<p><strong>ಮೊಳಕಾಲ್ಮುರು: </strong>‘ಒಂದೆಡೆ ಮಳೆ ಇಲ್ಲ... ಮತ್ತೊಂದೆಡೆ ಅಂತರ್ಜಲ ಬಳಸಿಕೊಂಡು ಕೃಷಿ ಮಾಡಲು ಎಷ್ಟೇ ಆಳಕ್ಕೆ ಕೊರೆಸಿದರೂ ದೊರೆಯದ ನೀರು, ಪರಿಣಾಮ ಯಾವುದೇ ಪರ್ಯಾಯ ಮಾರ್ಗ ಕಾಣದೇ ಇರುವ ಕಿಂಚತ್ತು ನೀರಿನಲ್ಲಿ ಕೃಷಿ ಮಾಡಬೇಕು ಅಥವಾ ತೋಟ ಬೀಳು ಬಿಡಬೇಕು...!<br /> –ಇದು ಸಧ್ಯದ ತಾಲ್ಲೂಕಿನ ನೀರಾವರಿ ಪ್ರದೇಶದಲ್ಲಿದ ಕೃಷಿ ಚಿತ್ರಣ.<br /> <br /> ‘ತಾಲ್ಲೂಕಿನ ಮಳೆಯಾಶ್ರಿತ ಪ್ರದೇಶದ ಪ್ರಮುಖ ಬೆಳೆ ಶೇಂಗಾ, ಇದೇ ರೀತಿ ಹತ್ತಾರು ವರ್ಷಗಳಿಂದ ಮುಂಗಾರು ಹಂಗಾಮಿನಲ್ಲಿ <br /> ನೀರಾವರಿ ಪ್ರದೇಶದ ಮುಖ್ಯ ವಾಣಿಜ್ಯ ಬೆಳೆಯಾಗಿ ಈರುಳ್ಳಿ ಹೊರಹೊಮ್ಮಿದೆ. ಜೂನ್ನಿಂದ ಡಿಸೆಂಬರ್ಗೆ ಕೂಲಿ ಕಾರ್ಮಿಕರಿಗೆ ಆಸರೆ ಆಗಿರುವುದು ಮುಖ್ಯವಾಗಿ ಈರುಳ್ಳಿ ಎನ್ನಲಾಗಿದೆ.<br /> <br /> ತೋಟಗಾರಿಕೆ ಇಲಾಖೆ ತಾಲ್ಲೂಕು ಸಹಾಯಕ ನಿರ್ದೇಶಕ ರವಿಕುಮಾರ್ ಮಾಹಿತಿ ನೀಡಿ, ‘ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ 1200–1300 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ನಾಟಿ ಮಾಡಿವ ಗುರಿ ಹೊಂದಲಾಗಿದೆ. ಇದು ಕಳೆದ ವರ್ಷ 300 ಹೆಕ್ಟೇರ್ನಷ್ಟು ಕುಸಿತವಾಗಿತ್ತು.<br /> <br /> ಈ ಬಾರಿ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ತೀವ್ರ ಕುಸಿತವಾಗಿರುವಮತ್ತು ಮುಂಗಾರು ತಡವಾಗಿ ಆರಂಭವಾದ ಕಾರಣ 450–500 ಹೆಕ್ಟೇರ್ನಲ್ಲಿ ಮಾತ್ರ ನಾಟಿಯಾಗುವ ಮೂಲಕ ಶೇ 50ಕ್ಕೂ ಹೆಚ್ಚು ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಿದರು.<br /> <br /> ಮೊಳಕಾಲ್ಮುರು ಕಸಬಾ ಹೋಬಳಿ ವ್ಯಾಪ್ತಿ ಬಿ.ಜಿ.ಕೆರೆ, ಚಿಕ್ಕೋಬನಹಳ್ಳಿ, ಮುತ್ತಿಗಾರಹಳ್ಳಿ, ಕೋನಸಾಗರ, ಸೂರಮ್ಮನ ಹಳ್ಳಿ, ರಾಯಾಪುರ, ಹಾನಗಲ್, ಪೂಜಾರಹಳ್ಳಿ, ತುಮಕೂರ್ಲ ಹಳ್ಳಿ ಮುಂತಾದ ಗ್ರಾಮಗಳ ವ್ಯಾಪ್ತಿಯಲ್ಲಿ ಹೆಚ್ಚು ಈರುಳ್ಳಿ ನಾಟಿ ಮಾಡಲಾಗಿದೆ.</p>.<p>ದೇವಸಮುದ್ರ ಹೋಬಳಿಯಲ್ಲಿ ತೀರಾ ಕಡಿಮೆ ನಾಟಿ ಮಾಡಲಾಗಿದೆ. ಮೇ ಅಂತ್ಯಕ್ಕೆ ಬಹುತೇಕ ನಾಟಿ ಮಾಡಿದ್ದು ಈಗ 55–60 ದಿನದ ಬೆಳೆಯಿದೆ ಎಂದರು.<br /> <br /> <strong>ಕಂಡುಬಂದ ರೋಗಗಳು;</strong> ತೋಟಗಳಿಗೆ ಭೇಟಿ ನೀಡಿದ ವೇಳೆ ಮುಖ್ಯವಾಗಿ ‘ನೇರಳೆಮಚ್ಚೆ’ ಹಾಗೂ ‘ಬುಡಕೊಳೆ ರೋಗ’ ಮುಖ್ಯವಾಗಿದೆ ಕಾಣಸಿಕ್ಕಿದೆ. ನೇರಳೆಮಚ್ಚೆ ರೋಗಕ್ಕೆ‘ ಕವಾಚ್’ ಪ್ರತಿ ಲೀಟರ್ಗೆ 2 ಗ್ರಾಂ ಮಿಶ್ರಣ ಮಾಡಿ ಅಥವಾ ‘ಕಾರ್ಬನ್ಡೈಜಾಕ್ಸೈಡ್’ ಪ್ರತಿ ಲೀಟರ್ಗೆ ಒಂದು ಗ್ರಾಂ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು.</p>.<p>ಬುಡಕೊಳೆ ರೋಗಕ್ಕೆ‘ ರೆಡೋಮಿಲ್’ ಪ್ರತಿ ಲೀಟರ್ಗೆ 2 ಗ್ರಾಂ ಮಿಶ್ರಣ ಮಾಡಿ ಸಿಂಪರಣೆ ಮಾಡಬಹುದು ಎಂದು ತೋಟಗಾರಿಕೆ ಮೂಲಗಳು ತಿಳಿಸಿವೆ.<br /> ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸುವ ಮೂಲಕ ಬೆಳೆಗಾರರು ಉತ್ತಮ ಬೆಳೆ ಪಡೆದುಕೊಳ್ಳಲು ಮುಂದಾಗಬೇಕು ಎಂದು ಮನವಿ ಮಾಡಲಾಗಿದೆ.</p>.<p>*<br /> ಅನೇಕ ಕಡೆ ಜಿಂಕ್, ಪೊಟ್ಯಾಷ್ ಮುಂತಾದ ಜೀವಸತ್ವಗಳ ಕೊರತೆ ಕಂಡುಬಂದಿದೆ. ಅವುಗಳನ್ನು ನಿರ್ವಹಣೆ ಮಾಡಿದರೆ ಇಳುವರಿ ಸಾಧ್ಯ<br /> <em><strong>– ರವಿಕುಮಾರ್,<br /> ತೋಟಗಾರಿಕೆ ಇಲಾಖೆ ಅಧಿಕಾರಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೊಳಕಾಲ್ಮುರು: </strong>‘ಒಂದೆಡೆ ಮಳೆ ಇಲ್ಲ... ಮತ್ತೊಂದೆಡೆ ಅಂತರ್ಜಲ ಬಳಸಿಕೊಂಡು ಕೃಷಿ ಮಾಡಲು ಎಷ್ಟೇ ಆಳಕ್ಕೆ ಕೊರೆಸಿದರೂ ದೊರೆಯದ ನೀರು, ಪರಿಣಾಮ ಯಾವುದೇ ಪರ್ಯಾಯ ಮಾರ್ಗ ಕಾಣದೇ ಇರುವ ಕಿಂಚತ್ತು ನೀರಿನಲ್ಲಿ ಕೃಷಿ ಮಾಡಬೇಕು ಅಥವಾ ತೋಟ ಬೀಳು ಬಿಡಬೇಕು...!<br /> –ಇದು ಸಧ್ಯದ ತಾಲ್ಲೂಕಿನ ನೀರಾವರಿ ಪ್ರದೇಶದಲ್ಲಿದ ಕೃಷಿ ಚಿತ್ರಣ.<br /> <br /> ‘ತಾಲ್ಲೂಕಿನ ಮಳೆಯಾಶ್ರಿತ ಪ್ರದೇಶದ ಪ್ರಮುಖ ಬೆಳೆ ಶೇಂಗಾ, ಇದೇ ರೀತಿ ಹತ್ತಾರು ವರ್ಷಗಳಿಂದ ಮುಂಗಾರು ಹಂಗಾಮಿನಲ್ಲಿ <br /> ನೀರಾವರಿ ಪ್ರದೇಶದ ಮುಖ್ಯ ವಾಣಿಜ್ಯ ಬೆಳೆಯಾಗಿ ಈರುಳ್ಳಿ ಹೊರಹೊಮ್ಮಿದೆ. ಜೂನ್ನಿಂದ ಡಿಸೆಂಬರ್ಗೆ ಕೂಲಿ ಕಾರ್ಮಿಕರಿಗೆ ಆಸರೆ ಆಗಿರುವುದು ಮುಖ್ಯವಾಗಿ ಈರುಳ್ಳಿ ಎನ್ನಲಾಗಿದೆ.<br /> <br /> ತೋಟಗಾರಿಕೆ ಇಲಾಖೆ ತಾಲ್ಲೂಕು ಸಹಾಯಕ ನಿರ್ದೇಶಕ ರವಿಕುಮಾರ್ ಮಾಹಿತಿ ನೀಡಿ, ‘ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ 1200–1300 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ನಾಟಿ ಮಾಡಿವ ಗುರಿ ಹೊಂದಲಾಗಿದೆ. ಇದು ಕಳೆದ ವರ್ಷ 300 ಹೆಕ್ಟೇರ್ನಷ್ಟು ಕುಸಿತವಾಗಿತ್ತು.