<p><strong>ಮಲೇಬೆನ್ನೂರು:</strong> ಸಮೀಪದ ನಿಟ್ಟೂರು ಗ್ರಾಮದಲ್ಲಿ ವಾಂತಿ-ಬೇಧಿ ಬಾಧೆಯಿಂದ ಅಸ್ವಸ್ಥರಾದ 38 ಜನರು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾದ ಘಟನೆ ಶನಿವಾರ ಸಂಭವಿಸಿದೆ. <br /> <br /> ಮಲ್ಲೇಶಪ್ಪ ಬಡಾವಣೆಯಲ್ಲಿನ ತಿಪ್ಪೇಸ್ವಾಮಿ ಎಂಬುವವರ ಮಗಳು ಪುಷ್ಪವತಿಯಾದ ಹಿನ್ನೆಲೆಯಲ್ಲಿ ಶುಕ್ರವಾರ `ಆರತಿ~ ಕಾರ್ಯಕ್ರಮ ಹಮ್ಮಿಕೊಂಡಿದ್ದರು. <br /> <br /> ಭೂರಿಭೋಜನದೊಂದಿಗೆ ಶಾವಿಗೆ ಪಾಯಸ, ಬೂಂದಿ ಸವಿದು ಸುಖನಿದ್ರೆಯಲ್ಲಿದ್ದವರಿಗೆ ಏಕಾಏಕಿ ಮಧ್ಯರಾತ್ರಿ ನಂತರ ಹೊಟ್ಟೆ ತೊಳೆಸುವುದು, ನೋವು, ವಾಕರಿಕೆ, ವಾಂತಿ ಬೇಧಿ ಕಾಣಿಸಿಕೊಂಡಿದೆ.<br /> <br /> ಸುಮಾರು ರಾತ್ರಿ 2 ಗಂಟೆ ಹೊತ್ತಿಗೆ ಕೆಲವರು ಅಸ್ವಸ್ಥರಾದ ತಕ್ಷಣ ಗ್ರಾಮಸ್ಥರು ಟ್ರ್ಯಾಕ್ಟರ್ನಲ್ಲಿ ಆಸ್ಪತ್ರೆಗೆ ಕರೆತಂದಿದ್ದಾರೆ.<br /> <br /> ಬೆಳಗಿನಜಾವ 3.30 ರ ಸುಮಾರಿಗೆ 25ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ ಎಂಬ ದೂರವಾಣಿ ಕರೆ ಬಂದ ತಕ್ಷಣ ತುರ್ತುಸೇವೆಯ 108 ವಾಹನ ಗ್ರಾಮಕ್ಕೆ ಧಾವಿಸಿ ತಂಡಗಳಲ್ಲಿ ಆಸ್ಪತ್ರೆಗೆ ಕರೆ ತಂದರು. <br /> <br /> ಅದರಲ್ಲಿ ಪ್ರವೀಣ ಎಂಬ ಬಾಲಕನಿಗೆ ರಕ್ತದ ವಾಂತಿ ಬೇಧಿ ಆರಂಭವಾಗಿ ಕೆಲಕಾಲ ಆಸ್ಪತ್ರೆಯಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. <br /> <br /> ರಾತ್ರಿಪಾಳಿ ವೈದ್ಯ ಡಾ.ನಿಸಾರ್ ಅಹ್ಮದ್, ಕರ್ತವ್ಯ ವೈದ್ಯಾಧಿಕಾರಿ ಡಾ.ಪ್ರಭು ಹಾಗೂ ಸಿಬ್ಬಂದಿ ಎಲ್ಲ ರೋಗಿಗಳಿಗೆ ಗ್ಲುಕೋಸ್ ದ್ರಾವಣ ಹಾಕಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. 38 ರೋಗಿಗಳಿಗೆ 250ಕ್ಕೂ ಹೆಚ್ಚು ಗ್ಲುಕೋಸ್ ಬಾಟಲ್ ಹಾಕಲಾಗಿದೆ ಎಂದು ತಿಳಿದುಬಂದಿದೆ.</p>.<p><br /> <strong>ಮಂಚಕ್ಕೆ ಪರದಾಟ:</strong> ಆಸ್ಪತ್ರೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂತಾನಹರಣ ಶಿಬಿರದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ 15 ಮಹಿಳೆಯರು ಜತೆಯಲ್ಲಿ ಸಹಾಯಕರೊಂದಿಗೆ ಮೊದಲೇ ವಾರ್ಡ್ಗಳಲ್ಲಿದ್ದರು. <br /> ಏಕಾಏಕಿ 38 ರೋಗಿಗಳು ದಾಖಲಾದ ನಂತರ ಸ್ಥಳಾಭಾವ ಉಂಟಾಗಿತ್ತು. ಪಡಸಾಲೆ, ನೆಲ, ಲ್ಯಾಬ್ ಕಟ್ಟೆಮೇಲೆ ಮಲಗಿಸಿ ಚಿಕಿತ್ಸೆ ನೀಡಿದರು. <br /> <br /> ಗ್ಲುಕೋಸ್ ಬಾಟಲಿಗಳನ್ನು ಸ್ಟ್ಯಾಂಡ್ಗಳ ಬದಲಿಗೆ ಗೋಡೆಗೆ ಮಳೆ ಬಡಿದು ತೂಗು ಹಾಕಿದ್ದರು. ರೋಗಿಗಳ ಸಹಾಯಕ್ಕೆ ಬಂದವರು ಆಸ್ಪತ್ರೆ ತುಂಬ ಎಲ್ಲೆಂದರಲ್ಲಿ ಮಲಗಿದ್ದರು. <br /> <br /> <strong>ವಿಶೇಷ: </strong>ವೈದ್ಯರು ಚಿಕಿತ್ಸೆ ನೀಡುವಾಗ 3 ಗರ್ಭಿಣಿಯರಿಗೆ ಡೆಲಿವರಿ ಮಾಡಿ ಮಾನವೀಯತೆ ಮೆರೆದರು. ಗ್ರಾ.