<p><strong>ಮೈಸೂರು</strong>: ಲಿಂಗದೇವರು ಹಳೆಮನೆ ನಿಧನದಿಂದ ತೆರವಾಗಿದ್ದ ಮೈಸೂರಿನ ರಂಗಾಯಣದ ನಿರ್ದೇಶಕರಾಗಿ ಡಾ.ಬಿ.ವಿ.ರಾಜಾರಾಂ ಬುಧವಾರ ಅಧಿಕಾರ ಸ್ವೀಕರಿಸಿದರು.<br /> <br /> ರಂಗಾಯಣ ಉಪನಿರ್ದೇಶಕಿ ನಿರ್ಮಲಾ ಮಠಪತಿ ಅಧಿಕಾರ ಹಸ್ತಾಂತರಿಸಿದರು. ಅಧಿಕಾರ ಸ್ವೀಕರಿದ ನಂತರ ಮಾತನಾಡಿದ ರಾಜಾರಾಂ `40 ವರ್ಷಗಳಿಂದ ನನಗೆ ರಂಗಭೂಮಿ ನಂಟಿದೆ. ರಂಗಾಯಣದ ಜೊತೆ ಉತ್ತಮ ಸಂಬಂಧವಿದ್ದು, ಸಿ.ಬಸವಲಿಂಗಯ್ಯ, ಪ್ರಸನ್ನ ಅವರು ನಿರ್ದೇಶಕರಾಗಿದ್ದಾಗ ಇಲ್ಲಿಗೆ ಬರುತ್ತಿದ್ದೆ. <br /> <br /> ರಂಗಾಯಣವನ್ನು ದೇಶದಲ್ಲಿ ಪ್ರತಿಷ್ಠಿತ ಕನ್ನಡ ರೆಪರ್ಟರಿಯಾಗಿ ಮಾಡುವ ಉದ್ದೇಶವಿದೆ. ರಾಜ್ಯದ ಪ್ರತಿಭೆಗಳನ್ನು ಬಳಸಿಕೊಂಡು ಅದ್ಬುತ ಪ್ರದರ್ಶನ ನೀಡುವ ಮೂಲಕ ಕರ್ನಾಟಕದ ರಂಗಪ್ರತಿಭೆಯನ್ನು ಎಲ್ಲಾ ಕಡೆ ಪ್ರದರ್ಶಿಸುವಂತೆ ಮಾಡುತ್ತೇನೆ~ ಎಂದರು.<br /> <br /> `ಹಳೆ ಮತ್ತು ಹೊಸ ತಲೆಮಾರಿನ ಕಲಾವಿದರನ್ನು ಒಂದುಗೂಡಿಸಿಕೊಂಡು ರಂಗಾಯಣಕ್ಕೆ ಒಂದು ಹೊಸ ರೂಪ ನೀಡುವುದಾಗಿ ಹೇಳಿದ ಅವರು `ರಾಷ್ಟ್ರೀಯ ನಾಟಕ ಶಾಲೆ~ಯಂತೆಯೇ ರಂಗಾಯಣವನ್ನು ಅಭಿವೃದ್ಧಿಪಡಿಸುವ ಭರವಸೆ ನೀಡಿದರು.<br /> <br /> ಕಾಲೇಜು, ಬಹುರೂಪಿ ಹಾಗೂ ದಸರಾ ನಾಟಕಗಳಲ್ಲಿ ರಂಗಾಯಣದ ಕಲಾವಿದರನ್ನು ಒಟ್ಟಾಗಿ ಸೇರಿಸಿ ಉತ್ತಮ ನಾಟಕಗಳನ್ನು ಪ್ರದರ್ಶಿಸಲಾಗುವುದು. ಕಾ.ತ.ಚಿಕ್ಕಣ್ಣ ಅವರು ಹೆಚ್ಚುವರಿ ನಿರ್ದೇಶಕರಾಗಿ ಉತ್ತಮ ಕೆಲಸಗಳನ್ನು ಮಾಡಿದ್ದು, ಅವುಗಳನ್ನು ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದರು.