<p><strong>ಭದ್ರಾವತಿ:</strong> ಸ್ಯಾನಿಟರಿ ಸ್ವಚ್ಛತೆಗಾಗಿ ಮ್ಯಾನ್ಹೋಲ್ ತೆಗೆದು ಕೆಲಸ ಮಾಡಲು ಮುಂದಾದ ಗುತ್ತಿಗೆ ಕಾರ್ಮಿಕ ಆಕಸ್ಮಿಕವಾಗಿ ಅದರಲ್ಲಿ ಬಿದ್ದು ಸಾವು ಕಂಡಿರುವ ದಾರುಣ ಘಟನೆ ಸೋಮವಾರ ನಡೆದಿದೆ.<br /> <br /> ವಿಐಎಸ್ಎಲ್ ನಗರಾಡಳಿತ ಇಲಾಖೆ ಗುತ್ತಿಗೆ ಕಾರ್ಮಿಕ ಹೊಸಬುಳ್ಳಾಪುರ ವಾಸಿ ಲಕ್ಷ್ಮಣ (48)ಸಾವು ಕಂಡು ದುರ್ದೈವಿ. ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಮಂದಿ ಸ್ಥಳಕ್ಕೆ ಆಗಮಿಸಿ ಶವ ತೆಗೆಯುವಲ್ಲಿ ಸಹಕರಿಸಿದ್ದಾರೆ.<br /> <br /> <strong>ಘಟನೆ ವಿವರ:</strong> ಇಲ್ಲಿನ ಹುತ್ತಾಕಾಲೊನಿ ಬಳಿ ಕಲ್ಮಶದಿಂದ ತುಂಬಿದ್ದ ಮ್ಯಾನ್ಹೋಲ್ ತೆಗೆದು ಸ್ವಚ್ಛತೆ ಮಾಡುವ ಸಲುವಾಗಿ ವಿಐಎಸ್ಎಲ್ ನಗರಾಡಳಿತ ಇಲಾಖೆ ತನ್ನ ಗುತ್ತಿಗೆ ಸಿಬ್ಬಂದಿಯನ್ನು ಸೋಮವಾರ ಬೆಳಿಗ್ಗೆ ಕಳುಹಿಸಿತ್ತು.<br /> <br /> ಲಕ್ಷ್ಮಣ ಮ್ಯಾನ್ಹೋಲ್ ಮುಚ್ಚಳ ತೆಗೆದು ಬಗ್ಗಿ ನೋಡುವ ಭರದಲ್ಲಿ ಆಕಸ್ಮಿಕವಾಗಿ ಅದರಲ್ಲಿ ಬಿದ್ದು ತನ್ನ ಜೀವವನ್ನು ಕಳೆದುಕೊಂಡಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ನಗರಾಡಳಿತ ಇಲಾಖೆ ಅಧಿಕಾರಿ ಸಿಬ್ಬಂದಿ, ನಾಗರಿಕರು ಸ್ಥಳಕ್ಕೆ ಆಗಮಿಸಿದರು.<br /> <br /> <strong>ಪ್ರತಿಭಟನೆ: </strong>ಘಟನೆ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮೃತರ ಕುಟುಂಬದ ಸದಸ್ಯನಿಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ಕೊಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.<br /> <br /> ಇದಕ್ಕೆ ಒಪ್ಪಿಗೆ ನೀಡಿರುವ ವಿಐಎಸ್ಎಲ್ ಅಧಿಕಾರಿ ವರ್ಗ, ಇನ್ನಿತರ ಕಾನೂನು ಭಾಗದ ಸವಲತ್ತು ಕೊಡಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.