<p><strong>ನವದೆಹಲಿ: </strong>ತನ್ನ ಭ್ರಷ್ಟಾಚಾರ ನಿಗ್ರಹ ವಿಭಾಗವನ್ನು ಪ್ರತ್ಯೇಕಿಸಿ ಲೋಕಪಾಲದ ಅಧೀನಕ್ಕೆ ಒಪ್ಪಿಸುವುದಕ್ಕೆ ಕೇಂದ್ರ ತನಿಖಾ ದಳ (ಸಿಬಿಐ) ತೀವ್ರ ವಿರೋಧ ವ್ಯಕ್ತಪಡಿಸಿದೆ.<br /> <br /> ಲೋಕಪಾಲ, ಜನ ಲೋಕಪಾಲ ಸೇರಿದಂತೆ ಈ ಸಂಬಂಧದ ಎಲ್ಲ ಕರಡು ಮಸೂದೆ ಕುರಿತು ಪರಿಶೀಲಿಸುತ್ತಿರುವ ಅಭಿಷೇಕ್ ಮನುಸಿಂಘಿ ್ವ ಅಧ್ಯಕ್ಷತೆಯ ಸಂಸತ್ತಿನ ಸ್ಥಾಯಿ ಸಮಿತಿ ಮುಂದೆ ಸಿಬಿಐ ನಿರ್ದೇಶಕ ಎ. ಪಿ. ಸಿಂಗ್ ಗುರುವಾರ ಹಾಜರಾಗಿ ತಮ್ಮ ನಿಲುವು ಸ್ಪಷ್ಟಪಡಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.<br /> <br /> `ಲೋಕಪಾಲದ ಅಧೀನದಲ್ಲಿ ಸಿಬಿಐ ಇಡಿಯಾಗಿ ಕೆಲಸ ಮಾಡಲು ಸಿದ್ಧವಿದೆ. ಆದರೆ, ತನಿಖಾ ದಳದ ದಿನನಿತ್ಯದ ಕೆಲಸದಲ್ಲಿ ಲೋಕಪಾಲ ಹಸ್ತಕ್ಷೇಪ ಮಾಡಬಾರದು. ಅದು ಮೇಲ್ವಿಚಾರಕ ಸಂಸ್ಥೆಯಾಗಿರಬೇಕು~ ಎಂಬ ಅಭಿಪ್ರಾಯವನ್ನು ಸಿಬಿಐ ಹೊಂದಿದೆ. ~ಕೇಂದ್ರ ತನಿಖಾ ದಳದ ದಿನನಿತ್ಯದ ವ್ಯವಹಾರದಲ್ಲಿ ಲೋಕಪಾಲ ಹಸ್ತಕ್ಷೇಪ ಮಾಡುವುದರಿಂದ ಕರ್ತವ್ಯ ನಿರ್ವಹಣೆಗೆ ಅಡ್ಡಿ ಆಗಲಿದೆ. ಪ್ರತಿ ದಿನ ಪ್ರತಿ ಪ್ರಕರಣದ ತನಿಖೆ ಪ್ರಗತಿ ಕೊಡುವುದು ಕಷ್ಟವಾಗಲಿದೆ~ ಎಂಬುದು ಸಂಸ್ಥೆಯ ನಿಲುವು.<br /> <br /> ಈ ತನಿಖಾ ದಳದ ನಿರ್ದೇಶಕರು `ಲೋಕಪಾಲ ಸಂಸ್ಥೆ~ಯ ಪದನಿಮಿತ್ತ ಸದಸ್ಯರಾಗಿರಬೇಕು ಎಂಬುದು ಸಂಸ್ಥೆ ಬೇಡಿಕೆ. ಸಿಬಿಐ ನಿರ್ದೇಶಕರು ಸ್ಥಾಯಿ ಸಮಿತಿ ಮುಂದೆ ತಮ್ಮ ನಿಲುವನ್ನು ವಿವರವಾಗಿ ಮಂಡಿಸಲಿದ್ದಾರೆ. ಸಿಬಿಐನಿಂದ ಭ್ರಷ್ಟಾಚಾರ ವಿಭಾಗ ಪ್ರತ್ಯೇಕಿಸುವ ಸಲಹೆಯನ್ನು ಪ್ರಬಲವಾಗಿ ವಿರೋಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.