<p><br /> ಕೂಡುಂಕುಳಂ ಅಣು ವಿದ್ಯುತ್ ಸ್ಥಾವರಕ್ಕೆ ಇದ್ದ ಅಡ್ಡಿ ಆತಂಕಗಳು ನಿವಾರಣೆ ಆಗಿವೆ. ಸ್ಥಾವರದ ನಿರ್ಮಾಣ ಕಾಮಗಾರಿಯನ್ನು ಮುಂದುವರಿಸಲು ತಮಿಳುನಾಡು ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಬೆಳವಣಿಗೆ ಸ್ವಾಗತಾರ್ಹ.</p>.<p> ಅಣು ಸ್ಥಾವರದ ಸುರಕ್ಷತೆಯ ಬಗ್ಗೆ ಸ್ಥಳೀಯರು ಮತ್ತು ಮೀನುಗಾರರು ತಕರಾರು ತೆಗೆದು ಸ್ಥಾವರ ಕಾಮಗಾರಿ ನಿಲ್ಲಿಸುವಂತೆ ಚಳವಳಿ ಆರಂಭಿಸಿದ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಮುಖ್ಯಮಂತ್ರಿ ಜಯಲಲಿತಾ ಕಳೆದ ಸೆಪ್ಟಂಬರ್ನಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು.</p>.<p>ಆನಂತರ ಕಾಮಗಾರಿ ಸ್ಥಗಿತಗೊಂಡಿತ್ತು. 2001ರಲ್ಲಿ ಆರಂಭವಾಗಿದ್ದ ಹದಿಮೂರು ಸಾವಿರ ಕೋಟಿ ರೂಪಾಯಿ ವೆಚ್ಚದ ಈ ಅಣು ಸ್ಥಾವರದ ಮೊದಲ ಹಂತದ ಕಾಮಗಾರಿ ಮುಕ್ತಾಯ ಹಂತದಲ್ಲಿರುವಾಗ ಅದರ ಸುರಕ್ಷತೆಯ ಬಗ್ಗೆ ಸ್ಥಳೀಯರು ಸಂದೇಹ ವ್ಯಕ್ತಪಡಿಸಿದ್ದಕ್ಕೆ ವೈಜ್ಞಾನಿಕ ಆಧಾರಗಳಿರಲಿಲ್ಲ.</p>.<p>ರಷ್ಯಾ ತಂತ್ರಜ್ಞಾನದ ಈ ಅಣು ಸ್ಥಾವರದ ತಾಂತ್ರಿಕ ಗುಣಮಟ್ಟದ ಬಗ್ಗೆ ನಾರ್ವೆ ಮೂಲದ ಸರ್ಕಾರೇತರ ಸಂಸ್ಥೆಯೊಂದು ಅನುಮಾನ ವ್ಯಕ್ತಪಡಿಸಿ ಇಲ್ಲದ ಗೊಂದಲಗಳನ್ನು ಹುಟ್ಟುಹಾಕಿತ್ತು.</p>.<p>ರಷ್ಯಾದ ಚೆರ್ನೋಬಿಲ್ ಮತ್ತು ಜಪಾನಿನ ಪುಕೊಶಿಮಾ ಅಣು ಸ್ಥಾವರಗಳ ದುರಂತಗಳ ಹಿನ್ನೆಲೆಯಲ್ಲಿ ಕೂಡುಂಕುಳಂ ಸುತ್ತಲಿನ ಜನರಲ್ಲಿ ಸ್ಥಾವರದ ಸುರಕ್ಷತಾ ಕ್ರಮಗಳ ಬಗ್ಗೆ ಸಂದೇಹಗಳಿದ್ದವು.</p>.<p>ಜನರ ಸಂದೇಹಗಳನ್ನು ನಿವಾರಿಸುವುದಕ್ಕೆ ಆರಂಭದಲ್ಲಿ ಹೆಚ್ಚಿನ ಪ್ರಯತ್ನ ನಡೆಯಲಿಲ್ಲ. ಈಗಾಗಲೇ ಕೈಗೊಂಡಿರುವ ಸುರಕ್ಷತಾ ಕ್ರಮಗಳನ್ನು ಇನ್ನಷ್ಟು ಬಲಪಡಿಸುವಂತೆ ಒತ್ತಾಯಿಸುವ ಬದಲು ಯೋಜನೆಯನ್ನೇ ಕೈಬಿಡುವಂತೆ ಒತ್ತಾಯಿಸಿ ಚಳವಳಿ ನಡೆಸುವ ಅಗತ್ಯವೂ ಇರಲಿಲ್ಲ.