<br /> <br /> ಮೈಸೂರಿನಲ್ಲೂ ಇದ್ದು ಕೆಲಸ ಮಾಡುತ್ತೇನೆ. ರಂಗಾಯಣದಲ್ಲಿ ಹೊಸ ಯೋಜನೆ ಜಾರಿಗೆ ತರುವ ಸಂಬಂಧ ಚರ್ಚಿಸಿ ಉತ್ತಮ ಕೆಲಸ ಮಾಡುತ್ತೇನೆ. ರಂಗಾಯಣ ನಿರ್ದೇಶಕರಾಗಿ ಬರಲು ನಾನು ಯಾವುದೇ ಲಾಭಿ ಮಾಡುವ ಅಗತ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.<br /> <br /> ರಂಗಕರ್ಮಿಗಳಾದ ರಾಜಶೇಖರ ಕದಂಬ, ಶ್ರೀಕಂಠಗುಂಡಪ್ಪ, ಎಚ್.ಕೆ.ರಾಮನಾಥ್, ನಾಟಕ ಅಕಾಡೆಮಿ ಸದಸ್ಯ ನಾಗಚಂದ್ರ, ಕೃಷ್ಣಜನಮನ ಇತರರು ನಿರ್ದೇಶಕರಿಗೆ ಶುಭ ಕೋರಿದರು.</p>.<p><strong>ನಿರ್ದೇಶಕರ ಪರಿಚಯ</strong><br /> 56 ವಯಸ್ಸಿನ ಡಾ.ಬಿ.ವಿ.ರಾಜಾರಾಂ 100ಕ್ಕೂ ಹೆಚ್ಚಿನ ನಾಟಕಗಳಲ್ಲಿ ನಟ, ನಿರ್ದೇಶಕ, ಸಂಘಟಕ ಮತ್ತು ರಂಗತಂತ್ರಜ್ಞರಾಗಿ ಕೆಲಸ ಮಾಡಿದ್ದಾರೆ. ಸಾವಿರಕ್ಕೂ ಹೆಚ್ಚು ಮೂಕಿ ಟಾಕಿ ಪ್ರದರ್ಶನ ನೀಡಿದ್ದಾರೆ. ದೂರದರ್ಶನ ಮತ್ತು ಆಕಾಶವಾಣಿ ಕಲಾವಿದರಾಗಿ ಕೆಲಸ ಮಾಡಿರುವ ಇವರು ಚಲನಚಿತ್ರ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.<br /> <br /> ಮುಖ್ಯಮಂತ್ರಿ ನಾಟಕವನ್ನು ನಿರ್ದೇಶಿಸುವ ಮೂಲಕ ಮುಖ್ಯಮಂತ್ರಿ ಚಂದ್ರು ಅವರನ್ನು ರಂಗಕ್ಕೆ ತಂದ ಕೀರ್ತಿ ಇವರದು. `ಅಜಿತನ ಸಾಹಸಗಳು ಧಾರಾವಾಹಿಯಲ್ಲಿ ಅಜಿತನ ಪಾತ್ರ ನಿರ್ವಹಿಸಿದ್ದರು. ಮೈಸೂರು ವಿಶ್ವವಿದ್ಯಾನಿಲಯದ ಡಾ.ಗುಬ್ಬಿವೀರಣ್ಣ ರಂಗಪೀಠದಲ್ಲಿ 2003-04ರಲ್ಲಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. 38 ವರ್ಷಗಳು ರಂಗ ಚಟುವಟಿಕೆಯಲ್ಲಿ ತೊಡಗಿರುವ ಇವರ ಪ್ರಮುಖ ನಾಟಕಗಳೆಂದರೆ ಅಚಲಾಯತನ, ಮೂಕಿ-ಟಾಕಿ, ಮೂಕಜ್ಜಿಯ ಕನಸುಗಳು, ಮೈಸೂರು ಮಲ್ಲಿಗೆ, ಮಂದ್ರ, ಕುವೆಂಪು ನಾಟಕಗಳು, ಕೈಲಾಸಂ ನಾಟಕಗಳು, ಶ್ರೀರಂಗರ ನಾಟಕಗಳು. 1971ರಲ್ಲಿ ಕಲಾಗಂಗೋತ್ರಿ ಹವ್ಯಾಸಿ ಕಲಾತಂಡ ಸ್ಥಾಪಿಸಿದ್ದು, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಲಿಂಗದೇವರು ಹಳೆಮನೆ ನಿಧನದಿಂದ ತೆರವಾಗಿದ್ದ ಮೈಸೂರಿನ ರಂಗಾಯಣದ ನಿರ್ದೇಶಕರಾಗಿ ಡಾ.