<p><strong>ಆನೇಕಲ್:</strong> ಶಾಲಾ ಕೊಠಡಿಯಲ್ಲಿ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಇಡಲಾಗಿದೆ ಎಂದು ಭಾವಿಸಿ ಕೆಲ ಕಿಡಿಗೇಡಿಗಳು ಪಟ್ಟಣದ ಎಎಸ್ಬಿ ಸರ್ಕಾರಿ ಪ್ರೌಢಶಾಲೆಯ ಕೊಠಡಿಗಳ ಬೀಗ ಮುರಿದು ಪ್ರಶ್ನೆ ಪತ್ರಿಕೆಗಳಿಗಾಗಿ ಹುಡುಕಾಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.<br /> <br /> ಸೋಮವಾರ ಪೂರಕ ಪರೀಕ್ಷೆಯಿತ್ತು. ಈ ಹಿನ್ನೆಲೆಯಲ್ಲಿ ಪ್ರಶ್ನೆಪತ್ರಿಕೆಗಳು ಸಿಗಬಹುದೆಂದು ಶಾಲೆಯ ಕಚೇರಿ ಹಾಗೂ ಸಿಬ್ಬಂದಿ ಕೊಠಡಿಗಳ ಬೀಗ ಮುರಿದು ಪ್ರಶ್ನೆಪತ್ರಿಕೆಗಾಗಿ ಹುಡುಕಾಡಿ ಬೇಸ್ತುಬಿದ್ದಿದ್ದಾರೆ.<br /> <br /> ಶಿಕ್ಷಕರು ಬೆಳಿಗ್ಗೆ ಶಾಲೆಗೆ ಹೋಗುತ್ತಿದ್ದಂತೆಯೇ ಬೀಗ ಮುರಿದ ಕೊಠಡಿಗಳು ಕಂಡವು. ಆದರೆ ಬೇರಾವುದೇ ವಸ್ತುಗಳು ಕಳುವಾಗಿರಲಿಲ್ಲ.<br /> <br /> ಸೋಮವಾರ ನಡೆದ ಪೂರಕ ಪರೀಕ್ಷೆಯಲ್ಲಿ 177 ವಿದ್ಯಾರ್ಥಿಗಳು ಗಣಿತ ಪರೀಕ್ಷೆ ಬರೆದರು. `ಬೀಗ ಮುರಿದು ಪ್ರಶ್ನೆಪತ್ರಿಕೆ ಕಳವು ಮಾಡಲಾಗಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಪ್ರಶ್ನೆಪತ್ರಿಕೆಗಳನ್ನು ಪ್ರತಿದಿನ ಪರೀಕ್ಷೆಗೆ ಮುಂಚಿತವಾಗಿ ಖಜಾನೆಯಿಂದ ತರಲಾಗುತ್ತದೆ' ಎಂದು ಶಿಕ್ಷಕರು ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್:</strong> ಶಾಲಾ ಕೊಠಡಿಯಲ್ಲಿ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಇಡಲಾಗಿದೆ ಎಂದು ಭಾವಿಸಿ ಕೆಲ ಕಿಡಿಗೇಡಿಗಳು ಪಟ್ಟಣದ ಎಎಸ್ಬಿ ಸರ್ಕಾರಿ ಪ್ರೌಢಶಾಲೆಯ ಕೊಠಡಿಗಳ ಬೀಗ ಮುರಿದು ಪ್ರಶ್ನೆ ಪತ್ರಿಕೆಗಳಿಗಾಗಿ ಹುಡುಕಾಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.<br /> <br /> ಸೋಮವಾರ ಪೂರಕ ಪರೀಕ್ಷೆಯಿತ್ತು. ಈ ಹಿನ್ನೆಲೆಯಲ್ಲಿ ಪ್ರಶ್ನೆಪತ್ರಿಕೆಗಳು ಸಿಗಬಹುದೆಂದು ಶಾಲೆಯ ಕಚೇರಿ ಹಾಗೂ ಸಿಬ್ಬಂದಿ ಕೊಠಡಿಗಳ ಬೀಗ ಮುರಿದು ಪ್ರಶ್ನೆಪತ್ರಿಕೆಗಾಗಿ ಹುಡುಕಾಡಿ ಬೇಸ್ತುಬಿದ್ದಿದ್ದಾರೆ.<br /> <br /> ಶಿಕ್ಷಕರು ಬೆಳಿಗ್ಗೆ ಶಾಲೆಗೆ ಹೋಗುತ್ತಿದ್ದಂತೆಯೇ ಬೀಗ ಮುರಿದ ಕೊಠಡಿಗಳು ಕಂಡವು. ಆದರೆ ಬೇರಾವುದೇ ವಸ್ತುಗಳು ಕಳುವಾಗಿರಲಿಲ್ಲ.<br /> <br /> ಸೋಮವಾರ ನಡೆದ ಪೂರಕ ಪರೀಕ್ಷೆಯಲ್ಲಿ 177 ವಿದ್ಯಾರ್ಥಿಗಳು ಗಣಿತ ಪರೀಕ್ಷೆ ಬರೆದರು. `ಬೀಗ ಮುರಿದು ಪ್ರಶ್ನೆಪತ್ರಿಕೆ ಕಳವು ಮಾಡಲಾಗಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಪ್ರಶ್ನೆಪತ್ರಿಕೆಗಳನ್ನು ಪ್ರತಿದಿನ ಪರೀಕ್ಷೆಗೆ ಮುಂಚಿತವಾಗಿ ಖಜಾನೆಯಿಂದ ತರಲಾಗುತ್ತದೆ' ಎಂದು ಶಿಕ್ಷಕರು ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>