ಪಂ ಸದಸ್ಯ ಫಕ್ರುದ್ದೀನ್, ಸಮಾಜ ಸೇವಕ ಗಫಾರ್ಖಾನ್ ರಾತ್ರಿ ವೇಳೆ ವೈದ್ಯರಿಗೆ ಸಹಾಯ ಮಾಡಿದ್ದು ವಿಶೇಷ.<br /> ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೂಕ್ತ ಸಿಬ್ಬಂದಿ, ಮಂಚ, ಹಾಸಿಗೆ ಸೌಲಭ್ಯ ಒದಗಿಸದಿದ್ದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. <br /> <br /> ದೇವರಬೆಳಕೆರೆ ಆರೋಗ್ಯ ಕೇಂದ್ರದ ಡಾ.ಮುರಳೀಧರ್ ಹಾಗೂ ತಂಡದವರು ಮುಂಜಾಗ್ರತೆ ದೃಷ್ಟಿಯಿಂದ ಗ್ರಾಮದಲ್ಲಿ ಮೊಕ್ಕಾಂ ಹೂಡಿರುವುದಾಗಿ ತಿಳಿಸಿದರು.</p>.<p><br /> <strong>ವಿಷವಾದ ಪಾಯಸ: </strong>ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಬೆಳಿಗ್ಗೆ ತಯಾರಿಸಿದ ಶಾವಿಗೆ ಪಾಯಸ ರಾತ್ರಿ ಹೊತ್ತಿಗೆ ವಿಷಪೂರಿತವಾಗಿರಬಹುದು ಎಂದು ಉಪಸ್ಥಿತರು ಶಂಕೆ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲೇಬೆನ್ನೂರು:</strong> ಸಮೀಪದ ನಿಟ್ಟೂರು ಗ್ರಾಮದಲ್ಲಿ ವಾಂತಿ-ಬೇಧಿ ಬಾಧೆಯಿಂದ ಅಸ್ವಸ್ಥರಾದ 38 ಜನರು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾದ ಘಟನೆ ಶನಿವಾರ ಸಂಭವಿಸಿದೆ. <br /> <br /> ಮಲ್ಲೇಶಪ್ಪ ಬಡಾವಣೆಯಲ್ಲಿನ ತಿಪ್ಪೇಸ್ವಾಮಿ ಎಂಬುವವರ ಮಗಳು ಪುಷ್ಪವತಿಯಾದ ಹಿನ್ನೆಲೆಯಲ್ಲಿ ಶುಕ್ರವಾರ `ಆರತಿ~ ಕಾರ್ಯಕ್ರಮ ಹಮ್ಮಿಕೊಂಡಿದ್ದರು. <br /> <br /> ಭೂರಿಭೋಜನದೊಂದಿಗೆ ಶಾವಿಗೆ ಪಾಯಸ, ಬೂಂದಿ ಸವಿದು ಸುಖನಿದ್ರೆಯಲ್ಲಿದ್ದವರಿಗೆ ಏಕಾಏಕಿ ಮಧ್ಯರಾತ್ರಿ ನಂತರ ಹೊಟ್ಟೆ ತೊಳೆಸುವುದು, ನೋವು, ವಾಕರಿಕೆ, ವಾಂತಿ ಬೇಧಿ ಕಾಣಿಸಿಕೊಂಡಿದೆ.<br /> <br /> ಸುಮಾರು ರಾತ್ರಿ 2 ಗಂಟೆ ಹೊತ್ತಿಗೆ ಕೆಲವರು ಅಸ್ವಸ್ಥರಾದ ತಕ್ಷಣ ಗ್ರಾಮಸ್ಥರು ಟ್ರ್ಯಾಕ್ಟರ್ನಲ್ಲಿ ಆಸ್ಪತ್ರೆಗೆ ಕರೆತಂದಿದ್ದಾರೆ.<br /> <br /> ಬೆಳಗಿನಜಾವ 3.30 ರ ಸುಮಾರಿಗೆ 25ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ ಎಂಬ ದೂರವಾಣಿ ಕರೆ ಬಂದ ತಕ್ಷಣ ತುರ್ತುಸೇವೆಯ 108 ವಾಹನ ಗ್ರಾಮಕ್ಕೆ ಧಾವಿಸಿ ತಂಡಗಳಲ್ಲಿ ಆಸ್ಪತ್ರೆಗೆ ಕರೆ ತಂದರು. <br /> <br /> ಅದರಲ್ಲಿ ಪ್ರವೀಣ ಎಂಬ ಬಾಲಕನಿಗೆ ರಕ್ತದ ವಾಂತಿ ಬೇಧಿ ಆರಂಭವಾಗಿ ಕೆಲಕಾಲ ಆಸ್ಪತ್ರೆಯಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. <br /> <br /> ರಾತ್ರಿಪಾಳಿ ವೈದ್ಯ ಡಾ.