ಬಿ.ವಿ.ರಾಜಾರಾಂ ಬುಧವಾರ ಅಧಿಕಾರ ಸ್ವೀಕರಿಸಿದರು.<br /> <br /> ರಂಗಾಯಣ ಉಪನಿರ್ದೇಶಕಿ ನಿರ್ಮಲಾ ಮಠಪತಿ ಅಧಿಕಾರ ಹಸ್ತಾಂತರಿಸಿದರು. ಅಧಿಕಾರ ಸ್ವೀಕರಿದ ನಂತರ ಮಾತನಾಡಿದ ರಾಜಾರಾಂ `40 ವರ್ಷಗಳಿಂದ ನನಗೆ ರಂಗಭೂಮಿ ನಂಟಿದೆ. ರಂಗಾಯಣದ ಜೊತೆ ಉತ್ತಮ ಸಂಬಂಧವಿದ್ದು, ಸಿ.ಬಸವಲಿಂಗಯ್ಯ, ಪ್ರಸನ್ನ ಅವರು ನಿರ್ದೇಶಕರಾಗಿದ್ದಾಗ ಇಲ್ಲಿಗೆ ಬರುತ್ತಿದ್ದೆ. <br /> <br /> ರಂಗಾಯಣವನ್ನು ದೇಶದಲ್ಲಿ ಪ್ರತಿಷ್ಠಿತ ಕನ್ನಡ ರೆಪರ್ಟರಿಯಾಗಿ ಮಾಡುವ ಉದ್ದೇಶವಿದೆ. ರಾಜ್ಯದ ಪ್ರತಿಭೆಗಳನ್ನು ಬಳಸಿಕೊಂಡು ಅದ್ಬುತ ಪ್ರದರ್ಶನ ನೀಡುವ ಮೂಲಕ ಕರ್ನಾಟಕದ ರಂಗಪ್ರತಿಭೆಯನ್ನು ಎಲ್ಲಾ ಕಡೆ ಪ್ರದರ್ಶಿಸುವಂತೆ ಮಾಡುತ್ತೇನೆ~ ಎಂದರು.<br /> <br /> `ಹಳೆ ಮತ್ತು ಹೊಸ ತಲೆಮಾರಿನ ಕಲಾವಿದರನ್ನು ಒಂದುಗೂಡಿಸಿಕೊಂಡು ರಂಗಾಯಣಕ್ಕೆ ಒಂದು ಹೊಸ ರೂಪ ನೀಡುವುದಾಗಿ ಹೇಳಿದ ಅವರು `ರಾಷ್ಟ್ರೀಯ ನಾಟಕ ಶಾಲೆ~ಯಂತೆಯೇ ರಂಗಾಯಣವನ್ನು ಅಭಿವೃದ್ಧಿಪಡಿಸುವ ಭರವಸೆ ನೀಡಿದರು.<br /> <br /> ಕಾಲೇಜು, ಬಹುರೂಪಿ ಹಾಗೂ ದಸರಾ ನಾಟಕಗಳಲ್ಲಿ ರಂಗಾಯಣದ ಕಲಾವಿದರನ್ನು ಒಟ್ಟಾಗಿ ಸೇರಿಸಿ ಉತ್ತಮ ನಾಟಕಗಳನ್ನು ಪ್ರದರ್ಶಿಸಲಾಗುವುದು. ಕಾ.ತ.ಚಿಕ್ಕಣ್ಣ ಅವರು ಹೆಚ್ಚುವರಿ ನಿರ್ದೇಶಕರಾಗಿ ಉತ್ತಮ ಕೆಲಸಗಳನ್ನು ಮಾಡಿದ್ದು, ಅವುಗಳನ್ನು ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದರು.<br /> <br /> ಮೈಸೂರಿನಲ್ಲೂ ಇದ್ದು ಕೆಲಸ ಮಾಡುತ್ತೇನೆ. ರಂಗಾಯಣದಲ್ಲಿ ಹೊಸ ಯೋಜನೆ ಜಾರಿಗೆ ತರುವ ಸಂಬಂಧ ಚರ್ಚಿಸಿ ಉತ್ತಮ ಕೆಲಸ ಮಾಡುತ್ತೇನೆ. ರಂಗಾಯಣ ನಿರ್ದೇಶಕರಾಗಿ ಬರಲು ನಾನು ಯಾವುದೇ ಲಾಭಿ ಮಾಡುವ ಅಗತ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.