<p>ಸ್ವಾಮಿಗಳಾದವರು, ‘ಹೆಚ್ಚಿಗೆ ಪಾರಮಾರ್ಥಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಸಮಾಜ ಹಾಗೂ ಭಕ್ತ ಸಮುದಾಯವನ್ನು ಆ ಕಡೆಗೆ ನಡೆಸಬೇಕೆಂಬ ಎಚ್ ಗುಂಡೂರಾವ್ ಅವರ ಬಿನ್ನಹ (ಪ್ರ.ವಾ. ಮಾ. 11) ಹೈಪರ್ ಉತ್ಸಾಹೀ ಪಾರಿವ್ರಾಜಕರ ಕಿವಿಮುಟ್ಟಬೇಕಾದಂಥದು!<br /> <br /> ತ್ಯಾಗದ್ದೇ ಜೀವಂತ ಸ್ವರೂಪರೆಂಬ ನೆಲೆಯಲ್ಲಿ, ಸರ್ವಸಂಗಪರಿತ್ಯಾಗಿ ಸನ್ಯಾಸಿಗಳ ಅಸ್ತಿತ್ವ. ವೈರಾಗ್ಯ ಜೀವನಕ್ಕೆ ಸ್ವಯಂ ಉದಾಹರಣೆಯಾಗಿ ಸಾಮಾಜಿಕ ಪರಿಸ್ಥಿತಿಯ ಮೇಲೆ ಅನೇಕರ ಮೇಲೆ ಪರಿಣಾಮ ಬೀರಬೇಕಾಗಿದೆ. ಆದರೆ ಅದು ಯಶಸ್ವಿಯಾಗಿದ್ದರೆ ನಾವು ಹೀಗೆ ನೀತಿಗೆಟ್ಟಿರುತ್ತಿರಲಿಲ್ಲ! <br /> <br /> ಇಲ್ಲಿ ‘ರಾಜೀನಾಮೆ ನೀಡಿ, ಮಧ್ಯಂತರ ಚುನಾವಣೆಗೆ ಸಿದ್ಧರಾಗಿ’ ಎಂದು ಸನ್ಯಾಸಿಯೊಬ್ಬರು ಮುಖ್ಯಮಂತ್ರಿಗೆ ಸಲಹೆ ನೀಡುತ್ತಾರೆ; ಇನ್ನೊಬ್ಬರು, ಸರ್ಕಾರದ ಪ್ರಾತಿನಿಧ್ಯವನ್ನು ತಾವೇ ಆರೋಪಿಸಿಕೊಂಡು ವಿವಾದಿತ ಉದ್ಯಮಪತಿಗಳನ್ನು ರಾಜೀ-ಸಂಧಾನಕ್ಕೆ ಕರೆಯುತ್ತಾರೆ! <br /> <br /> ವಿರಕ್ತರೆನ್ನಲಾಗುವವರು, ತಮ್ಮ ಅಸ್ತಿತ್ವದ ನೈಜ ಜವಾಬ್ದಾರಿಯನ್ನೇ ಬಿಟ್ಟು, ಇಲ್ಲದ ಲೌಕಿಕ ಅಧಿಕಾರಗಳನ್ನು ಆರೊಪಿಸಿಕೊಂಡು ಮುಗ್ಧಜನರ ಮಾರ್ಗ ತಪ್ಪಿಸುವುದು, ವಿಭೂತಿ-ರುದ್ರಾಕ್ಷಿ, ಪಟ್ಟೆ ನಾಮ-ತುಳಸೀ ಮಾಲೆಗಳ ವೇಷ, ಆವೇಶದಿಂದ ಮಠ-ಮಂದಿರಗಳ ಆಶ್ರಯದಲ್ಲಿ, ನಡೆಯುವ ಅದ್ದೂರಿಯ ಯಾಗ-ಯಜ್ಞಾದಿಗಳಿಗಿಂತಾ ಹೆಚ್ಚು ಅಪಾಯಕಾರಿ ಮೂಢ ನಂಬಿಕೆ! </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸ್ವಾಮಿಗಳಾದವರು, ‘ಹೆಚ್ಚಿಗೆ ಪಾರಮಾರ್ಥಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಸಮಾಜ ಹಾಗೂ ಭಕ್ತ ಸಮುದಾಯವನ್ನು ಆ ಕಡೆಗೆ ನಡೆಸಬೇಕೆಂಬ ಎಚ್ ಗುಂಡೂರಾವ್ ಅವರ ಬಿನ್ನಹ (ಪ್ರ.ವಾ. ಮಾ. 11) ಹೈಪರ್ ಉತ್ಸಾಹೀ ಪಾರಿವ್ರಾಜಕರ ಕಿವಿಮುಟ್ಟಬೇಕಾದಂಥದು!<br /> <br /> ತ್ಯಾಗದ್ದೇ ಜೀವಂತ ಸ್ವರೂಪರೆಂಬ ನೆಲೆಯಲ್ಲಿ, ಸರ್ವಸಂಗಪರಿತ್ಯಾಗಿ ಸನ್ಯಾಸಿಗಳ ಅಸ್ತಿತ್ವ. ವೈರಾಗ್ಯ ಜೀವನಕ್ಕೆ ಸ್ವಯಂ ಉದಾಹರಣೆಯಾಗಿ ಸಾಮಾಜಿಕ ಪರಿಸ್ಥಿತಿಯ ಮೇಲೆ ಅನೇಕರ ಮೇಲೆ ಪರಿಣಾಮ ಬೀರಬೇಕಾಗಿದೆ. ಆದರೆ ಅದು ಯಶಸ್ವಿಯಾಗಿದ್ದರೆ ನಾವು ಹೀಗೆ ನೀತಿಗೆಟ್ಟಿರುತ್ತಿರಲಿಲ್ಲ! <br /> <br /> ಇಲ್ಲಿ ‘ರಾಜೀನಾಮೆ ನೀಡಿ, ಮಧ್ಯಂತರ ಚುನಾವಣೆಗೆ ಸಿದ್ಧರಾಗಿ’ ಎಂದು ಸನ್ಯಾಸಿಯೊಬ್ಬರು ಮುಖ್ಯಮಂತ್ರಿಗೆ ಸಲಹೆ ನೀಡುತ್ತಾರೆ; ಇನ್ನೊಬ್ಬರು, ಸರ್ಕಾರದ ಪ್ರಾತಿನಿಧ್ಯವನ್ನು ತಾವೇ ಆರೋಪಿಸಿಕೊಂಡು ವಿವಾದಿತ ಉದ್ಯಮಪತಿಗಳನ್ನು ರಾಜೀ-ಸಂಧಾನಕ್ಕೆ ಕರೆಯುತ್ತಾರೆ! <br /> <br /> ವಿರಕ್ತರೆನ್ನಲಾಗುವವರು, ತಮ್ಮ ಅಸ್ತಿತ್ವದ ನೈಜ ಜವಾಬ್ದಾರಿಯನ್ನೇ ಬಿಟ್ಟು, ಇಲ್ಲದ ಲೌಕಿಕ ಅಧಿಕಾರಗಳನ್ನು ಆರೊಪಿಸಿಕೊಂಡು ಮುಗ್ಧಜನರ ಮಾರ್ಗ ತಪ್ಪಿಸುವುದು, ವಿಭೂತಿ-ರುದ್ರಾಕ್ಷಿ, ಪಟ್ಟೆ ನಾಮ-ತುಳಸೀ ಮಾಲೆಗಳ ವೇಷ, ಆವೇಶದಿಂದ ಮಠ-ಮಂದಿರಗಳ ಆಶ್ರಯದಲ್ಲಿ, ನಡೆಯುವ ಅದ್ದೂರಿಯ ಯಾಗ-ಯಜ್ಞಾದಿಗಳಿಗಿಂತಾ ಹೆಚ್ಚು ಅಪಾಯಕಾರಿ ಮೂಢ ನಂಬಿಕೆ! </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>