<p><strong>ಬೆಂಗಳೂರು: </strong>ನೃಪತುಂಗ ರಸ್ತೆಯಲ್ಲಿರುವ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಬಂದಿದ್ದ ವಕೀಲರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಕಬ್ಬನ್ ಉದ್ಯಾನದೊಳಗೆ ತಮ್ಮ ವಾಹನಗಳನ್ನು ನಿಲ್ಲಿಸಿದ್ದರಿಂದ, ಉದ್ಯಾನದ ಹಡ್ಸನ್ ವೃತ್ತದ ದ್ವಾರವನ್ನು ಮಂಗಳವಾರ ಮಧ್ಯಾಹ್ನ 12ರಿಂದ ಸಂಜೆಯವರೆಗೆ ಮುಚ್ಚಲಾಗಿತ್ತು.<br /> <br /> ಕೋರ್ಟ್ನ ವಾಹನ ನಿಲುಗಡೆ ಸ್ಥಳದಲ್ಲಿ ಜ. 16ರಿಂದ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿರುವುದರಿಂದ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.<br /> <br /> ಕಾಮಗಾರಿ ಕುರಿತು ಮಾಹಿತಿ ಇಲ್ಲದ ಕೆಲ ವಕೀಲರು ಮತ್ತು ಸಾರ್ವಜನಿಕರು ಜ. 18ರಂದು (ಸೋಮವಾರ) ರಸ್ತೆ ಬದಿಯಲ್ಲೇ ತಮ್ಮ ವಾಹನಗಳನ್ನು ನಿಲ್ಲಿಸಿದ್ದರು. ಹಾಗಾಗಿ ಸುತ್ತಮುತ್ತಲಿನ ರಸ್ತೆಗಳಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು.<br /> <br /> 9 ಮಹಡಿಯ ಕಟ್ಟಡ: ಕೋರ್ಟ್ ಆವರಣದಲ್ಲಿ 9 ಮಹಡಿಯ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಿರುವ ಲೋಕೋಪಯೋಗಿ ಇಲಾಖೆ, ಸದ್ಯ 5 ಮಹಡಿಗಳ ನಿರ್ಮಾಣಕ್ಕೆ ಮುಂದಾಗಿದೆ. ನಿರ್ಮಾಣ ಕಾಮಗಾರಿ ಅವಧಿ ಒಂದೂವರೆ ವರ್ಷವಾಗಿದೆ.<br /> <br /> ವಾಹನ ದಟ್ಟಣೆಯ ಈ ಸ್ಥಳದಲ್ಲಿ ರಾಜಾರಾಂ ಮೋಹನ್ ರಾಯ್ ರಸ್ತೆ, ಕೆಂಪೇಗೌಡ ರಸ್ತೆ ಸೇರಿದಂತೆ 9 ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಹಡ್ಸನ್ ವೃತ್ತವಿದೆ. ಈ ವೃತ್ತಕ್ಕೆ ಹೊಂದಿಕೊಂಡಂತೆ ಕೋರ್ಟ್ ಕೂಡ ಇದೆ.<br /> <br /> ವಕೀಲರು, ಪೊಲೀಸರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ನಿತ್ಯ ಸಾವಿರಾರು ಮಂದಿ ಬಂದು ಹೋಗುವ ಈ ಸ್ಥಳದಲ್ಲಿ ಕಾಮಗಾರಿ ಆರಂಭವಾಗಿದ್ದು, ವಾಹನಗಳ ನಿಲುಗಡೆ ಪರ್ಯಾಯ ಸ್ಥಳದ ಜತೆಗೆ, ಸಂಚಾರ ದಟ್ಟಣೆಯೂ ಸಮಸ್ಯೆಯಾಗಿ ಪರಿಣಮಿಸಿದೆ.<br /> <br /> <strong>ಅನುಮತಿ ಕೊಟ್ಟಿದ್ದರು: </strong>‘ಜ. 16ರಿಂದ ಕಟ್ಟಡದ ಕಾಮಗಾರಿ ಆರಂಭವಾಗಿದೆ. ಕಟ್ಟಡದ ತಳ ಮಹಡಿ ಸೇರಿದಂತೆ 1 ಮತ್ತು 2ನೇ ಮಹಡಿಗಳನ್ನು ವಾಹನಗಳ ನಿಲುಗಡೆಗೆ ಮೀಸಲಿಡಲಾಗಿದೆ’ ಎಂದು ಬೆಂಗಳೂರು ವಕೀಲರ ಸಂಘದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಘಟಕದ ಜಂಟಿ ಕಾರ್ಯದರ್ಶಿ ಶಶಿಕಿರಣ್ ಅವರು ಹೇಳಿದರು.