<p><strong>ಬೆಂಗಳೂರು: </strong>ಬೆಂಗಳೂರು ದಕ್ಷಿಣ ವಲಯ–2 ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವತಿಯಿಂದ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್ಟಿಇ) 25 ವಲಸೆ ಮಕ್ಕಳ ಶಾಲಾ ದಾಖಲಾತಿ ಕಾರ್ಯಕ್ರಮ ಶನಿವಾರ ನಡೆಯಿತು. <br /> <br /> ಈ ಮಕ್ಕಳನ್ನು ಆರ್ಪಿಸಿ ಲೇಔಟ್ನ ದಿ ನ್ಯೂ ಕೇಂಬ್ರೀಡ್ಜ್ ಶಾಲೆ, ಹೋಲಿ ಏಂಜೆಲ್ಸ್ ಶಾಲೆ, ಭಾರತಿ ವಿದ್ಯಾಲಯ, ವಿಜಯನಗರದ ಆರ್.ಎನ್.ಎಸ್, ಆದಿಚುಂಚನಗಿರಿ ಆಂಗ್ಲಶಾಲೆಗಳಿಗೆ ಎಲ್ಕೆಜಿ ಹಾಗೂ ಒಂದನೇ ತರಗತಿಗೆ ಸೇರ್ಪಡೆ ಮಾಡಲಾಯಿತು.<br /> <br /> ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನಮ್ಮ ಡಿ. ಮಾತನಾಡಿ, ‘ವಲಸೆ ಬಂದ, ಅವಕಾಶವಂಚಿತ, ದುರ್ಬಲ ವರ್ಗದ, ಅನಾಥ ಹಾಗೂ ಬೀದಿ ಮಕ್ಕಳಿಗೆ ಶಿಕ್ಷಣ ನೀಡುವುದು ಆರ್ಟಿಇ ಆಶಯ.<br /> <br /> ಕಳೆದ ವರ್ಷ ಸಿಗ್ನಲ್ನಲ್ಲಿ ಭಿಕ್ಷೆ ಬೇಡುತ್ತಿದ್ದ, ರಾತ್ರಿ 11 ಗಂಟೆ ವರೆಗೂ ಕಲ್ಯಾಣ ಮಂಟಪದ ಬಳಿ ಹಾಗೂ ಊರೂರು ತಿರುಗಿ ಜಾತ್ರೆಗಳಲ್ಲಿ ಬಲೂನು ಮಾರುತ್ತಿದ್ದ ಮಕ್ಕಳು ಇಂದು ಆರ್ಟಿಇ ಅಡಿಯಲ್ಲಿ ಪ್ರತಿಷ್ಠಿತ ಶಾಲೆಗಳಿಗೆ ಸೇರ್ಪಡೆಯಾಗುತ್ತಿದ್ದಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಬೆಂಗಳೂರು ದಕ್ಷಿಣ ವಲಯ–2 ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವತಿಯಿಂದ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್ಟಿಇ) 25 ವಲಸೆ ಮಕ್ಕಳ ಶಾಲಾ ದಾಖಲಾತಿ ಕಾರ್ಯಕ್ರಮ ಶನಿವಾರ ನಡೆಯಿತು. <br /> <br /> ಈ ಮಕ್ಕಳನ್ನು ಆರ್ಪಿಸಿ ಲೇಔಟ್ನ ದಿ ನ್ಯೂ ಕೇಂಬ್ರೀಡ್ಜ್ ಶಾಲೆ, ಹೋಲಿ ಏಂಜೆಲ್ಸ್ ಶಾಲೆ, ಭಾರತಿ ವಿದ್ಯಾಲಯ, ವಿಜಯನಗರದ ಆರ್.ಎನ್.ಎಸ್, ಆದಿಚುಂಚನಗಿರಿ ಆಂಗ್ಲಶಾಲೆಗಳಿಗೆ ಎಲ್ಕೆಜಿ ಹಾಗೂ ಒಂದನೇ ತರಗತಿಗೆ ಸೇರ್ಪಡೆ ಮಾಡಲಾಯಿತು.<br /> <br /> ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನಮ್ಮ ಡಿ. ಮಾತನಾಡಿ, ‘ವಲಸೆ ಬಂದ, ಅವಕಾಶವಂಚಿತ, ದುರ್ಬಲ ವರ್ಗದ, ಅನಾಥ ಹಾಗೂ ಬೀದಿ ಮಕ್ಕಳಿಗೆ ಶಿಕ್ಷಣ ನೀಡುವುದು ಆರ್ಟಿಇ ಆಶಯ.<br /> <br /> ಕಳೆದ ವರ್ಷ ಸಿಗ್ನಲ್ನಲ್ಲಿ ಭಿಕ್ಷೆ ಬೇಡುತ್ತಿದ್ದ, ರಾತ್ರಿ 11 ಗಂಟೆ ವರೆಗೂ ಕಲ್ಯಾಣ ಮಂಟಪದ ಬಳಿ ಹಾಗೂ ಊರೂರು ತಿರುಗಿ ಜಾತ್ರೆಗಳಲ್ಲಿ ಬಲೂನು ಮಾರುತ್ತಿದ್ದ ಮಕ್ಕಳು ಇಂದು ಆರ್ಟಿಇ ಅಡಿಯಲ್ಲಿ ಪ್ರತಿಷ್ಠಿತ ಶಾಲೆಗಳಿಗೆ ಸೇರ್ಪಡೆಯಾಗುತ್ತಿದ್ದಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>