<p>ಸಾಮಾನ್ಯವಾಗಿ ಶಾಲೆಯಲ್ಲಿ ಹೋಗಿ ಕಲಿಯುವವರನ್ನು ವಿದ್ಯಾರ್ಥಿಗಳು ಎನ್ನಲಾಗುತ್ತದೆ. ವಿದ್ಯಾರ್ಥಿ ಎಂದರೆ ವಿದ್ಯೆಯನ್ನು ಯಾಚಿಸುವವನು ಎಂದು ಅರ್ಥವಾಗುತ್ತದೆ. ಈ ದೃಷ್ಟಿಯಿಂದ ನೋಡುವುದಾದರೆ ಇಂದು ಶಾಲೆಗೆ ಹೋಗುವ ಎಲ್ಲರನ್ನೂ ವಿದ್ಯಾರ್ಥಿ ಎನ್ನಬಹುದೇ? ಎಂಬ ಸಂಶಯ ಉಂಟಾಗುತ್ತದೆ. <br /> <br /> ಜ್ಞಾನಾರ್ಜನೆಯು ವಿದ್ಯಾರ್ಥಿಯ ಮೂಲ ಕರ್ತವ್ಯ. ಅದರೊಡನೆ ತನ್ನ ಸದ್ಗುಣಗಳನ್ನು ಬೆಳೆಸಿಕೊಳ್ಳುವುದು, ಒಳ್ಳೆಯ ನಡೆನುಡಿ ಕಲಿಯುವುದು ವಿದ್ಯಾರ್ಥಿಯ ಕರ್ತವ್ಯವಾಗಿದೆ.<br /> <br /> ವಿದ್ಯಾರ್ಥಿಗಳಲ್ಲಿ ಹಲವಾರು ಉತ್ತಮ ಗುಣಗಳಿರಬೇಕು. ವಿನಯಶೀಲತೆ, ನಯಗಾರಿಕೆ, ಸಹನೆ, ಸಹಿಷ್ಣುತೆ, ಸದಭಿಪ್ರಾಯ, ಸ್ವಾಭಿಮಾನ, ಸ್ವಾವಲಂಬನೆ, ಪರೋಪಕಾರ ಬುದ್ಧಿ, ಸತ್ಯಸಂಧತೆ, ಪ್ರಾಮಾಣಿಕತನ ಇತ್ಯಾದಿ ಹಲವಾರು ಗುಣಗಳಿರಬೇಕು. ವಿದ್ಯಾಭಿರುಚಿಯು ಎಲ್ಲಕ್ಕೂ ಮೊದಲಿನ ಸದ್ಗುಣ.<br /> <br /> ದಿನದಿನದ ಕೆಲಸವನ್ನು ಸ್ವಲ್ಪವೂ ತಪ್ಪದೆ ಮಾಡುವ ಕರ್ತವ್ಯ ಪಾರಾಯಣತೆ ವಿದ್ಯಾರ್ಥಿಯಲ್ಲಿರಬೇಕು. ಪಾಠದಲ್ಲಿ ಹೇಗೊ ಹಾಗೆಯೇ ಪಠ್ಯೇತರ ಚಟುವಟಿಕೆಗಳಲ್ಲಿಯೂ ಉತ್ಸಾಹವುಳ್ಳವನಾಗಿರಬೇಕು. <br /> <br /> ಗುರುಹಿರಿಯರಲ್ಲಿ ವಿಧೇಯತೆ, ಗೌರವಗಳನ್ನು ವ್ಯಕ್ತಪಡಿಸುವ ಗುಣವುಳ್ಳವನಾಗಿರಬೇಕು.ಒಮ್ಮೆಲೇ ಎಲ್ಲಾ ಸದ್ಗುಣಗಳನ್ನು ನಮ್ಮದಾಗಿಸಿಕೊಳ್ಳಲು ಬರುವುದಿಲ್ಲ. ಅದಕ್ಕಾಗಿ ಸತತ ಶ್ರಮಿಸಬೇಕು. <br /> <br /> ಬೇರೆಯವರೊಡನೆ ಬೆರೆತು ನಮ್ಮಲ್ಲಿರುವ ಲೋಪದೋಷಗಳನ್ನು ಹೋಗಲಾಡಿಸಲು ಯತ್ನಿಸಬೇಕು. ಕಷ್ಟಪಟ್ಟು ದುಡಿಯುವುದರಿಂದ ಉತ್ತಮ ಗುಣಗಳನ್ನು ರೂಪಿಸಿಕೊಳ್ಳಲು ಬರುತ್ತದೆ.