<p><strong>ಮುಂಬೈ (ಪಿಟಿಐ):</strong> ಅವ್ಯವಹಾರ ಆರೋಪ ಮಾಡಿದ್ದಕ್ಕಾಗಿ ಬಿಸಿಸಿಐ ಮುಖ್ಯ ಆಡಳಿತಾಧಿಕಾರಿ ಪ್ರೊ.ರತ್ನಾಕರ್ ಶೆಟ್ಟಿ ಅವರ ಮೇಲೆ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಐದು ವರ್ಷಗಳ ನಿಷೇಧ ಶಿಕ್ಷೆ ವಿಧಿಸಿದೆ. ಎಂಸಿಎನ ಎಲ್ಲಾ ಕಾರ್ಯ ಚಟುವಟಿಕೆಗಳಿಂದ ಶೆಟ್ಟಿ ಅವರನ್ನು ದೂರವಿರಿಸಲು ಸಂಸ್ಥೆ ತೀರ್ಮಾನಿಸಿದೆ.<br /> <br /> 2012ರಲ್ಲಿ ಅಹಮದಾಬಾದ್ನಲ್ಲಿ ನಡೆದ ಭಾರತ-ಪಾಕಿಸ್ತಾನ ನಡುವಿನ ಟ್ವೆಂಟಿ-20 ಪಂದ್ಯದ ಟಿಕೆಟ್ಗಳನ್ನು ಎಂಸಿಎ ಸದಸ್ಯರು ಕಾಳಸಂತೆಯಲ್ಲಿ (ಬ್ಲಾಕ್) ಮಾರಾಟ ಮಾಡಿರುವ ಸಾಧ್ಯತೆ ಇದೆ ಎಂದು ರತ್ನಾಕರ್ ಶೆಟ್ಟಿ ಆರೋಪಿಸಿದ್ದರು.<br /> <br /> `ಹೌದು, ಶೆಟ್ಟಿ ಮೇಲೆ ಐದು ವರ್ಷ ನಿಷೇಧ ವಿಧಿಸಲಾಗಿದೆ. ಈ ಅವಧಿಯಲ್ಲಿ ಅವರು ಎಂಸಿಎ ಅಧೀನದಲ್ಲಿ ಬರುವ ಯಾವುದೇ ಕ್ಲಬ್ ಪ್ರತಿನಿಧಿಸುವಂತಿಲ್ಲ. ಆದರೆ ಎಂಸಿಎ ಕಟ್ಟಡ ಪ್ರವೇಶ ನಿರ್ಬಂಧಿಸಿಲ್ಲ' ಎಂದು ಎಂಸಿಎ ಅಧ್ಯಕ್ಷ ರವಿ ಸಾವಂತ್ ನುಡಿದಿದ್ದಾರೆ.<br /> <br /> `ಶೆಟ್ಟಿ ಅವರು ಮಾಡಿದ್ದ ಆರೋಪ ಸಂಬಂಧ ನಾವು ತನಿಖೆ ನಡೆಸಿದ್ದೆವು. ಆದರೆ ಅವರ ಆರೋಪ ಸುಳ್ಳು ಎಂಬುದು ಸಾಬೀತಾಗಿದೆ. ಮೇ 14ರಂದು ನಡೆದ ಸಂಸ್ಥೆಯ ವ್ಯವಸ್ಥಾಪಕ ಸಮಿತಿ ಸಭೆಯಲ್ಲಿ ನಿಷೇಧ ಹೇರಲು ತೀರ್ಮಾನಿಸಲಾಯಿತು' ಎಂದೂ ಅವರು ಹೇಳಿದ್ದಾರೆ.<br /> <br /> ನಿಷೇಧ 2018ರ ಜೂನ್ ಎರಡರವರೆಗೆ ಜಾರಿಯಲ್ಲಿರಲಿದೆ. ಆದರೆ ನಿಷೇಧ ಶಿಕ್ಷೆಯ ವಿರುದ್ಧ ಶೆಟ್ಟಿ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದೆ.<br /> <br /> ಶೆಟ್ಟಿ ಅವರು ಬಿಸಿಸಿಐ ಹಿರಿಯ ಅಧಿಕಾರಿ ಕೂಡ. ಎಂಸಿಎ ಆವರಣದಲ್ಲಿಯೇ ಬಿಸಿಸಿಐ ಕಚೇರಿ ಇದೆ. ಅಷ್ಟು ಮಾತ್ರವಲ್ಲದೇ, ಅವರು ಈ ಹಿಂದೆ ಎಂಸಿಎ ಕಾರ್ಯದರ್ಶಿ, ಖಜಾಂಚಿ, ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ (ಪಿಟಿಐ):</strong> ಅವ್ಯವಹಾರ ಆರೋಪ ಮಾಡಿದ್ದಕ್ಕಾಗಿ ಬಿಸಿಸಿಐ ಮುಖ್ಯ ಆಡಳಿತಾಧಿಕಾರಿ ಪ್ರೊ.