<br /> <br /> ಲೋಕಪಾಲ ಸಂಸ್ಥೆಗೆ ಪದನಿಮಿತ್ತ ಸದಸ್ಯರನ್ನು ನೇಮಕ ಮಾಡುವ ವಿಚಾರಕ್ಕೆ ಅಣ್ಣಾ ತಂಡದ ಸಹಮತವಿಲ್ಲ. ಲೋಕಪಾಲ ಪೂರ್ಣಾವಧಿ ಸಂಸ್ಥೆ ಆಗಿರಬೇಕು. ಯಾವುದೇ ಪದನಿಮಿತ್ತ ಸದಸ್ಯರ ನೇಮಕಾತಿಗೆ ಅವಕಾಶ ಇರಬಾರದು ಎಂಬ ಖಚಿತವಾದ ನಿಲುವನ್ನು ಈ ತಂಡ ಹೊಂದಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ನಿರ್ದೇಶಕರನ್ನು ಪದನಿಮಿತ್ತವಾಗಿ ನೇಮಿಸುವ ಸಲಹೆಗೆ ಬೆಲೆ ಸಿಗುವ ಸಾಧ್ಯತೆ ಕಡಿಮೆ.<br /> <br /> ಸಿಬಿಐ ಭ್ರಷ್ಟಾಚಾರ ನಿಗ್ರಹ ವಿಭಾಗವನ್ನು ಲೋಕಪಾಲದ ಅಧೀನಕ್ಕೆ ಒಪ್ಪಿಸಬೇಕೆಂಬ ಬೇಡಿಕೆ ಒಳಗೊಂಡು ಜನ ಲೋಕಪಾಲ ಮಸೂದೆಯ ಆರು ಅಂಶಗಳಿಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಅಣ್ಣಾ ನಡುವೆ ಸಂಘರ್ಷ ಏರ್ಪಟ್ಟಿತ್ತು.</p>.<p>ಆಗಸ್ಟ್ 16ರಿಂದ 12 ದಿನ ಉಪವಾಸ ಕುಳಿತ ಹಿರಿಯ ಗಾಂಧಿವಾದಿಯ ಶಾಂತಿಯುತ ಹೋರಾಟಕ್ಕೆ ಕೊನೆಗೂ ಯಶಸ್ಸು ದೊರೆಯಿತು. ಜನ ಲೋಕಪಾಲ ಮಸೂದೆಯನ್ನು ಈಚೆಗೆ ಮುಗಿದ ಸಂಸತ್ತಿನ ಮುಂಗಾರು ಅಧಿವೇಶನದ ಕೊನೆಯ ಭಾಗದಲ್ಲಿ ಮಂಡಿಸಿತು. </p>.<p>ಅಭಿಷೇಕ್ ಮನುಸಿಂಘಿ ್ವ ನೇತೃತ್ವದ ಸಂಸತ್ತಿನ ಸ್ಥಾಯಿ ಸಮಿತಿ ಸರ್ಕಾರದ ಲೋಕಪಾಲ ಮಸೂದೆ, ಅಣ್ಣಾ ಹಜಾರೆ ಅವರ ಜನ ಲೋಕಪಾಲ ಮಸೂದೆ, ಅರುಣಾ ರಾಯ್, ಜೈಪ್ರಕಾಶ್ ನಾರಾಯಣ್ ಅವರ ಮಸೂದೆಗಳು ಸೇರಿದಂತೆ ಈ ಸಂಬಂಧದ ಎಲ್ಲ ಕರಡುಗಳನ್ನು ಪರಿಶೀಲಿಸುತ್ತಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಅಂಗೀಕಾರ ದೊರೆಯುವ ಸಾಧ್ಯತೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ತನ್ನ ಭ್ರಷ್ಟಾಚಾರ ನಿಗ್ರಹ ವಿಭಾಗವನ್ನು ಪ್ರತ್ಯೇಕಿಸಿ ಲೋಕಪಾಲದ ಅಧೀನಕ್ಕೆ ಒಪ್ಪಿಸುವುದಕ್ಕೆ ಕೇಂದ್ರ ತನಿಖಾ ದಳ (ಸಿಬಿಐ) ತೀವ್ರ ವಿರೋಧ ವ್ಯಕ್ತಪಡಿಸಿದೆ.