<br /> <br /> `ಸಾಧಿಸಿದರೆ ಸಬಳ ನುಂಗಬಹುದು~ ಎಂಬ ನಾಣ್ನುಡಿ ಇದೆ. ಸದ್ಗುಣಗಳಿಂದ ಕೂಡಿದ ವಿದ್ಯಾರ್ಥಿಯು ಆದರ್ಶಪ್ರಾಯವೆನಿಸುವನು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಾಮಾನ್ಯವಾಗಿ ಶಾಲೆಯಲ್ಲಿ ಹೋಗಿ ಕಲಿಯುವವರನ್ನು ವಿದ್ಯಾರ್ಥಿಗಳು ಎನ್ನಲಾಗುತ್ತದೆ. ವಿದ್ಯಾರ್ಥಿ ಎಂದರೆ ವಿದ್ಯೆಯನ್ನು ಯಾಚಿಸುವವನು ಎಂದು ಅರ್ಥವಾಗುತ್ತದೆ. ಈ ದೃಷ್ಟಿಯಿಂದ ನೋಡುವುದಾದರೆ ಇಂದು ಶಾಲೆಗೆ ಹೋಗುವ ಎಲ್ಲರನ್ನೂ ವಿದ್ಯಾರ್ಥಿ ಎನ್ನಬಹುದೇ? ಎಂಬ ಸಂಶಯ ಉಂಟಾಗುತ್ತದೆ. <br /> <br /> ಜ್ಞಾನಾರ್ಜನೆಯು ವಿದ್ಯಾರ್ಥಿಯ ಮೂಲ ಕರ್ತವ್ಯ. ಅದರೊಡನೆ ತನ್ನ ಸದ್ಗುಣಗಳನ್ನು ಬೆಳೆಸಿಕೊಳ್ಳುವುದು, ಒಳ್ಳೆಯ ನಡೆನುಡಿ ಕಲಿಯುವುದು ವಿದ್ಯಾರ್ಥಿಯ ಕರ್ತವ್ಯವಾಗಿದೆ.<br /> <br /> ವಿದ್ಯಾರ್ಥಿಗಳಲ್ಲಿ ಹಲವಾರು ಉತ್ತಮ ಗುಣಗಳಿರಬೇಕು. ವಿನಯಶೀಲತೆ, ನಯಗಾರಿಕೆ, ಸಹನೆ, ಸಹಿಷ್ಣುತೆ, ಸದಭಿಪ್ರಾಯ, ಸ್ವಾಭಿಮಾನ, ಸ್ವಾವಲಂಬನೆ, ಪರೋಪಕಾರ ಬುದ್ಧಿ, ಸತ್ಯಸಂಧತೆ, ಪ್ರಾಮಾಣಿಕತನ ಇತ್ಯಾದಿ ಹಲವಾರು ಗುಣಗಳಿರಬೇಕು. ವಿದ್ಯಾಭಿರುಚಿಯು ಎಲ್ಲಕ್ಕೂ ಮೊದಲಿನ ಸದ್ಗುಣ.<br /> <br /> ದಿನದಿನದ ಕೆಲಸವನ್ನು ಸ್ವಲ್ಪವೂ ತಪ್ಪದೆ ಮಾಡುವ ಕರ್ತವ್ಯ ಪಾರಾಯಣತೆ ವಿದ್ಯಾರ್ಥಿಯಲ್ಲಿರಬೇಕು. ಪಾಠದಲ್ಲಿ ಹೇಗೊ ಹಾಗೆಯೇ ಪಠ್ಯೇತರ ಚಟುವಟಿಕೆಗಳಲ್ಲಿಯೂ ಉತ್ಸಾಹವುಳ್ಳವನಾಗಿರಬೇಕು. <br /> <br /> ಗುರುಹಿರಿಯರಲ್ಲಿ ವಿಧೇಯತೆ, ಗೌರವಗಳನ್ನು ವ್ಯಕ್ತಪಡಿಸುವ ಗುಣವುಳ್ಳವನಾಗಿರಬೇಕು.ಒಮ್ಮೆಲೇ ಎಲ್ಲಾ ಸದ್ಗುಣಗಳನ್ನು ನಮ್ಮದಾಗಿಸಿಕೊಳ್ಳಲು ಬರುವುದಿಲ್ಲ. ಅದಕ್ಕಾಗಿ ಸತತ ಶ್ರಮಿಸಬೇಕು. <br /> <br /> ಬೇರೆಯವರೊಡನೆ ಬೆರೆತು ನಮ್ಮಲ್ಲಿರುವ ಲೋಪದೋಷಗಳನ್ನು ಹೋಗಲಾಡಿಸಲು ಯತ್ನಿಸಬೇಕು. ಕಷ್ಟಪಟ್ಟು ದುಡಿಯುವುದರಿಂದ ಉತ್ತಮ ಗುಣಗಳನ್ನು ರೂಪಿಸಿಕೊಳ್ಳಲು ಬರುತ್ತದೆ.<br /> <br /> `ಸಾಧಿಸಿದರೆ ಸಬಳ ನುಂಗಬಹುದು~ ಎಂಬ ನಾಣ್ನುಡಿ ಇದೆ. ಸದ್ಗುಣಗಳಿಂದ ಕೂಡಿದ ವಿದ್ಯಾರ್ಥಿಯು ಆದರ್ಶಪ್ರಾಯವೆನಿಸುವನು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>