<p><strong>ನವದೆಹಲಿ (ಪಿಟಿಐ): </strong>ಡಿಎಂಕೆ ಮುಖಂಡ ಎಂ.ಕರುಣಾನಿಧಿ ಅವರು ಶನಿವಾರ ಕಾಂಗ್ರೇಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.<br /> <br /> ತಮಿಳುನಾಡಿನಲ್ಲಿ ಏಪ್ರೀಲ್ 13ರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಡಿಎಂಕೆ ಮೈತ್ರಿಕೂಟ ಹೀನಾಯ ಸೋಲು ಅನುಭವಿಸಿದ ನಂತರ ಉಭಯ ನಾಯಕರ ಮೊದಲ ಭೇಟಿ ಇದಾಗಿದೆ.<br /> <br /> ಜನಪಥ್ 10 ರಸ್ತೆಯಲ್ಲಿರುವ ಸೋನಿಯಾ ನಿವಾಸಕ್ಕೆ ಬೆಳಿಗ್ಗೆ ಕರುಣಾನಿಧಿ ಅವರು ಪತ್ನಿ ರಜತಿ ಅಮ್ಮಾಳ್ ಸಮೇತ ಆಗಮಿಸಿ ಸುಮಾರು 30 ನಿಮೀಷಗಳ ಕಾಲ ಮಾತುಕತೆ ನಡೆಸಿದರು. ಇವರೊಂದಿಗೆ ಡಿಎಂಕೆ ಹಿರಿಯ ಮುಖಂಡ ಟಿ.ಆರ್.ಬಾಲು ಸಹ ಉಪಸ್ಥಿತರಿದ್ದರು.<br /> <br /> ಭೇಟಿ ವೇಳೆ ಕರುಣಾನಿಧಿ ಅವರು 2ಜಿ ತರಂಗಾಂತರ ಹಗರಣದಲ್ಲಿ ಜೈಲು ಸೇರಿರುವ ತಮ್ಮ ಪುತ್ರಿ ಕನ್ನಿಮೋಳಿ ವಿಷಯ ಕುರಿತು ಸೋನಿಯಾ ಅವರೊಂದಿಗೆ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.<br /> <br /> 2ಜಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ಕೋರ್ಟ್ ಶನಿವಾರ ತನ್ನ ಅಭಿಪ್ರಾಯ ತಿಳಿಸಲಿದ್ದು, ಈ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವದಾಗಿದೆ. ಕನ್ನಿಮೋಳಿ ಸೇರಿದಂತೆ 2ಜಿ ಹಗರಣದ ಇತರೆ ಆರೋಪಿಗಳ ಜಾಮೀನು ಅರ್ಜಿಗಳ ವಿಚಾರಣೆಯು ಅಕ್ಟೋಬರ್24ರಿಂದ ನಡೆಯಲಿದೆ.<br /> <br /> ಭೇಟಿ ನಂತರ ಕರುಣಾನಿಧಿ ಅವರು ತಮ್ಮ ಭೇಟಿಗಾಗಿ ಹೊರಗಡೆ ಕಾಯುತ್ತಿದ್ದ ಮಾಧ್ಯಮದವರ ಕಣ್ತಪ್ಪಿಸಿ ಮತ್ತೊಂದು ದ್ವಾರದ ಮೂಲಕ ಅಲ್ಲಿಂದ ನಿರ್ಗಮಿಸಿದರು.<br /> <br /> ಕರುಣಾನಿಧಿ ಅವರು ಶನಿವಾರ ತಿಹಾರ್ ಜೈಲಿನಲ್ಲಿರುವ ಪುತ್ರಿ ಕನ್ನಿಮೋಳಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಡಿಎಂಕೆ ಮುಖಂಡ ಎಂ.ಕರುಣಾನಿಧಿ ಅವರು ಶನಿವಾರ ಕಾಂಗ್ರೇಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.<br /> <br /> ತಮಿಳುನಾಡಿನಲ್ಲಿ ಏಪ್ರೀಲ್ 13ರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಡಿಎಂಕೆ ಮೈತ್ರಿಕೂಟ ಹೀನಾಯ ಸೋಲು ಅನುಭವಿಸಿದ ನಂತರ ಉಭಯ ನಾಯಕರ ಮೊದಲ ಭೇಟಿ ಇದಾಗಿದೆ.<br /> <br /> ಜನಪಥ್ 10 ರಸ್ತೆಯಲ್ಲಿರುವ ಸೋನಿಯಾ ನಿವಾಸಕ್ಕೆ ಬೆಳಿಗ್ಗೆ ಕರುಣಾನಿಧಿ ಅವರು ಪತ್ನಿ ರಜತಿ ಅಮ್ಮಾಳ್ ಸಮೇತ ಆಗಮಿಸಿ ಸುಮಾರು 30 ನಿಮೀಷಗಳ ಕಾಲ ಮಾತುಕತೆ ನಡೆಸಿದರು. ಇವರೊಂದಿಗೆ ಡಿಎಂಕೆ ಹಿರಿಯ ಮುಖಂಡ ಟಿ.ಆರ್.ಬಾಲು ಸಹ ಉಪಸ್ಥಿತರಿದ್ದರು.<br /> <br /> ಭೇಟಿ ವೇಳೆ ಕರುಣಾನಿಧಿ ಅವರು 2ಜಿ ತರಂಗಾಂತರ ಹಗರಣದಲ್ಲಿ ಜೈಲು ಸೇರಿರುವ ತಮ್ಮ ಪುತ್ರಿ ಕನ್ನಿಮೋಳಿ ವಿಷಯ ಕುರಿತು ಸೋನಿಯಾ ಅವರೊಂದಿಗೆ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.<br /> <br /> 2ಜಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ಕೋರ್ಟ್ ಶನಿವಾರ ತನ್ನ ಅಭಿಪ್ರಾಯ ತಿಳಿಸಲಿದ್ದು, ಈ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವದಾಗಿದೆ. ಕನ್ನಿಮೋಳಿ ಸೇರಿದಂತೆ 2ಜಿ ಹಗರಣದ ಇತರೆ ಆರೋಪಿಗಳ ಜಾಮೀನು ಅರ್ಜಿಗಳ ವಿಚಾರಣೆಯು ಅಕ್ಟೋಬರ್24ರಿಂದ ನಡೆಯಲಿದೆ.<br /> <br /> ಭೇಟಿ ನಂತರ ಕರುಣಾನಿಧಿ ಅವರು ತಮ್ಮ ಭೇಟಿಗಾಗಿ ಹೊರಗಡೆ ಕಾಯುತ್ತಿದ್ದ ಮಾಧ್ಯಮದವರ ಕಣ್ತಪ್ಪಿಸಿ ಮತ್ತೊಂದು ದ್ವಾರದ ಮೂಲಕ ಅಲ್ಲಿಂದ ನಿರ್ಗಮಿಸಿದರು.<br /> <br /> ಕರುಣಾನಿಧಿ ಅವರು ಶನಿವಾರ ತಿಹಾರ್ ಜೈಲಿನಲ್ಲಿರುವ ಪುತ್ರಿ ಕನ್ನಿಮೋಳಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>