<br /> <br /> ಲೋಕಪಾಲ, ಜನ ಲೋಕಪಾಲ ಸೇರಿದಂತೆ ಈ ಸಂಬಂಧದ ಎಲ್ಲ ಕರಡು ಮಸೂದೆ ಕುರಿತು ಪರಿಶೀಲಿಸುತ್ತಿರುವ ಅಭಿಷೇಕ್ ಮನುಸಿಂಘಿ ್ವ ಅಧ್ಯಕ್ಷತೆಯ ಸಂಸತ್ತಿನ ಸ್ಥಾಯಿ ಸಮಿತಿ ಮುಂದೆ ಸಿಬಿಐ ನಿರ್ದೇಶಕ ಎ. ಪಿ. ಸಿಂಗ್ ಗುರುವಾರ ಹಾಜರಾಗಿ ತಮ್ಮ ನಿಲುವು ಸ್ಪಷ್ಟಪಡಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.<br /> <br /> `ಲೋಕಪಾಲದ ಅಧೀನದಲ್ಲಿ ಸಿಬಿಐ ಇಡಿಯಾಗಿ ಕೆಲಸ ಮಾಡಲು ಸಿದ್ಧವಿದೆ. ಆದರೆ, ತನಿಖಾ ದಳದ ದಿನನಿತ್ಯದ ಕೆಲಸದಲ್ಲಿ ಲೋಕಪಾಲ ಹಸ್ತಕ್ಷೇಪ ಮಾಡಬಾರದು. ಅದು ಮೇಲ್ವಿಚಾರಕ ಸಂಸ್ಥೆಯಾಗಿರಬೇಕು~ ಎಂಬ ಅಭಿಪ್ರಾಯವನ್ನು ಸಿಬಿಐ ಹೊಂದಿದೆ. ~ಕೇಂದ್ರ ತನಿಖಾ ದಳದ ದಿನನಿತ್ಯದ ವ್ಯವಹಾರದಲ್ಲಿ ಲೋಕಪಾಲ ಹಸ್ತಕ್ಷೇಪ ಮಾಡುವುದರಿಂದ ಕರ್ತವ್ಯ ನಿರ್ವಹಣೆಗೆ ಅಡ್ಡಿ ಆಗಲಿದೆ. ಪ್ರತಿ ದಿನ ಪ್ರತಿ ಪ್ರಕರಣದ ತನಿಖೆ ಪ್ರಗತಿ ಕೊಡುವುದು ಕಷ್ಟವಾಗಲಿದೆ~ ಎಂಬುದು ಸಂಸ್ಥೆಯ ನಿಲುವು.<br /> <br /> ಈ ತನಿಖಾ ದಳದ ನಿರ್ದೇಶಕರು `ಲೋಕಪಾಲ ಸಂಸ್ಥೆ~ಯ ಪದನಿಮಿತ್ತ ಸದಸ್ಯರಾಗಿರಬೇಕು ಎಂಬುದು ಸಂಸ್ಥೆ ಬೇಡಿಕೆ. ಸಿಬಿಐ ನಿರ್ದೇಶಕರು ಸ್ಥಾಯಿ ಸಮಿತಿ ಮುಂದೆ ತಮ್ಮ ನಿಲುವನ್ನು ವಿವರವಾಗಿ ಮಂಡಿಸಲಿದ್ದಾರೆ. ಸಿಬಿಐನಿಂದ ಭ್ರಷ್ಟಾಚಾರ ವಿಭಾಗ ಪ್ರತ್ಯೇಕಿಸುವ ಸಲಹೆಯನ್ನು ಪ್ರಬಲವಾಗಿ ವಿರೋಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.