<p><strong>ನವದೆಹಲಿ:</strong> ‘ಪ್ರಸಕ್ತ ಆರ್ಥಿಕ ವರ್ಷದ (2025–26) ಮಹಿಳೆಯರಿಗೆ ನೇರ ನಗದು ಯೋಜನೆಗಾಗಿ ದೇಶದ 12 ರಾಜ್ಯಗಳು ₹1.68 ಲಕ್ಷ ಕೋಟಿಯನ್ನು ಮೀಸಲಿಟ್ಟಿದೆ’ ಎಂದು ಪಿಆರ್ಎಸ್ ಲೆಜಿಸ್ಲೇಟಿವ್ ರಿಸರ್ಚ್ ತನ್ನ ವರದಿಯಲ್ಲಿ ಹೇಳಿದೆ.</p><p>ಮೂರು ವರ್ಷಗಳ ಹಿಂದೆ ಕೇವಲ 2 ರಾಜ್ಯಗಳು ಮಾತ್ರ ಮಹಿಳೆಯರಿಗೆ ನಗದು ನೀಡುವ ಯೋಜನೆಗಳನ್ನು ಹೊಂದಿದ್ದವು. ಇಂಥ ಸೌಲಭ್ಯ ನೀಡುತ್ತಿರುವ ರಾಜ್ಯಗಳ ಸಂಖ್ಯೆ ಈಗ 12ಕ್ಕೆ ಏರಿಕೆಯಾಗಿದೆ. ಆದರೆ 12ರಲ್ಲಿ ಆರು ರಾಜ್ಯಗಳ ಆದಾಯ ಕೊರತೆಯನ್ನು ಈ ವರ್ಷ ಎದುರಿಸುವುದಾಗಿ ಹೇಳಿಕೊಂಡಿವೆ. ಮಹಿಳಾ ಕೇಂದ್ರಿತ ಕಲ್ಯಾಣ ಯೋಜನೆಗಳು ತ್ವರಿತವಾಗಿ ವಿಸ್ತರಣೆಗೊಳ್ಳುತ್ತಿವೆ. ಇವುಗಳಿಂದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ ಎಂದು ವರದಿ ಮಾಡಿದೆ.</p><p>ಷರತ್ತು ರಹಿತ ನಗದು ವರ್ಗಾವಣೆ (UCT) ಯೋಜನೆಗಳ ಮೂಲಕ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಹಿಳೆಯರ ಸಬಲೀಕರಣಕ್ಕೆ ಮಾಸಿಕ ನೇರ ನಗದು ಪಾವತಿ ಸೌಲಭ್ಯಗಳನ್ನು ರಾಜ್ಯಗಳು ಜಾರಿಗೆ ತಂದಿವೆ. </p><p>ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ತಮ್ಮ ಬಜೆಟ್ನಲ್ಲಿ ಮಹಿಳೆಯರಿಗೆ ಮೀಸಲಿಡುವ ಹಣದ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿವೆ. ಹಿಂದಿನ ಬಜೆಟ್ನಲ್ಲಿ ಮಹಿಳೆಯರಿಗೆ ಶೇ 15ರಷ್ಟು ಮೀಸಲಿಟ್ಟಿದ್ದ ಈ ರಾಜ್ಯಗಳು, ಈಗ ಶೇ 31ಕ್ಕೆ ಹೆಚ್ಚಿಸಿವೆ.</p><p>ತಮಿಳುನಾಡಿನ ಕಲೈಗ್ನರ್ ಮಗಳಿರ್ ಉರಿಮೈ ತೊಗೈ ತಿಟ್ಟಂ, ಮಧ್ಯಪ್ರದೇಶದ ಲಾಡ್ಲಿ ಬೆಹ್ನಾ ಯೋಜನೆ, ಕರ್ನಾಟಕದ ಗೃಹ ಲಕ್ಷ್ಮಿ ಯೋಜನೆಗಳ ಮೂಲಕ ಸರ್ಕಾರಗಳು ಮಹಿಳೆಯರಿಗೆ ಮಾಸಿಕ ₹1000ದಿಂದ ₹1,500 ನಗದು ನೀಡುತ್ತಿವೆ. ಇದು ಒಂದೆಡೆ ಮಹಿಳೆಯರ ಸಬಲೀಕರಣಕ್ಕೆ ರಾಜ್ಯಗಳು ಕೈಗೊಂಡ ಜನಪ್ರಿಯ ಕಾರ್ಯಕ್ರಮಗಳು. ಆದರೆ ಇಂಥ ಯೋಜನೆಗಳು ರಾಜ್ಯಗಳ ಬೊಕ್ಕಸಕ್ಕೆ ದೊಡ್ಡ ಹೊರೆಯಾಗಿವೆ ಎಂದೂ ಈ ವರದಿ ಎಚ್ಚರಿಸಿದೆ. </p><p>ಕರ್ನಾಟಕವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, UCT ವೆಚ್ಚವನ್ನು ಪರಿಗಣಿಸದಿದ್ದರೂ ವಿತ್ತೀಯ ಕೊರತೆಯು ಜಿಎಸ್ಡಿಪಿಯ ಶೇ 0.6ರಿಂದ ಶೇ 0.3ಕ್ಕೆ ಕುಸಿದಿದೆ. ಮತ್ತೊಂದೆಡೆ ಮಧ್ಯಪ್ರದೇಶದಲ್ಲಿ ಇದು ಕೊರತೆಯ ಪ್ರಮಾಣ ಶೇ 0.4ರಿಂದ ಶೇ 1.1ಕ್ಕೆ ಏರಿ ಸುಧಾರಿಸಿದೆ ಎಂದೂ ಈ ವರದಿ ಹೇಳಿದೆ.