<br /> <br /> ‘ಏಳೆಂಟು ತಿಂಗಳಲ್ಲಿ 3 ಮಹಡಿಗಳನ್ನು ನಿರ್ಮಿಸಿ ಕೊಡುವುದಾಗಿ ಕಟ್ಟಡದ ಗುತ್ತಿಗೆದಾರರು ಭರವಸೆ ನೀಡಿದ್ದಾರೆ. ಬಳಿಕ ಅಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆಯಾಗಲಿಿದೆ’ ಎಂದು ಅವರು ತಿಳಿಸಿದರು.<br /> <br /> ‘ಕಾಮಗಾರಿ ಮುಗಿಯುವವರೆಗೆ ಕಬ್ಬನ್ ಉದ್ಯಾನದಲ್ಲಿ ವಕೀಲರು ಮತ್ತು ಸಾರ್ವಜನಿಕರ ವಾಹನಗಳ ನಿಲುಗಡೆಗೆ ಅವಕಾಶ ನೀಡುವಂತೆ ಕೋರಿ ತೋಟಗಾರಿಕೆ ಇಲಾಖೆಯ (ಕಬ್ಬನ್ ಉದ್ಯಾನ) ಉಪ ನಿರ್ದೇಶಕರಿಗೆ 3 ತಿಂಗಳ ಹಿಂದೆ ಪತ್ರ ಬರೆದಿದ್ದೇವೆ. ಅವರ ಅನುಮತಿ ಮೇರೆಗೆ ವಾಹನಗಳನ್ನು ನಿಲ್ಲಿಸಲಾಗಿದೆ’ ಎಂದು ಸಂಘದ ಮಾಜಿ ಉಪಾಧ್ಯಕ್ಷ ಎಂ.ಟಿ ಹರೀಶ ಅವರು ಮಾಹಿತಿ ನೀಡಿದರು.<br /> <br /> <strong>ಸವಾರರ ಪರದಾಟ: </strong>ಯಾವುದೇ ಮುನ್ಸೂಚನೆ ಇಲ್ಲದೆ ಕಬ್ಬನ್ ಉದ್ಯಾನದ ಹಡ್ಸನ್ ವೃತ್ತದ ದ್ವಾರವನ್ನು ಸೋಮವಾರ ಮತ್ತು ಮಂಗಳವಾರ ಮುಚ್ಚಿದ್ದರಿಂದ, ಆ ಮಾರ್ಗವಾಗಿ ಸಂಚರಿಸುವ ವಾಹನಗಳ ಸವಾರರು ಪರದಾಡಿದರು.<br /> <br /> ಇದೇ ದ್ವಾರದ ಮೂಲಕ ಉದ್ಯಾನದ ಕೇಂದ್ರ ಗ್ರಂಥಾಲಯಕ್ಕೆ ಬರುವವರ ಜತೆಗೆ ಕೆ.ಆರ್. ವೃತ್ತ, ವಿಧಾನಸೌಧ ಹಾಗೂ ಸಿದ್ದಲಿಂಗಯ್ಯ ವೃತ್ತದ ಮಾರ್ಗವಾಗಿ ಹೋಗುವವರು ಅರ್ಧ ಕಿಲೋಮೀಟರ್ ಮುಂದಕ್ಕೆ ಸಾಗಿ ಸಿದ್ದಲಿಂಗಯ್ಯ ವೃತ್ತದ ಮೂಲಕ ಸಂಚರಿಸಬೇಕಾಯಿತು.<br /> <br /> <strong>ಸರಾಗ ಸಂಚಾರ:</strong> ಕೋರ್ಟ್ಗೆ ಬಂದವರೆಲ್ಲ ಮಂಗಳವಾರ ತಮ್ಮ ವಾಹನಗಳನ್ನು ಕಬ್ಬನ್ ಉದ್ಯಾನದಲ್ಲಿ ನಿಲ್ಲಿಸಿದ್ದರಿಂದ ಯಾವುದೇ ಸಂಚಾರ ಸಮಸ್ಯೆ ಉಂಟಾಗಿಲ್ಲ.<br /> <br /> ಸೋಮವಾರ ಕೆಲ ವಕೀಲರು ಮತ್ತು ಸಾರ್ವಜನಿಕರು ತಮ್ಮ ದ್ವಿಚಕ್ರ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸಿದ್ದರು. ಇದು ಸಂಚಾರ ದಟ್ಟಣೆಗೆ ಕಾರಣವಾಗಿತ್ತು. ಬಳಿಕ ಅವರಿಗೆ ಪರಿಸ್ಥಿತಿಯನ್ನು ಮನವರಿಕೆ ಮಾಡಿ, ವಾಹನಗಳನ್ನು ತೆಗೆಸಲಾಗಿತ್ತು ಎಂದು ಹಲಸೂರು ಗೇಟ್ ಸಂಚಾರ ಠಾಣೆ ಪೊಲೀಸರು ತಿಳಿಸಿದರು.