<br /> <br /> ಲೋಕಪಾಲ ಸಂಸ್ಥೆಗೆ ಪದನಿಮಿತ್ತ ಸದಸ್ಯರನ್ನು ನೇಮಕ ಮಾಡುವ ವಿಚಾರಕ್ಕೆ ಅಣ್ಣಾ ತಂಡದ ಸಹಮತವಿಲ್ಲ. ಲೋಕಪಾಲ ಪೂರ್ಣಾವಧಿ ಸಂಸ್ಥೆ ಆಗಿರಬೇಕು. ಯಾವುದೇ ಪದನಿಮಿತ್ತ ಸದಸ್ಯರ ನೇಮಕಾತಿಗೆ ಅವಕಾಶ ಇರಬಾರದು ಎಂಬ ಖಚಿತವಾದ ನಿಲುವನ್ನು ಈ ತಂಡ ಹೊಂದಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ನಿರ್ದೇಶಕರನ್ನು ಪದನಿಮಿತ್ತವಾಗಿ ನೇಮಿಸುವ ಸಲಹೆಗೆ ಬೆಲೆ ಸಿಗುವ ಸಾಧ್ಯತೆ ಕಡಿಮೆ.<br /> <br /> ಸಿಬಿಐ ಭ್ರಷ್ಟಾಚಾರ ನಿಗ್ರಹ ವಿಭಾಗವನ್ನು ಲೋಕಪಾಲದ ಅಧೀನಕ್ಕೆ ಒಪ್ಪಿಸಬೇಕೆಂಬ ಬೇಡಿಕೆ ಒಳಗೊಂಡು ಜನ ಲೋಕಪಾಲ ಮಸೂದೆಯ ಆರು ಅಂಶಗಳಿಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಅಣ್ಣಾ ನಡುವೆ ಸಂಘರ್ಷ ಏರ್ಪಟ್ಟಿತ್ತು.</p>.<p>ಆಗಸ್ಟ್ 16ರಿಂದ 12 ದಿನ ಉಪವಾಸ ಕುಳಿತ ಹಿರಿಯ ಗಾಂಧಿವಾದಿಯ ಶಾಂತಿಯುತ ಹೋರಾಟಕ್ಕೆ ಕೊನೆಗೂ ಯಶಸ್ಸು ದೊರೆಯಿತು. ಜನ ಲೋಕಪಾಲ ಮಸೂದೆಯನ್ನು ಈಚೆಗೆ ಮುಗಿದ ಸಂಸತ್ತಿನ ಮುಂಗಾರು ಅಧಿವೇಶನದ ಕೊನೆಯ ಭಾಗದಲ್ಲಿ ಮಂಡಿಸಿತು. </p>.<p>ಅಭಿಷೇಕ್ ಮನುಸಿಂಘಿ ್ವ ನೇತೃತ್ವದ ಸಂಸತ್ತಿನ ಸ್ಥಾಯಿ ಸಮಿತಿ ಸರ್ಕಾರದ ಲೋಕಪಾಲ ಮಸೂದೆ, ಅಣ್ಣಾ ಹಜಾರೆ ಅವರ ಜನ ಲೋಕಪಾಲ ಮಸೂದೆ, ಅರುಣಾ ರಾಯ್, ಜೈಪ್ರಕಾಶ್ ನಾರಾಯಣ್ ಅವರ ಮಸೂದೆಗಳು ಸೇರಿದಂತೆ ಈ ಸಂಬಂಧದ ಎಲ್ಲ ಕರಡುಗಳನ್ನು ಪರಿಶೀಲಿಸುತ್ತಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಅಂಗೀಕಾರ ದೊರೆಯುವ ಸಾಧ್ಯತೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>