</p>.<p>ಈ ಚಳವಳಿಗೆ ಅಮೆರಿಕಾದ ಕೆಲವು ಸ್ವಯಂ ಸೇವಾ ಸಂಸ್ಥೆಗಳ ಚಿತಾವಣೆ ಕಾರಣ. <br /> <br /> ಚಳವಳಿಗಾರರಿಗೆ ವಿದೇಶಿ ಆರ್ಥಿಕ ನೆರವು ಸಿಗುತ್ತಿದೆ ಎಂದು ಸ್ವತಃ ಪ್ರಧಾನ ಮಂತ್ರಿಯವರೇ ಹೇಳಿದ್ದರು. ಅದೇನೇ ಇರಲಿ, ಸ್ಥಾವರಕ್ಕೆ ಇದ್ದ ಬಹುತೇಕ ಅಡಚಣೆಗಳು ನಿವಾರಣೆಯಾಗಿವೆ ಎನ್ನುವುದು ಸಮಾಧಾನದ ಸಂಗತಿ.<br /> <br /> ಈ ಅಣುಸ್ಥಾವರ ಕಾಮಗಾರಿ ಐದು ತಿಂಗಳ ಸ್ಥಗಿತಗೊಂಡಿದ್ದರಿಂದ ಘಟಕದ ಮೊದಲ ಹಂತದ ಕಾರ್ಯಾರಂಭ ವಿಳಂಬ ಆಗಲಿದೆ. ಈ ಸ್ಥಾವರದಿಂದ ತಮಿಳುನಾಡಿಗೆ ಮಾತ್ರವಲ್ಲ, ಇಡೀ ದೇಶಕ್ಕೆ ಅನುಕೂಲವಾಗಲಿದೆ.</p>.<p>ತೀವ್ರ ವಿದ್ಯುತ್ ಕೊರತೆ ಎದುರಿಸುತ್ತಿರುವ ತಮಿಳುನಾಡಿಗೆ ಈ ಯೋಜನೆಯಿಂದ ಹೆಚ್ಚು ಲಾಭವಿದೆ.</p>.<p>ಯೋಜನೆಯನ್ನು ಮುಂದುವರಿಸಲು ಸರ್ಕಾರ ಅನುಮತಿ ನೀಡಿದ ನಂತರವೂ ಸ್ಥಾವರ ವಿರೋಧಿ ಚಳವಳಿ ಮುಂದುವರಿಯಬಹುದು.</p>.<p>ಆದರೆ ಅದರಿಂದ ಸ್ಥಾವರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳುವ ಹೊಣೆ ರಾಜ್ಯ ಸರ್ಕಾರದ್ದು. ಕೂಡುಂಕುಳಂ ಸುತ್ತಲಿನ ಪ್ರದೇಶದ ಅಭಿವೃದ್ಧಿಗೆ 500 ಕೋಟಿ ರೂಪಾಯಿ ನೆರವನ್ನು ಕೇಂದ್ರ ಸರ್ಕಾರ ಘೋಷಿಸಿದೆ.</p>.<p>ಈ ಹಣ ಬಳಸಿಕೊಂಡು ಸ್ಥಾವರ ಸುತ್ತಲಿನ ಪ್ರದೇಶದ ಅಭಿವೃದ್ಧಿಯನ್ನು ಕೈಗೊಂಡು ಸ್ಥಳೀಯರ ವಿಶ್ವಾಸ ಗಳಿಸುವುದಕ್ಕೆ ಆದ್ಯತೆ ಕೊಡಬೇಕು.</p>.<p> ಸ್ಥಾವರದಿಂದ ಅಪಾಯವಿಲ್ಲ ಎನ್ನುವುದನ್ನು ಸ್ಥಳೀಯರಿಗೆ ಮನವರಿಕೆ ಮಾಡಿಕೊಡುವುದು ಈ ಹಂತದಲ್ಲಿ ಬಹು ಮುಖ್ಯ. ಅಣುಸ್ಥಾವರ ಹೆಚ್ಚು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವ ಹೊಣೆಯೂ ಸರ್ಕಾರದ್ದಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><br /> ಕೂಡುಂಕುಳಂ ಅಣು ವಿದ್ಯುತ್ ಸ್ಥಾವರಕ್ಕೆ ಇದ್ದ ಅಡ್ಡಿ ಆತಂಕಗಳು ನಿವಾರಣೆ ಆಗಿವೆ. ಸ್ಥಾವರದ ನಿರ್ಮಾಣ ಕಾಮಗಾರಿಯನ್ನು ಮುಂದುವರಿಸಲು ತಮಿಳುನಾಡು ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಬೆಳವಣಿಗೆ ಸ್ವಾಗತಾರ್ಹ.</p>.<p> ಅಣು ಸ್ಥಾವರದ ಸುರಕ್ಷತೆಯ ಬಗ್ಗೆ ಸ್ಥಳೀಯರು ಮತ್ತು ಮೀನುಗಾರರು ತಕರಾರು ತೆಗೆದು ಸ್ಥಾವರ ಕಾಮಗಾರಿ ನಿಲ್ಲಿಸುವಂತೆ ಚಳವಳಿ ಆರಂಭಿಸಿದ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಮುಖ್ಯಮಂತ್ರಿ ಜಯಲಲಿತಾ ಕಳೆದ ಸೆಪ್ಟಂಬರ್ನಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು.</p>.<p>ಆನಂತರ ಕಾಮಗಾರಿ ಸ್ಥಗಿತಗೊಂಡಿತ್ತು. 2001ರಲ್ಲಿ ಆರಂಭವಾಗಿದ್ದ ಹದಿಮೂರು ಸಾವಿರ ಕೋಟಿ ರೂಪಾಯಿ ವೆಚ್ಚದ ಈ ಅಣು ಸ್ಥಾವರದ ಮೊದಲ ಹಂತದ ಕಾಮಗಾರಿ ಮುಕ್ತಾಯ ಹಂತದಲ್ಲಿರುವಾಗ ಅದರ ಸುರಕ್ಷತೆಯ ಬಗ್ಗೆ ಸ್ಥಳೀಯರು ಸಂದೇಹ ವ್ಯಕ್ತಪಡಿಸಿದ್ದಕ್ಕೆ ವೈಜ್ಞಾನಿಕ ಆಧಾರಗಳಿರಲಿಲ್ಲ.</p>.<p>ರಷ್ಯಾ ತಂತ್ರಜ್ಞಾನದ ಈ ಅಣು ಸ್ಥಾವರದ ತಾಂತ್ರಿಕ ಗುಣಮಟ್ಟದ ಬಗ್ಗೆ ನಾರ್ವೆ ಮೂಲದ ಸರ್ಕಾರೇತರ ಸಂಸ್ಥೆಯೊಂದು ಅನುಮಾನ ವ್ಯಕ್ತಪಡಿಸಿ ಇಲ್ಲದ ಗೊಂದಲಗಳನ್ನು ಹುಟ್ಟುಹಾಕಿತ್ತು.</p>.<p>ರಷ್ಯಾದ ಚೆರ್ನೋಬಿಲ್ ಮತ್ತು ಜಪಾನಿನ ಪುಕೊಶಿಮಾ ಅಣು ಸ್ಥಾವರಗಳ ದುರಂತಗಳ ಹಿನ್ನೆಲೆಯಲ್ಲಿ ಕೂಡುಂಕುಳಂ ಸುತ್ತಲಿನ ಜನರಲ್ಲಿ ಸ್ಥಾವರದ ಸುರಕ್ಷತಾ ಕ್ರಮಗಳ ಬಗ್ಗೆ ಸಂದೇಹಗಳಿದ್ದವು.</p>.<p>ಜನರ ಸಂದೇಹಗಳನ್ನು ನಿವಾರಿಸುವುದಕ್ಕೆ ಆರಂಭದಲ್ಲಿ ಹೆಚ್ಚಿನ ಪ್ರಯತ್ನ ನಡೆಯಲಿಲ್ಲ. ಈಗಾಗಲೇ ಕೈಗೊಂಡಿರುವ ಸುರಕ್ಷತಾ ಕ್ರಮಗಳನ್ನು ಇನ್ನಷ್ಟು ಬಲಪಡಿಸುವಂತೆ ಒತ್ತಾಯಿಸುವ ಬದಲು ಯೋಜನೆಯನ್ನೇ ಕೈಬಿಡುವಂತೆ ಒತ್ತಾಯಿಸಿ ಚಳವಳಿ ನಡೆಸುವ ಅಗತ್ಯವೂ ಇರಲಿಲ್ಲ.