<br /> <br /> ತಡೆಗೋಡೆ ಒಡೆದರು: ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಕ್ಕೂ ಹಿಂದಿನ ದಿನ, ಕೋರ್ಟ್ ಕಟ್ಟಡಕ್ಕೆ ಹೊಂದಿಕೊಂಡಂತಿರುವ ತಡೆಗೋಡೆಯ ಸ್ವಲ್ಪ ಭಾಗವನ್ನು ಓಡಾಟಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಕಾರ್ಮಿಕರು ಒಡೆದು ಹಾಕಿದ್ದಾರೆ.<br /> <br /> ‘ಅನುಮತಿ ಇಲ್ಲದೆ ಜ. 15ರಂದು ಉದ್ಯಾನದ ತಡೆಗೋಡೆ ಒಡೆದಿದ್ದಾರೆ. ಈ ಸಂಬಂಧ ಕಟ್ಟಡ ನಿರ್ಮಾಣದ ಹೊಣೆ ಹೊತ್ತಿರುವ ಎಂಜಿನಿಯರ್ಗೆ ಪತ್ರ ಬರೆದು, ಕೂಡಲೇ ತಡೆಗೋಡೆಯನ್ನು ಪುನರ್ನಿರ್ಮಿಸುವಂತೆ ಸೂಚಿಸಲಾಗಿದೆ. ಇದಕ್ಕೆ ಕ್ಷಮೆ ಯಾಚಿಸಿರುವ ಅವರು, ಒಂದೆರಡು ದಿನದಲ್ಲಿ ನಿರ್ಮಿಸಿ ಕೊಡುವುದಾಗಿ ಹೇಳಿದ್ದಾರೆ’ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮುರಗೋಡ ಅವರು ಪ್ರತಿಕ್ರಿಯಿಸಿದರು.<br /> <br /> <strong>ಬೇರೆ ಸ್ಥಳಗಳೂ ಇವೆ </strong><br /> ‘ಉದ್ಯಾನ ಸಂರಕ್ಷಣಾಕಾಯ್ದೆಯ ಪ್ರಕಾರ ಯಾರೂ ಉದ್ಯಾನವನ್ನು ಯಾವ ರೀತಿಯಲ್ಲೂ ಅತಿಕ್ರಮಿಸುವಂತಿಲ್ಲ. ಅದು ವಕೀಲರು ಸೇರಿದಂತೆ ಎಲ್ಲರಿಗೂ ಅನ್ವಯಿಸುತ್ತದೆ’ಎಂದು ಹೈಕೋರ್ಟ್ ವಕೀಲರೂ ಹಾಗೂ ಕಬ್ಬನ್ ಉದ್ಯಾನ ನಡಿಗೆದಾರರ ಸಂಘದ ಅಧ್ಯಕ್ಷರಾದ ಎಸ್. ಉಮೇಶ್ ತಿಳಿಸಿದರು.</p>.<p>‘ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವವರೆಗೆ ಕಬ್ಬನ್ ಉದ್ಯಾನದ ಬದಲಿಗೆ ಕೋರ್ಟ್ ಸಮೀಪದಲ್ಲಿರುವ ವೈಎಂಸಿಎಗೆ ಸೇರಿದ 16ರಿಂದ 17 ಎಕರೆಯಷ್ಟು ಜಾಗ ಹಾಗೂ ಬನಪ್ಪ ಉದ್ಯಾನವನ್ನು ವಾಹನಗಳ ನಿಲುಗಡೆಗೆ ಬಳಸಿಕೊಳ್ಳಬಹುದು. ಈ ಕುರಿತು ವಕೀಲ ಮಿತ್ರರೊಂದಿಗೆ ಚರ್ಚಿಸಲಾಗುವುದು’ ಎಂದು ಅವರು ಹೇಳಿದರು.<br /> <br /> <strong>ನಿಗದಿತ ಸ್ಥಳಗಳಲ್ಲಷ್ಟೆ ಅನುಮತಿ</strong><br /> ‘ವಾಹನಗಳ ನಿಲುಗಡೆಗೆ ಅನುಮತಿ ಕೋರಿ 3 ತಿಂಗಳಹಿಂದೆ ವಕೀಲರ ಸಂಘದವರು ಪತ್ರ ಬರೆದಿದ್ದರು. ಉದ್ಯಾನದಲ್ಲಿರುವ ವಾಹನಗಳ ನಿಲುಗಡೆಗಾಗಿ 5 ಸ್ಥಳಗಳನ್ನು ಗುರುತಿಸಲಾಗಿದೆ.</p>.<p>ಅಲ್ಲೇ ನಿಲುಗಡೆಗೆ ಅನುಮತಿ ನೀಡಿದ್ದೆವು’ ಎಂದು ಮಹಾಂತೇಶ ಮುರಗೋಡ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.