<p><br /> ನವದೆಹಲಿ (ಪಿಟಿಐ): ಹಿಂಸಾಚಾರ ಪೀಡಿತ ಲಿಬಿಯಾದಿಂದ ಮತ್ತೆ 1045 ಭಾರತೀಯರು ಏರ್ ಇಂಡಿಯಾದ ಮೂರು ವಿಶೇಷ ವಿಮಾನಗಳಲ್ಲಿ ಬುಧವಾರ ನವದೆಹಲಿಗೆ ಬಂದಿಳಿದಿದ್ದಾರೆ.<br /> <br /> 259 ಭಾರತೀಯರಿದ್ದ ಮೊದಲ ವಿಮಾನ ಬುಧವಾರ ಮುಂಜಾನೆ 1.45ಕ್ಕೆ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು ಎಂದು ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.<br /> <br /> 391 ಭಾರತೀಯರಿದ್ದ ಏರ್ ಇಂಡಿಯಾದ ಎರಡನೇ ವಿಶೇಷ ವಿಮಾನ ಬೆಳಗ್ಗೆ 6 ಗಂಟೆಗೆ ಆಗಮಿಸಿದರೆ, 395 ಪ್ರಯಾಣಿಕರಿದ್ದ ಮೂರನೇ ವಿಮಾನ 6.45ಕ್ಕೆ ಆಗಮಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.<br /> <br /> ಲಿಬಿಯಾದಲ್ಲಿ ಉಳಿದಿರುವ ಇತರ ಭಾರತೀಯರನ್ನು ಕರೆ ತರುವುದಕ್ಕಾಗಿ ಬುಧವಾರ ಬೆಳಿಗ್ಗೆ ಮತ್ತೆ ಮೂರು ವಿಮಾನಗಳು ಟ್ರಿಪೊಲಿಗೆ ತೆರಳಿವೆ.<br /> <br /> ಇದುವರೆಗೆ 2,128 ಭಾರತೀಯರನ್ನು ಏರ್ ಇಂಡಿಯಾ ವಿಮಾನಗಳು ಲಿಬಿಯಾದಲ್ಲಿದ್ದ ಭಾರತೀಯರನ್ನು ಸ್ವದೇಶಕ್ಕೆ ಕರೆ ತಂದಿವೆ.<br /> <br /> ಲಿಬಿಯಾದಲ್ಲಿರುವ ಭಾರತೀಯರನ್ನು ಸ್ಥಳಾಂತರಿಸಲು ಸಹಕಾರ ನೀಡುವ ಕುರಿತಂತೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ.ಕೃಷ್ಣ ಅವರು ಮಂಗಳವಾರ ಅಲ್ಲಿನ ವಿದೇಶಾಂಗ ಸಚಿವ ಮುಸ್ಸಾ ಕುಸ್ಸಾ ಅವರೊಂದಿಗೆ ಮಾತುಕತೆ ನಡೆಸಿದ್ದರು.<br /> <br /> ಅಶಾಂತಿ ಪೀಡಿತ ಲಿಬಿಯಾದಲ್ಲಿ ಸಿಕ್ಕಿ ಹಾಕಿಕೊಂಡಿರುವ ಹಲವು ಭಾರತೀಯರು ಭೂ ಮಾರ್ಗದ ಮೂಲಕ ಈಜಿಪ್ಟ್ಗೆ ತೆರಳಿದ್ದರೆ, ಇನ್ನು ಕೆಲವರು ಸಮುದ್ರದ ಮೂಲಕ ಆ ರಾಷ್ಟ್ರವನ್ನು ತೊರೆದಿದ್ದಾರೆ.<br /> <br /> ಮರಳಿದ 19 ತಮಿಳರು: ಲಿಬಿಯಾದಲ್ಲಿ ನೆಲೆಸಿದ್ದ ತಮಿಳುನಾಡು ಮೂಲದ 19 ಜನರ ತಂಡವೊಂದು ಏರ್ ಇಂಡಿಯಾ ವಿಮಾನದ ಮೂಲಕ ಬುಧವಾರ ಚೆನ್ನೈಗೆ ಬಂದಿಳಿದಿದೆ.<br /> <br /> ರಾಜ್ಯ ಸರ್ಕಾರದ ಅಧಿಕಾರಿಗಳು ಇವರನ್ನು ಬರಮಾಡಿಕೊಂಡರು. ಈ ತಂಡವು ದೆಹಲಿಯಿಂದ ಚೆನ್ನೈಗೆ ಆಗಮಿಸಿತು.