<p><strong>ನವದೆಹಲಿ (ಪಿಟಿಐ): </strong>ಸೇನಾ ಪಡೆಗಳು ಮತ್ತು ಸರ್ಕಾರದ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ರಕ್ಷಣಾ ಖಾತೆಯ ರಾಜ್ಯ ಸಚಿವ ಎಂ.ಎಂ. ಪಲ್ಲಂ ರಾಜು ಸ್ಪಷ್ಟಪಡಿಸಿದರು.<br /> <br /> ಗುರುವಾರ ಇಲ್ಲಿ ಆಯೋಜಿಸಿದ್ದ ಎನ್ಸಿಸಿ ವಿಚಾರ ಸಂಕಿರಣ ಉದ್ಘಾಟನೆಯ ನಂತರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಸೇನೆ ಮತ್ತು ಸರ್ಕಾರದ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ವರದಿಗಳನ್ನು ತಳ್ಳಿಹಾಕಿದರಲ್ಲದೆ, `ಮೂರು ಸೇನಾ ಪಡೆಗಳು ಹಾಗೂ ಸರ್ಕಾರದ ಸಾಮರಸ್ಯ ಇದೆ~ ಎಂದು ತಿಳಿಸಿದರು.<br /> <br /> `ಪ್ರಧಾನಿಯವರಿಗೆ ಸೇನಾ ಮುಖ್ಯಸ್ಥ ವಿ.ಕೆ. ಸಿಂಗ್ ಬರೆದ ಪತ್ರ ಸೋರಿಕೆಯಾದುದರ ಹಿಂದೆ ಸರ್ಕಾರದ ಒಳಗಿರುವವರ ಕೈವಾಡವಿದೆಯೇ~ ಎಂಬ ಪ್ರಶ್ನೆಗೆ `ನಾನು ಇಂತಹ ಊಹಾಪೋಹದ ವರದಿಗಳಿಗೆ ಉತ್ತರ ನೀಡುವುದಿಲ್ಲ~ ಎಂದು ಹೇಳಿದರು.<br /> <br /> ಭಾರತದ ಗಡಿಯಲ್ಲಿ ಚೀನಾ ಸೇನೆಯಲ್ಲಿನ ಕ್ಷಿಪ್ರ ಆಧುನೀಕರಣದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, `ಭಾರತೀಯ ಸೇನೆಯಲ್ಲೂ ಮೂಲಸೌಲಭ್ಯ ಅಭಿವೃದ್ಧಿಯ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.<br /> <br /> `ಚೀನಾದ ಯೋಜನಾ ಗಾತ್ರವು ಭಾರತದ ನಾಲ್ಕರಷ್ಟಿದೆ. ಹಾಗಾಗಿ ಆ ದೇಶದವರು ಬೃಹತ್ ಪ್ರಮಾಣದ ಸಂಪನ್ಮೂಲಗಳನ್ನು ಸೇನೆಗಾಗಿ ಮೀಸಲಿಡುತ್ತಾರೆ. ಅಂದರೆ ನಮ್ಮ ದೇಶದ್ಲ್ಲಲಿ ಕೊರತೆ ಇದೆ ಎಂದು ಅರ್ಥವಲ್ಲ. ನಾವೂ ಸಹ ಹೊಸ ಸೌಲಭ್ಯಗಳತ್ತ ಹೆಜ್ಜೆ ಹಾಕುತ್ತಿದ್ದೇವೆ~ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಸೇನಾ ಪಡೆಗಳು ಮತ್ತು ಸರ್ಕಾರದ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ರಕ್ಷಣಾ ಖಾತೆಯ ರಾಜ್ಯ ಸಚಿವ ಎಂ.ಎಂ. ಪಲ್ಲಂ ರಾಜು ಸ್ಪಷ್ಟಪಡಿಸಿದರು.<br /> <br /> ಗುರುವಾರ ಇಲ್ಲಿ ಆಯೋಜಿಸಿದ್ದ ಎನ್ಸಿಸಿ ವಿಚಾರ ಸಂಕಿರಣ ಉದ್ಘಾಟನೆಯ ನಂತರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಸೇನೆ ಮತ್ತು ಸರ್ಕಾರದ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ವರದಿಗಳನ್ನು ತಳ್ಳಿಹಾಕಿದರಲ್ಲದೆ, `ಮೂರು ಸೇನಾ ಪಡೆಗಳು ಹಾಗೂ ಸರ್ಕಾರದ ಸಾಮರಸ್ಯ ಇದೆ~ ಎಂದು ತಿಳಿಸಿದರು.<br /> <br /> `ಪ್ರಧಾನಿಯವರಿಗೆ ಸೇನಾ ಮುಖ್ಯಸ್ಥ ವಿ.ಕೆ. ಸಿಂಗ್ ಬರೆದ ಪತ್ರ ಸೋರಿಕೆಯಾದುದರ ಹಿಂದೆ ಸರ್ಕಾರದ ಒಳಗಿರುವವರ ಕೈವಾಡವಿದೆಯೇ~ ಎಂಬ ಪ್ರಶ್ನೆಗೆ `ನಾನು ಇಂತಹ ಊಹಾಪೋಹದ ವರದಿಗಳಿಗೆ ಉತ್ತರ ನೀಡುವುದಿಲ್ಲ~ ಎಂದು ಹೇಳಿದರು.<br /> <br /> ಭಾರತದ ಗಡಿಯಲ್ಲಿ ಚೀನಾ ಸೇನೆಯಲ್ಲಿನ ಕ್ಷಿಪ್ರ ಆಧುನೀಕರಣದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, `ಭಾರತೀಯ ಸೇನೆಯಲ್ಲೂ ಮೂಲಸೌಲಭ್ಯ ಅಭಿವೃದ್ಧಿಯ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.<br /> <br /> `ಚೀನಾದ ಯೋಜನಾ ಗಾತ್ರವು ಭಾರತದ ನಾಲ್ಕರಷ್ಟಿದೆ. ಹಾಗಾಗಿ ಆ ದೇಶದವರು ಬೃಹತ್ ಪ್ರಮಾಣದ ಸಂಪನ್ಮೂಲಗಳನ್ನು ಸೇನೆಗಾಗಿ ಮೀಸಲಿಡುತ್ತಾರೆ. ಅಂದರೆ ನಮ್ಮ ದೇಶದ್ಲ್ಲಲಿ ಕೊರತೆ ಇದೆ ಎಂದು ಅರ್ಥವಲ್ಲ. ನಾವೂ ಸಹ ಹೊಸ ಸೌಲಭ್ಯಗಳತ್ತ ಹೆಜ್ಜೆ ಹಾಕುತ್ತಿದ್ದೇವೆ~ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>