<p>ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರ ಆಯ್ದ ನಾಟಕಗಳ ಉತ್ಸವವನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಯೋಜಿಸಲು ಕರ್ನಾಟಕ ನಾಟಕ ಅಕಾಡೆಮಿ ಚಿಂತನೆ ನಡೆಸಿದೆ. <br /> <br /> ಅಕಾಡೆಮಿಯ ಈ ಯೋಜನೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆಯೂ ದೊರೆತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ ಶಿವರಾತ್ರಿಯ ದಿನ ಆರಂಭವಾಗಲಿರುವ ನಾಟಕೋತ್ಸವ ಮೂರು ತಿಂಗಳ ಕಾಲ ನಡೆಯಲಿದೆ. <br /> <br /> ಡಾ. ಕಂಬಾರರ ಒಟ್ಟು 17 ನಾಟಕಗಳ ಪೈಕಿ ಎಂಟು ನಾಟಕಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದ್ದು, ರಾಜ್ಯದಾದ್ಯಂತ ಒಟ್ಟು 15 ನಾಟಕ ತಂಡಗಳನ್ನು ಗುರುತಿಸಲಾಗುತ್ತದೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಒಂದು ಅಥವಾ ಎರಡು ದಿನಗಳ ನಾಟಕೋತ್ಸವವನ್ನು ಆಯೋಜಿಸಲಾಗುವುದು. 55 ಲಕ್ಷ ರೂಪಾಯಿ ಅಂದಾಜು ವೆಚ್ಚದ ಈ ಯೋಜನೆ ಕುರಿತು ಸಚಿವ ಕಾರಜೋಳ ಉತ್ಸುಕತೆ ತೋರಿದ್ದಾರೆ ಎಂದು ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್ ತಿಳಿಸಿದರು.<br /> <br /> `ಡಾ. ಕಂಬಾರ ಅವರು ಕನ್ನಡಕ್ಕೆ ಎಂಟನೆಯ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಸಾಂಸ್ಕೃತಿಕ ಲೋಕದ ನಾಯಕನ ಸ್ಥಾನದಲ್ಲಿರುವ ಕಂಬಾರರ ನಾಟಕಗಳ ಉತ್ಸವಕ್ಕೆ ಅವರು ಹುಟ್ಟಿದ ಊರು ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲೇ ಚಾಲನೆ ನೀಡಲಾಗುವುದು. ಉತ್ಸವದ ಉದ್ಘಾಟನೆಯನ್ನು ಕಂಬಾರರೇ ಮಾಡಲಿದ್ದಾರೆ. <br /> <br /> ನಂತರ ಪ್ರತಿ ಜಿಲ್ಲಾ ಕೇಂದ್ರದಲ್ಲಿ ತಲಾ ಮೂರು ನಾಟಕಗಳು ಪ್ರದರ್ಶನ ಕಾಣಲಿವೆ~ ಎಂದು ಮಾಲತಿ ಮಾಹಿತಿ ನೀಡಿದರು.<br /> <br /> ಸಂಗ್ಯಾಬಾಳ್ಯ, ಜೋಕುಮಾರಸ್ವಾಮಿ, ಶಿವರಾತ್ರಿ, ಬೆಪ್ಪುತಕ್ಕಡಿ ಭೋಳೆಶಂಕರ, ಸಾಂಬಶಿವ ಪ್ರಹಸನ, ನಾಯಿಕತೆ, ಕರಿಮಾಯಿ ಮತ್ತಿತರ ನಾಟಕಗಳನ್ನು ಈ ಉತ್ಸವಕ್ಕೆ ಆಯ್ಕೆ ಮಾಡಲಾಗಿದೆ.<br /> <br /> ಏಕೆ ಈ ಉತ್ಸವ: `ಜ್ಞಾನಪೀಠ ಪ್ರಶಸ್ತಿಯ ಮಹತ್ವ ಏನು? ಕನ್ನಡದ ಪ್ರಮುಖ ನಾಟಕಕಾರರೊಬ್ಬರಿಗೆ ಈ ಬಾರಿ ಜ್ಞಾನಪೀಠ ಪ್ರಶಸ್ತಿ ದೊರೆತಿರುವ ಕಾರಣ ಏನು? ಅವರ ನಾಟಕಗಳಲ್ಲಿರುವ ದೇಸಿ ಸಂಸ್ಕೃತಿಯ ಪ್ರತಿಪಾದನೆ ಕುರಿತು ನಾಡಿನ ಅನೇಕರಿಗೆ ಇನ್ನೂ ಸ್ಪಷ್ಟ ಅರಿವಿಲ್ಲ~ ಎನ್ನುವ ಮಾಲತಿ ಅವರು, `ಕಾದಂಬರಿಗಳನ್ನು ಓದುವ ಸಂಸ್ಕೃತಿಯಿಂದಲೇ ಜನ ದೂರವಾಗುತ್ತಿದ್ದಾರೆ, ಇನ್ನು ನಾಟಕಗಳನ್ನು ಓದುವವರು ಎಲ್ಲಿದ್ದಾರೆ ಎಂಬ ಪ್ರಶ್ನೆಗಳನ್ನಿಟ್ಟುಕೊಂಡು ಈ ನಾಟಕೋತ್ಸವಕ್ಕೆ ಮುಂದಾಗಿದ್ದೇವೆ~ ಎಂದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರ ಆಯ್ದ ನಾಟಕಗಳ ಉತ್ಸವವನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಯೋಜಿಸಲು ಕರ್ನಾಟಕ ನಾಟಕ ಅಕಾಡೆಮಿ ಚಿಂತನೆ ನಡೆಸಿದೆ. <br /> <br /> ಅಕಾಡೆಮಿಯ ಈ ಯೋಜನೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆಯೂ ದೊರೆತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ ಶಿವರಾತ್ರಿಯ ದಿನ ಆರಂಭವಾಗಲಿರುವ ನಾಟಕೋತ್ಸವ ಮೂರು ತಿಂಗಳ ಕಾಲ ನಡೆಯಲಿದೆ. <br /> <br /> ಡಾ. ಕಂಬಾರರ ಒಟ್ಟು 17 ನಾಟಕಗಳ ಪೈಕಿ ಎಂಟು ನಾಟಕಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದ್ದು, ರಾಜ್ಯದಾದ್ಯಂತ ಒಟ್ಟು 15 ನಾಟಕ ತಂಡಗಳನ್ನು ಗುರುತಿಸಲಾಗುತ್ತದೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಒಂದು ಅಥವಾ ಎರಡು ದಿನಗಳ ನಾಟಕೋತ್ಸವವನ್ನು ಆಯೋಜಿಸಲಾಗುವುದು. 55 ಲಕ್ಷ ರೂಪಾಯಿ ಅಂದಾಜು ವೆಚ್ಚದ ಈ ಯೋಜನೆ ಕುರಿತು ಸಚಿವ ಕಾರಜೋಳ ಉತ್ಸುಕತೆ ತೋರಿದ್ದಾರೆ ಎಂದು ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್ ತಿಳಿಸಿದರು.<br /> <br /> `ಡಾ. ಕಂಬಾರ ಅವರು ಕನ್ನಡಕ್ಕೆ ಎಂಟನೆಯ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಸಾಂಸ್ಕೃತಿಕ ಲೋಕದ ನಾಯಕನ ಸ್ಥಾನದಲ್ಲಿರುವ ಕಂಬಾರರ ನಾಟಕಗಳ ಉತ್ಸವಕ್ಕೆ ಅವರು ಹುಟ್ಟಿದ ಊರು ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲೇ ಚಾಲನೆ ನೀಡಲಾಗುವುದು. ಉತ್ಸವದ ಉದ್ಘಾಟನೆಯನ್ನು ಕಂಬಾರರೇ ಮಾಡಲಿದ್ದಾರೆ. <br /> <br /> ನಂತರ ಪ್ರತಿ ಜಿಲ್ಲಾ ಕೇಂದ್ರದಲ್ಲಿ ತಲಾ ಮೂರು ನಾಟಕಗಳು ಪ್ರದರ್ಶನ ಕಾಣಲಿವೆ~ ಎಂದು ಮಾಲತಿ ಮಾಹಿತಿ ನೀಡಿದರು.<br /> <br /> ಸಂಗ್ಯಾಬಾಳ್ಯ, ಜೋಕುಮಾರಸ್ವಾಮಿ, ಶಿವರಾತ್ರಿ, ಬೆಪ್ಪುತಕ್ಕಡಿ ಭೋಳೆಶಂಕರ, ಸಾಂಬಶಿವ ಪ್ರಹಸನ, ನಾಯಿಕತೆ, ಕರಿಮಾಯಿ ಮತ್ತಿತರ ನಾಟಕಗಳನ್ನು ಈ ಉತ್ಸವಕ್ಕೆ ಆಯ್ಕೆ ಮಾಡಲಾಗಿದೆ.<br /> <br /> ಏಕೆ ಈ ಉತ್ಸವ: `ಜ್ಞಾನಪೀಠ ಪ್ರಶಸ್ತಿಯ ಮಹತ್ವ ಏನು? ಕನ್ನಡದ ಪ್ರಮುಖ ನಾಟಕಕಾರರೊಬ್ಬರಿಗೆ ಈ ಬಾರಿ ಜ್ಞಾನಪೀಠ ಪ್ರಶಸ್ತಿ ದೊರೆತಿರುವ ಕಾರಣ ಏನು? ಅವರ ನಾಟಕಗಳಲ್ಲಿರುವ ದೇಸಿ ಸಂಸ್ಕೃತಿಯ ಪ್ರತಿಪಾದನೆ ಕುರಿತು ನಾಡಿನ ಅನೇಕರಿಗೆ ಇನ್ನೂ ಸ್ಪಷ್ಟ ಅರಿವಿಲ್ಲ~ ಎನ್ನುವ ಮಾಲತಿ ಅವರು, `ಕಾದಂಬರಿಗಳನ್ನು ಓದುವ ಸಂಸ್ಕೃತಿಯಿಂದಲೇ ಜನ ದೂರವಾಗುತ್ತಿದ್ದಾರೆ, ಇನ್ನು ನಾಟಕಗಳನ್ನು ಓದುವವರು ಎಲ್ಲಿದ್ದಾರೆ ಎಂಬ ಪ್ರಶ್ನೆಗಳನ್ನಿಟ್ಟುಕೊಂಡು ಈ ನಾಟಕೋತ್ಸವಕ್ಕೆ ಮುಂದಾಗಿದ್ದೇವೆ~ ಎಂದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>