</p><p>ಸಬ್ಸಿಡಿ, ಯುವಕರು, ಮಹಿಳೆಯರು ಮತ್ತು ರೈತರಿಗೆ ನಗದು ವರ್ಗಾವಣೆ ಯೋಜನೆಗಳಿಂದ ಉತ್ಪಾದಕ ವೆಚ್ಚಗಳಿಗೆ ಹಣ ಸಾಕಾಗುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಈ ಹಿಂದೆಯೇ ಎಚ್ಚರಿಕೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.</p><p>ಮಹಾರಾಷ್ಟ್ರ ಸರ್ಕಾರವು ಏಪ್ರಿಲ್ 2025 ರಲ್ಲಿ ‘ಸಿಎಂ ಲಡ್ಕಿ ಬಹಿನ್’ ಯೋಜನೆಯಡಿ ಮಾಸಿಕ ಪಾವತಿಯನ್ನು ಕಡಿತಗೊಳಿಸಿ ತನ್ನ ವಿತ್ತೀಯ ಕೊರತೆಯನ್ನು ಸರಿಪಡಿಸಲು ಪ್ರಯತ್ನಿಸಿತು. ಮತ್ತೊಂದೆಡೆ ಜಾರ್ಖಂಡ್ ಸರ್ಕಾರವು 2024ರ ಕೊನೆಯಲ್ಲಿ ‘ಸಿಎಂ ಮೈಯಾನ್ ಸಮ್ಮಾನ್’ ಯೋಜನೆಯಡಿಯಲ್ಲಿ ಪಾವತಿಗಳನ್ನು ತಿಂಗಳಿಗೆ ₹2,500 ಕ್ಕೆ ಹೆಚ್ಚಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ಪ್ರಸಕ್ತ ಆರ್ಥಿಕ ವರ್ಷದ (2025–26) ಮಹಿಳೆಯರಿಗೆ ನೇರ ನಗದು ಯೋಜನೆಗಾಗಿ ದೇಶದ 12 ರಾಜ್ಯಗಳು ₹1.68 ಲಕ್ಷ ಕೋಟಿಯನ್ನು ಮೀಸಲಿಟ್ಟಿದೆ’ ಎಂದು ಪಿಆರ್ಎಸ್ ಲೆಜಿಸ್ಲೇಟಿವ್ ರಿಸರ್ಚ್ ತನ್ನ ವರದಿಯಲ್ಲಿ ಹೇಳಿದೆ.</p><p>ಮೂರು ವರ್ಷಗಳ ಹಿಂದೆ ಕೇವಲ 2 ರಾಜ್ಯಗಳು ಮಾತ್ರ ಮಹಿಳೆಯರಿಗೆ ನಗದು ನೀಡುವ ಯೋಜನೆಗಳನ್ನು ಹೊಂದಿದ್ದವು. ಇಂಥ ಸೌಲಭ್ಯ ನೀಡುತ್ತಿರುವ ರಾಜ್ಯಗಳ ಸಂಖ್ಯೆ ಈಗ 12ಕ್ಕೆ ಏರಿಕೆಯಾಗಿದೆ. ಆದರೆ 12ರಲ್ಲಿ ಆರು ರಾಜ್ಯಗಳ ಆದಾಯ ಕೊರತೆಯನ್ನು ಈ ವರ್ಷ ಎದುರಿಸುವುದಾಗಿ ಹೇಳಿಕೊಂಡಿವೆ. ಮಹಿಳಾ ಕೇಂದ್ರಿತ ಕಲ್ಯಾಣ ಯೋಜನೆಗಳು ತ್ವರಿತವಾಗಿ ವಿಸ್ತರಣೆಗೊಳ್ಳುತ್ತಿವೆ. ಇವುಗಳಿಂದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ ಎಂದು ವರದಿ ಮಾಡಿದೆ.