<p><strong>ಹುಬ್ಬಳ್ಳಿ: ‘</strong>ಆಕೆಯ ಅದೃಷ್ಟಕ್ಕೆ ನನ್ನ ಶ್ರಮ ಸೇರಿ ಶತಕ ಒಲಿದು ಬಂದಿದೆ. ಈ ಮೂಲಕ ನನ್ನ ಅನೇಕ ದಿನಗಳ ಕನಸು ನನಸಾಗಿದೆ. ಈ ಶತಕ ಆಕೆಗೆ ಸೇರಿದ್ದು...’<br /> <br /> ನಗರದಲ್ಲಿ ನಡೆಯುತ್ತಿರುವ ಪಂಜಾಬ್ ವಿರುದ್ಧದ ರಣಜಿ ಪಂದ್ಯದಲ್ಲಿ ಪ್ರಥಮ ದರ್ಜೆ ಕ್ರಿಕೆಟ್ನ ಚೊಚ್ಚಲ ಶತಕ ಗಳಿಸಿದ ಆರ್. ವಿನಯ್ ಕುಮಾರ್ ಆಡಿದ ಮಾತಿದು.<br /> <br /> ದೆಹಲಿ ಮೂಲದ ರಿಚಾ ಅವರನ್ನು ನವೆಂಬರ್ 30ರಂದು ಮದುವೆ ಯಾದ ಭಾರತ ತಂಡದ ವೇಗಿ ವಿನಯ್ ಕುಮಾರ್ ಕಳೆದ ಮೂರು ರಣಜಿ ಪಂದ್ಯಗಳಲ್ಲಿ ಕರ್ನಾಟಕದ ಪರ ಆಡಿರಲಿಲ್ಲ. ದಾಂಪತ್ಯಕ್ಕೆ ಕಾಲಿಟ್ಟ ನಂತರ ಅವರ ಮೊದಲ ಪಂದ್ಯಕ್ಕೆ ಹುಬ್ಬಳ್ಳಿಯ ಕೆಎಸ್ಸಿಎ ಮೈದಾನ ವೇದಿಕೆಯಾಗಿತ್ತು. <br /> <br /> ಸೋಮವಾರ ದಿನದಾಟ ಮುಗಿದ ನಂತರ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು ಬ್ಯಾಟಿಂಗ್ನಲ್ಲಿ ಸಾಧನೆ ಮಾಡಲು ಐದು ವರ್ಷ ಗಳಿಂದ ಸತತ ಪ್ರಯತ್ನ ಮಾಡುತ್ತಿದ್ದೇನೆ. ಇಂದು ಇದಕ್ಕೆ ಫಲ ಸಿಕ್ಕಿದೆ. ಈ ಸಾಧನೆ ತುಂಬ ಖುಷಿ ತಂದಿದೆ ಎಂದು ಹೇಳಿದರು.<br /> <br /> ‘ಕ್ರಿಕೆಟ್ನಲ್ಲಿ ಸಾಕಷ್ಟು ಬದಲಾ ವಣೆಗಳಾಗಿದ್ದು ಇದರೊಂದಿಗೆ ಅನೇಕ ಅನಿವಾರ್ಯತೆಗಳು ಉಂಟಾಗಿವೆ. ಕೆಳ ಕ್ರಮಾಂಕದ ಬ್ಯಾಟ್ಸ್ಮನ್ ಗಳು ಅರ್ಥಾತ್ ಬೌಲರ್ಗಳು ಬ್ಯಾಟಿಂಗ್ ಕಡೆಗೂ ಗಮನ ಕೊಡ ಬೇಕಾಗಿರು ವುದು ಇಂದಿನ ಅಗತ್ಯ. ಈ ಹಿನ್ನೆಲೆ ಯಲ್ಲಿ ಬ್ಯಾಟಿಂಗ್ಗೆ ಹೆಚ್ಚು ಗಮನ ಕೊಡುತ್ತಿದ್ದೇನೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: ‘</strong>ಆಕೆಯ ಅದೃಷ್ಟಕ್ಕೆ ನನ್ನ ಶ್ರಮ ಸೇರಿ ಶತಕ ಒಲಿದು ಬಂದಿದೆ. ಈ ಮೂಲಕ ನನ್ನ ಅನೇಕ ದಿನಗಳ ಕನಸು ನನಸಾಗಿದೆ. ಈ ಶತಕ ಆಕೆಗೆ ಸೇರಿದ್ದು...’