ಈ ಸಂದರ್ಭದಲ್ಲಿ ದಸಂಸ ಮುಖಂಡರಾದ ಸತ್ಯ, ಚಿನ್ನಯ್ಯ, ಈಶ್ವರಪ್ಪ, ಪಳನಿರಾಜ್, ಮಣಿ ಸೇರಿದಂತೆ ಹಲವರು ಸ್ಥಳದಲ್ಲಿ ಹಾಜರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭದ್ರಾವತಿ:</strong> ಸ್ಯಾನಿಟರಿ ಸ್ವಚ್ಛತೆಗಾಗಿ ಮ್ಯಾನ್ಹೋಲ್ ತೆಗೆದು ಕೆಲಸ ಮಾಡಲು ಮುಂದಾದ ಗುತ್ತಿಗೆ ಕಾರ್ಮಿಕ ಆಕಸ್ಮಿಕವಾಗಿ ಅದರಲ್ಲಿ ಬಿದ್ದು ಸಾವು ಕಂಡಿರುವ ದಾರುಣ ಘಟನೆ ಸೋಮವಾರ ನಡೆದಿದೆ.<br /> <br /> ವಿಐಎಸ್ಎಲ್ ನಗರಾಡಳಿತ ಇಲಾಖೆ ಗುತ್ತಿಗೆ ಕಾರ್ಮಿಕ ಹೊಸಬುಳ್ಳಾಪುರ ವಾಸಿ ಲಕ್ಷ್ಮಣ (48)ಸಾವು ಕಂಡು ದುರ್ದೈವಿ. ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಮಂದಿ ಸ್ಥಳಕ್ಕೆ ಆಗಮಿಸಿ ಶವ ತೆಗೆಯುವಲ್ಲಿ ಸಹಕರಿಸಿದ್ದಾರೆ.<br /> <br /> <strong>ಘಟನೆ ವಿವರ:</strong> ಇಲ್ಲಿನ ಹುತ್ತಾಕಾಲೊನಿ ಬಳಿ ಕಲ್ಮಶದಿಂದ ತುಂಬಿದ್ದ ಮ್ಯಾನ್ಹೋಲ್ ತೆಗೆದು ಸ್ವಚ್ಛತೆ ಮಾಡುವ ಸಲುವಾಗಿ ವಿಐಎಸ್ಎಲ್ ನಗರಾಡಳಿತ ಇಲಾಖೆ ತನ್ನ ಗುತ್ತಿಗೆ ಸಿಬ್ಬಂದಿಯನ್ನು ಸೋಮವಾರ ಬೆಳಿಗ್ಗೆ ಕಳುಹಿಸಿತ್ತು.<br /> <br /> ಲಕ್ಷ್ಮಣ ಮ್ಯಾನ್ಹೋಲ್ ಮುಚ್ಚಳ ತೆಗೆದು ಬಗ್ಗಿ ನೋಡುವ ಭರದಲ್ಲಿ ಆಕಸ್ಮಿಕವಾಗಿ ಅದರಲ್ಲಿ ಬಿದ್ದು ತನ್ನ ಜೀವವನ್ನು ಕಳೆದುಕೊಂಡಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ನಗರಾಡಳಿತ ಇಲಾಖೆ ಅಧಿಕಾರಿ ಸಿಬ್ಬಂದಿ, ನಾಗರಿಕರು ಸ್ಥಳಕ್ಕೆ ಆಗಮಿಸಿದರು.<br /> <br /> <strong>ಪ್ರತಿಭಟನೆ: </strong>ಘಟನೆ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮೃತರ ಕುಟುಂಬದ ಸದಸ್ಯನಿಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ಕೊಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.<br /> <br /> ಇದಕ್ಕೆ ಒಪ್ಪಿಗೆ ನೀಡಿರುವ ವಿಐಎಸ್ಎಲ್ ಅಧಿಕಾರಿ ವರ್ಗ, ಇನ್ನಿತರ ಕಾನೂನು ಭಾಗದ ಸವಲತ್ತು ಕೊಡಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.ಈ ಸಂದರ್ಭದಲ್ಲಿ ದಸಂಸ ಮುಖಂಡರಾದ ಸತ್ಯ, ಚಿನ್ನಯ್ಯ, ಈಶ್ವರಪ್ಪ, ಪಳನಿರಾಜ್, ಮಣಿ ಸೇರಿದಂತೆ ಹಲವರು ಸ್ಥಳದಲ್ಲಿ ಹಾಜರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>