</p><p>ಷರತ್ತು ರಹಿತ ನಗದು ವರ್ಗಾವಣೆ (UCT) ಯೋಜನೆಗಳ ಮೂಲಕ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಹಿಳೆಯರ ಸಬಲೀಕರಣಕ್ಕೆ ಮಾಸಿಕ ನೇರ ನಗದು ಪಾವತಿ ಸೌಲಭ್ಯಗಳನ್ನು ರಾಜ್ಯಗಳು ಜಾರಿಗೆ ತಂದಿವೆ. </p><p>ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ತಮ್ಮ ಬಜೆಟ್ನಲ್ಲಿ ಮಹಿಳೆಯರಿಗೆ ಮೀಸಲಿಡುವ ಹಣದ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿವೆ. ಹಿಂದಿನ ಬಜೆಟ್ನಲ್ಲಿ ಮಹಿಳೆಯರಿಗೆ ಶೇ 15ರಷ್ಟು ಮೀಸಲಿಟ್ಟಿದ್ದ ಈ ರಾಜ್ಯಗಳು, ಈಗ ಶೇ 31ಕ್ಕೆ ಹೆಚ್ಚಿಸಿವೆ.</p><p>ತಮಿಳುನಾಡಿನ ಕಲೈಗ್ನರ್ ಮಗಳಿರ್ ಉರಿಮೈ ತೊಗೈ ತಿಟ್ಟಂ, ಮಧ್ಯಪ್ರದೇಶದ ಲಾಡ್ಲಿ ಬೆಹ್ನಾ ಯೋಜನೆ, ಕರ್ನಾಟಕದ ಗೃಹ ಲಕ್ಷ್ಮಿ ಯೋಜನೆಗಳ ಮೂಲಕ ಸರ್ಕಾರಗಳು ಮಹಿಳೆಯರಿಗೆ ಮಾಸಿಕ ₹1000ದಿಂದ ₹1,500 ನಗದು ನೀಡುತ್ತಿವೆ. ಇದು ಒಂದೆಡೆ ಮಹಿಳೆಯರ ಸಬಲೀಕರಣಕ್ಕೆ ರಾಜ್ಯಗಳು ಕೈಗೊಂಡ ಜನಪ್ರಿಯ ಕಾರ್ಯಕ್ರಮಗಳು. ಆದರೆ ಇಂಥ ಯೋಜನೆಗಳು ರಾಜ್ಯಗಳ ಬೊಕ್ಕಸಕ್ಕೆ ದೊಡ್ಡ ಹೊರೆಯಾಗಿವೆ ಎಂದೂ ಈ ವರದಿ ಎಚ್ಚರಿಸಿದೆ. </p><p>ಕರ್ನಾಟಕವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, UCT ವೆಚ್ಚವನ್ನು ಪರಿಗಣಿಸದಿದ್ದರೂ ವಿತ್ತೀಯ ಕೊರತೆಯು ಜಿಎಸ್ಡಿಪಿಯ ಶೇ 0.6ರಿಂದ ಶೇ 0.3ಕ್ಕೆ ಕುಸಿದಿದೆ. ಮತ್ತೊಂದೆಡೆ ಮಧ್ಯಪ್ರದೇಶದಲ್ಲಿ ಇದು ಕೊರತೆಯ ಪ್ರಮಾಣ ಶೇ 0.4ರಿಂದ ಶೇ 1.1ಕ್ಕೆ ಏರಿ ಸುಧಾರಿಸಿದೆ ಎಂದೂ ಈ ವರದಿ ಹೇಳಿದೆ.</p><p>ಸಬ್ಸಿಡಿ, ಯುವಕರು, ಮಹಿಳೆಯರು ಮತ್ತು ರೈತರಿಗೆ ನಗದು ವರ್ಗಾವಣೆ ಯೋಜನೆಗಳಿಂದ ಉತ್ಪಾದಕ ವೆಚ್ಚಗಳಿಗೆ ಹಣ ಸಾಕಾಗುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಈ ಹಿಂದೆಯೇ ಎಚ್ಚರಿಕೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.</p><p>ಮಹಾರಾಷ್ಟ್ರ ಸರ್ಕಾರವು ಏಪ್ರಿಲ್ 2025 ರಲ್ಲಿ ‘ಸಿಎಂ ಲಡ್ಕಿ ಬಹಿನ್’ ಯೋಜನೆಯಡಿ ಮಾಸಿಕ ಪಾವತಿಯನ್ನು ಕಡಿತಗೊಳಿಸಿ ತನ್ನ ವಿತ್ತೀಯ ಕೊರತೆಯನ್ನು ಸರಿಪಡಿಸಲು ಪ್ರಯತ್ನಿಸಿತು. ಮತ್ತೊಂದೆಡೆ ಜಾರ್ಖಂಡ್ ಸರ್ಕಾರವು 2024ರ ಕೊನೆಯಲ್ಲಿ ‘ಸಿಎಂ ಮೈಯಾನ್ ಸಮ್ಮಾನ್’ ಯೋಜನೆಯಡಿಯಲ್ಲಿ ಪಾವತಿಗಳನ್ನು ತಿಂಗಳಿಗೆ ₹2,500 ಕ್ಕೆ ಹೆಚ್ಚಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>