ನಿಸಾರ್ ಅಹ್ಮದ್, ಕರ್ತವ್ಯ ವೈದ್ಯಾಧಿಕಾರಿ ಡಾ.ಪ್ರಭು ಹಾಗೂ ಸಿಬ್ಬಂದಿ ಎಲ್ಲ ರೋಗಿಗಳಿಗೆ ಗ್ಲುಕೋಸ್ ದ್ರಾವಣ ಹಾಕಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. 38 ರೋಗಿಗಳಿಗೆ 250ಕ್ಕೂ ಹೆಚ್ಚು ಗ್ಲುಕೋಸ್ ಬಾಟಲ್ ಹಾಕಲಾಗಿದೆ ಎಂದು ತಿಳಿದುಬಂದಿದೆ.</p>.<p><br /> <strong>ಮಂಚಕ್ಕೆ ಪರದಾಟ:</strong> ಆಸ್ಪತ್ರೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂತಾನಹರಣ ಶಿಬಿರದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ 15 ಮಹಿಳೆಯರು ಜತೆಯಲ್ಲಿ ಸಹಾಯಕರೊಂದಿಗೆ ಮೊದಲೇ ವಾರ್ಡ್ಗಳಲ್ಲಿದ್ದರು. <br /> ಏಕಾಏಕಿ 38 ರೋಗಿಗಳು ದಾಖಲಾದ ನಂತರ ಸ್ಥಳಾಭಾವ ಉಂಟಾಗಿತ್ತು. ಪಡಸಾಲೆ, ನೆಲ, ಲ್ಯಾಬ್ ಕಟ್ಟೆಮೇಲೆ ಮಲಗಿಸಿ ಚಿಕಿತ್ಸೆ ನೀಡಿದರು. <br /> <br /> ಗ್ಲುಕೋಸ್ ಬಾಟಲಿಗಳನ್ನು ಸ್ಟ್ಯಾಂಡ್ಗಳ ಬದಲಿಗೆ ಗೋಡೆಗೆ ಮಳೆ ಬಡಿದು ತೂಗು ಹಾಕಿದ್ದರು. ರೋಗಿಗಳ ಸಹಾಯಕ್ಕೆ ಬಂದವರು ಆಸ್ಪತ್ರೆ ತುಂಬ ಎಲ್ಲೆಂದರಲ್ಲಿ ಮಲಗಿದ್ದರು. <br /> <br /> <strong>ವಿಶೇಷ: </strong>ವೈದ್ಯರು ಚಿಕಿತ್ಸೆ ನೀಡುವಾಗ 3 ಗರ್ಭಿಣಿಯರಿಗೆ ಡೆಲಿವರಿ ಮಾಡಿ ಮಾನವೀಯತೆ ಮೆರೆದರು. ಗ್ರಾ.ಪಂ ಸದಸ್ಯ ಫಕ್ರುದ್ದೀನ್, ಸಮಾಜ ಸೇವಕ ಗಫಾರ್ಖಾನ್ ರಾತ್ರಿ ವೇಳೆ ವೈದ್ಯರಿಗೆ ಸಹಾಯ ಮಾಡಿದ್ದು ವಿಶೇಷ.<br /> ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೂಕ್ತ ಸಿಬ್ಬಂದಿ, ಮಂಚ, ಹಾಸಿಗೆ ಸೌಲಭ್ಯ ಒದಗಿಸದಿದ್ದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. <br /> <br /> ದೇವರಬೆಳಕೆರೆ ಆರೋಗ್ಯ ಕೇಂದ್ರದ ಡಾ.ಮುರಳೀಧರ್ ಹಾಗೂ ತಂಡದವರು ಮುಂಜಾಗ್ರತೆ ದೃಷ್ಟಿಯಿಂದ ಗ್ರಾಮದಲ್ಲಿ ಮೊಕ್ಕಾಂ ಹೂಡಿರುವುದಾಗಿ ತಿಳಿಸಿದರು.</p>.<p><br /> <strong>ವಿಷವಾದ ಪಾಯಸ: </strong>ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಬೆಳಿಗ್ಗೆ ತಯಾರಿಸಿದ ಶಾವಿಗೆ ಪಾಯಸ ರಾತ್ರಿ ಹೊತ್ತಿಗೆ ವಿಷಪೂರಿತವಾಗಿರಬಹುದು ಎಂದು ಉಪಸ್ಥಿತರು ಶಂಕೆ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>