<br /> <br /> <strong>ಭಾರತೀಯರ ಸ್ಥಳಾಂತರಕ್ಕೆ ಜೆಟ್ ಏರ್ವೇಸ್</strong><br /> ನವದೆಹಲಿ (ಐಎಎನ್ಎಸ್): ಅಶಾಂತಿ ಪೀಡಿತ ಲಿಬಿಯಾದಿಂದ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ದೇಶದ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್ವೇಸ್ ವಿಮಾನವೊಂದನ್ನು ಟ್ರಿಪೊಲಿಗೆ ಕಳುಹಿಸಲಿದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.<br /> <br /> ‘ಬುಧವಾರ ಮಧ್ಯರಾತ್ರಿ ವೇಳೆಗೆ 178 ಪ್ರಯಾಣಿಕರ ಸಾಮರ್ಥ್ಯದ ವಿಮಾನವೊಂದನ್ನು ನಾವು ದೆಹಲಿಯಿಂದ ಟ್ರಿಪೊಲಿಗೆ ಕಳುಹಿಸಲಿದ್ದೇವೆ’ ಎಂದು ಜೆಟ್ ಏರ್ವೇಸ್ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.<br /> <br /> ಈಗಾಗಲೇ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಭಾರತೀಯರನ್ನು ಸ್ವದೇಶಕ್ಕೆ ಕರೆ ತರುವ ಕಾರ್ಯದಲ್ಲಿ ನಿರತವಾಗಿವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><br /> ನವದೆಹಲಿ (ಪಿಟಿಐ): ಹಿಂಸಾಚಾರ ಪೀಡಿತ ಲಿಬಿಯಾದಿಂದ ಮತ್ತೆ 1045 ಭಾರತೀಯರು ಏರ್ ಇಂಡಿಯಾದ ಮೂರು ವಿಶೇಷ ವಿಮಾನಗಳಲ್ಲಿ ಬುಧವಾರ ನವದೆಹಲಿಗೆ ಬಂದಿಳಿದಿದ್ದಾರೆ.<br /> <br /> 259 ಭಾರತೀಯರಿದ್ದ ಮೊದಲ ವಿಮಾನ ಬುಧವಾರ ಮುಂಜಾನೆ 1.45ಕ್ಕೆ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು ಎಂದು ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.<br /> <br /> 391 ಭಾರತೀಯರಿದ್ದ ಏರ್ ಇಂಡಿಯಾದ ಎರಡನೇ ವಿಶೇಷ ವಿಮಾನ ಬೆಳಗ್ಗೆ 6 ಗಂಟೆಗೆ ಆಗಮಿಸಿದರೆ, 395 ಪ್ರಯಾಣಿಕರಿದ್ದ ಮೂರನೇ ವಿಮಾನ 6.45ಕ್ಕೆ ಆಗಮಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.<br /> <br /> ಲಿಬಿಯಾದಲ್ಲಿ ಉಳಿದಿರುವ ಇತರ ಭಾರತೀಯರನ್ನು ಕರೆ ತರುವುದಕ್ಕಾಗಿ ಬುಧವಾರ ಬೆಳಿಗ್ಗೆ ಮತ್ತೆ ಮೂರು ವಿಮಾನಗಳು ಟ್ರಿಪೊಲಿಗೆ ತೆರಳಿವೆ.