ರತ್ನಾಕರ್ ಶೆಟ್ಟಿ ಅವರ ಮೇಲೆ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಐದು ವರ್ಷಗಳ ನಿಷೇಧ ಶಿಕ್ಷೆ ವಿಧಿಸಿದೆ. ಎಂಸಿಎನ ಎಲ್ಲಾ ಕಾರ್ಯ ಚಟುವಟಿಕೆಗಳಿಂದ ಶೆಟ್ಟಿ ಅವರನ್ನು ದೂರವಿರಿಸಲು ಸಂಸ್ಥೆ ತೀರ್ಮಾನಿಸಿದೆ.<br /> <br /> 2012ರಲ್ಲಿ ಅಹಮದಾಬಾದ್ನಲ್ಲಿ ನಡೆದ ಭಾರತ-ಪಾಕಿಸ್ತಾನ ನಡುವಿನ ಟ್ವೆಂಟಿ-20 ಪಂದ್ಯದ ಟಿಕೆಟ್ಗಳನ್ನು ಎಂಸಿಎ ಸದಸ್ಯರು ಕಾಳಸಂತೆಯಲ್ಲಿ (ಬ್ಲಾಕ್) ಮಾರಾಟ ಮಾಡಿರುವ ಸಾಧ್ಯತೆ ಇದೆ ಎಂದು ರತ್ನಾಕರ್ ಶೆಟ್ಟಿ ಆರೋಪಿಸಿದ್ದರು.<br /> <br /> `ಹೌದು, ಶೆಟ್ಟಿ ಮೇಲೆ ಐದು ವರ್ಷ ನಿಷೇಧ ವಿಧಿಸಲಾಗಿದೆ. ಈ ಅವಧಿಯಲ್ಲಿ ಅವರು ಎಂಸಿಎ ಅಧೀನದಲ್ಲಿ ಬರುವ ಯಾವುದೇ ಕ್ಲಬ್ ಪ್ರತಿನಿಧಿಸುವಂತಿಲ್ಲ. ಆದರೆ ಎಂಸಿಎ ಕಟ್ಟಡ ಪ್ರವೇಶ ನಿರ್ಬಂಧಿಸಿಲ್ಲ' ಎಂದು ಎಂಸಿಎ ಅಧ್ಯಕ್ಷ ರವಿ ಸಾವಂತ್ ನುಡಿದಿದ್ದಾರೆ.<br /> <br /> `ಶೆಟ್ಟಿ ಅವರು ಮಾಡಿದ್ದ ಆರೋಪ ಸಂಬಂಧ ನಾವು ತನಿಖೆ ನಡೆಸಿದ್ದೆವು. ಆದರೆ ಅವರ ಆರೋಪ ಸುಳ್ಳು ಎಂಬುದು ಸಾಬೀತಾಗಿದೆ. ಮೇ 14ರಂದು ನಡೆದ ಸಂಸ್ಥೆಯ ವ್ಯವಸ್ಥಾಪಕ ಸಮಿತಿ ಸಭೆಯಲ್ಲಿ ನಿಷೇಧ ಹೇರಲು ತೀರ್ಮಾನಿಸಲಾಯಿತು' ಎಂದೂ ಅವರು ಹೇಳಿದ್ದಾರೆ.<br /> <br /> ನಿಷೇಧ 2018ರ ಜೂನ್ ಎರಡರವರೆಗೆ ಜಾರಿಯಲ್ಲಿರಲಿದೆ. ಆದರೆ ನಿಷೇಧ ಶಿಕ್ಷೆಯ ವಿರುದ್ಧ ಶೆಟ್ಟಿ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದೆ.<br /> <br /> ಶೆಟ್ಟಿ ಅವರು ಬಿಸಿಸಿಐ ಹಿರಿಯ ಅಧಿಕಾರಿ ಕೂಡ. ಎಂಸಿಎ ಆವರಣದಲ್ಲಿಯೇ ಬಿಸಿಸಿಐ ಕಚೇರಿ ಇದೆ. ಅಷ್ಟು ಮಾತ್ರವಲ್ಲದೇ, ಅವರು ಈ ಹಿಂದೆ ಎಂಸಿಎ ಕಾರ್ಯದರ್ಶಿ, ಖಜಾಂಚಿ, ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>