಪರ ವಕೀಲರ ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸಲಿದ್ದು, ಪ್ರಕರಣದ ವಿಚಾರಣೆ ದಿನಾಂಕ, ಮುಂದೂಡಿದ ಮಾಹಿತಿಯನ್ನು ಎಸ್ಎಂಎಸ್ ಮೂಲಕ ಕಳುಹಿಸುವ ಬಗೆಗೂ ಚಿಂತನೆ ನಡೆದಿದೆ.<br /> <br /> ಈ ವ್ಯವಸ್ಥೆಯು ಒಂದು ತಿಂಗಳಲ್ಲಿ ಜಾರಿಗೆ ಬರಬಹುದು ಎಂಬುದು ಅವರ ವಿವರಣೆ. ಭೂ ವಿವಾದ ಸಂಬಂಧಿಸಿದ ಪ್ರಕರಣಗಳ ಸಂಖ್ಯೆ ಎಲ್ಲ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂಥ ವ್ಯವಸ್ಥೆ ಇತರೆ ಜಿಲ್ಲೆಗಳಿಗೂ ಮಾದರಿ ಆಗಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>