<br /> <br /> ಇದುವರೆಗೆ 2,128 ಭಾರತೀಯರನ್ನು ಏರ್ ಇಂಡಿಯಾ ವಿಮಾನಗಳು ಲಿಬಿಯಾದಲ್ಲಿದ್ದ ಭಾರತೀಯರನ್ನು ಸ್ವದೇಶಕ್ಕೆ ಕರೆ ತಂದಿವೆ.<br /> <br /> ಲಿಬಿಯಾದಲ್ಲಿರುವ ಭಾರತೀಯರನ್ನು ಸ್ಥಳಾಂತರಿಸಲು ಸಹಕಾರ ನೀಡುವ ಕುರಿತಂತೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ.ಕೃಷ್ಣ ಅವರು ಮಂಗಳವಾರ ಅಲ್ಲಿನ ವಿದೇಶಾಂಗ ಸಚಿವ ಮುಸ್ಸಾ ಕುಸ್ಸಾ ಅವರೊಂದಿಗೆ ಮಾತುಕತೆ ನಡೆಸಿದ್ದರು.<br /> <br /> ಅಶಾಂತಿ ಪೀಡಿತ ಲಿಬಿಯಾದಲ್ಲಿ ಸಿಕ್ಕಿ ಹಾಕಿಕೊಂಡಿರುವ ಹಲವು ಭಾರತೀಯರು ಭೂ ಮಾರ್ಗದ ಮೂಲಕ ಈಜಿಪ್ಟ್ಗೆ ತೆರಳಿದ್ದರೆ, ಇನ್ನು ಕೆಲವರು ಸಮುದ್ರದ ಮೂಲಕ ಆ ರಾಷ್ಟ್ರವನ್ನು ತೊರೆದಿದ್ದಾರೆ.<br /> <br /> ಮರಳಿದ 19 ತಮಿಳರು: ಲಿಬಿಯಾದಲ್ಲಿ ನೆಲೆಸಿದ್ದ ತಮಿಳುನಾಡು ಮೂಲದ 19 ಜನರ ತಂಡವೊಂದು ಏರ್ ಇಂಡಿಯಾ ವಿಮಾನದ ಮೂಲಕ ಬುಧವಾರ ಚೆನ್ನೈಗೆ ಬಂದಿಳಿದಿದೆ.<br /> <br /> ರಾಜ್ಯ ಸರ್ಕಾರದ ಅಧಿಕಾರಿಗಳು ಇವರನ್ನು ಬರಮಾಡಿಕೊಂಡರು. ಈ ತಂಡವು ದೆಹಲಿಯಿಂದ ಚೆನ್ನೈಗೆ ಆಗಮಿಸಿತು.<br /> <br /> <strong>ಭಾರತೀಯರ ಸ್ಥಳಾಂತರಕ್ಕೆ ಜೆಟ್ ಏರ್ವೇಸ್</strong><br /> ನವದೆಹಲಿ (ಐಎಎನ್ಎಸ್): ಅಶಾಂತಿ ಪೀಡಿತ ಲಿಬಿಯಾದಿಂದ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ದೇಶದ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್ವೇಸ್ ವಿಮಾನವೊಂದನ್ನು ಟ್ರಿಪೊಲಿಗೆ ಕಳುಹಿಸಲಿದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.<br /> <br /> ‘ಬುಧವಾರ ಮಧ್ಯರಾತ್ರಿ ವೇಳೆಗೆ 178 ಪ್ರಯಾಣಿಕರ ಸಾಮರ್ಥ್ಯದ ವಿಮಾನವೊಂದನ್ನು ನಾವು ದೆಹಲಿಯಿಂದ ಟ್ರಿಪೊಲಿಗೆ ಕಳುಹಿಸಲಿದ್ದೇವೆ’ ಎಂದು ಜೆಟ್ ಏರ್ವೇಸ್ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.<br /> <br /> ಈಗಾಗಲೇ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಭಾರತೀಯರನ್ನು ಸ್ವದೇಶಕ್ಕೆ ಕರೆ ತರುವ ಕಾರ್ಯದಲ್ಲಿ ನಿರತವಾಗಿವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>