<p>ಮೈಸೂರು ಜಿಲ್ಲೆ ಸುತ್ತೂರು ವೀರಶೈವರ ಸಮಾವೇಶದಿಂದ ನಮ್ಮಂತಹ ನೋಡುಗರಿಗೆ ಅನ್ನಿಸುವುದೇನೆಂದರೆ, ವೀರಶೈವ ಮಠಾಧಿಪತಿಗಳು ತಮ್ಮ ವೇಷವನ್ನು ಈ ಸಮ್ಮೇಳನದ ಮೂಲಕ ಬಯಲಾಗಿಸಿದ್ದು. ಅಂದರೆ ಅರಿವಿಗೂ ಅರಿವೆಗೂ ಯಾವ ಸಂಬಂಧವಿಲ್ಲವೆಂದು ಕಾವಿಧಾರಿಗಳು ಸಮ್ಮೇಳನದಲ್ಲಿ ಒಬ್ಬೊಬ್ಬರಾಗಿ ಸಾರ್ವತ್ರಿಕವಾಗಿ ಸಾಬೀತುಪಡಿಸಿದ್ದಾರೆ.<br /> <br /> ಮುಖ್ಯಮಂತ್ರಿ ಯಡಿಯೂರಪ್ಪನವರು ಮಠಗಳಿಗೆ ಹಣ ಕೊಟ್ಟು ಮಠಗಳನ್ನು ತಮ್ಮ ಪರ ಏಜೆಂಟ್ಗಳನ್ನಾಗಿ ಪರಿವರ್ತಿಸುತ್ತಿದ್ದಾರೆ ಅಂತ ಹಿಂದೆಯೇ ಅನ್ನಿಸಿತ್ತು. ಅದು ಈ ಸುತ್ತೂರು ಸಮ್ಮೇಳನದಲ್ಲಿ ಸಾಬೀತಾಗಿದೆ.<br /> <br /> ವೀರಶೈವ ಧರ್ಮವು ಕರ್ನಾಟಕದಲ್ಲಿ ಯಾವುದೇ ಸಾಮಾಜಿಕ ಬದಲಾವಣೆಗಾಗಿ ಕೆಲಸ ಮಾಡುತ್ತಿದಂತಿಲ್ಲ. ಈ ಧರ್ಮದಿಂದ ತಾವು (ವೀರಶೈವರು) ಕರ್ನಾಟಕದಲ್ಲಿ ಅಲ್ಪಸಂಖ್ಯಾತರೆಂದು ಗುರುತಿಸಿಕೊಂಡು. ಸಂವಿಧಾನದ ಎಲ್ಲಾ ತರಹದ ರಾಜಕೀಯ ಆರ್ಥಿಕ ಸಾಮಾಜಿಕ ಮೀಸಲಾತಿಯನ್ನು ಪಡೆಯುವುದು ಇವರ ಉದ್ದೇಶ ಹೊರತು ಬೇರೇನೂ ಇಲ್ಲ.<br /> <br /> ಇಂತಹ ಮಠಾಧಿಪತಿಗಳ ಕೈಗೆ ಕ್ರಾಂತಿಕಾರಿ ಬಸವಣ್ಣನ ವಿಚಾರಗಳು ಸಿಕ್ಕಿಕೊಂಡು ಮತ್ತೆ ಮತ್ತೆ ಅನಾಥವಾಗಿ ಸಾಯುತ್ತಿವೆ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು ಜಿಲ್ಲೆ ಸುತ್ತೂರು ವೀರಶೈವರ ಸಮಾವೇಶದಿಂದ ನಮ್ಮಂತಹ ನೋಡುಗರಿಗೆ ಅನ್ನಿಸುವುದೇನೆಂದರೆ, ವೀರಶೈವ ಮಠಾಧಿಪತಿಗಳು ತಮ್ಮ ವೇಷವನ್ನು ಈ ಸಮ್ಮೇಳನದ ಮೂಲಕ ಬಯಲಾಗಿಸಿದ್ದು. ಅಂದರೆ ಅರಿವಿಗೂ ಅರಿವೆಗೂ ಯಾವ ಸಂಬಂಧವಿಲ್ಲವೆಂದು ಕಾವಿಧಾರಿಗಳು ಸಮ್ಮೇಳನದಲ್ಲಿ ಒಬ್ಬೊಬ್ಬರಾಗಿ ಸಾರ್ವತ್ರಿಕವಾಗಿ ಸಾಬೀತುಪಡಿಸಿದ್ದಾರೆ.<br /> <br /> ಮುಖ್ಯಮಂತ್ರಿ ಯಡಿಯೂರಪ್ಪನವರು ಮಠಗಳಿಗೆ ಹಣ ಕೊಟ್ಟು ಮಠಗಳನ್ನು ತಮ್ಮ ಪರ ಏಜೆಂಟ್ಗಳನ್ನಾಗಿ ಪರಿವರ್ತಿಸುತ್ತಿದ್ದಾರೆ ಅಂತ ಹಿಂದೆಯೇ ಅನ್ನಿಸಿತ್ತು. ಅದು ಈ ಸುತ್ತೂರು ಸಮ್ಮೇಳನದಲ್ಲಿ ಸಾಬೀತಾಗಿದೆ.<br /> <br /> ವೀರಶೈವ ಧರ್ಮವು ಕರ್ನಾಟಕದಲ್ಲಿ ಯಾವುದೇ ಸಾಮಾಜಿಕ ಬದಲಾವಣೆಗಾಗಿ ಕೆಲಸ ಮಾಡುತ್ತಿದಂತಿಲ್ಲ. ಈ ಧರ್ಮದಿಂದ ತಾವು (ವೀರಶೈವರು) ಕರ್ನಾಟಕದಲ್ಲಿ ಅಲ್ಪಸಂಖ್ಯಾತರೆಂದು ಗುರುತಿಸಿಕೊಂಡು. ಸಂವಿಧಾನದ ಎಲ್ಲಾ ತರಹದ ರಾಜಕೀಯ ಆರ್ಥಿಕ ಸಾಮಾಜಿಕ ಮೀಸಲಾತಿಯನ್ನು ಪಡೆಯುವುದು ಇವರ ಉದ್ದೇಶ ಹೊರತು ಬೇರೇನೂ ಇಲ್ಲ.<br /> <br /> ಇಂತಹ ಮಠಾಧಿಪತಿಗಳ ಕೈಗೆ ಕ್ರಾಂತಿಕಾರಿ ಬಸವಣ್ಣನ ವಿಚಾರಗಳು ಸಿಕ್ಕಿಕೊಂಡು ಮತ್ತೆ ಮತ್ತೆ ಅನಾಥವಾಗಿ ಸಾಯುತ್ತಿವೆ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>