</p>.<p>ಈ ಚಳವಳಿಗೆ ಅಮೆರಿಕಾದ ಕೆಲವು ಸ್ವಯಂ ಸೇವಾ ಸಂಸ್ಥೆಗಳ ಚಿತಾವಣೆ ಕಾರಣ. <br /> <br /> ಚಳವಳಿಗಾರರಿಗೆ ವಿದೇಶಿ ಆರ್ಥಿಕ ನೆರವು ಸಿಗುತ್ತಿದೆ ಎಂದು ಸ್ವತಃ ಪ್ರಧಾನ ಮಂತ್ರಿಯವರೇ ಹೇಳಿದ್ದರು. ಅದೇನೇ ಇರಲಿ, ಸ್ಥಾವರಕ್ಕೆ ಇದ್ದ ಬಹುತೇಕ ಅಡಚಣೆಗಳು ನಿವಾರಣೆಯಾಗಿವೆ ಎನ್ನುವುದು ಸಮಾಧಾನದ ಸಂಗತಿ.<br /> <br /> ಈ ಅಣುಸ್ಥಾವರ ಕಾಮಗಾರಿ ಐದು ತಿಂಗಳ ಸ್ಥಗಿತಗೊಂಡಿದ್ದರಿಂದ ಘಟಕದ ಮೊದಲ ಹಂತದ ಕಾರ್ಯಾರಂಭ ವಿಳಂಬ ಆಗಲಿದೆ. ಈ ಸ್ಥಾವರದಿಂದ ತಮಿಳುನಾಡಿಗೆ ಮಾತ್ರವಲ್ಲ, ಇಡೀ ದೇಶಕ್ಕೆ ಅನುಕೂಲವಾಗಲಿದೆ.</p>.<p>ತೀವ್ರ ವಿದ್ಯುತ್ ಕೊರತೆ ಎದುರಿಸುತ್ತಿರುವ ತಮಿಳುನಾಡಿಗೆ ಈ ಯೋಜನೆಯಿಂದ ಹೆಚ್ಚು ಲಾಭವಿದೆ.</p>.<p>ಯೋಜನೆಯನ್ನು ಮುಂದುವರಿಸಲು ಸರ್ಕಾರ ಅನುಮತಿ ನೀಡಿದ ನಂತರವೂ ಸ್ಥಾವರ ವಿರೋಧಿ ಚಳವಳಿ ಮುಂದುವರಿಯಬಹುದು.</p>.<p>ಆದರೆ ಅದರಿಂದ ಸ್ಥಾವರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳುವ ಹೊಣೆ ರಾಜ್ಯ ಸರ್ಕಾರದ್ದು. ಕೂಡುಂಕುಳಂ ಸುತ್ತಲಿನ ಪ್ರದೇಶದ ಅಭಿವೃದ್ಧಿಗೆ 500 ಕೋಟಿ ರೂಪಾಯಿ ನೆರವನ್ನು ಕೇಂದ್ರ ಸರ್ಕಾರ ಘೋಷಿಸಿದೆ.</p>.<p>ಈ ಹಣ ಬಳಸಿಕೊಂಡು ಸ್ಥಾವರ ಸುತ್ತಲಿನ ಪ್ರದೇಶದ ಅಭಿವೃದ್ಧಿಯನ್ನು ಕೈಗೊಂಡು ಸ್ಥಳೀಯರ ವಿಶ್ವಾಸ ಗಳಿಸುವುದಕ್ಕೆ ಆದ್ಯತೆ ಕೊಡಬೇಕು.</p>.<p> ಸ್ಥಾವರದಿಂದ ಅಪಾಯವಿಲ್ಲ ಎನ್ನುವುದನ್ನು ಸ್ಥಳೀಯರಿಗೆ ಮನವರಿಕೆ ಮಾಡಿಕೊಡುವುದು ಈ ಹಂತದಲ್ಲಿ ಬಹು ಮುಖ್ಯ. ಅಣುಸ್ಥಾವರ ಹೆಚ್ಚು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವ ಹೊಣೆಯೂ ಸರ್ಕಾರದ್ದಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>