<br /> ‘ಆದರೆ ನಿಗದಿತ ಸ್ಥಳದಲ್ಲಿ ನಿಲ್ಲಿಸುವ ಬದಲು, ಉದ್ಯಾನದ ಹಡ್ಸನ್ ವೃತ್ತ ದ್ವಾರದ ಬಳಿ ಎಲ್ಲೆಂದರಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿದ್ದರು. ಆಗಅನಿವಾರ್ಯವಾಗಿ ದ್ವಾರವನ್ನು ಮುಚ್ಚಿ ವಾಹನಗಳನ್ನು ನಿಯಂತ್ರಿಸಬೇಕಾಯಿತು. ಎರಡೂ ದಿನವೂ ಇದೇ ಸ್ಥಿತಿ ಮುಂದುವರೆದಿದೆ’ ಎಂದು ಅವರು ಹೇಳಿದರು.<br /> <br /> ‘ನಿಗದಿತ ಸ್ಥಳಗಳಲ್ಲಿ ನಿಲ್ಲಿಸಿಕೊಂಡರೆ ನಮ್ಮದೇನೂ ಅಭ್ಯಂತರವಿಲ್ಲ. ನಿತ್ಯ ಸಾವಿರಾರು ಪ್ರವಾಸಿಗಳು ಉದ್ಯಾನಕ್ಕೆ ಬರುತ್ತಾರೆ. ಇಲ್ಲಿನ ಅಂದಕ್ಕೆ ಧಕ್ಕೆಯಾಗುವಂತೆ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿದರೆಹೇಗೆ?’ ಎಂದು ಅವರು ಪ್ರಶ್ನಿಸಿದರು.<br /> <br /> * ಇದು ಸರ್ಕಾರಿ ಕಟ್ಟಡ ನಿರ್ಮಾಣ ಕಾಮಗಾರಿ. ವಾಹನಗಳ ನಿಲುಗಡೆಗೆ ಸರ್ಕಾರವೇ ಪರ್ಯಾಯ ವ್ಯವಸ್ಥೆ ಮಾಡಿಕೊಡಲಿ. ಅದಕ್ಕಾಗಿ ಸಂಬಂಧಪಟ್ಟ ವರಿಗೆ ಪತ್ರ ಬರೆಯಲಾಗುವುದು<br /> -<strong>ಎಚ್.ಸಿ. ಶಿವರಾಮ್,</strong><br /> ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ</p>.<p>* ಉದ್ಯಾನದ ಸಂರಕ್ಷಣೆಗೆ ಮೊದಲ ಆದ್ಯತೆ. ನಿಗದಿತ ಸ್ಥಳಗಳನ್ನು ಹೊರತುಪಡಿಸಿ ಮನ ಬಂದಂತೆ ವಾಹನಗಳನ್ನು ನಿಲ್ಲಿಸಿದರೆ ಉದ್ಯಾನದ ದ್ವಾರ ಮುಚ್ಚಲೇಬೇಕಾಗುತ್ತದೆ<br /> -<strong>ಮಹಾಂತೇಶ ಮುರಗೋಡ,</strong><br /> ತೋಟಗಾರಿಕೆ ಇಲಾಖೆಯ<br /> (ಕಬ್ಬನ್ ಉದ್ಯಾನ) ಉಪ ನಿರ್ದೇಶಕ</p>.<p>* ಕೋರ್ಟ್ಗೆ ಬರುವ ವಕೀಲರು ಮತ್ತು ಸಾರ್ವಜನಿಕರ ವಾಹನಗಳ ನಿಲುಗಡೆಗೆ ಬನಪ್ಪ ಉದ್ಯಾನದಲ್ಲಿ ಅವಕಾಶ ಕಲ್ಪಿಸಲಾಗುವುದು. ಕಬ್ಬನ್ ಪಾರ್ಕ್ ದ್ವಾರ ಮುಚ್ಚುವುದು, ಬಿಡುವುದು ತೋಟಗಾರಿಕೆ ಇಲಾಖೆಯವರಿಗೆ ಬಿಟ್ಟದ್ದು<br /> -<strong>ಡಾ.ಎಂ.ಎ. ಸಲೀಂ, </strong><br /> ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್</p>.<p><strong>ಅಂಕಿ ಅಂಶ</strong><br /> 9,000 ನಿತ್ಯ ಕೋರ್ಟ್ಗೆ ಬರುವವರು<br /> 5,000 ಕೋರ್ಟ್ಗೆ ನಿತ್ಯ ಬಂದು ಹೋಗುವ ವಾಹನಗಳ ಸಂಖ್ಯೆ<br /> <br /> <strong>ಮುಖ್ಯಾಂಶಗಳು </strong><br /> * ಉದ್ಯಾನದ ಹಡ್ಸನ್ ವೃತ್ತದ ದ್ವಾರದಲ್ಲಿ ನೂರಾರು ವಾಹನಗಳ ನಿಲುಗಡೆ<br /> *ನಿಯಂತ್ರಿಸಲಾಗದೆ ದ್ವಾರ ಮುಚ್ಚಿದ ಸಿಬ್ಬಂದಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ನೃಪತುಂಗ ರಸ್ತೆಯಲ್ಲಿರುವ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಬಂದಿದ್ದ ವಕೀಲರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಕಬ್ಬನ್ ಉದ್ಯಾನದೊಳಗೆ ತಮ್ಮ ವಾಹನಗಳನ್ನು ನಿಲ್ಲಿಸಿದ್ದರಿಂದ, ಉದ್ಯಾನದ ಹಡ್ಸನ್ ವೃತ್ತದ ದ್ವಾರವನ್ನು ಮಂಗಳವಾರ ಮಧ್ಯಾಹ್ನ 12ರಿಂದ ಸಂಜೆಯವರೆಗೆ ಮುಚ್ಚಲಾಗಿತ್ತು.<br /> <br /> ಕೋರ್ಟ್ನ ವಾಹನ ನಿಲುಗಡೆ ಸ್ಥಳದಲ್ಲಿ ಜ. 16ರಿಂದ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿರುವುದರಿಂದ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.<br /> <br /> ಕಾಮಗಾರಿ ಕುರಿತು ಮಾಹಿತಿ ಇಲ್ಲದ ಕೆಲ ವಕೀಲರು ಮತ್ತು ಸಾರ್ವಜನಿಕರು ಜ. 18ರಂದು (ಸೋಮವಾರ) ರಸ್ತೆ ಬದಿಯಲ್ಲೇ ತಮ್ಮ ವಾಹನಗಳನ್ನು ನಿಲ್ಲಿಸಿದ್ದರು. ಹಾಗಾಗಿ ಸುತ್ತಮುತ್ತಲಿನ ರಸ್ತೆಗಳಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು.<br /> <br /> 9 ಮಹಡಿಯ ಕಟ್ಟಡ: ಕೋರ್ಟ್ ಆವರಣದಲ್ಲಿ 9 ಮಹಡಿಯ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಿರುವ ಲೋಕೋಪಯೋಗಿ ಇಲಾಖೆ, ಸದ್ಯ 5 ಮಹಡಿಗಳ ನಿರ್ಮಾಣಕ್ಕೆ ಮುಂದಾಗಿದೆ. ನಿರ್ಮಾಣ ಕಾಮಗಾರಿ ಅವಧಿ ಒಂದೂವರೆ ವರ್ಷವಾಗಿದೆ.<br /> <br /> ವಾಹನ ದಟ್ಟಣೆಯ ಈ ಸ್ಥಳದಲ್ಲಿ ರಾಜಾರಾಂ ಮೋಹನ್ ರಾಯ್ ರಸ್ತೆ, ಕೆಂಪೇಗೌಡ ರಸ್ತೆ ಸೇರಿದಂತೆ 9 ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಹಡ್ಸನ್ ವೃತ್ತವಿದೆ. ಈ ವೃತ್ತಕ್ಕೆ ಹೊಂದಿಕೊಂಡಂತೆ ಕೋರ್ಟ್ ಕೂಡ ಇದೆ.<br /> <br /> ವಕೀಲರು, ಪೊಲೀಸರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ನಿತ್ಯ ಸಾವಿರಾರು ಮಂದಿ ಬಂದು ಹೋಗುವ ಈ ಸ್ಥಳದಲ್ಲಿ ಕಾಮಗಾರಿ ಆರಂಭವಾಗಿದ್ದು, ವಾಹನಗಳ ನಿಲುಗಡೆ ಪರ್ಯಾಯ ಸ್ಥಳದ ಜತೆಗೆ, ಸಂಚಾರ ದಟ್ಟಣೆಯೂ ಸಮಸ್ಯೆಯಾಗಿ ಪರಿಣಮಿಸಿದೆ.<br /> <br /> <strong>ಅನುಮತಿ ಕೊಟ್ಟಿದ್ದರು: </strong>‘ಜ. 16ರಿಂದ ಕಟ್ಟಡದ ಕಾಮಗಾರಿ ಆರಂಭವಾಗಿದೆ. ಕಟ್ಟಡದ ತಳ ಮಹಡಿ ಸೇರಿದಂತೆ 1 ಮತ್ತು 2ನೇ ಮಹಡಿಗಳನ್ನು ವಾಹನಗಳ ನಿಲುಗಡೆಗೆ ಮೀಸಲಿಡಲಾಗಿದೆ’ ಎಂದು ಬೆಂಗಳೂರು ವಕೀಲರ ಸಂಘದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಘಟಕದ ಜಂಟಿ ಕಾರ್ಯದರ್ಶಿ ಶಶಿಕಿರಣ್ ಅವರು ಹೇಳಿದರು.