<br /> <br /> ರಂಗಕರ್ಮಿಗಳಾದ ರಾಜಶೇಖರ ಕದಂಬ, ಶ್ರೀಕಂಠಗುಂಡಪ್ಪ, ಎಚ್.ಕೆ.ರಾಮನಾಥ್, ನಾಟಕ ಅಕಾಡೆಮಿ ಸದಸ್ಯ ನಾಗಚಂದ್ರ, ಕೃಷ್ಣಜನಮನ ಇತರರು ನಿರ್ದೇಶಕರಿಗೆ ಶುಭ ಕೋರಿದರು.</p>.<p><strong>ನಿರ್ದೇಶಕರ ಪರಿಚಯ</strong><br /> 56 ವಯಸ್ಸಿನ ಡಾ.ಬಿ.ವಿ.ರಾಜಾರಾಂ 100ಕ್ಕೂ ಹೆಚ್ಚಿನ ನಾಟಕಗಳಲ್ಲಿ ನಟ, ನಿರ್ದೇಶಕ, ಸಂಘಟಕ ಮತ್ತು ರಂಗತಂತ್ರಜ್ಞರಾಗಿ ಕೆಲಸ ಮಾಡಿದ್ದಾರೆ. ಸಾವಿರಕ್ಕೂ ಹೆಚ್ಚು ಮೂಕಿ ಟಾಕಿ ಪ್ರದರ್ಶನ ನೀಡಿದ್ದಾರೆ. ದೂರದರ್ಶನ ಮತ್ತು ಆಕಾಶವಾಣಿ ಕಲಾವಿದರಾಗಿ ಕೆಲಸ ಮಾಡಿರುವ ಇವರು ಚಲನಚಿತ್ರ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.<br /> <br /> ಮುಖ್ಯಮಂತ್ರಿ ನಾಟಕವನ್ನು ನಿರ್ದೇಶಿಸುವ ಮೂಲಕ ಮುಖ್ಯಮಂತ್ರಿ ಚಂದ್ರು ಅವರನ್ನು ರಂಗಕ್ಕೆ ತಂದ ಕೀರ್ತಿ ಇವರದು. `ಅಜಿತನ ಸಾಹಸಗಳು ಧಾರಾವಾಹಿಯಲ್ಲಿ ಅಜಿತನ ಪಾತ್ರ ನಿರ್ವಹಿಸಿದ್ದರು. ಮೈಸೂರು ವಿಶ್ವವಿದ್ಯಾನಿಲಯದ ಡಾ.ಗುಬ್ಬಿವೀರಣ್ಣ ರಂಗಪೀಠದಲ್ಲಿ 2003-04ರಲ್ಲಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. 38 ವರ್ಷಗಳು ರಂಗ ಚಟುವಟಿಕೆಯಲ್ಲಿ ತೊಡಗಿರುವ ಇವರ ಪ್ರಮುಖ ನಾಟಕಗಳೆಂದರೆ ಅಚಲಾಯತನ, ಮೂಕಿ-ಟಾಕಿ, ಮೂಕಜ್ಜಿಯ ಕನಸುಗಳು, ಮೈಸೂರು ಮಲ್ಲಿಗೆ, ಮಂದ್ರ, ಕುವೆಂಪು ನಾಟಕಗಳು, ಕೈಲಾಸಂ ನಾಟಕಗಳು, ಶ್ರೀರಂಗರ ನಾಟಕಗಳು. 1971ರಲ್ಲಿ ಕಲಾಗಂಗೋತ್ರಿ ಹವ್ಯಾಸಿ ಕಲಾತಂಡ ಸ್ಥಾಪಿಸಿದ್ದು, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>