<p><strong>ಮೈಸೂರು:</strong> `ಸಾಧ್ಯ~ ಯೋಜನೆಯಡಿ ವಿವಿಧ ವೃತ್ತಿ ಕೌಶಲ ತರಬೇತಿ ಪಡೆದ ಸೌಮ್ಯ ಬುದ್ಧಿಮಾಂದ್ಯರನ್ನು ಉದ್ಯೋ ಗಕ್ಕೆ ನೇಮಿಸಿಕೊಳ್ಳಲು ಕಾರ್ಖಾನೆಗಳ ಆಡಳಿತ ಮಂಡಳಿಯವರು ಮುಂದಾಗ ಬೇಕು ಎಂದು ಮೈಸೂರು ಜಿಲ್ಲೆ ಪೋಷಕರ ಸಂಘದ (ಬುದ್ಧಿಮಾಂದ್ಯರ ಸಬಲೀಕರಣಕ್ಕಾಗಿ) ಉಪಾಧ್ಯಕ್ಷ ಅರ್ಕಲ್ ಬಷೀರ್ ಮನವಿ ಮಾಡಿದರು.<br /> <br /> ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿನ್ಯಾಸ್ ಇನ್ನೊವೇಟಿವ್ ಟೆಕ್ನಾಲಜಿಸ್ನ ನರೇಂದ್ರ ನಾರಾಯಣ ಅವರು ಬುದ್ಧಿಮಾಂದ್ಯರಿಗೆ ಉದ್ಯೋಗ ನೀಡಿ ಹೊಸ ಭಾಷ್ಯ ಬರೆದಿದ್ದಾರೆ. ಎಜೆಎಸ್ ಪ್ಲಾಸ್ಟಿಕ್ -ಎಂಜಿನಿಯರಿಂಗ್ ಕಂಪೆನಿ ಸಹ ಬುದ್ಧಿಮಾಂದ್ಯರಿಗೆ ಕೆಲಸ ನೀಡಿದೆ. 26 ವಿಶೇಷ ಮಕ್ಕಳು ಕಾರ್ಯ ನಿರ್ವಹಿಸುತ್ತಿದ್ದಾರೆ. ವಿವಿಧ ಫ್ಯಾಕ್ಟರಿ ಮತ್ತು ಕಂಪೆನಿಗಳು ಇವರಿಗೆ ಅವಕಾಶ ಕಲ್ಪಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.<br /> <br /> ಮೈಸೂರು ಜಿಲ್ಲೆ ಪೋಷಕರ ಸಂಘಕ್ಕೆ ಧನಸಹಾಯ ನೀಡುವ ದಾನಿಗಳಿಗೆ ವರಮಾನ ತೆರಿಗೆ ಕಾಯ್ದೆ 80ರ ಅಡಿ ತೆರಿಗೆ ವಿನಾಯಿತಿ ದೊರಕಲಿದೆ ಎಂದು ತಿಳಿಸಿದರು.<br /> <br /> ಸಂಘದ ಅಧ್ಯಕ್ಷ ಎಂ.ವಿ.ಆನಂದ್, ಖಜಾಂಚಿ ಸೈಜು, ಅಜಿತ್ ಬರ್ಧನ್, ಅಚ್ಚುತ್ರಾವ್ ಇತರರು ಇದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> `ಸಾಧ್ಯ~ ಯೋಜನೆಯಡಿ ವಿವಿಧ ವೃತ್ತಿ ಕೌಶಲ ತರಬೇತಿ ಪಡೆದ ಸೌಮ್ಯ ಬುದ್ಧಿಮಾಂದ್ಯರನ್ನು ಉದ್ಯೋ ಗಕ್ಕೆ ನೇಮಿಸಿಕೊಳ್ಳಲು ಕಾರ್ಖಾನೆಗಳ ಆಡಳಿತ ಮಂಡಳಿಯವರು ಮುಂದಾಗ ಬೇಕು ಎಂದು ಮೈಸೂರು ಜಿಲ್ಲೆ ಪೋಷಕರ ಸಂಘದ (ಬುದ್ಧಿಮಾಂದ್ಯರ ಸಬಲೀಕರಣಕ್ಕಾಗಿ) ಉಪಾಧ್ಯಕ್ಷ ಅರ್ಕಲ್ ಬಷೀರ್ ಮನವಿ ಮಾಡಿದರು.<br /> <br /> ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿನ್ಯಾಸ್ ಇನ್ನೊವೇಟಿವ್ ಟೆಕ್ನಾಲಜಿಸ್ನ ನರೇಂದ್ರ ನಾರಾಯಣ ಅವರು ಬುದ್ಧಿಮಾಂದ್ಯರಿಗೆ ಉದ್ಯೋಗ ನೀಡಿ ಹೊಸ ಭಾಷ್ಯ ಬರೆದಿದ್ದಾರೆ. ಎಜೆಎಸ್ ಪ್ಲಾಸ್ಟಿಕ್ -ಎಂಜಿನಿಯರಿಂಗ್ ಕಂಪೆನಿ ಸಹ ಬುದ್ಧಿಮಾಂದ್ಯರಿಗೆ ಕೆಲಸ ನೀಡಿದೆ. 26 ವಿಶೇಷ ಮಕ್ಕಳು ಕಾರ್ಯ ನಿರ್ವಹಿಸುತ್ತಿದ್ದಾರೆ. ವಿವಿಧ ಫ್ಯಾಕ್ಟರಿ ಮತ್ತು ಕಂಪೆನಿಗಳು ಇವರಿಗೆ ಅವಕಾಶ ಕಲ್ಪಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.<br /> <br /> ಮೈಸೂರು ಜಿಲ್ಲೆ ಪೋಷಕರ ಸಂಘಕ್ಕೆ ಧನಸಹಾಯ ನೀಡುವ ದಾನಿಗಳಿಗೆ ವರಮಾನ ತೆರಿಗೆ ಕಾಯ್ದೆ 80ರ ಅಡಿ ತೆರಿಗೆ ವಿನಾಯಿತಿ ದೊರಕಲಿದೆ ಎಂದು ತಿಳಿಸಿದರು.<br /> <br /> ಸಂಘದ ಅಧ್ಯಕ್ಷ ಎಂ.ವಿ.ಆನಂದ್, ಖಜಾಂಚಿ ಸೈಜು, ಅಜಿತ್ ಬರ್ಧನ್, ಅಚ್ಚುತ್ರಾವ್ ಇತರರು ಇದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>