<br /> <br /> ‘ಏಳೆಂಟು ತಿಂಗಳಲ್ಲಿ 3 ಮಹಡಿಗಳನ್ನು ನಿರ್ಮಿಸಿ ಕೊಡುವುದಾಗಿ ಕಟ್ಟಡದ ಗುತ್ತಿಗೆದಾರರು ಭರವಸೆ ನೀಡಿದ್ದಾರೆ. ಬಳಿಕ ಅಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆಯಾಗಲಿಿದೆ’ ಎಂದು ಅವರು ತಿಳಿಸಿದರು.<br /> <br /> ‘ಕಾಮಗಾರಿ ಮುಗಿಯುವವರೆಗೆ ಕಬ್ಬನ್ ಉದ್ಯಾನದಲ್ಲಿ ವಕೀಲರು ಮತ್ತು ಸಾರ್ವಜನಿಕರ ವಾಹನಗಳ ನಿಲುಗಡೆಗೆ ಅವಕಾಶ ನೀಡುವಂತೆ ಕೋರಿ ತೋಟಗಾರಿಕೆ ಇಲಾಖೆಯ (ಕಬ್ಬನ್ ಉದ್ಯಾನ) ಉಪ ನಿರ್ದೇಶಕರಿಗೆ 3 ತಿಂಗಳ ಹಿಂದೆ ಪತ್ರ ಬರೆದಿದ್ದೇವೆ. ಅವರ ಅನುಮತಿ ಮೇರೆಗೆ ವಾಹನಗಳನ್ನು ನಿಲ್ಲಿಸಲಾಗಿದೆ’ ಎಂದು ಸಂಘದ ಮಾಜಿ ಉಪಾಧ್ಯಕ್ಷ ಎಂ.ಟಿ ಹರೀಶ ಅವರು ಮಾಹಿತಿ ನೀಡಿದರು.<br /> <br /> <strong>ಸವಾರರ ಪರದಾಟ: </strong>ಯಾವುದೇ ಮುನ್ಸೂಚನೆ ಇಲ್ಲದೆ ಕಬ್ಬನ್ ಉದ್ಯಾನದ ಹಡ್ಸನ್ ವೃತ್ತದ ದ್ವಾರವನ್ನು ಸೋಮವಾರ ಮತ್ತು ಮಂಗಳವಾರ ಮುಚ್ಚಿದ್ದರಿಂದ, ಆ ಮಾರ್ಗವಾಗಿ ಸಂಚರಿಸುವ ವಾಹನಗಳ ಸವಾರರು ಪರದಾಡಿದರು.<br /> <br /> ಇದೇ ದ್ವಾರದ ಮೂಲಕ ಉದ್ಯಾನದ ಕೇಂದ್ರ ಗ್ರಂಥಾಲಯಕ್ಕೆ ಬರುವವರ ಜತೆಗೆ ಕೆ.ಆರ್. ವೃತ್ತ, ವಿಧಾನಸೌಧ ಹಾಗೂ ಸಿದ್ದಲಿಂಗಯ್ಯ ವೃತ್ತದ ಮಾರ್ಗವಾಗಿ ಹೋಗುವವರು ಅರ್ಧ ಕಿಲೋಮೀಟರ್ ಮುಂದಕ್ಕೆ ಸಾಗಿ ಸಿದ್ದಲಿಂಗಯ್ಯ ವೃತ್ತದ ಮೂಲಕ ಸಂಚರಿಸಬೇಕಾಯಿತು.<br /> <br /> <strong>ಸರಾಗ ಸಂಚಾರ:</strong> ಕೋರ್ಟ್ಗೆ ಬಂದವರೆಲ್ಲ ಮಂಗಳವಾರ ತಮ್ಮ ವಾಹನಗಳನ್ನು ಕಬ್ಬನ್ ಉದ್ಯಾನದಲ್ಲಿ ನಿಲ್ಲಿಸಿದ್ದರಿಂದ ಯಾವುದೇ ಸಂಚಾರ ಸಮಸ್ಯೆ ಉಂಟಾಗಿಲ್ಲ.<br /> <br /> ಸೋಮವಾರ ಕೆಲ ವಕೀಲರು ಮತ್ತು ಸಾರ್ವಜನಿಕರು ತಮ್ಮ ದ್ವಿಚಕ್ರ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸಿದ್ದರು. ಇದು ಸಂಚಾರ ದಟ್ಟಣೆಗೆ ಕಾರಣವಾಗಿತ್ತು. ಬಳಿಕ ಅವರಿಗೆ ಪರಿಸ್ಥಿತಿಯನ್ನು ಮನವರಿಕೆ ಮಾಡಿ, ವಾಹನಗಳನ್ನು ತೆಗೆಸಲಾಗಿತ್ತು ಎಂದು ಹಲಸೂರು ಗೇಟ್ ಸಂಚಾರ ಠಾಣೆ ಪೊಲೀಸರು ತಿಳಿಸಿದರು.