<p>ಈ ಚಿತ್ರವನ್ನು ಕಂಡಾಗ ‘ವಾವ್!’ ಎಂಬ ‘ಉದ್ಗಾರ’ ಬರದಿರಲು ಸಾಧ್ಯವಿಲ್ಲ. ಅಶ್ರುವಾಯು ಗ್ರೆನೇಡ್ಗಳ ಉಳಿದಿರುವ ಭಾಗವನ್ನೇ ಬಳಸಿ ಈ ಮಹಿಳೆ ಮಾಡಿರುವ ಹೂದೋಟ ಎಂಥವರನ್ನೂ ಆಕರ್ಷಿಸುತ್ತದೆ.<br /> <br /> ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವಿನ ಸಂಘರ್ಷಕ್ಕೆ ಕೊನೆ ಇಂದಿಗೂ ದೊರಕಿಲ್ಲ. ಎರಡೂ ದೇಶಗಳ ನಡುವೆ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದ್ದು, ಅಪಾರ ಸಾವು, ನೋವು ಸಂಭವಿಸಿದೆ.<br /> <br /> ಸಂಘರ್ಷ ಕೊನೆಗೊಂಡು ಶಾಂತಿಯಿಂದ ಜೀವನ ಸಾಗಿಸಬೇಕು ಎಂದು ಕನಸು ಕಾಣುವ ಅದೆಷ್ಟೋ ಮಂದಿ ಎರಡೂ ದೇಶಗಳಲ್ಲಿದ್ದಾರೆ. ಬಂದೂಕು ಹಾಗೂ ಬಾಂಬ್ಗಳ ಸದ್ದಿನ ನಡುವೆಯೂ ಶಾಂತಿಯ ಸಂದೇಶ ಸಾರಲು ಹಲವರು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಅವರು ವಿವಿಧ ಹಾದಿಗಳನ್ನು ಕಂಡುಕೊಂಡಿದ್ದಾರೆ.<br /> <br /> ಇಂತಹ ಪ್ರಯತ್ನದ ದಾರಿ ಹಿಡಿದ ಪ್ಯಾಲೆಸ್ಟೀನ್ನ ರಮಲ್ಲಾ ಪಟ್ಟಣದ ಬಳಿಯ ಬಿಲಿನ್ ಎಂಬ ಗ್ರಾಮದ ಮಹಿಳೆಯೊಬ್ಬರ ಶಾಂತಿಯ ಸಂದೇಶ ಜಗತ್ತಿನ ಗಮನ ಸೆಳೆದಿದೆ. <br /> <br /> ಈ ಮಹಿಳೆ ತನ್ನ ಮನೆಯ ಹಿತ್ತಲಿನಲ್ಲಿ ಒಂದು ಸುಂದರ ಉದ್ಯಾನವನ ನಿರ್ಮಿಸಿದ್ದಾರೆ. ಹಲವು ಬಗೆಯ ಹೂಗಳಿಂದ ಉದ್ಯಾನ ಕಂಗೊಳಿಸುತ್ತಿದೆ. ಇದರ ವಿಶೇಷತೆಯೆಂದರೆ ಇಲ್ಲಿರುವ ಗಿಡಗಳನ್ನು ಹೂಕುಂಡದಲ್ಲಿ ಬೆಳೆಸಿಲ್ಲ.<br /> <br /> ಬದಲಾಗಿ ಇಸ್ರೇಲಿನ ಸೈನಿಕರು ಸಿಡಿಸಿರುವ ಅಶ್ರುವಾಯು ಗ್ರೆನೇಡ್ಗಳ ಉಳಿದಿರುವ ಭಾಗವನ್ನೇ (ಕ್ಯಾನಿಸ್ಟರ್ಗಳು – ಲೋಹದ ಚಿಕ್ಕ ಡಬ್ಬಿ) ಹೂಕುಂಡದ ರೀತಿಯಲ್ಲಿ ಬಳಸಿಕೊಂಡಿದ್ದಾರೆ!<br /> <br /> ಪ್ಯಾಲೆಸ್ಟೀನ್ ಪ್ರತಿಭಟನಾಕಾರರನ್ನು ಚದುರಿಸಲು ಇಸ್ರೇಲ್ ಸೈನಿಕರು ಅಶ್ರುವಾಯು ಗ್ರೆನೇಡ್ಗಳನ್ನು ಬಳಸುತ್ತಾರೆ. ರಮಲ್ಲಾ ಪ್ರದೇಶದಲ್ಲಿ ಸಂಘರ್ಷ, ಪ್ರತಿಭಟನೆ ನಡೆಯುವುದು ಸಾಮಾನ್ಯ. ಆದ್ದರಿಂದ ಈಕೆಗೆ ಯಥೇಚ್ಛ ‘ಹೂಕುಂಡ’ಗಳು ದೊರೆತಿವೆ. ಕೌಶಲ ಇದ್ದರೆ ಕಸದಿಂದಲೂ ರಸ ತೆಗೆಯಬಹುದು ಎಂಬುದನ್ನು ಈ ಮಹಿಳೆ ಸಾಬೀತು ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಈ ಚಿತ್ರವನ್ನು ಕಂಡಾಗ ‘ವಾವ್!’ ಎಂಬ ‘ಉದ್ಗಾರ’ ಬರದಿರಲು ಸಾಧ್ಯವಿಲ್ಲ. ಅಶ್ರುವಾಯು ಗ್ರೆನೇಡ್ಗಳ ಉಳಿದಿರುವ ಭಾಗವನ್ನೇ ಬಳಸಿ ಈ ಮಹಿಳೆ ಮಾಡಿರುವ ಹೂದೋಟ ಎಂಥವರನ್ನೂ ಆಕರ್ಷಿಸುತ್ತದೆ.<br /> <br /> ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವಿನ ಸಂಘರ್ಷಕ್ಕೆ ಕೊನೆ ಇಂದಿಗೂ ದೊರಕಿಲ್ಲ. ಎರಡೂ ದೇಶಗಳ ನಡುವೆ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದ್ದು, ಅಪಾರ ಸಾವು, ನೋವು ಸಂಭವಿಸಿದೆ.<br /> <br /> ಸಂಘರ್ಷ ಕೊನೆಗೊಂಡು ಶಾಂತಿಯಿಂದ ಜೀವನ ಸಾಗಿಸಬೇಕು ಎಂದು ಕನಸು ಕಾಣುವ ಅದೆಷ್ಟೋ ಮಂದಿ ಎರಡೂ ದೇಶಗಳಲ್ಲಿದ್ದಾರೆ. ಬಂದೂಕು ಹಾಗೂ ಬಾಂಬ್ಗಳ ಸದ್ದಿನ ನಡುವೆಯೂ ಶಾಂತಿಯ ಸಂದೇಶ ಸಾರಲು ಹಲವರು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಅವರು ವಿವಿಧ ಹಾದಿಗಳನ್ನು ಕಂಡುಕೊಂಡಿದ್ದಾರೆ.<br /> <br /> ಇಂತಹ ಪ್ರಯತ್ನದ ದಾರಿ ಹಿಡಿದ ಪ್ಯಾಲೆಸ್ಟೀನ್ನ ರಮಲ್ಲಾ ಪಟ್ಟಣದ ಬಳಿಯ ಬಿಲಿನ್ ಎಂಬ ಗ್ರಾಮದ ಮಹಿಳೆಯೊಬ್ಬರ ಶಾಂತಿಯ ಸಂದೇಶ ಜಗತ್ತಿನ ಗಮನ ಸೆಳೆದಿದೆ. <br /> <br /> ಈ ಮಹಿಳೆ ತನ್ನ ಮನೆಯ ಹಿತ್ತಲಿನಲ್ಲಿ ಒಂದು ಸುಂದರ ಉದ್ಯಾನವನ ನಿರ್ಮಿಸಿದ್ದಾರೆ. ಹಲವು ಬಗೆಯ ಹೂಗಳಿಂದ ಉದ್ಯಾನ ಕಂಗೊಳಿಸುತ್ತಿದೆ. ಇದರ ವಿಶೇಷತೆಯೆಂದರೆ ಇಲ್ಲಿರುವ ಗಿಡಗಳನ್ನು ಹೂಕುಂಡದಲ್ಲಿ ಬೆಳೆಸಿಲ್ಲ.<br /> <br /> ಬದಲಾಗಿ ಇಸ್ರೇಲಿನ ಸೈನಿಕರು ಸಿಡಿಸಿರುವ ಅಶ್ರುವಾಯು ಗ್ರೆನೇಡ್ಗಳ ಉಳಿದಿರುವ ಭಾಗವನ್ನೇ (ಕ್ಯಾನಿಸ್ಟರ್ಗಳು – ಲೋಹದ ಚಿಕ್ಕ ಡಬ್ಬಿ) ಹೂಕುಂಡದ ರೀತಿಯಲ್ಲಿ ಬಳಸಿಕೊಂಡಿದ್ದಾರೆ!<br /> <br /> ಪ್ಯಾಲೆಸ್ಟೀನ್ ಪ್ರತಿಭಟನಾಕಾರರನ್ನು ಚದುರಿಸಲು ಇಸ್ರೇಲ್ ಸೈನಿಕರು ಅಶ್ರುವಾಯು ಗ್ರೆನೇಡ್ಗಳನ್ನು ಬಳಸುತ್ತಾರೆ. ರಮಲ್ಲಾ ಪ್ರದೇಶದಲ್ಲಿ ಸಂಘರ್ಷ, ಪ್ರತಿಭಟನೆ ನಡೆಯುವುದು ಸಾಮಾನ್ಯ. ಆದ್ದರಿಂದ ಈಕೆಗೆ ಯಥೇಚ್ಛ ‘ಹೂಕುಂಡ’ಗಳು ದೊರೆತಿವೆ. ಕೌಶಲ ಇದ್ದರೆ ಕಸದಿಂದಲೂ ರಸ ತೆಗೆಯಬಹುದು ಎಂಬುದನ್ನು ಈ ಮಹಿಳೆ ಸಾಬೀತು ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>