<p><strong>ಬೆಳಗಾವಿ</strong>: ಉಳ್ಳಾಗಡ್ಡಿ ಬೆಲೆ ಹಠಾತ್ ಕುಸಿತಗೊಂಡಿದ್ದರಿಂದ ಆಕ್ರೋಶಗೊಂಡ ರೈತರು ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಎದುರು ರಸ್ತೆ ಮೇಲೆ ಕಲ್ಲುಗಳನ್ನಿಟ್ಟು ಬುಧವಾರ ರಸ್ತೆ ತಡೆ ನಡೆಸಿದರು. ಹುಬ್ಬಳ್ಳಿ ಎಪಿಎಂಸಿಯಲ್ಲಿ ಬೆಲೆ ಕುಸಿತದಿಂದ ಪ್ರತಿಭಟನೆ ನಡೆಯುತ್ತಿರುವ ಕಾರಣ, ಬುಧವಾರ ಬೆಳಗಾವಿ ಎಪಿಎಂಸಿಗೆ ಧಾರವಾಡ, ವಿಜಾಪುರ, ಗದಗ ಸೇರಿದಂತೆ ಬೆಳಗಾವಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ರೈತರು ಉಳ್ಳಾಗಡ್ಡಿ ತಂದಿದ್ದರು.</p>.<p>ದಲ್ಲಾಳಿಗಳು ಬೆಳಗ್ಗೆ ಕ್ವಿಂಟಲ್ ಉಳ್ಳಾಗಡ್ಡಿಗೆ ₨ 800 ರಿಂದ ₨ 1200 ದರ ನಿಗದಿ ಪಡಿಸಿದ್ದನ್ನು ಖಂಡಿಸಿದ ರೈತರು, ಕನಿಷ್ಠ ₨ 3000 ದರ ನಿಗದಿ ಪಡಿಸಬೇಕು ಎಂದು ಒತ್ತಾಯಿಸಿದರು. ದಲ್ಲಾಳಿಗಳು ಮತ್ತು ಅಂಗಡಿಕಾರರು ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ಬೆಲೆ ಕಡಿಮೆಯಾಗಿದೆ ಎಂದು ಹೇಳಿ, ಹೆಚ್ಚಿನ ದರ ನೀಡಲು ನಿರಾಕರಿಸಿದರು. ಇದನ್ನು ಖಂಡಿಸಿ ರೈತರು ಎಪಿಎಂಸಿಯ ಮುಖ್ಯದ್ವಾರವನ್ನು ಬಂದ್ ಮಾಡಿ, ಬೆಳಗಾವಿ–ಕಂಗ್ರಾಳಿ ರಸ್ತೆ ತಡೆ ನಡೆಸಿದರು.<br /> <br /> ‘ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ಬೆಲೆ ಕುಸಿತಗೊಂಡಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ದಲ್ಲಾಳಿಗಳು ಕಡಿಮೆ ದರ ನಿಗದಿ ಪಡಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಕೇಜಿಗೆ ₨ 35 ರಿಂದ 45ರ ದರದಲ್ಲಿ ಉಳ್ಳಾಗಡ್ಡಿ ಮಾರಾಟವಾಗುತ್ತಿದೆ. ದಲ್ಲಾಳಿಗಳು ಮತ್ತು ಅಂಗಡಿಕಾರರು ಹೆಚ್ಚಿನ ಲಾಭ ಪಡೆಯಲು ಈ ಬಗೆಯ ಕುತಂತ್ರ ಹೂಡುವ ಮೂಲಕ ಹಗಲು ದರೋಡೆಗೆ ಮುಂದಾಗಿದ್ದಾರೆ’ ಎಂದು ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು.<br /> <br /> ಸುಮಾರು ನಾಲ್ಕು ಗಂಟೆಗಳ ಕಾಲ ರಸ್ತೆ ತಡೆ ನಡೆಸಿದ ರೈತರು ಜಿಲ್ಲಾಧಿಕಾರಿ ಬರುವವರೆಗೆ ಪ್ರತಿಭಟನೆ ನಡೆಸುವು ದಾಗಿ ಪಟ್ಟುಹಿಡಿದಿದ್ದರು. ಮಧ್ಯ ಪ್ರವೇಶಿಸಿದ ಪೊಲೀಸ್ ಅಧಿಕಾರಿಗಳು ಚರ್ಚಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಮಧ್ಯಾಹ್ನ ಮತ್ತೆ ಮಾರಾಟಕ್ಕೆ ಚಾಲನೆ ಸಿಕ್ಕಿತು.<br /> <br /> <strong>ಕಲ್ಲುತೂರಾಟ:</strong> ರಸ್ತೆ ತಡೆ ನಡೆಸಿದ ಪರಿಣಾಮ ವಾಹನ ಸಂಚಾರಕ್ಕೆ ಅಸ್ತವ್ಯಸ್ತವಾಗಿತ್ತು. ಇದರಿಂದ ಕೋಪಗೊಂಡ ಕೆಲ ಸಾರ್ವಜನಿರು ರೈತರೊಂದಿಗೆ ಮಾತಿನ ಚಕಮಕಿ ಮತ್ತು ವಾದಕ್ಕೆ ಇಳಿದರು. ಆ ಸಂದರ್ಭದಲ್ಲಿ ಕೆಲವರು ಕಲ್ಲು ತೂರಾಟ ನಡೆಸಿದ ಪರಿಣಾಮ ವಾತಾವರಣ ಉದ್ರಿಕ್ತಗೊಂಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ಉಳ್ಳಾಗಡ್ಡಿ ಬೆಲೆ ಹಠಾತ್ ಕುಸಿತಗೊಂಡಿದ್ದರಿಂದ ಆಕ್ರೋಶಗೊಂಡ ರೈತರು ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಎದುರು ರಸ್ತೆ ಮೇಲೆ ಕಲ್ಲುಗಳನ್ನಿಟ್ಟು ಬುಧವಾರ ರಸ್ತೆ ತಡೆ ನಡೆಸಿದರು. ಹುಬ್ಬಳ್ಳಿ ಎಪಿಎಂಸಿಯಲ್ಲಿ ಬೆಲೆ ಕುಸಿತದಿಂದ ಪ್ರತಿಭಟನೆ ನಡೆಯುತ್ತಿರುವ ಕಾರಣ, ಬುಧವಾರ ಬೆಳಗಾವಿ ಎಪಿಎಂಸಿಗೆ ಧಾರವಾಡ, ವಿಜಾಪುರ, ಗದಗ ಸೇರಿದಂತೆ ಬೆಳಗಾವಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ರೈತರು ಉಳ್ಳಾಗಡ್ಡಿ ತಂದಿದ್ದರು.</p>.<p>ದಲ್ಲಾಳಿಗಳು ಬೆಳಗ್ಗೆ ಕ್ವಿಂಟಲ್ ಉಳ್ಳಾಗಡ್ಡಿಗೆ ₨ 800 ರಿಂದ ₨ 1200 ದರ ನಿಗದಿ ಪಡಿಸಿದ್ದನ್ನು ಖಂಡಿಸಿದ ರೈತರು, ಕನಿಷ್ಠ ₨ 3000 ದರ ನಿಗದಿ ಪಡಿಸಬೇಕು ಎಂದು ಒತ್ತಾಯಿಸಿದರು. ದಲ್ಲಾಳಿಗಳು ಮತ್ತು ಅಂಗಡಿಕಾರರು ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ಬೆಲೆ ಕಡಿಮೆಯಾಗಿದೆ ಎಂದು ಹೇಳಿ, ಹೆಚ್ಚಿನ ದರ ನೀಡಲು ನಿರಾಕರಿಸಿದರು. ಇದನ್ನು ಖಂಡಿಸಿ ರೈತರು ಎಪಿಎಂಸಿಯ ಮುಖ್ಯದ್ವಾರವನ್ನು ಬಂದ್ ಮಾಡಿ, ಬೆಳಗಾವಿ–ಕಂಗ್ರಾಳಿ ರಸ್ತೆ ತಡೆ ನಡೆಸಿದರು.<br /> <br /> ‘ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ಬೆಲೆ ಕುಸಿತಗೊಂಡಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ದಲ್ಲಾಳಿಗಳು ಕಡಿಮೆ ದರ ನಿಗದಿ ಪಡಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಕೇಜಿಗೆ ₨ 35 ರಿಂದ 45ರ ದರದಲ್ಲಿ ಉಳ್ಳಾಗಡ್ಡಿ ಮಾರಾಟವಾಗುತ್ತಿದೆ. ದಲ್ಲಾಳಿಗಳು ಮತ್ತು ಅಂಗಡಿಕಾರರು ಹೆಚ್ಚಿನ ಲಾಭ ಪಡೆಯಲು ಈ ಬಗೆಯ ಕುತಂತ್ರ ಹೂಡುವ ಮೂಲಕ ಹಗಲು ದರೋಡೆಗೆ ಮುಂದಾಗಿದ್ದಾರೆ’ ಎಂದು ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು.<br /> <br /> ಸುಮಾರು ನಾಲ್ಕು ಗಂಟೆಗಳ ಕಾಲ ರಸ್ತೆ ತಡೆ ನಡೆಸಿದ ರೈತರು ಜಿಲ್ಲಾಧಿಕಾರಿ ಬರುವವರೆಗೆ ಪ್ರತಿಭಟನೆ ನಡೆಸುವು ದಾಗಿ ಪಟ್ಟುಹಿಡಿದಿದ್ದರು. ಮಧ್ಯ ಪ್ರವೇಶಿಸಿದ ಪೊಲೀಸ್ ಅಧಿಕಾರಿಗಳು ಚರ್ಚಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಮಧ್ಯಾಹ್ನ ಮತ್ತೆ ಮಾರಾಟಕ್ಕೆ ಚಾಲನೆ ಸಿಕ್ಕಿತು.<br /> <br /> <strong>ಕಲ್ಲುತೂರಾಟ:</strong> ರಸ್ತೆ ತಡೆ ನಡೆಸಿದ ಪರಿಣಾಮ ವಾಹನ ಸಂಚಾರಕ್ಕೆ ಅಸ್ತವ್ಯಸ್ತವಾಗಿತ್ತು. ಇದರಿಂದ ಕೋಪಗೊಂಡ ಕೆಲ ಸಾರ್ವಜನಿರು ರೈತರೊಂದಿಗೆ ಮಾತಿನ ಚಕಮಕಿ ಮತ್ತು ವಾದಕ್ಕೆ ಇಳಿದರು. ಆ ಸಂದರ್ಭದಲ್ಲಿ ಕೆಲವರು ಕಲ್ಲು ತೂರಾಟ ನಡೆಸಿದ ಪರಿಣಾಮ ವಾತಾವರಣ ಉದ್ರಿಕ್ತಗೊಂಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>