<br /> <br /> ಈ ಬಾರಿ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ತೀವ್ರ ಕುಸಿತವಾಗಿರುವಮತ್ತು ಮುಂಗಾರು ತಡವಾಗಿ ಆರಂಭವಾದ ಕಾರಣ 450–500 ಹೆಕ್ಟೇರ್ನಲ್ಲಿ ಮಾತ್ರ ನಾಟಿಯಾಗುವ ಮೂಲಕ ಶೇ 50ಕ್ಕೂ ಹೆಚ್ಚು ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಿದರು.<br /> <br /> ಮೊಳಕಾಲ್ಮುರು ಕಸಬಾ ಹೋಬಳಿ ವ್ಯಾಪ್ತಿ ಬಿ.ಜಿ.ಕೆರೆ, ಚಿಕ್ಕೋಬನಹಳ್ಳಿ, ಮುತ್ತಿಗಾರಹಳ್ಳಿ, ಕೋನಸಾಗರ, ಸೂರಮ್ಮನ ಹಳ್ಳಿ, ರಾಯಾಪುರ, ಹಾನಗಲ್, ಪೂಜಾರಹಳ್ಳಿ, ತುಮಕೂರ್ಲ ಹಳ್ಳಿ ಮುಂತಾದ ಗ್ರಾಮಗಳ ವ್ಯಾಪ್ತಿಯಲ್ಲಿ ಹೆಚ್ಚು ಈರುಳ್ಳಿ ನಾಟಿ ಮಾಡಲಾಗಿದೆ.</p>.<p>ದೇವಸಮುದ್ರ ಹೋಬಳಿಯಲ್ಲಿ ತೀರಾ ಕಡಿಮೆ ನಾಟಿ ಮಾಡಲಾಗಿದೆ. ಮೇ ಅಂತ್ಯಕ್ಕೆ ಬಹುತೇಕ ನಾಟಿ ಮಾಡಿದ್ದು ಈಗ 55–60 ದಿನದ ಬೆಳೆಯಿದೆ ಎಂದರು.<br /> <br /> <strong>ಕಂಡುಬಂದ ರೋಗಗಳು;</strong> ತೋಟಗಳಿಗೆ ಭೇಟಿ ನೀಡಿದ ವೇಳೆ ಮುಖ್ಯವಾಗಿ ‘ನೇರಳೆಮಚ್ಚೆ’ ಹಾಗೂ ‘ಬುಡಕೊಳೆ ರೋಗ’ ಮುಖ್ಯವಾಗಿದೆ ಕಾಣಸಿಕ್ಕಿದೆ. ನೇರಳೆಮಚ್ಚೆ ರೋಗಕ್ಕೆ‘ ಕವಾಚ್’ ಪ್ರತಿ ಲೀಟರ್ಗೆ 2 ಗ್ರಾಂ ಮಿಶ್ರಣ ಮಾಡಿ ಅಥವಾ ‘ಕಾರ್ಬನ್ಡೈಜಾಕ್ಸೈಡ್’ ಪ್ರತಿ ಲೀಟರ್ಗೆ ಒಂದು ಗ್ರಾಂ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು.</p>.<p>ಬುಡಕೊಳೆ ರೋಗಕ್ಕೆ‘ ರೆಡೋಮಿಲ್’ ಪ್ರತಿ ಲೀಟರ್ಗೆ 2 ಗ್ರಾಂ ಮಿಶ್ರಣ ಮಾಡಿ ಸಿಂಪರಣೆ ಮಾಡಬಹುದು ಎಂದು ತೋಟಗಾರಿಕೆ ಮೂಲಗಳು ತಿಳಿಸಿವೆ.<br /> ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸುವ ಮೂಲಕ ಬೆಳೆಗಾರರು ಉತ್ತಮ ಬೆಳೆ ಪಡೆದುಕೊಳ್ಳಲು ಮುಂದಾಗಬೇಕು ಎಂದು ಮನವಿ ಮಾಡಲಾಗಿದೆ.</p>.<p>*<br /> ಅನೇಕ ಕಡೆ ಜಿಂಕ್, ಪೊಟ್ಯಾಷ್ ಮುಂತಾದ ಜೀವಸತ್ವಗಳ ಕೊರತೆ ಕಂಡುಬಂದಿದೆ. ಅವುಗಳನ್ನು ನಿರ್ವಹಣೆ ಮಾಡಿದರೆ ಇಳುವರಿ ಸಾಧ್ಯ<br /> <em><strong>– ರವಿಕುಮಾರ್,<br /> ತೋಟಗಾರಿಕೆ ಇಲಾಖೆ ಅಧಿಕಾರಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>