<br /> <br /> ನಗರದಲ್ಲಿ ನಡೆಯುತ್ತಿರುವ ಪಂಜಾಬ್ ವಿರುದ್ಧದ ರಣಜಿ ಪಂದ್ಯದಲ್ಲಿ ಪ್ರಥಮ ದರ್ಜೆ ಕ್ರಿಕೆಟ್ನ ಚೊಚ್ಚಲ ಶತಕ ಗಳಿಸಿದ ಆರ್. ವಿನಯ್ ಕುಮಾರ್ ಆಡಿದ ಮಾತಿದು.<br /> <br /> ದೆಹಲಿ ಮೂಲದ ರಿಚಾ ಅವರನ್ನು ನವೆಂಬರ್ 30ರಂದು ಮದುವೆ ಯಾದ ಭಾರತ ತಂಡದ ವೇಗಿ ವಿನಯ್ ಕುಮಾರ್ ಕಳೆದ ಮೂರು ರಣಜಿ ಪಂದ್ಯಗಳಲ್ಲಿ ಕರ್ನಾಟಕದ ಪರ ಆಡಿರಲಿಲ್ಲ. ದಾಂಪತ್ಯಕ್ಕೆ ಕಾಲಿಟ್ಟ ನಂತರ ಅವರ ಮೊದಲ ಪಂದ್ಯಕ್ಕೆ ಹುಬ್ಬಳ್ಳಿಯ ಕೆಎಸ್ಸಿಎ ಮೈದಾನ ವೇದಿಕೆಯಾಗಿತ್ತು. <br /> <br /> ಸೋಮವಾರ ದಿನದಾಟ ಮುಗಿದ ನಂತರ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು ಬ್ಯಾಟಿಂಗ್ನಲ್ಲಿ ಸಾಧನೆ ಮಾಡಲು ಐದು ವರ್ಷ ಗಳಿಂದ ಸತತ ಪ್ರಯತ್ನ ಮಾಡುತ್ತಿದ್ದೇನೆ. ಇಂದು ಇದಕ್ಕೆ ಫಲ ಸಿಕ್ಕಿದೆ. ಈ ಸಾಧನೆ ತುಂಬ ಖುಷಿ ತಂದಿದೆ ಎಂದು ಹೇಳಿದರು.<br /> <br /> ‘ಕ್ರಿಕೆಟ್ನಲ್ಲಿ ಸಾಕಷ್ಟು ಬದಲಾ ವಣೆಗಳಾಗಿದ್ದು ಇದರೊಂದಿಗೆ ಅನೇಕ ಅನಿವಾರ್ಯತೆಗಳು ಉಂಟಾಗಿವೆ. ಕೆಳ ಕ್ರಮಾಂಕದ ಬ್ಯಾಟ್ಸ್ಮನ್ ಗಳು ಅರ್ಥಾತ್ ಬೌಲರ್ಗಳು ಬ್ಯಾಟಿಂಗ್ ಕಡೆಗೂ ಗಮನ ಕೊಡ ಬೇಕಾಗಿರು ವುದು ಇಂದಿನ ಅಗತ್ಯ. ಈ ಹಿನ್ನೆಲೆ ಯಲ್ಲಿ ಬ್ಯಾಟಿಂಗ್ಗೆ ಹೆಚ್ಚು ಗಮನ ಕೊಡುತ್ತಿದ್ದೇನೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>