<br /> <br /> ತಡೆಗೋಡೆ ಒಡೆದರು: ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಕ್ಕೂ ಹಿಂದಿನ ದಿನ, ಕೋರ್ಟ್ ಕಟ್ಟಡಕ್ಕೆ ಹೊಂದಿಕೊಂಡಂತಿರುವ ತಡೆಗೋಡೆಯ ಸ್ವಲ್ಪ ಭಾಗವನ್ನು ಓಡಾಟಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಕಾರ್ಮಿಕರು ಒಡೆದು ಹಾಕಿದ್ದಾರೆ.<br /> <br /> ‘ಅನುಮತಿ ಇಲ್ಲದೆ ಜ. 15ರಂದು ಉದ್ಯಾನದ ತಡೆಗೋಡೆ ಒಡೆದಿದ್ದಾರೆ. ಈ ಸಂಬಂಧ ಕಟ್ಟಡ ನಿರ್ಮಾಣದ ಹೊಣೆ ಹೊತ್ತಿರುವ ಎಂಜಿನಿಯರ್ಗೆ ಪತ್ರ ಬರೆದು, ಕೂಡಲೇ ತಡೆಗೋಡೆಯನ್ನು ಪುನರ್ನಿರ್ಮಿಸುವಂತೆ ಸೂಚಿಸಲಾಗಿದೆ. ಇದಕ್ಕೆ ಕ್ಷಮೆ ಯಾಚಿಸಿರುವ ಅವರು, ಒಂದೆರಡು ದಿನದಲ್ಲಿ ನಿರ್ಮಿಸಿ ಕೊಡುವುದಾಗಿ ಹೇಳಿದ್ದಾರೆ’ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮುರಗೋಡ ಅವರು ಪ್ರತಿಕ್ರಿಯಿಸಿದರು.<br /> <br /> <strong>ಬೇರೆ ಸ್ಥಳಗಳೂ ಇವೆ </strong><br /> ‘ಉದ್ಯಾನ ಸಂರಕ್ಷಣಾಕಾಯ್ದೆಯ ಪ್ರಕಾರ ಯಾರೂ ಉದ್ಯಾನವನ್ನು ಯಾವ ರೀತಿಯಲ್ಲೂ ಅತಿಕ್ರಮಿಸುವಂತಿಲ್ಲ. ಅದು ವಕೀಲರು ಸೇರಿದಂತೆ ಎಲ್ಲರಿಗೂ ಅನ್ವಯಿಸುತ್ತದೆ’ಎಂದು ಹೈಕೋರ್ಟ್ ವಕೀಲರೂ ಹಾಗೂ ಕಬ್ಬನ್ ಉದ್ಯಾನ ನಡಿಗೆದಾರರ ಸಂಘದ ಅಧ್ಯಕ್ಷರಾದ ಎಸ್. ಉಮೇಶ್ ತಿಳಿಸಿದರು.</p>.<p>‘ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವವರೆಗೆ ಕಬ್ಬನ್ ಉದ್ಯಾನದ ಬದಲಿಗೆ ಕೋರ್ಟ್ ಸಮೀಪದಲ್ಲಿರುವ ವೈಎಂಸಿಎಗೆ ಸೇರಿದ 16ರಿಂದ 17 ಎಕರೆಯಷ್ಟು ಜಾಗ ಹಾಗೂ ಬನಪ್ಪ ಉದ್ಯಾನವನ್ನು ವಾಹನಗಳ ನಿಲುಗಡೆಗೆ ಬಳಸಿಕೊಳ್ಳಬಹುದು. ಈ ಕುರಿತು ವಕೀಲ ಮಿತ್ರರೊಂದಿಗೆ ಚರ್ಚಿಸಲಾಗುವುದು’ ಎಂದು ಅವರು ಹೇಳಿದರು.<br /> <br /> <strong>ನಿಗದಿತ ಸ್ಥಳಗಳಲ್ಲಷ್ಟೆ ಅನುಮತಿ</strong><br /> ‘ವಾಹನಗಳ ನಿಲುಗಡೆಗೆ ಅನುಮತಿ ಕೋರಿ 3 ತಿಂಗಳಹಿಂದೆ ವಕೀಲರ ಸಂಘದವರು ಪತ್ರ ಬರೆದಿದ್ದರು. ಉದ್ಯಾನದಲ್ಲಿರುವ ವಾಹನಗಳ ನಿಲುಗಡೆಗಾಗಿ 5 ಸ್ಥಳಗಳನ್ನು ಗುರುತಿಸಲಾಗಿದೆ.</p>.<p>ಅಲ್ಲೇ ನಿಲುಗಡೆಗೆ ಅನುಮತಿ ನೀಡಿದ್ದೆವು’ ಎಂದು ಮಹಾಂತೇಶ ಮುರಗೋಡ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.<br /> ‘ಆದರೆ ನಿಗದಿತ ಸ್ಥಳದಲ್ಲಿ ನಿಲ್ಲಿಸುವ ಬದಲು, ಉದ್ಯಾನದ ಹಡ್ಸನ್ ವೃತ್ತ ದ್ವಾರದ ಬಳಿ ಎಲ್ಲೆಂದರಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿದ್ದರು. ಆಗಅನಿವಾರ್ಯವಾಗಿ ದ್ವಾರವನ್ನು ಮುಚ್ಚಿ ವಾಹನಗಳನ್ನು ನಿಯಂತ್ರಿಸಬೇಕಾಯಿತು. ಎರಡೂ ದಿನವೂ ಇದೇ ಸ್ಥಿತಿ ಮುಂದುವರೆದಿದೆ’ ಎಂದು ಅವರು ಹೇಳಿದರು.<br /> <br /> ‘ನಿಗದಿತ ಸ್ಥಳಗಳಲ್ಲಿ ನಿಲ್ಲಿಸಿಕೊಂಡರೆ ನಮ್ಮದೇನೂ ಅಭ್ಯಂತರವಿಲ್ಲ. ನಿತ್ಯ ಸಾವಿರಾರು ಪ್ರವಾಸಿಗಳು ಉದ್ಯಾನಕ್ಕೆ ಬರುತ್ತಾರೆ. ಇಲ್ಲಿನ ಅಂದಕ್ಕೆ ಧಕ್ಕೆಯಾಗುವಂತೆ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿದರೆಹೇಗೆ?’ ಎಂದು ಅವರು ಪ್ರಶ್ನಿಸಿದರು.<br /> <br /> * ಇದು ಸರ್ಕಾರಿ ಕಟ್ಟಡ ನಿರ್ಮಾಣ ಕಾಮಗಾರಿ. ವಾಹನಗಳ ನಿಲುಗಡೆಗೆ ಸರ್ಕಾರವೇ ಪರ್ಯಾಯ ವ್ಯವಸ್ಥೆ ಮಾಡಿಕೊಡಲಿ. ಅದಕ್ಕಾಗಿ ಸಂಬಂಧಪಟ್ಟ ವರಿಗೆ ಪತ್ರ ಬರೆಯಲಾಗುವುದು<br /> -<strong>ಎಚ್.ಸಿ. ಶಿವರಾಮ್,</strong><br /> ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ</p>.<p>* ಉದ್ಯಾನದ ಸಂರಕ್ಷಣೆಗೆ ಮೊದಲ ಆದ್ಯತೆ. ನಿಗದಿತ ಸ್ಥಳಗಳನ್ನು ಹೊರತುಪಡಿಸಿ ಮನ ಬಂದಂತೆ ವಾಹನಗಳನ್ನು ನಿಲ್ಲಿಸಿದರೆ ಉದ್ಯಾನದ ದ್ವಾರ ಮುಚ್ಚಲೇಬೇಕಾಗುತ್ತದೆ<br /> -<strong>ಮಹಾಂತೇಶ ಮುರಗೋಡ,</strong><br /> ತೋಟಗಾರಿಕೆ ಇಲಾಖೆಯ<br /> (ಕಬ್ಬನ್ ಉದ್ಯಾನ) ಉಪ ನಿರ್ದೇಶಕ</p>.<p>* ಕೋರ್ಟ್ಗೆ ಬರುವ ವಕೀಲರು ಮತ್ತು ಸಾರ್ವಜನಿಕರ ವಾಹನಗಳ ನಿಲುಗಡೆಗೆ ಬನಪ್ಪ ಉದ್ಯಾನದಲ್ಲಿ ಅವಕಾಶ ಕಲ್ಪಿಸಲಾಗುವುದು. ಕಬ್ಬನ್ ಪಾರ್ಕ್ ದ್ವಾರ ಮುಚ್ಚುವುದು, ಬಿಡುವುದು ತೋಟಗಾರಿಕೆ ಇಲಾಖೆಯವರಿಗೆ ಬಿಟ್ಟದ್ದು<br /> -<strong>ಡಾ.ಎಂ.ಎ. ಸಲೀಂ, </strong><br /> ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್</p>.<p><strong>ಅಂಕಿ ಅಂಶ</strong><br /> 9,000 ನಿತ್ಯ ಕೋರ್ಟ್ಗೆ ಬರುವವರು<br /> 5,000 ಕೋರ್ಟ್ಗೆ ನಿತ್ಯ ಬಂದು ಹೋಗುವ ವಾಹನಗಳ ಸಂಖ್ಯೆ<br /> <br /> <strong>ಮುಖ್ಯಾಂಶಗಳು </strong><br /> * ಉದ್ಯಾನದ ಹಡ್ಸನ್ ವೃತ್ತದ ದ್ವಾರದಲ್ಲಿ ನೂರಾರು ವಾಹನಗಳ ನಿಲುಗಡೆ<br /> *ನಿಯಂತ್ರಿಸಲಾಗದೆ ದ್ವಾರ ಮುಚ್ಚಿದ ಸಿಬ್ಬಂದಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>